• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?

Tulunadu News Posted On October 21, 2025
0


0
Shares
  • Share On Facebook
  • Tweet It

ಈಗ ಎಲ್ಲೆಡೆ ದೀಪಾವಳಿ ಸಂಭ್ರಮ. ದೀಪಾವಳಿ ಎಂದ ಕೂಡಲೇ ಸಿಬ್ಬಂದಿಗಳಿಗೆ ಬೋನಸ್ ನೀಡುವ ಪರಿಪಾಠ ಹೆಚ್ಚಿನ ಖಾಸಗಿ ಕಂಪೆನಿಗಳಲ್ಲಿ ಇದೆ. ಕೆಲವು ಕಂಪೆನಿಗಳಲ್ಲಿ ಬೋನಸ್ ರೂಪದಲ್ಲಿ ಹೊಚ್ಚ ಹೊಸ ಕಾರು ನೀಡಿದರೆ ಕೆಲವೆಡೆ ಸಣ್ಣ ಮಟ್ಟಿಗಿನ ಬೋನಸ್ ನೀಡುವ ಸಂಪ್ರದಾಯ ಇದೆ. ಆದರೆ ಯಾವುದೇ ಕಂಪೆನಿಯಲ್ಲಿ ಹೀಗೆ ಆಗಿರಲಿಕ್ಕಿಲ್ಲ. ಇದು ಉತ್ತರ ಪ್ರದೇಶದ ಫತೇಹಾಬಾದ್ ನಲ್ಲಿರುವ ಆಗ್ರಾ – ಲಕ್ನೋ ಎಕ್ಸಪ್ರೆಸ್ ವೇ. ಅಲ್ಲಿ ಟೋಲ್ ಫ್ಲಾಜಾ ಇದೆ. ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಅಲ್ಲಿ 21 ಜನ ಟೋಲ್ ಸಹಾಯಕರಾಗಿ ಕೆಲಸ ಮಾಡುತ್ತಾರೆ. ಅವರಿಗೆ ಈ ಬಾರಿ ಬೋನಸ್ ನೀಡುವಾಗ ಕೊಟ್ಟ ಹಣ ಎಷ್ಟು ಗೊತ್ತಾ? ಕೇವಲ 1100 ರೂಪಾಯಿ. ಇದರಿಂದ ಟೋಲ್ ಕಾರ್ಮಿಕರು ಸಿಕ್ಕಾಪಟ್ಟೆ ಆಕ್ರೋಶಗೊಂಡಿದ್ದರು.

ಅವರು ತಮ್ಮ ಕಂಪೆನಿ ಶ್ರೀ ಸೈನ್ ಆಂಡ್ ದಾತಾರ್ ವಿರುದ್ಧ ಪ್ರತಿಭಟನೆಗೆ ಇಳಿದರು. ತಾವು ಟ್ರೋಲ್ ಸಂಗ್ರಹಿಸುವುದಿಲ್ಲವೆಂದು ಹಟಕ್ಕೆ ಕುಳಿತರು. ಇದರಿಂದ ವಾಹನಗಳಿಗೆ ಟೋಲ್ ಕೊಡದೇ ಹೋಗುವ ಅವಕಾಶ ಸಿಕ್ಕಿತು. ಇದು ಆಡಳಿತ ಮಂಡಳಿಗೆ ವಿಷಯ ಗೊತ್ತಾಯಿತು. ಆದರೆ ಈ ಕಂಪೆನಿ ಮಾರ್ಚ್ ನಲ್ಲಷ್ಟೇ ಟೋಲ್ ನಿರ್ವಹಣೆಯನ್ನು ವಹಿಸಿಕೊಂಡಿದ್ದರಿಂದ ಹಬ್ಬಗಳ ಬೋನಸ್ ಗಳ ಲೆಕ್ಕಾಚಾರ ಮತ್ತು ವಿತರಣೆಗೆ ಸಂಬಂಧಿಸಿದ ವಿವಾದಗಳು ಬುಗಿಲೆದ್ದಿದ್ದವು.

ಹೆಚ್ಚು ಮೊತ್ತದ ಬೋನಸ್ ನೀಡುವಂತೆ ಒತ್ತಾಯಿಸಿದ ಕಾರ್ಮಿಕರು, ಸಾಮೂಹಿಕವಾಗಿ ತಮ್ಮ ಕೆಲಸ ಮಾಡದೇ ಇರಲು ನಿರ್ಧರಿಸಿದರು. ಇದರ ಪರಿಣಾಮವಾಗಿ ಎಲ್ಲಾ ಟೋಲ್ ಗೇಟ್ ಗಳನ್ನು ತೆರೆಯಲಾಯಿತು. ಸಾವಿರಾರು ವಾಹನಗಳು ಶುಲ್ಕ ಪಾವತಿಸದೇ ಹಾದು ಹೋದಾಗ, ಟೋಲ್ ಆಡಳಿತ ಮಂಡಳಿಯು ಇತರ ಟೋಲ್ ಪ್ಲಾಜಾಗಳಿಂದ ಸಿಬ್ಬಂದಿಯನ್ನು ಕರೆತಂದು ಕೆಲಸ ಮುಂದುವರೆಸಲು ಪ್ರಯತ್ನಿಸಿತು. ಆದರೆ ಪ್ರತಿಭಟನಾ ನಿರತ ನೌಕರರು ಈ ಬದಲಿಗಳನ್ನು ಕೆಲಸ ಮಾಡದಂತೆ ತಡೆದರು. ಇದು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿತು.

ಮಾಹಿತಿ ಪಡೆದ ಪೊಲೀಸ್ ಪಡೆಗಳು ಟೋಲ್ ಪ್ಲಾಜಾಗೆ ಆಗಮಿಸಿ ಕಂಪೆನಿಯ ಅಧಿಕಾರಿಗಳು ಮತ್ತು ಪ್ರತಿಭಟನಾಕಾರ ಕಾರ್ಮಿಕರ ನಡುವೆ ಮತುಕತೆ ನಡೆಸಲು ಮುಂದಾದರು. ಟೋಲ್ ಅಧಿಕಾರಿಗಳು ಸಿಬ್ಬಂದಿಗೆ ಸುಧಾರಿತ ಪರಿಸ್ಥಿತಿಗಳ ಬಗ್ಗೆ ಭರವಸೆ ನೀಡಿ, ನೌಕರರ ಬೇಡಿಕೆಗಳನ್ನು ಪರಿಹರಿಸುವ ಬಗ್ಗೆ ಚರ್ಚೆ ನಡೆಸಿದರು. ಟೋಲ್ ಕಂಪೆನಿಯ ಹಿರಿಯ ಅಧಿಕಾರಿಗಳು ತಕ್ಷಣದ ಪರಿಹಾರವಾಗಿ ಶೇಕಡಾ 10 ರಷ್ಟು ವೇತನ ಹೆಚ್ಚಳವನ್ನು ಭರವಸೆ ನೀಡಿದರು. ಈ ಭರವಸೆಯ ನಂತರ ನೌಕರರು ಕೆಲಸವನ್ನು ಪುನರಾರಂಭಿಸಲು ಒಪ್ಪಿಕೊಂಡರು. ಎರಡು ಗಂಟೆಗಳ ಕಾಲ ವ್ಯತ್ಯಯದ ಪರಿಸ್ಥಿತಿ ಮತ್ತೆ ತಿಳಿಯಾಯಿತು. ಒಟ್ಟಿನಲ್ಲಿ ಬೋನಸ್ ಎನ್ನುವುದು ಕೆಲವು ಸಂಸ್ಥೆಗಳಲ್ಲಿ ಎಷ್ಟರಮಟ್ಟಿಗೆ ಪ್ರಭಾವ ಬೀರುತ್ತದೆ ಎನ್ನುವುದು ಕೂಡ ಈ ಪ್ರಕರಣದಲ್ಲಿ ಗೊತ್ತಾಗುತ್ತದೆ.

0
Shares
  • Share On Facebook
  • Tweet It




Trending Now
ಮಹಾನಗರ ಪಾಲಿಕೆ ಮೇ 1ರಿಂದ ನೀರಿನ ರೇಷನಿಂಗ್ ಘೋಷಣೆ!
Tulunadu News April 27, 2026
ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
Tulunadu News April 14, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮಹಾನಗರ ಪಾಲಿಕೆ ಮೇ 1ರಿಂದ ನೀರಿನ ರೇಷನಿಂಗ್ ಘೋಷಣೆ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
  • Popular Posts

    • 1
      ಮಹಾನಗರ ಪಾಲಿಕೆ ಮೇ 1ರಿಂದ ನೀರಿನ ರೇಷನಿಂಗ್ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search