• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ಐದು ದಿನಗಳಲ್ಲಿ ಏಳುನೂರಕ್ಕೂ ಹೆಚ್ಚು ಕಿ.ಮೀ. ಸೈಕಲ್ ತುಳಿದ 70 ರ ಹರೆಯದ ಶಾಸಕ!

Tulunadu News Posted On January 2, 2026
0


0
Shares
  • Share On Facebook
  • Tweet It

ರಾಜಾಜಿನಗರದ ಶಾಸಕ ಸುರೇಶ್ ಕುಮಾರ್ ಅವರಿಗೆ ಈಗ 70 ವರ್ಷ ವಯಸ್ಸು. ಇತ್ತೀಚೆಗಷ್ಟೇ ಅವರು ಕೆಲವು ದಿನಗಳ ಕಾಲ ಹಾಸಿಗೆ ಹಿಡಿದು ಮಲಗಿಬಿಟ್ಟಿದ್ದರು. ನಡೆಯುವುದು ಬಿಡಿ, ಬೆರಳು ಅಲುಗಾಡಿಸಲು ಕೂಡ ಕಷ್ಟ ಎನ್ನುವಷ್ಟರ ಮಟ್ಟಿಗೆ ಅವರಿಗೆ ಅನಾರೋಗ್ಯ ಕಾಡಿತ್ತು. ಚಿಕುನ್ ಗುನ್ಯಾ ಕಾಯಿಲೆ ಅವರ ದೇಹವನ್ನು ಹಿಂಡಿ ಹಿಪ್ಪೆ ಮಾಡಿಬಿಟ್ಟಿತ್ತು. ಅದಾಗಿ ಚಿಕಿತ್ಸೆಯ ಬಳಿಕ ಸುರೇಶ್ ಕುಮಾರ್ ಅರೋಗ್ಯವಾಗಿದ್ದಾರೆ. ಯಾವ ಲೆವೆಲ್ಲಿಗೆ ಗುಣಮುಖರಾಗಿದ್ದಾರೆ ಎಂದರೆ ಇತ್ತೀಚೆಗೆ ಬೆಂಗಳೂರಿನಿಂದ ಕನ್ಯಾಕುಮಾರಿಯವರೆಗೆ ಸೈಕಲಿಂಗ್ ಮಾಡಿಕೊಂಡು ಹೋಗಿದ್ದಾರೆ.

ಬೆಂಗಳೂರಿನಿಂದ ಕನ್ಯಾಕುಮಾರಿಗೆ ಸುಮಾರು 702 ಕಿಲೋ ಮೀಟರ್ ಇದೆ. ಇವರು 2024 ರಲ್ಲಿಯೇ ಹೀಗೊಂದು ಸೈಕಲ್ ಯಾತ್ರೆ ಮಾಡಬೇಕೆಂದು ಯೋಚನೆ ಹಾಕಿದ್ದರು. ಅವರು ಐದು ದಶಕಗಳ ಹಿಂದೆ ಒಮ್ಮೆ ಹೀಗೆ ಬೆಂಗಳೂರಿನಿಂದ ಕನ್ಯಾಕುಮಾರಿಗೆ ಸೈಕಲ್ ತುಳಿದ ನೆನಪಿಗಾಗಿ ಇನ್ನೊಮ್ಮೆ ಅದೇ ರೀತಿ ಹೋಗಿ ಬರೋಣ ಎಂದು ನಿರ್ಧರಿಸಿದ್ದರು. ಆದರೆ 2024 ಅಗಸ್ಟ್ ನಲ್ಲಿ ಅವರಿಗೆ ಕಾಯಿಲೆ ಬಂದು ಯೋಜನೆ ಕೈಬಿಟ್ಟಿದ್ದರು. 2025 ಮಾರ್ಚ್ ನಲ್ಲಿ ಅವರು ಮತ್ತೇ ಚೇತರಿಸಿಕೊಳ್ಳುತ್ತಿದ್ದಂತೆ ತಮ್ಮ ಸೈಕಲಿಂಗ್ ಯೋಜನೆಯನ್ನು ಅನುಷ್ಟಾನಕ್ಕೆ ತರಲು ಮುಂದಾಗಿದ್ದರು. ಅದರಂತೆ ಕಾಲ ಕೂಡಿ ಬಂದು 12 ಗೆಳೆಯರೊಂದಿಗೆ ಯಾತ್ರೆ ಶುರು ಮಾಡಿಯೇ ಬಿಟ್ಟರು. ಡಿಸೆಂಬರ್ 23 ರಂದು ಆರಂಭವಾದ ಈ ಯಾತ್ರೆಯ ಮೊದಲ ದಿನ ಎಂಟೂವರೆ ಗಂಟೆಯಲ್ಲಿ 157 ಕಿಲೋ ಮೀಟರ್ ಸೈಕಲಿಂಗ್ ಮಾಡಿದ್ದಾರೆ. ಎರಡನೇಯ ದಿನ 159 ಕಿಲೋಮೀಟರ್ 8.3 ಗಂಟೆಯಲ್ಲಿ ಮೂರನೇ ದಿನ 155 ಕಿಲೋ ಮೀಟರ್ ಸಂಚರಿಸಿದ್ದಾರೆ. ನಾಲ್ಕನೇ ದಿನ 156 ಕಿಲೋ ಮೀಟರ್ ಹಾಗೂ ಕೊನೆಯ ದಿನ ನಾಲ್ಕು ಗಂಟೆಯಲ್ಲಿ 73 ಕಿಲೋ ಮೀಟರ್ ಪೆಡಲ್ ತುಳಿದು ಯಾತ್ರೆ ಸಂಪನ್ನಗೊಳಿಸಿದ್ದಾರೆ.

ಇದು ತಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದು ಹೇಳಿರುವ ಮಾಜಿ ಸಚಿವ ಸುರೇಶ್ ಕುಮಾರ್ ಸೈಕಲಿಂಗ್ ತಮ್ಮ ನೆಚ್ಚಿನ ಹವ್ಯಾಸವಾಗಿದ್ದು, ರಾಜಕೀಯಕ್ಕೆ ಬಂದಾಗ ಇದಕ್ಕೆ ಬ್ರೇಕ್ ನೀಡಿದ್ದೆ. ಈಗ ಮತ್ತೇ ಇದನ್ನು ಆರಂಭಿಸಿ, ಆರೋಗ್ಯ ಮತ್ತು ಆತ್ಮವಿಶ್ವಾಸವನ್ನು ಮರಳಿಗಳಿಸಿದಂತಾಗಿದೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ. ಸುರೇಶ್ ಕುಮಾರ್ ಅವರ ಈ ನಡೆ ಹಲವರಿಗೆ ಸ್ಫೂರ್ತಿಯನ್ನು ಉಂಟು ಮಾಡಿದೆ. ಕಾಯಿಲೆಗೆ ಹೆದರಿ, ವಯಸ್ಸಿಗೆ ಹೆದರಿ ಕೂರುವುದಕ್ಕಿಂತ ಇಂತಹ ಧೈರ್ಯದ ನಡೆಯಿಂದ ಸುರೇಶ್ ಕುಮಾರ್ ಅವರು ಹಲವರಿಗೆ ಮಾದರಿಯಾಗಿದ್ದಾರೆ.

 

0
Shares
  • Share On Facebook
  • Tweet It




Trending Now
ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
Tulunadu News January 23, 2026
ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
Tulunadu News January 20, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
    • ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
    • ರಾಜ್ಯ ರಾಜಕೀಯಕ್ಕೆ ಧುಮುಕಿದ ಪ್ರತಾಪ್ ಸಿಂಹ! ಕ್ಷೇತ್ರ ಯಾವುದು ಗೊತ್ತಾ?
  • Popular Posts

    • 1
      ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು

  • Privacy Policy
  • Contact
© Tulunadu Infomedia.

Press enter/return to begin your search