• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಅಭಿಪ್ರಾಯ

ಸಿದ್ದರಾಮಯ್ಯನವರೇ 17 ಜನರಿಗೆ ರಕ್ಷಣೆ ನೀಡಿದರೆ ಸಾಮಾನ್ಯರ ಗತಿಯೇನು?

TNN Correspondent Posted On September 11, 2017
0


0
Shares
  • Share On Facebook
  • Tweet It

ಪತ್ರಕರ್ತೆ ಗೌರಿ ಲಂಕೇಶ ಹತ್ಯೆ ನೆಪದಲ್ಲಿ ರಾಜ್ಯದಲ್ಲಿ ವಿಚಾರವಾದಿಗಳ ಹತ್ಯೆ ನಿರಂತರವಾಗಿ ನಡೆಯುತ್ತಿದೆ ಎಂದು ಎಂದು ಬೊಬ್ಬೆ ಹಾಕು ರಾಜ್ಯ ಸರಕಾರ ದುಷ್ಕರ್ಮಿಗಳನ್ನು ಬಂಧಿಸುವಲ್ಲಿ ವಿಫಲವಾಗಿದೆ. ಅದೇ ನೆಪದಲ್ಲಿ ಪ್ರಗತಿಪರ ಚಿಂತಕರು ಎನ್ನುವ ಜ್ಞಾನಪೀಠ ಸಾಹಿತಿ ಗಿರೀಶ್ ಕಾರ್ನಾಡ್, ಸಾಹಿತಿ ಬರಗೂರು ರಾಮಚಂದ್ರಪ್ಪ ಸೇರಿ 17 ಜನರಿಗೆ ಭದ್ರತೆ ಒದಗಿಸಲು ನಿರ್ಧರಿಸಿದೆ. ಹೌದು ಅವರೆಲ್ಲರೂ ವಿಚಾರವಾದಿಗಳು, ಚಿಂತಕರು ಅವರಿಗೆ ರಕ್ಷಣೆ ನೀಡಲೇ ಬೇಕು. ಆದರೆ ರಾಜ್ಯದಲ್ಲಿರುವ ಪ್ರತಿಯೊಬ್ಬರ ಪ್ರಾಣವೂ ಮುಖ್ಯವಲ್ಲವೇ? ಎಂಬ ಪ್ರಶ್ನೆಗೆ ಸರಕಾರ ಉತ್ತರಿಸಲೇ ಬೇಕು.
ರಾಜ್ಯದಲ್ಲಿ ರಾಜ್ಯ ಸರಕಾರ ಅಧಿಕಾರಕ್ಕೆ ಬಂದ ನಂತರ 12 ಹಿಂದೂ ಕಾರ್ಯಕರ್ತರ ಹತ್ಯೆಗಳಾಗಿವೆ ಅವರಿಗೆ ರಕ್ಷಣೆಯ ಜವಾಬ್ದಾರಿ ನೀಡುವುದು ಸರಕಾರದ ಕರ್ತವ್ಯವಲ್ಲವೇ. ಹಾಗಂತ ಪ್ರತಿ ವ್ಯಕ್ತಿಗೂ ಒಬ್ಬ ಪೊಲೀಸ್ ಪೇದೆಯನ್ನು ನೇಮಿಸಲು ಆಗಲ್ಲ. ಆದರೆ ಇಡೀ ರಾಜ್ಯದ ಜನರ ರಕ್ಷಣೆಗೆ ರಾಜ್ಯ ಸರಕಾರ ಆದ್ಯತೆ ನೀಡಬೇಕಲ್ಲವೇ. ಕೇವಲ ತಮ್ಮ ಸರಕಾರದ ಪರ ಬಹುಪರಾಕ್ ಹೇಳುವ ಬಟ್ಟಂಗಿಗಳಿಗೆ ರಕ್ಷಣೆ ನೀಡುವುದು ಮಾತ್ರ ಸರಕಾರದ ಗುರಿಯಾಗಿರಬಾರದಲ್ಲವೇ?.
ಇನ್ನು ಪ್ರತ್ಯೇಕ ಧರ್ಮಕ್ಕಾಗಿ ಹೋರಾಡುತ್ತಿರುವ ಸಚಿವ ಎಂ.ಬಿ.ಪಾಟೀಲ್ ಅವರೇ ಹೇಳಿದ್ದಾರೆ ‘ನನಗೆ ರಕ್ಷಣೆ ನೀಡಿ ಎಂದು ಸರಕಾರಕ್ಕೆ ನಾನು ಬೇಡಿಕೊಂಡಿಲ್ಲ’ ಎಂದು. ಹಾಗಾದರೆ ಸರಕಾರ ಯಾವ ಉದ್ದೇಶದಿಂದ ಬರಗೂರು ರಾಮಚಂದ್ರಪ್ಪ, ಪಾಟೀಲ್ ಪುಟ್ಟಪ್ಪ, ಚನ್ನವೀರ ಕಣವಿ, ನಿಡುಮಾಮಿಡಿ ಸ್ವಾಮೀಜಿ, ಭಗವಾನ್, ಬಿ.ಟಿ.ಲಲಿತಾನಾಯಕ್, ಜಾಮದಾರ್ ಅವರಿಗೆ ರಕ್ಷಣೆ ನೀಡುತ್ತಿದೆ.
ಅವರ ಪ್ರಾಣಕ್ಕೆ ಕುತ್ತು ಇದೆ ಎಂದು ಯಾವ ಗುಪ್ತ ಮಾಹಿತಿ ಸರಕಾರಕ್ಕೆ ದೊರೆಯುತೋ ತಿಳಿಯದು. ಇವರೆಲ್ಲರೂ ಚಿಂತಕರು, ಹೋರಾಟಗಾರರು ಎಂದು ಭದ್ರತೆ ಒದಗಿಸಿದ್ದು ಸೂಕ್ತ. ಅದರ ಜತೆಗೆ ರಾಜ್ಯ ಸರಕಾರ ರಾಜ್ಯದ ಪ್ರತಿ ನಾಗರಿಕನ ರಕ್ಷಣೆ ಕುರಿತು ದೂರದೃಷ್ಟಿಯ ಯೋಜನೆಗಳನ್ನು ಕೈಗೊಳ್ಳಬೇಕು. ಅದೆಲ್ಲವನ್ನು ಬಿಟ್ಟು ಕೇವಲ ಹೊಗಳು ಬಟ್ಟರನ್ನು ರಕ್ಷಿಸಿ, ಅದೇನು ಸಾಧಿಸಲು ಹೊರಟಿದ್ದೀರಿ ಎಂಬುದು ತಿಳಿಯದಷ್ಟು ಮುಗ್ದರಲ್ಲ ಜನರು.
ನಿರಂತರವಾಗಿ ಹಿಂದೂ ಕಾರ್ಯಕರ್ತರ ಹೆಣ ಬೀಳುತ್ತಿದ್ದರು, ಹಲವು ಕೊಲೆಗಳಲ್ಲಿ ಮುಸ್ಲಿo ಮೂಲಭೂತ ಸಂಘಟನೆಗಳ ಕಾರ್ಯಕರ್ತರು ಭಾಗಿಯಾಗಿದ್ದಾರೆ ಎಂದು ತನಿಖೆಯಲ್ಲಿ ತಿಳಿದು ಬಂದರೂ ಮುಗ್ಗುಂಮಾಗಿರುವ ಸಿದ್ದರಾಮಯ್ಯ ಗೌರಿ ಲಂಕೇಶ ಹತ್ಯೆ ಆದ ತಕ್ಷಣ ಉಳಿದ ವಿಚಾರವಾದಿಗಳಿಗೆ ರಕ್ಷಣೆ ನೀಡುವ ಮೂಲಕ ಪರೋಕ್ಷವಾಗಿ ಗೌರಿ ಹತ್ಯೆಯನ್ನು ವಿಚಾರವಾದಿಗಳ ವಿರೋಧಿಗಳೇ ಮಾಡಿದ್ದಾರೆ ಎಂಬಂತೆ ಬಿಂಬಿಸಲು ಹೊರಟಂತಿದೆ. ಇನ್ನು ಕೊಲೆ, ಮರಣ, ಅಂತ್ಯ ಸಂಸ್ಕಾರ ಸೇರಿ ಹಲವು ವಿಷಯಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೋರಿದ ಅತಿ ಕಾಳಜಿ, ಅವರ ತನಿಖೆಯಲ್ಲಿ ಕಾರಣದಿರುವುದು ಇದೇ ವಿಷಯವನ್ನು ಚುನಾವಣೆವರೆಗೆ ಮುಂದುವರಿಸಿಕೊಂಡು ಹೋಗುವ ದೂರಾಲೋಚನೆಯೂ ಇದ್ದಂತೆ ಭಾಸವಾಗುತ್ತಿದೆ.

ಇನ್ನು ಮಂಗಳೂರಿನಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ಗೆ ನಡೆಸುವ ಸೌಹಾರ್ದ ಸಮಾವೇಶಕ್ಕೆ ಸಕಲ ರಕ್ಷಣೆ ಒದಗಿಸುವ ಸರಕಾರ, ರಾಜ್ಯದಲ್ಲಿ ನಡೆಯುತ್ತಿರುವ ಹಿಂದೂ ಕಾರ್ಯಕರ್ತರ ಕೊಲೆಯಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಭಾಗಿಯಾಗಿರುವ ಕೆಎಫ್‌ಡಿ, ಪಿಎಫ್‌ಐ ಸಂಘಟನೆಗಳನ್ನು ನಿಷೇಧಿಸಲು ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ಕೈಗೊಂಡ ಹೋರಾಟವನ್ನು ಹತ್ತಿಕ್ಕುವ ದೂರ್ತತನವನ್ನು ಪ್ರದರ್ಶಿಸಿದ್ದೀರಿ. ಇಂತಹ ನಡೆಗಳಲ್ಲವೇ ತಮ್ಮ ರಕ್ಷಣಾ ನೀತಿಯ ‘ಎಡ’ಬಿಡಂಗಿತನಕ್ಕೆ ಸಾಕ್ಷಿ.

ತನ್ನ ದೂರಾಲೋಚನೆ, ದುಷ್ಟಾಲೋಚನೆಗಳ ಮಧ್ಯೆ ಸರಕಾರ ವಿಚಾರವಾದಿಗಳ ರಕ್ಷಣೆ ಜತೆ ಜತೆಗೆ ರಾಜ್ಯಸರಕಾರ ಸಾಮಾನ್ಯರೂ, ಹಿಂದೂ ಕಾರ್ಯಕರ್ತರನ್ನು ಗಮನದಲಿಟ್ಟುಕೊಂಡು ಆಡಳಿತ ನಡೆಸುವುದು ಒಳಿತು.

ಪ್ರದ್ಯುಮ್ನ

 

0
Shares
  • Share On Facebook
  • Tweet It




Trending Now
ಕೊರಗಜ್ಜ ಸಿನೆಮಾದ ಹಾಡುಗಳಿಗೆ ರೀಲ್ಸ್ ಮಾಡಿ ಕೋಟಿ ಗೆಲ್ಲಿ ಎನ್ನುವ ಆಫರ್ ನೀಡಿದ ಚಿತ್ರತಂಡ! ದೈವ ನರ್ತಕರಿಂದ ಆಕ್ರೋಶ...
Tulunadu News January 3, 2026
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನ ಭೇಟಿ: ನಟಿ ನುಶ್ರತ್ ಭರುಚ್ಚಾ ವಿರುದ್ಧ ಫತ್ವಾ – ಭಾರೀ ವಿವಾದ
Tulunadu News January 3, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕೊರಗಜ್ಜ ಸಿನೆಮಾದ ಹಾಡುಗಳಿಗೆ ರೀಲ್ಸ್ ಮಾಡಿ ಕೋಟಿ ಗೆಲ್ಲಿ ಎನ್ನುವ ಆಫರ್ ನೀಡಿದ ಚಿತ್ರತಂಡ! ದೈವ ನರ್ತಕರಿಂದ ಆಕ್ರೋಶ...
    • ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನ ಭೇಟಿ: ನಟಿ ನುಶ್ರತ್ ಭರುಚ್ಚಾ ವಿರುದ್ಧ ಫತ್ವಾ – ಭಾರೀ ವಿವಾದ
    • ಐದು ದಿನಗಳಲ್ಲಿ ಏಳುನೂರಕ್ಕೂ ಹೆಚ್ಚು ಕಿ.ಮೀ. ಸೈಕಲ್ ತುಳಿದ 70 ರ ಹರೆಯದ ಶಾಸಕ!
    • ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಸ್ಥಾಪಿಸಿದ ನಿಟ್ಟೆ ವಿನಯ್ ಹೆಗ್ಡೆ ಎಂಬ ಮಹಾಚೇತನ ಅಸ್ತಂಗತ
    • ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ
    • ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!
  • Popular Posts

    • 1
      ಕೊರಗಜ್ಜ ಸಿನೆಮಾದ ಹಾಡುಗಳಿಗೆ ರೀಲ್ಸ್ ಮಾಡಿ ಕೋಟಿ ಗೆಲ್ಲಿ ಎನ್ನುವ ಆಫರ್ ನೀಡಿದ ಚಿತ್ರತಂಡ! ದೈವ ನರ್ತಕರಿಂದ ಆಕ್ರೋಶ...
    • 2
      ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನ ಭೇಟಿ: ನಟಿ ನುಶ್ರತ್ ಭರುಚ್ಚಾ ವಿರುದ್ಧ ಫತ್ವಾ – ಭಾರೀ ವಿವಾದ
    • 3
      ಐದು ದಿನಗಳಲ್ಲಿ ಏಳುನೂರಕ್ಕೂ ಹೆಚ್ಚು ಕಿ.ಮೀ. ಸೈಕಲ್ ತುಳಿದ 70 ರ ಹರೆಯದ ಶಾಸಕ!
    • 4
      ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಸ್ಥಾಪಿಸಿದ ನಿಟ್ಟೆ ವಿನಯ್ ಹೆಗ್ಡೆ ಎಂಬ ಮಹಾಚೇತನ ಅಸ್ತಂಗತ

  • Privacy Policy
  • Contact
© Tulunadu Infomedia.

Press enter/return to begin your search