• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ರೈಲ್ವೆ ರಿಸರ್ವೇಶನ್ ಚಾರ್ಟ್ ಯುಗಾಂತ್ಯ, ಇನ್ಮೇಲೆ ಡಿಜಿಟಲ್

TNN Correspondent Posted On September 19, 2017


  • Share On Facebook
  • Tweet It

ಬೆಂಗಳೂರು : ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದಲ್ಲಿ ಮೂರು ತಿಂಗಳಿನಿಂದ ನಡೆಸಿದ ಪ್ರಯೋಗ ಸಫಲವಾಗಿದ್ದರಿಂದ ದೇಶಾದ್ಯಂತ ರೈಲುಗಳಲ್ಲಿ ರಿಸರ್ವೇಷನ್ ಚಾರ್ಟ್ ಹಾಕುವುದಕ್ಕೆ ಇಲಾಖೆ ತಿಲಾಂಜಲಿ ಹಾಡಲಿದೆ. ಇದರಿಂದ ಪೇಪರ್ ಬಳಕೆಯನ್ನು ನಿಯಂತ್ರಿಸಿದಂತಾಗುತ್ತದೆ ಎಂದು ರೈಲ್ವೆ ಇಲಾಖೆ ಕಾರಣ ನೀಡಿದೆ.

ನ.8,2016ರಿಂದ ಬೆಂಗಳೂರು ವಿಭಾಗದಲ್ಲಿ ಚಾರ್ಟ್‍ಗಾಗಿ ಪೇಪರ್ ಬಳಸುವುದನ್ನು ಕೈಬಿಡಲಾಗಿತ್ತು. ಪರ್ಯಾಯವಾಗಿ ಎಸ್‍ಎಮ್‍ಎಸ್, ನಿಲ್ದಾಣಗಳಲ್ಲಿ ಡಿಜಿಟಲ್ ಡಿಸ್ಪ್ಲೇ ಚಾರ್ಟ್‍ಗಳು, ಸಹಾಯವಾಣಿ 139ನಲ್ಲಿ ತುರ್ತು ಸ್ಪಂದನೆ ಮಾರ್ಗಗಳನ್ನು ಪ್ರಯಾಣಿಕರ ಅನುಕೂಲಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇದರಿಂದ 60 ಲಕ್ಷ ರೂ. ಇಲಾಖೆಗೆ ಉಳಿತಾಯವಾಗಿದೆ ಎಂದು ಬೆಂಗಳೂರು ವಿಭಾಗದ ವಾಣಿಜ್ಯ ವ್ಯವಸ್ಥಾಪಕ ಶ್ರೀಧರ ಮೂರ್ತಿ ತಿಳಿಸಿದ್ದಾರೆ.

ಯಶವಂತಪುರ ನಿಲ್ದಾಣದಿಂದ ಹೊರಡುವ ರೈಲುಗಳಲ್ಲಿಯೂ ಪ್ರಯೋಗ ನಡೆಸಲಾಗಿತ್ತು.

ಬರ್ತ್ ಖಾತ್ರಿಯಾದರೆ ಟಿಕೆಟ್‍ನಲ್ಲಿಯೇ ಸೀಟಿನ ಸಂಖ್ಯೆ ಉಲ್ಲೇಖ. ಇಲ್ಲವಾದಲ್ಲಿ ವೇಟಿಂಗ್ ಪ್ರಯಾಣಿಕರಿಗೆ ಖಾತ್ರಿಯಯಾದ ಕೂಡಲೇ ಎಸ್‍ಎಮ್‍ಎಸ್‍ನಿಂದ ಮಾಹಿತಿ, ಖಾತ್ರಿ ಕುರಿತು ತಿಳಿಯಲು 24 ಗಂಟೆ ಸೇವೆಯ ಸಹಾಯವಾಣಿ 139 ಪರ್ಯಾಯ ಮಾರ್ಗಗಳನ್ನು ರೈಲ್ವೆ ವ್ಯವಸ್ಥೆ ಮಾಡಿತ್ತು. ಮುಂಬೈನ ಶಿವಾಜಿ ಛತ್ರಪತಿ ಟರ್ಮಿನಸ್, ಚೆನ್ನೈನ ಸೆಂಟ್ರಲ್, ಕೋಲ್ಕತಾದ ಹೌರಾ ರೈಲ್ವೆ ನಿಲ್ದಾಣ, ದೆಹಲಿಯ ಹಜರತ್ ನಿಜಾಮುದ್ದೀನ್ ನಿಲ್ದಾಣಗಳಲ್ಲಿಯೂ ಪ್ರಾಯೋಗಿಕವಾಗಿ ರಿಸರ್ವೇಷನ್ ಚಾರ್ಟ್ ಬಳಕೆ ನಿಲ್ಲಿಸಲಾಗಿತ್ತು.

  • Share On Facebook
  • Tweet It


- Advertisement -
bengaluruchartrailwayreservation


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
You may also like
ತೃತೀಯ ಲಿಂಗಿಗಳ ಅಭ್ಯುದಯ ನೀತಿಗೆ ಸಂಪುಟ ಅಸ್ತು
October 27, 2017
ಸಿಐಡಿ ಕ್ಲೀನ್‍ಚಿಟ್ ಪಡೆದಿದ್ದ ಕೆ.ಜೆ.ಜಾರ್ಜ್ ವಿರುದ್ಧ ಸಿಬಿಐನಿಂದ ಪ್ರಕರಣ ದಾಖಲು
October 27, 2017
ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಸೋಲಿಸಿದ ರಮ್ಯ, ಟ್ವೀಟ್ ಹೆಚ್ಚಳಕ್ಕೆ ಕಳ್ಳದಾರಿ?
October 22, 2017
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search