• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಅಭಿಪ್ರಾಯ

ಈ ದೇಶ ಕಂಡ ಅತಿ ಕೆಟ್ಟ ರಕ್ಷಣಾ ಮಂತ್ರಿ ಎ.ಕೆ. ಆ್ಯಂಟನಿ

TNN Correspondent Posted On September 20, 2017
0


0
Shares
  • Share On Facebook
  • Tweet It

ಇತ್ತೀಚೆಗಷ್ಟೇ ನಿರ್ಮಲಾ ಸೀತಾರಾಮನ್ ರಕ್ಷಣಾ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಇಂದಿರಾ ಗಾಂಧಿ ಬಳಿಕ ಮಹಿಳೆಯೊಬ್ಬರು ಜವಾಬ್ದಾರಿಯುತ ಖಾತೆ ವಹಿಸಿಕೊಂಡಿದ್ದು ಚರ್ಚೆಯಾಯಿತು. ಹಾಗೆಯೇ, ದೇಶ ಕಂಡ ದಕ್ಷ ರಕ್ಷಣಾ ಮಂತ್ರಿಗಳನ್ನು ನೆನಪಿಸಿಕೊಳ್ಳಲಾಯಿತು. ಕಾಂಗ್ರೆಸ್ಸಿನ ಜಾರ್ಜ್ ಫರ್ನಾಂಡಿಸ್ ಬಗ್ಗೆಯೂ ಸಕಾರಾತ್ಮಕ ಅಂಶ ಕೇಳಿಬಂದವು. ಆದರೂ ಒಂದು ಪ್ರಶ್ನೆ ಮಾತ್ರ ಹಾಗೆಯೇ ಉಳಿಯಿತು…

ಹಾಗಾದರೆ ದೇಶ ಕಂಡ ಅತಿ ಕೆಟ್ಟ ರಕ್ಷಣಾ ಮಂತ್ರಿ ಯಾರು?

ಅರುಣ್ ಜೇಟ್ಲಿ 2016ರಲ್ಲಿ ರಕ್ಷಣಾ ಖಾತೆ ವಹಿಸಿಕೊಂಡ ಬಳಿಕ ಸುದ್ದಿಗೋಷ್ಠಿ ಕರೆದು “ಅಗಸ್ಟಾ ವೆಸ್ಟ್ ಲೆಂಡ್ ಹಗರಣವನ್ನು ಯುಪಿಎ ಆಡಳಿತದಲ್ಲಿ ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಎನ್ ಡಿಎ ಅದನ್ನು ಮತ್ತೆ ತನಿಖೆ ಮಾಡಲು ಅನುವು ಮಾಡಿಕೊಡುತ್ತದೆ ಎಂದರು. ಹೆಲಿಕಾಪ್ಟರ್ ಖರೀದಿ ಹಗರಣವನ್ನು ಮುಚ್ಚಿಹಾಕಿದ್ದು ಬೇರೆ ಯಾರೂ ಅಲ್ಲ, ಯುಪಿಎ ಅವಧಿಯಲ್ಲಿ ರಕ್ಷಣಾ ಮಂತ್ರಿಯಾಗಿದ್ದ ಎ.ಕೆ. ಆ್ಯಂಟನಿ.

ಈ ಕಾಂಗ್ರೆಸ್ಸಿನವರಿಗೆ ಯಾವುದೇ ಘಟನೆ, ಹಗರಣವನ್ನು ಮುಚ್ಚಿಹಾಕುವುದು ಒಂದು ಚಾಳಿಯೇ ಆಗಿಬಿಟ್ಟಿದೆ. ಮೊದಲು ಇಶ್ರತ್ ಜಹಾನ್ ಪ್ರಕರಣ ಮುಚ್ಚಿಹಾಕಿತು. ಬಳಿಕ ಸಂಝೋತಾ ಎಕ್ಸ್ ಪ್ರೆಸ್ ದುರಂತ, ಮಾಲೇಗಾಂವ್ ಸ್ಫೋಟ, ಅಗಸ್ಟಾ ವೆಸ್ಟ್ ಲೆಂಡ್ ಹಗರಣ… ಹೀಗೆ ಒಂದೇ, ಎರಡೇ? ಹೀಗೆ ಮುಚ್ಚಿ ಹಾಕುವ ಕೆಲಸದಲ್ಲಿ ಕಾಂಗ್ರೆಸ್ಸಿಗೆ ನಿಷ್ಠೆ ತೋರಿದ್ದು ಎ.ಕೆ. ಆ್ಯಂಟನಿ.

ಎಸ್ 70 ಬಿ, ಎಂಎಂಆರ್ ಸಿಎ, ಸಿಎಚ್-47 ಎಫ್, ಎಂ 777, ಅವ್ರೋ… ಹೀಗೆ ಹಲವು ಹೆಲಿಕಾಪ್ಟರ್ ಖರೀದಿಯಲ್ಲಿ ಎ.ಕೆ. ಆ್ಯಂಟನಿ ವಿರುದ್ಧ ಆರೋಪಗಳು ಕೇಳಿಬಂದವು. ಆದರೂ ಜಪ್ಪಯ್ಯ ಎನ್ನಲಿಲ್ಲ ಅವರು. ಇದೇ ಕಾರಣಕ್ಕೆ ಮನೋಹರ್ ಪರಿಕ್ಕರ್ ರಕ್ಷಣಾ ಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಲೇ, “ನಾವು ಅತಿ ಕೆಟ್ಟ ಅವ್ಯವಸ್ಥೆಯಲ್ಲಿದ್ದೇವೆ, ಇದನ್ನೆಲ್ಲ ತೊಲಗಿಸಬೇಕು’ ಎಂದಿದ್ದರು!

ಬರೀ ಹಗರಣಗಳಷ್ಟೇ ಅಲ್ಲ, ಅವರು ನೀಡುವ ಹೇಳಿಕೆಗಳೂ ಹಾಸ್ಯಾಸ್ಪದ, ನಿರ್ಲಜ್ಯತನದಿಂದ ಕೂಡಿದ್ದವು. 2016ರಲ್ಲಿ ಜಮ್ಮು-ಕಾಶ್ಮೀರದ ಗಡಿಯಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ದಾಳಿ ಮಾಡಿ ಭಾರತದ ಐವರು ಯೋಧರನ್ನು ಹತ್ಯೆ ಮಾಡಿದ ಬಳಿಕ, “ಉಗ್ರರೇ ಪಾಕಿಸ್ತಾನಿ ಸೈನಿಕರ ಸಮವಸ್ತ್ರ ತೊಟ್ಟು ದಾಳಿ ಮಾಡಿದ್ದಾರೆ” ಎಂದರು. ಇದಕ್ಕೆ ದೇಶಾದ್ಯಂತ ಟೀಕೆ ವ್ಯಕ್ತವಾದಾಗ “ಇದು ಪಾಕಿಸ್ತಾನ ವಿಶೇಷ ಪಡೆ ಮಾಡಿದ ದಾಳಿ” ಎಂದು ತಿಪ್ಪೆ ಸಾರಿಸಿದರು.

ಆ್ಯಂಟನಿ ರಕ್ಷಣಾ ಮಂತ್ರಿಯಾಗಿದ್ದಾಗ ದೇಶಕ್ಕೆ ರಕ್ಷಣೆ ಎಂಬುದೇ ಇರಲಿಲ್ಲ. ಗಡಿಯಲ್ಲಿ ಉಗ್ರರ ದಾಳಿ, ಕದನ ವಿರಾಮ ಉಲ್ಲಂಘನೆ, ಹಗರಣಗಳೇ ಸುದ್ದಿಯಾದವು. ಅವರ ಅವಧಿಯಲ್ಲೇ ಚೀನಾ ಬರೋಬ್ಬರಿ 19 ಕಿ.ಮೀ. ಅತಿಕ್ರಮಣ ಮಾಡಿದ್ದು ಎಂಬುದು ಎಷ್ಟು ಜನರಿಗೆ ಗೊತ್ತು? ಇವರು ರಕ್ಷಣಾ ಮಂತ್ರಿಯಾಗಿದ್ದಾಗಲೇ 100ಕ್ಕೂ ಅಧಿಕ ವಾಯುದಳದ 100 ವಿಮಾನಗಳು ಅಪಘಾತಕ್ಕೀಡಾದವು, ತತ್ರಾ ಸೇನಾ ಟ್ರಕ್ ಖರೀದಿಯಲ್ಲಿ ಜನರಲ್ ವಿ.ಕೆ. ಸಿಂಗ್ ಅವರಿಗೆ 14 ಕೋಟಿ ರು. ಲಂಚದ ಆಮಿಷ ಒಡ್ಡಿದ್ದ ಆರೋಪ ಕೇಳಿಬಂದಿದ್ದು, ಇದೇ ಆ್ಯಂಟನಿ ಕುರಿತೇ ಎಂಬುದೇ ಗಮನಾರ್ಹ.

ಅಷ್ಟೇ ಅಲ್ಲ, ಅಧಿಕಾರದ ದುರುಪಯೋಗ ಮಾಡಿಕೊಂಡ ಕೀರ್ತಿಯೂ ಇದೇ ಆ್ಯಂಟನಿಗೇ ಸಲ್ಲಬೇಕು. 2012ರಲ್ಲಿ ಎ.ಕೆ. ಆ್ಯಂಟನಿ ಪತ್ನಿ ಎಲಿಜಬೆತ್ ಆ್ಯಂಟನಿ ಬಿಡಿಸಿದ ಪೇಂಟಿಂಗ್ ಗಳನ್ನು ವಿಮಾನ ನಿಲ್ದಾಣ ಪ್ರಾಧಿಕಾರ 28 ಕೋಟಿ ರು.ಗೆ ಖರೀದಿಸುವಂತೆ ಮಾಡಿದ್ದು ಆ್ಯಂಟನಿ. ವಾಸ್ತವದಲ್ಲಿ ಎಲಿಜಬೆತ್ ಆ್ಯಂಟನಿ ಯಾವುದೇ ತರಬೇತಿ ಪಡೆದ, ನುರಿತ ಪೇಂಟರ್ ಸಹ ಆಗಿರಲಿಲ್ಲ.

ಹೀಗೆ ಒಬ್ಬ ಅದಕ್ಷ, ಭ್ರಷ್ಟ, ಬೇಜವಾಬ್ದಾರಿಯುತರೊಬ್ಬರು ದೇಶದ ರಕ್ಷಣಾ ಮಂತ್ರಿಯಾದರೆ ಏನಾಗುತ್ತದೆ ಎಂಬುದಕ್ಕೆ ಆ್ಯಂಟನಿಯವರೇ ಸಾಕ್ಷಿ. ಈಗ ಮಹತ್ತರ ಖಾತೆಯನ್ನು ನಿರ್ಮಲಾ ಸೀತಾರಾಮನ್ ವಹಿಸಿಕೊಂಡಿದ್ದಾರೆ. ದಕ್ಷವಾಗಿ ನಿರ್ವಹಿಸಲಿ ಎಂಬುದೇ ಆಶಯ.

-ಅತುಲ್ ಕುಮಾರ್ ಮಿಶ್ರಾ

0
Shares
  • Share On Facebook
  • Tweet It




Trending Now
ಕರ್ನಾಟಕದ ಪ್ರತಿಭೆ ದೀಕ್ಷಿತ್ ಅಮೀನ್‌ಗೆ ವಿಶ್ವ ಶಾಲಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ
Tulunadu News June 16, 2026
Najlepsze bonusy i sloty w polskim kasynie online
Tulunadu News May 29, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕರ್ನಾಟಕದ ಪ್ರತಿಭೆ ದೀಕ್ಷಿತ್ ಅಮೀನ್‌ಗೆ ವಿಶ್ವ ಶಾಲಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ
    • Najlepsze bonusy i sloty w polskim kasynie online
    • ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
  • Popular Posts

    • 1
      ಕರ್ನಾಟಕದ ಪ್ರತಿಭೆ ದೀಕ್ಷಿತ್ ಅಮೀನ್‌ಗೆ ವಿಶ್ವ ಶಾಲಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ

  • Privacy Policy
  • Contact
© Tulunadu Infomedia.

Press enter/return to begin your search