• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಅಭಿಪ್ರಾಯ

ಸೇನೆ ಗಡಿಯಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ಕೈಗೊಂಡರೂ ಕೇಂದ್ರವನ್ನೇ ಟೀಕಿಸಬೇಕೆ ಕಾಂಗ್ರೆಸ್ಸಿಗರೇ?

TNN Correspondent Posted On September 28, 2017
0


0
Shares
  • Share On Facebook
  • Tweet It

ಇಷ್ಟೇ ಆಗಿದ್ದು…

ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಮ್ಯಾನ್ಮಾರಿನ ನಾಗಾ ಬಂಡುಕೋರರ ಉಪಟಳ ಜಾಸ್ತಿಯಾಗಿತ್ತು. ನಾಗಾಲೆಂಡ್ ರಾಷ್ಟ್ರೀಯವಾದಿ, ಸಮಾಜವಾದಿ ಸಂಘಟನೆ (ಎನ್ಎಸ್ ಸಿಎನ್) ಬಂಡುಕೋರರ ಚಲನವಲನ ಸಂಶಯಕ್ಕೀಡುಮಾಡಿದ್ದವು. ಇದೇ ಕಾರಣಕ್ಕೆ ಭಾರತೀಯ ಸೇನೆ ಗುಂಡಿನ ದಾಳಿ ನಡೆಸಿ ಹಲವು ನಾಗಾ ಬಂಡುಕೋರರನ್ನು ಹತ್ಯೆ ಮಾಡಿದೆ.

ಆದರೆ ಇದೇ ಮಹಾ ತಪ್ಪು ಎಂಬಂತೆ ಕಾಂಗ್ರೆಸ್ಸಿಗರು ಬಿಂಬಿಸುತ್ತಿದ್ದಾರೆ. ನೇರವಾಗಿ ಕೇಂದ್ರ ಸರಕಾರವನ್ನೇ ಟೀಕಿಸುತ್ತಿದ್ದಾರೆ.

“ಕೇಂದ್ರ ಸರಕಾರ ಇಕ್ಕಟ್ಟಿನಲ್ಲಿ ಸಿಲುಕಿದರೆ, ಟೀಕೆ ವ್ಯಕ್ತವಾದರೆ ಆ ವಿಷಯ ಮರೆಮಾಚಲು ಸರ್ಜಿಕಲ್ ಸ್ಟ್ರೈಕ್ ಮಾಡುತ್ತಾರೆ” ಎಂದು ಕೇಂದ್ರ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಆರೋಪಿಸಿದ್ದಾರೆ.

ಆಲ್ಲಾ ಸ್ವಾಮಿ, ಭಾರತ ಗಡಿಯಲ್ಲಿ ಸರ್ಜಿಕಲ್ ದಾಳಿ ಮಾಡಿದೆ ಎಂದು ಹೇಳಿದವರು ಯಾರು? ನಾಗಾ ಬಂಡುಕೋರರೇ ನಿಮ್ಮ ಕಿವಿಯಲ್ಲಿ ಬಂದು ಹಿಂಗಿಂಗೆ ಎಂದು ಹೇಳಿದರೆ? ಸರ್ಕಾರ ಘೋಷಣೆ ಮಾಡಿದೆಯೇ? ಅಥವಾ ಸೈನ್ಯವೇ ನಾವು ಸರ್ಜಿಕಲ್ ದಾಳಿ ಮಾಡಿದ್ದೇವೆ ಎಂದು ಹೇಳಿದೆಯೇ? ಯಾರು ಹೇಳಿದ್ದಾರೆ?

ಅಷ್ಟಕ್ಕೂ ಕೇಂದ್ರ ಸರಕಾರ ಯಾವ ಇಕ್ಕಟ್ಟಿನಲ್ಲಿ ಸಿಲುಕಿದೆ? ಯಾವ ಕೆಟ್ಟ ಸಮಯ ಎದುರಿಸುತ್ತಿದೆ? ಯಾವುದೂ ಇಲ್ಲ. ಬದಲಾಗಿ ನೋಟು ನಿಷೇಧ ಹಾಗೂ ಜಿಎಸ್ ಟಿ ಜಾರಿಯ ಯಶಸ್ಸಿನಲ್ಲಿ ತೇಲಾಡುತ್ತಿದೆ. ಹೀಗಿರುವಾಗ ಯಾವ ಕೆಟ್ಟದಿನ ಮರೆಮಾಚಲು ಕೇಂದ್ರ ಸರಕಾರ ಹೀಗೆ ಮಾಡುತ್ತಿದೆ? ನೀವೇ ಹೇಳುವಿರಾ?

ಹೌದು, ನಾಗಾ ಬಂಡುಕೋರರ ವಿರುದ್ಧ ದಾಳಿಯಾದ ಬಳಿಕ, ಇದು ದೇಶದ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಎಂದು ಬಿಂಬಿಸಲಾಯಿತು. ಆದರೆ ಬಳಿಕ ಸೈನ್ಯವೇ ಇದು ನಿರ್ದಿಷ್ಟ ದಾಳಿ ಅಲ್ಲ, ಬಂಡುಕೋರರ ಹತ್ತಿಕ್ಕಲು ಕೈಗೊಂಡ ಕಾರ್ಯಾಚರಣೆ ಎಂದು ಪೂರ್ವ ಕಮಾಂಡ್ ಸ್ಪಷ್ಟಪಡಿಸಿದೆ. ಸೈನ್ಯವೇ ಹೀಗೆ ಹೇಳಿರುವಾಗ ಪಿ.ಚಿದಂಬರಂ ಅವರಿಗೆ ಹೇಗೆ ಇದು ಸರ್ಜಿಕಲ್ ದಾಳಿಯ ಹಾಗೆ ಕಂಡಿತು.

ಇಷ್ಟಕ್ಕೂ ಸರ್ಜಿಕಲ್ ದಾಳಿ ಮಾಡಿದರೂ ತಪ್ಪೇನು?

ಯಾವುದೇ ಒಂದು ದೇಶದ ಸಾರ್ವಭೌಮತೆಗೆ ಧಕ್ಕೆ ಬಂದಾಗ, ಗಡಿಯಲ್ಲಿ ಉಗ್ರರ ದಾಳಿ ಹೆಚ್ಚಾದಾಗ ಅಥವಾ ಮುನ್ಸೂಚನೆ ಸಿಕ್ಕಾಗ ಆ ದೇಶ ಅಂಥ ಉಗ್ರರನ್ನು ಮೆಟ್ಟಿನಿಲ್ಲಲು ನಿರ್ದಿಷ್ಟ ದಾಳಿಯಂಥ ಕಾರ್ಯಾಚಾರಣೆ ಕೈಗೊಳ್ಳಲೇಬೇಕು. ಅದನ್ನು ಪಾಕಿಸ್ತಾನದ ಮೇಲೆ 2016ರಲ್ಲೇ ಮಾಡಲಾಗಿದೆ. ಹಿಂದೆ ಯಾವ ಸರ್ಕಾರದ ಅವಧಿಯಲ್ಲೂ ಇಂಥ ದಾಳಿ ನಡೆದಿಲ್ಲ, ಪಾಕಿಸ್ತಾನಕ್ಕೆ ಪಾಠ ಕಲಿಸಿಲ್ಲ ಎಂಬುದೂ ಗೊತ್ತಾಗಿದೆ. ಇಂಥ ದಾಳಿಗಳಿಂದಲೇ ಅಲ್ಲವೇ, ಜಮ್ಮು-ಕಾಶ್ಮೀರದಲ್ಲಿ ಉಗ್ರರ, ಕಲ್ಲು ತೂರಾಟಗಾರರ ಉಪಟಳ ಕಡಿಮೆಯಾಗಿದ್ದು. ಕಾಶ್ಮೀರದಲ್ಲಿ ಶಾಂತಿ ನೆಲೆಸುತ್ತಿದೆ ಎಂದು ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯೇ ಹೇಳಿದ್ದು.

ಹೀಗಿರುವಾಗ ಕಾಂಗ್ರೆಸ್ಸಿಗೇಕೆ ಇಷ್ಟೊಂದು ಉರಿ? ದಾಳಿ ಮಾಡಿದರೂ, ಬಿಟ್ಟರೂ ಇವರಿಗೇನು ನಷ್ಟ? ಯುಪಿಎ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಉಗ್ರರು ದಾಳಿ ಮಾಡಿದಾಗಲೂ ಸುಮ್ಮನಿದ್ದ, ಕಾಶ್ಮೀರದಲ್ಲಿ ಯಾವ ಕ್ರಮವೂ ಕೈಗೊಳ್ಳದೆ “ಮೌನ”ವಾಗಿದ್ದ ನಿಮ್ಮ ಹಕೀಕತ್ತೇನು ಎಂಬುದು ಎಲ್ಲರಿಗೋ ಗೊತ್ತಿದೆ ಬಿಡಿ.

ಭ್ರಷ್ಟಾಚಾರ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಪಿ. ಚಿದಂಬರಂ ಅವರಿಗೆ ಭಾರತೀಯ ಸೇನೆ ಉಗ್ರರ ವಿರುದ್ಧ ಕಾರ್ಯಾಚರಣೆ ಕೈಗೊಂಡರೂ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡುವಷ್ಟು ಬುದ್ಧಿಭ್ರಮಣೆಯಾಯಿತೆ ಎಂಬುದೇ ಯಕ್ಷಪ್ರಶ್ನೆ. ಹಾಗಾಗದಿರಲಿ.

-ರಾಜೇಂದ್ರ ಕುಲಕರ್ಣಿ, ಸಾಫ್ಟ್ ವೇರ್ ಉದ್ಯೋಗಿ ಬೆಂಗಳೂರು

 

0
Shares
  • Share On Facebook
  • Tweet It




Trending Now
ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
Tulunadu News November 1, 2025
ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
Tulunadu News October 31, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
    • ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?
  • Popular Posts

    • 1
      ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • 2
      ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!

  • Privacy Policy
  • Contact
© Tulunadu Infomedia.

Press enter/return to begin your search