• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಅಭಿಪ್ರಾಯ

300 ದಲಿತರ ಮತಾಂತರ, ಹಿಂದಿದೆಯೇ ಬೌದ್ಧ ಧರ್ಮ ಗುರುಗಳ ಹುನ್ನಾರ?

TNN Correspondent Posted On October 1, 2017
0


0
Shares
  • Share On Facebook
  • Tweet It

ಇಷ್ಟು ದಿನ ಕ್ರಿಶ್ಚಿಯನ್ನರು ದಲಿತರಿಗೆ ಹಣ, ಐಷಾರಾಮಿ ಜೀವನದ ಮೂಲಕ ಮತಾಂತರ ಮಾಡುತ್ತಿದ್ದ ಪ್ರಕರಣಗಳನ್ನು ಕೇಳುತ್ತಿದ್ದೆವು. ಮುಸ್ಲಿಂ ಮೂಲಭೂತವಾದಿಗಳು ಬಡ ಹಿಂದೂ ಹುಡುಗಿಯರ ಹಿಂದೆ ಮುಸ್ಲಿಂ ಯುವಕರನ್ನು ಬಿಟ್ಟು ಪ್ರೀತಿಯ ಹೆಸರಲ್ಲಿ ಇಸ್ಲಾಂಗೆ ಮತಾಂತರಗೊಳಿಸುತ್ತಿರುವುದನ್ನು ನೋಡಿದ್ದೇವೆ, ಕೇಳಿದ್ದೇವೆ.

ಆದರೆ ಬೌದ್ಧ ಧರ್ಮೀಯರೂ ಇದೇ ತಂತ್ರ ಬಳಸುತ್ತಿದ್ದಾರೆಯೇ? ಅಂಬೇಡ್ಕರ್, ಅಶೋಕ ಮಹಾರಾಜನ ಹೆಸರಲ್ಲಿ ದಲಿತರಿಗೆ ಗಾಳ ಹಾಕುತ್ತಿದ್ದಾರೆಯೇ? ಎಂಬ ಪ್ರಶ್ನೆಗಳು ಕಾಡುತ್ತಿವೆ.

ಹೀಗೆ ಪ್ರಶ್ನೆಗಳು ಉದ್ಭವಿಸಲು ಸಹ ಕಾರಣಗಳಿವೆ?

ಅಶೋಕ ವಿಜಯ ದಶಮಿ ಹಿನ್ನೆಲೆಯಲ್ಲಿ ಗುಜರಾತಿನ ಅಹಮದಾಬಾದ್ ಹಾಗೂ ವಡೋದರಾದಲ್ಲಿ 300ಕ್ಕೂ ಅಧಿಕ ದಲಿತರು ಬೌದ್ಧ ಧರ್ಮಕ್ಕೆ ಮತಾಂತರವಾಗಿದ್ದಾರೆ. ಇದರಲ್ಲಿ 50 ಮಹಿಳೆಯರು ಸೇರಿ 200 ದಲಿತರು ಅಹಮದಾಬಾದ್ ಹಾಗೂ 100 ದಲಿತರು ವಡೋದರಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮತಾಂತರಗೊಂಡಿದ್ದಾರೆ.

ಶಾಂತಿಯುತವಾಗಿಯೇ ಮತಾಂತರ ಪ್ರಕ್ರಿಯೆ ನಡೆದಿದೆ ಎಂದು ಕಾರ್ಯಕ್ರಮ ಆಯೋಜಕರಾದ ಗುಜರಾತ್ ಬುದ್ಧಿಸ್ಟ್ ಅಕಾಡೆಮಿಯವರು ತಿಳಿಸಿದ್ದಾರೆ. ವಡೋದರಾದ ಎಲ್ಲ ದಲಿತರು ಸ್ವಯಂ ಪ್ರೇರಿತರಾಗಿಯೇ ಮತಾಂತರವಾಗಿದ್ದಾರೆ ಎಂದೂ ಹೇಳಿದ್ದಾರೆ.

ಆದರೆ, ಸ್ವಯಂ ಪ್ರೇರಿತರಾಗಿ ಮತಾಂತರವಾಗುವುದಾದರೆ ಎಲ್ಲರೂ ದಲಿತರೇ ಏಕೆ ಆಗಬೇಕು? ಅವರಿಗೆ ಅಶೋಕ ಬಂದು ಕನಸಿನಲ್ಲಿ ಮತಾಂತರ ಆಗಿ ಎಂದು ಹೇಳಿದ್ದನೇ? ಬುದ್ಧಿಸ್ಟ್ ಅಕಾಡೆಮಿಯವರು ಕಾರ್ಯಕ್ರಮ ಆಯೋಜಿಸಿ ಮತಾಂತರಗೊಳಿಸಿ ಎಂದು ಅವರ ಕಿವಿಯಲ್ಲಿ ಹೇಳಿದ್ದನೇ? ಬೇರೆ ಜಾತಿ, ಧರ್ಮದವರು ಒಬ್ಬರೂ ಏಕೆ ಸ್ವಯಂ ಪ್ರೇರಿತರಾಗಿ ಮತಾಂತರವಾಗಲಿಲ್ಲ? ಅಹಿಂಸಾ ಮಾರ್ಗದಲ್ಲಿ ನಡೆಯಿತು ಎಂದ ಮಾತ್ರಕ್ಕೆ ಮತಾಂತರದ ಹಿಂದೆ ಯಾವುದೇ ಹುನ್ನಾರ ಎಲ್ಲ ಎಂದು ನಂಬಲಾಗುತ್ತದೆಯೇ?

ದಲಿತರು ಹೇಗೆ ಬಡವರು ಎಂಬ ಕಾರಣಕ್ಕಾಗಿ ಕ್ರಿಶ್ಚಿಯನ್ನರು ಆಮಿಷದ ಮತಾಂತರ ಮಾಡಿದ ಹಾಗೆ, ಈ ಬೌದ್ಧ ಧರ್ಮಿಯರು ಸಹ ಅಂಬೇಡ್ಕರ್, ಅಶೋಕ ಹೆಸರಲ್ಲಿ ಮತಾಂತರ ಮಾಡುತ್ತಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ.

-ಸಂಜೀವ್ ಭಟ್, ಕುಶಾಲನಗರ

0
Shares
  • Share On Facebook
  • Tweet It




Trending Now
ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
Tulunadu News December 27, 2025
ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
Tulunadu News December 23, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ
    • ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!
    • ಭಕ್ತಿಗೀತೆ ಹಾಡುತ್ತಿದ್ದ ಗಾಯಕಿಯ ಮೇಲೆ ದರ್ಪ! ಜಾತ್ಯಾತೀತ ಗೀತೆ ಹಾಡಲು ಒತ್ತಾಯ!
    • ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ನೀಡಿ - ಸರಕಾರಕ್ಕೆ ಶಾಸಕ ಆಗ್ರಹ!
    • ವಿಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ-ಎಲ್ ಇಡಿ ಸ್ಕ್ರೀನ್ ಗೆ ಆರತಿ!
    • ಅಜಾನ್ ಚರ್ಚೆಯ ಸಂದರ್ಭದಲ್ಲಿ ದೀಪಾವಳಿ ಪಟಾಕಿ ವಿಷಯ ಎತ್ತಿದ ಸಚಿವ!
  • Popular Posts

    • 1
      ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search