• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಕಣ್ಣೂರಿನಲ್ಲಿ ಬಾಂಬ್ ಸದ್ದು, ಜನರಕ್ಷಾ ಯಾತ್ರೆಗೆ ಬ್ರೇಕ್ ಹಾಕುವ ಪ್ಲಾನ್ !

TNN Correspondent Posted On October 9, 2017
0


0
Shares
  • Share On Facebook
  • Tweet It

ತಿರುವನಂತಪುರ : ಕಮ್ಯೂನಿಸ್ಟರು ಸ್ವಭಾವತಃ ರಾಜಕೀಯವಾಗಿ ಹಿಂಸಾಚಾರಿಗಳು ಎಂದು ದೆಹಲಿಂಯ ಪ್ರತಿಭಟನೆಯಲ್ಲಿ ಭಾನುವಾರ ಬೆಳಗ್ಗೆ ಬಿಜೆಪಿ ರಾಷ್ಟ್ರೀ ಯ ಅಧ್ಯಕ್ಷ ಅಮಿತ್ ಷಾ ಹೇಳಿದ್ದೆ ತಡ ತಡರಾತ್ರಿ ಕೇರಳದಲ್ಲಿ ಬಾಂಬ್ ಸಿಡಿದಿದೆ. ಕಣ್ಣೂರು ಜಿಲ್ಲೆಯಲ್ಲಿ ಸಿಡಿದಿರುವ ದೇಸೀ ಬಾಂಬ್‍ಗೆ 5 ಸಿಪಿಎಂ ಕಾರ್ಯಕರ್ತರು ಮತ್ತು 4 ಪೊಲೀಸರು ಗಾಯಗೊಂಡಿದ್ದಾರೆ. ಸಿಎಂ ಪಿಣರಾಯಿ ವಿಜಯನ್ ತವರು ಕಣ್ಣೂರಿನಲ್ಲಿಯೇ ಅಧಿಕ ಆರ್‍ಎಸ್‍ಎಸ್ ಕಾರ್ಯಕರ್ತರ ಹತ್ಯೆ ನಡೆದಿದೆ ಎಂದು ಷಾ ಆರೋಪಿಸಿದ ಬೆನ್ನಲ್ಲೇ ಹಿಂಸಾಚಾರಕ್ಕೆ ತಾನೇ ತವರು ಎಂದು ಘೋಷಿಸಿದಂತೆ ಕಣ್ಣೂರಿನಲ್ಲಿ ಬಾಂಬ್ ಸದ್ದು ಕೇಳಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.


ವ್ಯವಸ್ಥಿತ ಸಂಚು: ಕೇರಳದಲ್ಲಿ ಆರ್‍ಎಸ್‍ಎಸ್ ಕಾರ್ಯಕರ್ತರ ಕೊಲೆಯ ವಿರುದ್ಧ ಬಿಜೆಪಿ ಜನರಕ್ಷಾ ಯಾತ್ರೆ ಹಮ್ಮಿಕೊಂಡಿದೆ. ಈಗಾಗಲೇ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಸೇರಿದಂತೆ ಅನೇಕ ಕೇಂದ್ರ ಸಚಿವರು ಬಂದು ರ್ಯಾಲಿ ನಡೆಸಿದ್ದಾರೆ. ಕಮಲ ಪಾಳಯದ ಪ್ರಭಾವದಿಂದ ಆರ್‍ಎಸ್‍ಎಸ್ ಚಿಗುರೊಡೆಯುತ್ತಿರುವುದನ್ನು ಸಹಿಸದೆ ಸಿಪಿಐ(ಎಂ) ಬಾಂಬ್ ಸ್ಫೋಟದ ಎಚ್ಚರಿಕೆ ನೀಡಿದೆ ಎಂದು ಸ್ಥಳೀಯರು ಮಾತನಾಡುತ್ತಿದ್ದಾರೆ.
ಮತ್ತೊಂದೆಡೆ ಲಘು ಬಾಂಬ್ ಸ್ಫೋಟಿಸಿ ತಮ್ಮದೇ ಸಿಪಿಐ ಕಾರ್ಯಕರ್ತರು ಗಾಯಗೊಳ್ಳುವಂತೆ ನೋಡಿಕೊಂಡು ನಂತರ ರ್ಯಾಲಿ ನಡೆಸುತ್ತಿರುವ ಬಿಜೆಪಿ ತಲೆಗೆ ಕಟ್ಟುವ ಹುನ್ನಾರವಿದು ಎಂದು ರಾಜಕೀಯ ಮುಖಂಡರು ವಿಶ್ಲೇಷಿಸುತ್ತಿದ್ದಾರೆ.


ಒಟ್ಟಿನಲ್ಲಿ 15ದಿನಗಳ ಜನರಕ್ಷಾ ಯಾತ್ರೆಗೆ ಬ್ರೇಕ್ ಹಾಕಲು ಬೇಕಾದ್ದ ಎಲ್ಲ ಹಿಂಸಾತ್ಮಕ ತಂತ್ರಗಾರಿಕೆಯನ್ನು ರಾಜ್ಯ ಸರ್ಕಾರ ಮಾಡಿಯೇ ತೀರುತ್ತದೆ ಎಂದು ಬಾಂಬ್ ಸ್ಫೋಟದಿಂದ ಸ್ಪಷ್ಟವಾಗಿದೆ, ಬಿಜೆಪಿಗೆ ಇದೇ ಸಂದೇಶ ರವಾನೆಯಾಗಿದೆ. ಕಾಂಗ್ರೆಸ್ ಮತ್ತು ಕೇರಳದ ಜನತೆ ಮಾತ್ರ ಮೂಕಪ್ರೇಕ್ಷಕರಾಗಿ ಎಡ-ಬಲಗಳ ಕದನ ವೀಕ್ಷಿಸುವ ಅನಿವಾರ್ಯತೆಯಲ್ಲಿ ಮುಳುಗಿದ್ದಾರೆ.

0
Shares
  • Share On Facebook
  • Tweet It


amitbjpbombcommunistcpicpimjankannurkeralamodindapinarayirakshashahvijayanyatra


Trending Now
ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
Tulunadu News January 30, 2026
ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
Tulunadu News January 28, 2026
You may also like
ಯುವ ಪತ್ರಕರ್ತೆರೆಯರಿಗಿಲ್ಲ ಇಲ್ಲಿಗೆ ತೆರೆಳಲು ಅವಕಾಶ… !! 50 ವರ್ಷದ ಮೇಲಿನ ಮಹಿಳಾ ಪೊಲೀಸರಿಗೆ ಮಾತ್ರ ಇಲ್ಲಿಗೆ ಎಂಟ್ರಿ..!!!
November 5, 2018
ಮುಸ್ಲಿಂ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ಕೊಡಬೇಕು ಎನ್ನುವ ಹಿಂದಿರುವ ರಹಸ್ಯ ಏನು?
October 31, 2018
ಮಂಗಳೂರಿನಲ್ಲಿ ದಸರಾ ರಜೆ ಕಡಿಮೆ ಮಾಡುವುದು ಸರಿಯಲ್ಲ- ಶಾಸಕ ಕಾಮತ್
September 22, 2018
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
    • ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
  • Popular Posts

    • 1
      ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • 2
      ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ

  • Privacy Policy
  • Contact
© Tulunadu Infomedia.

Press enter/return to begin your search