• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಮರಳಿನೊಂದಿಗೆ ಸ್ನೇಹ, ಬಸ್ಸಿನೊಂದಿಗೆ ಸರಸ ಇಟ್ಟುಕೊಂಡಿದ್ದರೆ ಜಗದೀಶ್ ಇನ್ನೊಂದು ಮಳೆಗಾಲ ಇಲ್ಲಿಯೇ ಕಳೆಯಬಹುದಿತ್ತು!

Hanumantha Kamath Posted On October 13, 2017
0


0
Shares
  • Share On Facebook
  • Tweet It

ಹಿಮ್ಮೇಳದಲ್ಲಿ ಮರಳು ಮಾಫಿಯಾ, ಪಕ್ಕವಾದ್ಯದಲ್ಲಿ ಬಸ್ ಲಾಬಿ, ಎದುರಿಗೆ ಜನಪ್ರತಿನಿಧಿಗಳ ತಲೆಯಾಡಿಸುವಿಕೆಗೆ ಸರಿಯಾಗಿ ಭಾಗವತಿಗೆ ನಡೆದರೆ ಆ ಅಧಿಕಾರಿ ಎರಡು ವರ್ಷ ಪೂರ್ಣವಾಗಿ ಒಂದೇ ಕಡೆ ಇರುತ್ತಾನೆ. ಅದು ಆಗದ ಪರಿಣಾಮವಾಗಿ ಡಾ| ಜಗದೀಶ್ ಅವರು ಒಂದು ವರ್ಷ, ಎರಡು ತಿಂಗಳಿಗೆನೆ ವರ್ಗಾವಣೆಯಾಗುತ್ತಿದ್ದಾರೆ. ಅವರ ವರ್ಗಾವಣೆಯನ್ನು ಸಂಭ್ರಮಿಸುವುದು ಅಥವಾ ವಿರೋಧಿಸುವುದು ಅವರವರಿಗೆ ಬಿಟ್ಟಿದ್ದು. ಪ್ರಾರಂಭದಲ್ಲಿ ಡಾ|ಜಗದೀಶ್ ಅವರ ಕೆಲಸದ ಶೈಲಿ ಬಗ್ಗೆ ನನಗೂ ಅಸಮಾಧಾನವಿತ್ತು. ಅವರು ನಮ್ಮ ಅಹವಾಲುಗಳನ್ನು ಸರಿಯಾಗಿ ಆಲಿಸಲ್ಲ, ಎಲ್ಲವನ್ನು ಬರೆದುಕೊಡಿ ಎಂದು ಹೇಳಿ ನಮಗೂ ಕಿರಿಕಿರಿಯನ್ನು ಉಂಟು ಮಾಡಿದ್ದರು. ಸಮಸ್ಯೆಗಳನ್ನು ನಾಲ್ಕೈದು ಪುಟ ಬರೆದು ಕೊಡಲು ಅದೇನು ಕಥೆ, ಕಾದಂಬರಿ ಅಲ್ಲ, ಮನವಿ ಪತ್ರದಲ್ಲಿ ಕೇವಲ ಮುಖ್ಯಾಂಶಗಳು ಮಾತ್ರ, ವಿವರಗಳನ್ನು ನಾವು ಹೇಳುತ್ತೇವೆ, ಕೇಳಿ ಎಂದು ನಾನೇ ಅವರಿಗೆ ಕೆಲವು ಸಲ ಹೇಳಬೇಕಾಯಿತು. ನಂತರ ದಕ್ಷಿಣ ಕನ್ನಡಕ್ಕೆ ಸರಿಯಾಗಿ ಅವರು ಬದಲಾದರು. ನಮ್ಮ ಮಾತುಗಳಿಗೆ ಕಿವಿ ಕೊಡಲು ಶುರು ಮಾಡಿದರು. ಅವರ ವರ್ಗಾವಣೆ ಅಚಾನಕ್ ಆಗಿ ಆಗಿದೆ ಎಂದು ನನಗೆ ಅನಿಸುವುದಿಲ್ಲ. ಯಾಕೆಂದರೆ ಮಳೆಗಾಲದ ಮುಂಚೆನೆ ಅವರನ್ನು ಕಳುಹಿಸುವ ಪ್ಲಾನ್ ಆಗಿತ್ತು. ಆದರೆ ಅದಕ್ಕೆ ಸರಿಯಾದ ಮುಹೂರ್ಥ ಕೂಡಿ ಬಂದಿರಲಿಲ್ಲ. ಅಷ್ಟಕ್ಕೂ ಡಾ| ಜಗದೀಶ್ ಅವರ ವರ್ಗಾವಣೆಗೆ ಕಾರಣಗಳು ಮುಖ್ಯವಾಗಿ ಎರಡು:
ಒಂದನೇಯದಾಗಿ ಮರಳು ಮಾಫಿಯಾ. ಇವರು ಬರುವ ಮೊದಲು ಇದ್ದ ಜಿಲ್ಲಾಧಿಕಾರಿ ಎಬಿ ಇಬ್ರಾಹಿಂ ಅವರು ಮರಳು ತೆಗೆಯುವ ಪರ್ಮಿಟ್ ಅನ್ನು ಕಡ್ಲೆಕಾಯಿಯಂತೆ ಹಂಚಿದ್ದರು. ಅದರ ನಂತರ ಅಧಿಕಾರ ವಹಿಸಿಕೊಂಡ ಡಾ| ಜಗದೀಶ್ ಅವರು ಅದರಲ್ಲಿ ಯಾರೆಲ್ಲಾ ಅರ್ಹವಾಗಿ ಮರಳು ಪರ್ಮಿಟ್ ತೆಗೆದುಕೊಳ್ಳಲು ಸಾಧ್ಯವಿಲ್ಲವೋ ಅವರ ಪರ್ಮಿಟ್ ಗಳನ್ನು ನವೀಕರಿಸಿರಲಿಲ್ಲ. ಇದರಿಂದ ಕುಳಿತುಕೊಂಡ ಕಡೆ ಲಕ್ಷಾಂತರ ರೂಪಾಯಿ ಆದಾಯ ಬರುತ್ತಿದ್ದದ್ದು ನಿಂತು ಹೋಗಿದ್ದ ಕಾರಣ ಅಂತವರೆಲ್ಲರೂ ಕೋಪಿಸಿಕೊಂಡಿದ್ದರು. ತಮ್ಮ ಸರಕಾರ ಇರುವಾಗಲೇ ನಾಲ್ಕು ಕಾಸು ಮಾಡಲು ಈ ಜಿಲ್ಲಾಧಿಕಾರಿ ಬಿಡುವುದಿಲ್ಲ ಎಂದಾದರೆ ಅವನನ್ನು ಸುಮ್ಮನೆ ಬಿಡೋಕೆ ಆಗುತ್ತಾ ಎನ್ನುವ ನಿರ್ಧಾರಕ್ಕೆ ಬಂದಿದ್ದರು.
ಅಷ್ಟಕ್ಕೂ ಮರಳು ಪರ್ಮಿಟ್ ಪಡೆದುಕೊಳ್ಳಲು ಅದಕ್ಕೆ ಹೀಗೆ ಎನ್ನುವ ನಿಯಮಗಳಿವೆ. ಆ ವ್ಯಕ್ತಿಗೆ ಕನಿಷ್ಟ 5 ವರ್ಷ ಮರಳು ತೆಗೆದ ಅನುಭವ ಇರಬೇಕು. ಅಂದರೆ ಹಿಂದೆ ಐದು ಬಾರಿ ಮರಳು ಪರ್ಮಿಟ್ ಸಿಕ್ಕಿರಬೇಕು. ಯಾವುದೇ ರೀತಿಯ ಅಪರಾಧಿಕ ಹಿನ್ನಲೆ ಇರಬಾರದು. ಸ್ವಂತ ಬೋಟು ಮತ್ತು ದಕ್ಕೆ ಇರಬೇಕು. ಆದರೆ ಮರಳು ನಿಯಮಗಳನ್ನು ಮೀರಿ ಹಿಂದಿನ ಜಿಲ್ಲಾಧಿಕಾರಿಯವರು ಪರ್ಮಿಟನ್ನು ಬಸ್ ನ ಮಾಲೀಕರಿಂದ ಹಿಡಿದು ಪತ್ರಕರ್ತರ ತನಕ ಬೇಕಾದವರಿಗೆಲ್ಲ ಹಂಚಿಬಿಟ್ಟಿದ್ದರು. ಆದರೆ ಅದಕ್ಕೆ ಕಡಿವಾಣ ಹಾಕಿದ ಡಾ|ಜಗದೀಶ್ ಎಲ್ಲವನ್ನು ಮೊಟಕುಗೊಳಿಸಿದ್ದರು. ಯಾವುದೇ ಒತ್ತಡಕ್ಕೆ ಮಣಿದಿರಲಿಲ್ಲ. ಆವತ್ತೇ ಅವರ ವರ್ಗಾವಣೆ ಬಹುತೇಕ ಗ್ಯಾರಂಟಿಯಾಗಿತ್ತು.
ಇನ್ನೊಂದು ಡಾ|ಜಗದೀಶ್ ಎದುರು ಹಾಕಿಕೊಂಡದ್ದು ಬಸ್ ಲಾಬಿಯನ್ನು. 1992 ರ ನಂತರ ಹೊಸ ಬಸ್ ಪರ್ಮಿಟ್ ಗಳನ್ನು ಕೊಡಲಾಗುತ್ತಿರಲಿಲ್ಲ. ಆದರೆ ಜಗದೀಶ್ ಅದನ್ನು ಮೊತ್ತಮೊದಲ ಬಾರಿಗೆ ಧೈರ್ಯದಿಂದ ಮುರಿದು ಎಲ್ಲೆಲ್ಲಿ ಜನ ಬಸ್ ಗಳನ್ನು ಕೇಳಿದ್ದರೋ ಅಲ್ಲೆಲ್ಲ ಕೊಡಲು ಯೋಜಿಸಿದ್ದರು. ಅವರು ಒಂದಿಷ್ಟು ದಿನ ಜಾಸ್ತಿ ಇದ್ದರೆ ಮೂಡಬಿದ್ರೆ, ಕಾರ್ಕಳಕ್ಕೂ ಸರಕಾರಿ ಬಸ್ ಗಳು ಓಡಲು ಶುರುವಾಗುತ್ತಿತ್ತು. ಅದರೊಂದಿಗೆ ಮುಡಿಪು, ಸೋಮೇಶ್ವರ, ಉಚ್ಚಿಲ, ಕೊಣಾಜೆ, ಉಳ್ಳಾಲದ ಭಾಗಗಳಿಗೆ ಹೊಸ ಬಸ್ಸುಗಳು ಇನ್ನಷ್ಟು ಓಡಲು ಪ್ರಾರಂಭವಾಗುತ್ತಿತ್ತು. ಇದಕ್ಕೆಲ್ಲಾ ವೇದಿಕೆ ರೆಡಿಯಾಗುತ್ತಿದ್ದಂತೆ ಅವರನ್ನು ಎತ್ತಂಗಡಿ ಮಾಡಲಾಗಿದೆ. ಮರಳು ಮತ್ತು ಬಸ್ಸಿನೊಂದಿಗೆ ಅವರು ಅಪವಿತ್ರ ಮೈತ್ರಿ ಮಾಡಿಕೊಂಡಿದ್ದರೆ ಅವರು ಇನ್ನೊಂದು ಮಳೆಗಾಲವನ್ನು ಆರಾಮವಾಗಿ ಮಂಗಳೂರಿನಲ್ಲಿಯೇ ಕಳೆಯಬಹುದಿತ್ತು. ಆದರೆ ಕೆಸರಿನೊಂದಿಗೆ ಸರಸವಾಡುವುದಕ್ಕಿಂತ ಎದ್ದು ಹೋಗುವುದು ಲೇಸು ಎಂದು ಅವರು ಅಂದುಕೊಂಡ ಕಾರಣ ಡಾ|ಜಗದೀಶ್ ಬೆಂಗಳೂರಿನ ಗಾಡಿ ಹತ್ತಿ ತೆರಳಿದ್ದಾರೆ!

0
Shares
  • Share On Facebook
  • Tweet It


DKDR.Jagadish. DC


Trending Now
ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
Hanumantha Kamath June 30, 2025
ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
Hanumantha Kamath June 30, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?
    • ಸಂವಿಧಾನದಿಂದ "ಜಾತ್ಯಾತೀತತೆ" ಮತ್ತು "ಸಮಾಜವಾದ" ಶಬ್ದಗಳನ್ನು ತೆಗೆಯುವ ಬಗ್ಗೆ ಚರ್ಚೆ ನಡೆಯಲಿ - ಆರ್ ಎಸ್ ಎಸ್
    • PFI ಟಾರ್ಗೆಟ್- 950 ಜನರ ಹಿಟ್ ಲಿಸ್ಟ್ ರೆಡಿ! NIA ಕೋರ್ಟ್ ನಲ್ಲಿ ವಕೀಲರಿಂದ ಮಾಹಿತಿ...
    • ಎಮರ್ಜೆನ್ಸಿ ದಿನಗಳಲ್ಲಿ ಮೋದಿಯವರ ಅನುಭವ ಕಥನ "ದಿ ಎಮರ್ಜೆನ್ಸಿ ಡೈರಿಸ್"!
    • ಬಾಹ್ಯಕಾಶಕ್ಕೆ ಜಿಗಿಯುವ ಮೊದಲು ಪತ್ನಿಗೆ ಭಾವನಾತ್ಮಕ ಸಂದೇಶ: "ನೀನಿಲ್ಲದೆ..... " ಶುಭಾಂಶು ಹೇಳಿದ್ದೇನು?
    • ಪಹಲ್ಗಾಮ್ ಉಗ್ರರಿಗೆ ಆಹಾರ, ಆಶ್ರಯ: ಸ್ಥಳೀಯರಿಬ್ಬರ ಬಂಧನ!
    • ಬೊಮ್ಮಾಯಿ 40% ಲಂಚದ ಆರೋಪ ಬಂದಾಗ ಸುಮ್ಮನೆ ಕುಳಿತು ತಪ್ಪು ಮಾಡಿದ್ರು - ಮೋಹನದಾಸ್ ಪೈ
    • ನಿಜವಾಯ್ತು ದೈವದ ನುಡಿ: 36 ವರ್ಷಗಳ ಬಳಿಕ ತಾಯಿಯ ಮಡಿಲು ಸೇರಿದ ಹಿರಿಮಗ
  • Popular Posts

    • 1
      ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • 2
      ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • 3
      ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?
    • 4
      ಸಂವಿಧಾನದಿಂದ "ಜಾತ್ಯಾತೀತತೆ" ಮತ್ತು "ಸಮಾಜವಾದ" ಶಬ್ದಗಳನ್ನು ತೆಗೆಯುವ ಬಗ್ಗೆ ಚರ್ಚೆ ನಡೆಯಲಿ - ಆರ್ ಎಸ್ ಎಸ್
    • 5
      PFI ಟಾರ್ಗೆಟ್- 950 ಜನರ ಹಿಟ್ ಲಿಸ್ಟ್ ರೆಡಿ! NIA ಕೋರ್ಟ್ ನಲ್ಲಿ ವಕೀಲರಿಂದ ಮಾಹಿತಿ...

  • Privacy Policy
  • Contact
© Tulunadu Infomedia.

Press enter/return to begin your search