• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ರೋಹಿಂಗ್ಯಾ ಮುಸಲ್ಮಾನರನ್ನು ದೇಶದಲ್ಲಿ ಇಟ್ಟುಕೊಂಡು ಬೇಕಾದರೆ ಕಾಶ್ಮೀರಿ ಪಂಡಿತರನ್ನು ಓಡಿಸೋಣ!

Hanumantha Kamath Posted On October 14, 2017
0


0
Shares
  • Share On Facebook
  • Tweet It

ಅತಿಥಿ ದೇವೋಭವ ಎನ್ನುವುದು ಸರಿ, ಭಾರತದಲ್ಲಿ ಮನೆಗೆ ಬಂದ ಅತಿಥಿಗಳನ್ನು ದೇವರ ಹಾಗೆ ಕಾಣಬೇಕು ಎನ್ನುವ ಸಂಸ್ಕೃತಿ ಇದೆ. ಹಾಗಂತ ಮನೆಯ ಹೊಸ್ತಿಲ ಒಳಗೆ ಕಾಲಿಟ್ಟವರು ದೇವರ ಮನಸ್ಸಿನವರೋ ಅಥವಾ ದೆವ್ವದ ಗುಣದವರೋ ಎಂದು ನೋಡುವ ಅವಶ್ಯಕತೆ ಇದೆ. ಅದು ಬಿಟ್ಟು ಒಳಗೆ ಬಂದವರು ಸಿಕ್ಕಾಪಟ್ಟೆ ಜಾತ್ಯಾತೀತರು ಎನ್ನುವ ಕಾರಣಕ್ಕೆ ಅವರನ್ನು ಪೂಜಿಸಬೇಕು ಎಂದು ಹೊರಟರೆ ಅವರು ಈಗಲ್ಲದಿದ್ದರೂ ಎರಡು ತಿಂಗಳ ನಂತರ ದೀಪಾವಳಿಯನ್ನು ಭಾರತದ ಹೃದಯ ಭಾಗಗಳಲ್ಲಿ ಬಾಂಬ್ ಸಿಡಿಸುವ ಮೂಲಕ ಆಚರಿಸಿದರೆ ಆಗ ಏನು ಮಾಡುವುದು?

https://tulunadunews.com/wp-content/uploads/2017/10/vid-20171014-wa0000.mp4

ಭಾರತದ ಗಡಿಯೊಳಗೆ ಈಗ ಸುಮಾರು 40 ಸಾವಿರ ರೋಹಿಂಗ್ಯಾ ಮುಸಲ್ಮಾನರಿದ್ದಾರೆ. ಅವರು ಹಿಂದಿನ ಬರ್ಮಾ ಅಥವಾ ಈಗಿನ ಮಯನ್ ಮಾರ್ ಪ್ರದೇಶದಿಂದ ಓಡಿ ಬಂದು ನಮ್ಮ ದೇಶದೊಳಗೆ ಆಶ್ರಯ ಪಡೆದುಕೊಂಡವರು. ಅಷ್ಟಕ್ಕೂ ನಮ್ಮ ಗಡಿಭಾಗದ ಜಿಲ್ಲೆಗಳೇನೂ ಸಾರ್ವಜನಿಕ ಶೌಚಾಲಯಗಳಲ್ಲ. ಯಾರು ಬೇಕಾದರೂ ಯಾವಾಗ ಬೇಕಾದರೂ ಶೌಚ ಮಾಡಿ ಹೋಗೋಣ ಎಂದು ಅಂದುಕೊಳ್ಳಲು ಸಾಧ್ಯವಿಲ್ಲ. ಇನ್ನು ಕೇಂದ್ರ ಸರಕಾರದ ಗುಪ್ತಚರ ವರದಿಯ ಪ್ರಕಾರ ಈಗ ಬಂದ ಅತಿಥಿಗಳು ಭಯೋತ್ಪಾದಕ ಸಂಘಟನೆಯ ನೇತಾರ ಅಸಿಫ್ ಸೈಯದ್ ಜೊತೆ ಸ್ನೇಹದಲ್ಲಿ ಇದ್ದಾರೆ. ಒಂದೊಮ್ಮೆ ಆ ಭಯೋತ್ಪಾದಕ ಸಂಘಟನೆಯಿಂದ ಸೂಕ್ತ ಪಟಾಕಿಗಳ ಪೂರೈಕೆಯಾದರೆ ವರ್ಷಾಂತ್ಯದಲ್ಲಿ ದೆಹಲಿಯಿಂದ ಹಿಡಿದು ಚೆನೈ ತನಕ ಎಲ್ಲಿ ಬೇಕಾದರೂ ಅಲ್ಲಿ ಬಾಂಬ್ ಸ್ಫೋಟ ಆಗಬಹುದು. ಕೆಲವು ಮುಸಲ್ಮಾನ ಸಂಘಟನೆಗಳು, ಮುಸಲ್ಮಾನ ಮುಖಂಡ, ಸಂಸದ ಒವೈಸಿಯಂತವರು ರೋಹಿಂಗ್ಯಾ ಮುಸಲ್ಮಾನರನ್ನು ನಮ್ಮ ದೇಶದಲ್ಲಿಯೇ ಉಳಿಸಬೇಕು, ಅವರಿಗೆ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ರೋಹಿಂಗ್ಯಾ ಮುಸಲ್ಮಾನರು ತಮ್ಮ ದೂರದ ಕಸಿನ್ ಗಳೋ ಎನ್ನುವಂತೆ ಕಾಂಗ್ರೆಸ್ ಮುಖಂಡರಾದ ಚಿದಂಬರಂ, ಶಶಿ ತರೂರ್, ಆಮ್ ಆದ್ಮಿ ಮಾಜಿ ಪ್ರಮುಖರಾದ ಯೋಗೇಂದ್ರ ಯಾದವ್, ಶಶಿಭೂಷಣ್ ನಂತಹ ಸುಮಾರು 40 ಜನರು ಮನವಿ ಪತ್ರಕ್ಕೆ ಸಹಿ ಹಾಕಿ ರಾಷ್ಟ್ರಪತಿಯವರಿಗೆ ಕೊಟ್ಟು ಬಂದಿದ್ದಾರೆ. ಅವರ ಪರವಾಗಿ ಇಂತವರು ನ್ಯಾಯಾಲಯದಲ್ಲಿ ವಾದಿಸುತ್ತಾರೆ. ಇವರುಗಳ ವಾದವನ್ನು ಆಲಿಸಿರುವ ನ್ಯಾಯಾಲಯ ನವೆಂಬರ್ 21 ಕ್ಕೆ ವಿಚಾರಣೆಯನ್ನು ಮುಂದೂಡಿದೆ.
ಈಗ ನನ್ನ ಪ್ರಶ್ನೆ ಏನೆಂದರೆ ನವೆಂಬರ್ 21 ಕ್ಕೆ ಇನ್ನೂ ಐದು ವಾರಗಳಿವೆ. ಈ ರೋಹಿಂಗ್ಯಾ ಮುಸಲ್ಮಾನರನ್ನು ದೇಶದೊಳಗೆ ಇಟ್ಟುಕೊಳ್ಳುವುದೆಂದರೆ ಸೆರಗಿನಲ್ಲಿ ಕೆಂಡವನ್ನು ಇಟ್ಟುಕೊಂಡು ಹಾಯಾಗಿರುವುದು. ಇನ್ನೊಂದು ಅರ್ಧ ಗಂಟೆ ಇಟ್ಟುಕೊಳ್ಳೋಣ, ಏನೂ ಆಗುವುದಿಲ್ಲ ಎಂದು ಅಂದುಕೊಂಡಂತೆ. ಯಾವಾಗ ಸೆರಗು ಸುಟ್ಟು ಹೋಗಿ ನಾವು ಮೇಲೆ ನೋಡೋಣ ಪರಿಸ್ಥಿತಿ ಬರುತ್ತದೆ ಎಂದು ಹೇಳಲು ಆಗುವುದಿಲ್ಲ. ಬೇರೆ ಯಾವ ಕೇಸನ್ನಾದರೂ ದಿನಗಟ್ಟಲೆ ದೂಡುವ ನಮ್ಮ ಸುಪ್ರೀಂ ಕೋರ್ಟ್ ಅಥವಾ ಬೇರೆ ನ್ಯಾಯಾಲಯಗಳು ಇಂತಹ ದೇಶಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆ ಇರುವ ಕೇಸ್ ಗಳನ್ನು ವಾರದೊಳಗೆ ಇತ್ಯರ್ಥ ಮಾಡಿ ಕೈತೊಳೆದುಕೊಂಡು ಬಿಡಬೇಕು. ಯಾಕೆಂದರೆ ಈಗ ಬಂದಿರುವ ರೋಹಿಂಗ್ಯಾ ಮುಸಲ್ಮಾನರಿಗೆ ನಾವೆಷ್ಟು ಅನ್ನಾಹಾರ, ನೀರು, ವಸತಿ ಕೊಟ್ಟರೂ ಅವರಿಗೆ ನಮ್ಮ ದೇಶದ ಮೇಲೆ ಪ್ರೀತಿ ಬರುವುದಿಲ್ಲ. ಅಂತವರ ಮೇಲೆ ನಮ್ಮ ನ್ಯಾಯಾಲಯಗಳು ಯಾಕೆ ಪ್ರೀತಿ ತೋರಿಸಬೇಕು. ಪ್ರೀತಿ ತೋರಿಸಲೇಬೇಕಾದ ವಿಷಯಗಳ ಮೇಲೆ ನಮ್ಮ ನ್ಯಾಯಾಲಯಗಳು ಪ್ರೀತಿ ತೋರಿದ್ದು ಕಡಿಮೆ. ಉದಾಹರಣೆಗೆ ಕಾಶ್ಮೀರಿ ಪಂಡಿತರ ಪ್ರಕರಣ.
ಕಾಶ್ಮೀರಿ ಪಂಡಿತರು ಇದೇ ದೇಶದಲ್ಲಿ ಹುಟ್ಟಿ, ಇಲ್ಲಿಯೇ ಬೆಳೆದು, ಇಲ್ಲಿಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡವರು. ಅವರು ಕಾಶ್ಮೀರದ ಮೂಲನಿವಾಸಿಗಳು. ಅವರನ್ನು ಅಲ್ಲಿ ವಲಸೆ ಬಂದ ಪಾಕ್ ಆಕ್ರಮಿತ ಕಾಶ್ಮೀರದ ಪಕ್ಕಾ ಜಾತ್ಯಾತೀತರು ಕಾಶ್ಮೀರದಿಂದ ಓಡಿಸಿದರು. ಈಗ ಕಾಶ್ಮೀರಿ ಪಂಡಿತರು ದೆಹಲಿ, ನೋಯ್ಡಾ ಸಹಿತ ಉತ್ತರ ಭಾರತದ ಅಲ್ಲಲ್ಲಿ ಡೇರೆ ಕಟ್ಟಿ ವಲಸಿಗರಂತೆ ಬೀದಿಬದಿಯಲ್ಲಿ ಟೆಂಟ್ ಹೂಡಿ ಜೀವನ ಸಾಗಿಸುತ್ತಿದ್ದಾರೆ. ಅವರನ್ನು ಮತ್ತೆ ತಮ್ಮ ಮೂಲ ಊರುಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲು ನ್ಯಾಯಾಲಯ ಆದೇಶ ಕೊಡಬೇಕು. ಈ ನಿಟ್ಟಿನಲ್ಲಿ ನ್ಯಾಯಾಲಯ ಏನು ಮಾಡುತ್ತಿವೆ. ನೈಜ ದೌರ್ಜನ್ಯಕ್ಕೊಳಗಾದ ಸಾವಿರಾರು ಕಾಶ್ಮೀರಿ ಪಂಡಿತರಿಗೆ ದಶಕಗಳಿಂದ ಸರಿಯಾದ ನೆಲೆ ಇಲ್ಲ. ಅವರನ್ನು ಕೇಳುವವರು ಇಲ್ಲ. ಅದೇ ಬೇರೆ ದೇಶದ ವಲಸಿಗರಿಗೆ ನಮ್ಮ ದೇಶದಲ್ಲಿ ಆಶ್ರಯ ಕೊಡಬೇಕು ಎಂದು ವಾದಿಸುವವರು ಗಲ್ಲಿಗೊಂದರಂತೆ ಹೈದರಾಬಾದ್, ದೆಹಲಿ, ಕೋಲ್ಕತ್ತಾಗಳಲ್ಲಿ ಸಿಗುತ್ತಾರೆ. ರೋಹಿಂಗ್ಯಾ ಮುಸಲ್ಮಾನರ ವಿಷಯ ಬಂದಾಗ ನಮ್ಮಲ್ಲಿ ಕೆಲವರಿಗೆ ಮಾನವಹಕ್ಕು ನೆನಪಾಗುತ್ತದೆ. ಕಾಶ್ಮೀರದ ಪಂಡಿತರದ ವಿಷಯದಲ್ಲಿ ಮಾನವ ಹಕ್ಕು ಕೂಡ ಇಲ್ಲ, ಮಾವನ ಹಕ್ಕು ಕೂಡ ಇಲ್ಲ. ಕಾಶ್ಮೀರದಲ್ಲಿದ್ದ ಮೂಲ ನಿವಾಸಿಗಳನ್ನು ಓಡಿಸಿದ ಅಲ್ಲಿನ ಭಯೋತ್ಪಾದಕ ಸಂಘಟನೆಗಳಿಗೆ ಏನೂ ಆಗುವುದಿಲ್ಲ. ರೋಹಿಂಗ್ಯಾ ಮುಸಲ್ಮಾನರನ್ನು ಹೊರಗೆ ಕಳುಹಿಸುವುದಿಲ್ಲ. ಇನ್ನು ನಮ್ಮ ದೇಶದ ಎಷ್ಟು ನಾಗರಿಕರು, ಯೋಧರು ಸುಮ್ಮಸುಮ್ಮನೆ ಹುತಾತ್ಮರಾಗಲು ಇದೆಯೋ, ಓವೈಸಿಗೆ ಗೊತ್ತು!

Vedio Courtesy: Sudharshan Channel

0
Shares
  • Share On Facebook
  • Tweet It


Rohingya MuslimSudharshan channel vedio


Trending Now
ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
Hanumantha Kamath October 6, 2025
ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
Hanumantha Kamath October 6, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
    • "ಒಂದು ಶೋಗಾಗಿ ಕೈಕಾಲು ಹಿಡಿಯುತ್ತಿದ್ದ ಕಾಲದಿಂದ..." ರಿಷಬ್ ಶೆಟ್ಟಿ 2016 ರ ಘಟನೆಯನ್ನು ನೆನಪಿಸಿಕೊಂಡದ್ದು ಯಾಕೆ?
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಕಸಾಯಿಖಾನೆ ಮುಟ್ಟುಗೋಲು ಹಾಕಿದ ಪ್ರಥಮ ಪ್ರಕರಣ ದಾಖಲು - ಎಸ್ಪಿ
    • ಗೆದ್ದರೂ ಟ್ರೋಫಿ ಪಡೆಯದೇ ದಿಟ್ಟ ಉತ್ತರ ನೀಡಿದ ಭಾರತೀಯ ತಂಡಕ್ಕೆ ಭೇಷ್!
    • ಕೇವಲ ₹100 ಲಂಚದ ಪ್ರಕರಣದಲ್ಲಿ 39 ವರ್ಷಗಳ ಬಳಿಕ ನಿರ್ದೋಷಿ ಘೋಷಣೆ!
    • ನಮ್ಮ ಜಿಲ್ಲೆಗೆ ಕಳುಹಿಸಬೇಡಿ, ಬೇಕಾದರೆ ಕಾಡಿಗೆ ಕಳುಹಿಸಿ ಎಂದು ರಾಯಚೂರಿನಲ್ಲಿ ತಿಮರೋಡಿ ವಿರುದ್ಧ ಪ್ರತಿಭಟನೆ!
    • ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ: 6 ತಿಂಗಳಲ್ಲಿ ಕತ್ರೀನಾ ಕೈಪ್ ಸಂತಾನ ಭಾಗ್ಯ!
    • ಪ್ರಧಾನ ಮಂತ್ರಿಯವರ ನಿವಾಸದ ಮುಂಭಾಗದಲ್ಲಿಯೂ ಸಹ ಗುಂಡಿಗಳು ಇವೆ- ಡಿಸಿಎಂ ಡಿಕೆಶಿ.
    • ಹಿಂದೂ ದೇವರ ಹಾಡನ್ನು ಹಾಡಿದ್ದ ಸುಹಾನಾ ತಮ್ಮ ಭಾವಿ ಪತಿಯ ಬಗ್ಗೆ ಹೇಳಿದ್ದಾರೆ! ಆ ಹಿಂದೂ ಯುವಕ ಯಾರು ಗೊತ್ತಾ!

  • Privacy Policy
  • Contact
© Tulunadu Infomedia.

Press enter/return to begin your search