• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ತಂಗಿಯೊಬ್ಬಳು ನಿಮ್ಮ ಸಹಾಯಕ್ಕೆ ಕಾಯುತ್ತಿದ್ದಾಳೆ!

Naresh Shenoy Posted On October 28, 2017
0


0
Shares
  • Share On Facebook
  • Tweet It

ಬರೋಬ್ಬರಿ ಹದಿನೆಂಟು ವರ್ಷ. ಆ ಹೆಣ್ಣು ಜೀವಕ್ಕೆ ಮನೆಯೇ ಪ್ರಪಂಚ. ಹೊರಗೆ ಕಾಲಿಡಲಾಗದಂತಹ ಪರಿಸ್ಥಿತಿ. ಅದರಲ್ಲಿಯೂ ಕಳೆದ ಐದಾರು ವರ್ಷಗಳಿಂದ ಮನೆಯ ಚಾಪೆಯೇ ಜೀವನ. ನಿಮ್ಮ ಕರುಣೆಯ ಕಡಲಿನಿಂದ ಒಂದು ಬೊಗಸೆ ಸಹಾಯವನ್ನು ಮಾಡಿದರೂ ಆಕೆಯ ಬಾಳಿನಲ್ಲಿ ನಂದನವನದ ಪರಿಮಳ ಬೀರಬಹುದು. ಒಂದೇ ಮಾತಿನಲ್ಲಿ ಹೇಳುವುದಾದರೆ ಆ ಹೆಣ್ಣುಮಗಳಿಗೆ ನಿಮ್ಮ ಸಹಾಯದ ಅವಶ್ಯಕತೆ ಇದೆ. 
ಆಕೆಯ ಹೆಸರು ಅಖಿಲಾ. ಬಟ್ಟಲಿನಂತಹ ಕಣ್ಣುಗಳು. ಆದರೆ ದೇಹದ ಮೇಲೆ ಕಿತ್ತು ಹೋದಂತಿರುವ ಚರ್ಮ. ನಮ್ಮ ನಿಮ್ಮಂತೆ ಆಕೆಯ ಚರ್ಮ ಇಲ್ಲ. ನಾನು ಕಪ್ಪಿದ್ದೇನೆ, ಬಿಳಿಯಾಗಬೇಕು ಎಂದು ದಿನ ಬೆಳಿಗ್ಗೆ ಒದ್ದಾಡುವ ಯುವತಿಯರ ಎದುರು ತನಗೆ ಆರೋಗ್ಯವಂತ ಚರ್ಮ ಕೊಡು ಭಗವಂತ ಎಂದು ಬೇಡುವ ಅನಿವಾರ್ಯತೆ ಅಖಿಲಾಳದ್ದು.
ವೈದ್ಯರು ಯಾವುದೋ ಅರ್ಥವಾಗದ ಹೆಸರು ಕೊಟ್ಟು ಬಿಟ್ಟಿದ್ದಾರೆ. Epidematisis Bullossa ಆಕೆಯ ಕಾಯಿಲೆ ಹೆಸರು ಜನಸಾಮಾನ್ಯರಾದ ನಮಗೆ ಅರ್ಥವೂ ಆಗುವುದಿಲ್ಲ. ಅದೇ ರೀತಿಯಲ್ಲಿ ಆಕೆ ಕಳೆದ ಹದಿನೆಂಟು ವರ್ಷಗಳಿಂದ ಅನುಭವಿಸುವ ಸಂಕಟದ ಅರಿವೂ ಆಗಲು ಸಾಧ್ಯವಿಲ್ಲ. ಇದೊಂದು ರೀತಿಯಲ್ಲಿ ಜೆನೆಟಿಕ್ ಡಿಸ್ ಆರ್ಡರ್. ಅಖಿಲಾ ತಾನು ಹುಟ್ಟಿದ ಒಂದು ತಿಂಗಳಿನಿಂದಲೇ ಈ ಕಾಯಿಲೆಯೊಂದಿಗೆ ಜೀವನ ಸವೆಸುತ್ತಿದ್ದಾಳೆ. ಒಂದು ವಾರ ಯಾವುದಾದರೂ ಕಾಯಿಲೆ ನಮಗೆ ಬಂದು ಮಲಗಿ ಕಳೆದರೆ ನಮ್ಮ ಪರಿಸ್ಥಿತಿ ಹೇಗಿರುತ್ತೆ ಎನ್ನುವುದು ನಮಗೆ ಗೊತ್ತಿದೆ. ಹಾಗಿರುವಾಗ ನಮಗಿಂತ ಸಾವಿರ ಪಟ್ಟು ಹೆಚ್ಚು ಸಂಕಟವನ್ನು ಅನುಭವಿಸುತ್ತಿರುವ ಅಖಿಲಾಳ ಕಷ್ಟ ಭಗವಂತ ಮತ್ತು ಆಕೆಯನ್ನು ಈ ಪ್ರಪಂಚಕ್ಕೆ ತಂದ ಆಕೆಯ ಪೋಷಕರಿಗೆ ಮಾತ್ರ ಗೊತ್ತು. 
ಅಖಿಲಾ ತಂದೆ ವೇಲಾಯುಧನ್ ಮತ್ತು ಮಿನಿ ದಂಪತಿಗಳ ಏಕೈಕ ಮಗಳು ಈಕೆ. ವೇಲಾಯುಧನ್ ಸಿದ್ಧಾಪುರ ಸಮೀಪ ಇಂಜಲ್ ಕೆರೆ ಎನ್ನುವ ಊರಿನಲ್ಲಿರುವ ಎಸ್ಟೇಟ್ ಒಂದರಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಎಸ್ಟೇಟ್ ನಲ್ಲಿ ಮರ ಕಡಿಯುವುದು ಅವರ ಮುಖ್ಯ ಕೆಲಸ. ಸಹಜವಾಗಿ ಕೆಳಮಧ್ಯಮ ವರ್ಗದ ಜೀವನ. ಅಖಿಲಾ ಒಂದು ತಿಂಗಳಿರುವಾಗ ಆಕೆಯ ದೇಹದ ಮೇಲಿನ ಚರ್ಮ ಬೆಂಕಿಗೆ ಸುಟ್ಟಂತೆ ಕಾಣುತ್ತಿತ್ತು. ನೀವು ಬೆಂಕಿಗೆ ತುತ್ತಾದವರನ್ನು ನೋಡಿರಬಹುದು. ಅದೇ ರೀತಿಯಲ್ಲಿ ಅಖಿಲಾ ಚರ್ಮ ಸುಟ್ಟು ಹೋದಂತೆ ಕಂಡಾಗ ವೇಲಾಯುಧನ್ ಮಗುವನ್ನು ಕರೆದುಕೊಂಡು ವೈದ್ಯರ ಬಳಿ ಹೋದರು. ಮಗುವನ್ನು ಜಾಗ್ರತೆಯಾಗಿ ನೋಡಿಕೊಳ್ಳಿ. ಹೊರಗೆ ಕಳುಹಿಸಬೇಡಿ, ಬೇರೆಯವರಿಂದ ಮುಟ್ಟಿಸಬೇಡಿ, ನೀವು ಅವಳನ್ನು ಎಷ್ಟು ಜಾಗ್ರತೆಯಾಗಿ ನೋಡಿಕೊಳ್ಳುತ್ತಿರೋ ಆಕೆ ಅಷ್ಟು ಬೇಗ ಸರಿಯಾಗಬಹುದು ಎಂದು ವೈದ್ಯರು ಹೇಳಿದರು. ಆವತ್ತಿನಿಂದ ಅಖಿಲಾ ತನ್ನ ತಂದೆ, ತಾಯಿಯ ಮುದ್ದಿನ ಕಾವಲಿನಲ್ಲಿ ಬೆಳೆಯುತ್ತಾ ಇದ್ದಾಳೆ.
ತನ್ನ ಮಗಳ ಬದುಕು ಹೀಗೆ ಆಗಿದ್ದರೂ ಆ ತಂದೆ, ತಾಯಿಯ ಮನಸ್ಸನ್ನು ನೋಡಿ. ಬೇರೆ ಇಬ್ಬರು ಅನಾಥ ಮಕ್ಕಳನ್ನು ಸಾಕುತ್ತಿದ್ದಾರೆ. ಆ ಇಬ್ಬರು ಮಕ್ಕಳು ಶಾಲೆಗೆ ಹೋಗಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅಖಿಲಾಳಿಗೆ ಟೀಚರ್ ಒಬ್ಬರು ಮನೆಗೆ ಬಂದು ಕಲಿಸಿ ಹೋಗುತ್ತಾರೆ.  ಇಲ್ಲಿಯ ತನಕ ಈ ಕುಟುಂಬ ಅನೇಕ ವೈದ್ಯರಲ್ಲಿ ಅಖಿಲಾಳನ್ನು ತೋರಿಸಿ ಮಗಳು ಎಲ್ಲರಂತೆ ಆಗಲಿ ಎಂದು ಆಸೆಯಿಂದ ಕಾಯುತ್ತಿದೆ. ಪ್ರಸ್ತುತ ಗೋಣಿಕೊಪ್ಪದಲ್ಲಿ ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಈಗ ಅಖಿಲಾಳಿಗೆ ನಿಮ್ಮ ಸಹಾಯದ ಅಗತ್ಯ ಇದೆ. ಆಕೆಯ ತಂದೆಯ ಬ್ಯಾಂಕ್ ಖಾತೆಯ ವಿವರಗಳನ್ನು ಇಲ್ಲಿ ನೀಡಿದ್ದೇವೆ.
ಹೆಸರು: ವೇಲಾಯುಧನ್
ಬ್ಯಾಂಕ್: ಕೆನರಾ ಬ್ಯಾಂಕ್
ಉಳಿತಾಯ ಖಾತೆ ಸಂಖ್ಯೆ: 0687101011399
ಬ್ರಾಂಚ್: ಸಿದ್ಧಾಪುರ
ಐಎಫ್ ಎಸ್ ಸಿ ಕೋಡ್: ಸಿಎನ್ ಆರ್ ಬಿ 0000687
ಅಖಿಲಾಳೊಂದಿಗೆ ನೀವು ಮಾತನಾಡಬಹುದು. ದೂರವಾಣಿ ಸಂಖ್ಯೆ: 944826896
0
Shares
  • Share On Facebook
  • Tweet It


Help Akila Siddapura


Trending Now
ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
Naresh Shenoy December 23, 2025
ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
Naresh Shenoy December 23, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ
    • ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!
    • ಭಕ್ತಿಗೀತೆ ಹಾಡುತ್ತಿದ್ದ ಗಾಯಕಿಯ ಮೇಲೆ ದರ್ಪ! ಜಾತ್ಯಾತೀತ ಗೀತೆ ಹಾಡಲು ಒತ್ತಾಯ!
    • ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ನೀಡಿ - ಸರಕಾರಕ್ಕೆ ಶಾಸಕ ಆಗ್ರಹ!
    • ವಿಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ-ಎಲ್ ಇಡಿ ಸ್ಕ್ರೀನ್ ಗೆ ಆರತಿ!
    • ಅಜಾನ್ ಚರ್ಚೆಯ ಸಂದರ್ಭದಲ್ಲಿ ದೀಪಾವಳಿ ಪಟಾಕಿ ವಿಷಯ ಎತ್ತಿದ ಸಚಿವ!
    • ಇಷ್ಟು ಚಿಕ್ಕ ವಯಸ್ಸಿಗೆ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಟ್ಟ!
  • Popular Posts

    • 1
      ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • 2
      ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • 3
      ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • 4
      ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ
    • 5
      ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!

  • Privacy Policy
  • Contact
© Tulunadu Infomedia.

Press enter/return to begin your search