• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಸುದ್ದಿ 

ಅರಣ್ಯ ಸಚಿವ ಬಿ. ರಮಾನಾಥ ರೈಯವರಿಂದ ಭೂಕಬಳಿಕೆ

Tulunadu News Posted On November 4, 2017
0


0
Shares
  • Share On Facebook
  • Tweet It

ಮಂಗಳೂರು: ಅರಣ್ಯ ಸಂರಕ್ಷಣೆ ಮಾಡಬೇಕಾದ ಅರಣ್ಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈಯವರ ಮೇಲೆಯೇ ಭೂಕಬಳಿಕೆ ಆರೋಪಗಳು ಕೇಳಿ ಬಂದಿವೆ. ಕಾಂಗ್ರೆಸ್ನ ಮಾಜಿ ಮುಖಂಡ ಹರಿಕೃಷ್ಣ ಬಂಟ್ವಾಳ ದಾಖಲೆ ಸಮೇತ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಸವರ್ೆ ನಂ.20/2ರ ಪೈಕಿ 2.014 ಎಕರೆ ಹಾಗೂ ಸವರ್ೆ ನಂ. 38/2ರ ಪೈಕಿ ಒಂದು ಎಕರೆ ಹೀಗೆ ಒಟ್ಟು 3.04 ಎಕರೆ ಜಾಗವನ್ನು ತಮ್ಮ ಪತ್ನಿ ಶೈಲಾ ಆರ್. ರೈ (ಅವರ ನಿಜವಾದ ಹೆಸರು ಧನಭಾಗ್ಯ ರೈ- ಚುನಾವಣೆ ನಾಮಪತ್ರ ಸಲ್ಲಿಕೆ ಸಂದರ್ಭ ನೀಡುವ ಆಸ್ತಿ ವಿವರಗಳಲ್ಲಿ ಅವರ ಹೆಸರು ಧನಭಾಗ್ಯ ರೈ ಎಂದೇ ನೀಡಿದ್ದಾರೆ) ಅವರ ಹೆಸರಿನಲ್ಲಿ ಅಕ್ರಮ- ಸಕ್ರಮ ಜಾಗವನ್ನು ನಿಯಯಾವಳಿ ಉಲ್ಲಂಘಿಸಿ ಮಂಜೂರು ಮಾಡಿಸಿದ್ದಾರೆ. ಶೈಲಾ ರೈ (ಧನಭಾಗ್ಯ) ತನ್ನ ತಿಂಗಳ ವೇತನ 500ರೂ. (ವಾಷರ್ಿಕ ವೇತನ 6000ರೂ.) ಯೆಂದು ನಂಬಿಸಿ ಸರಕಾರಿ ಜಾಗ ಅಂದರೆ ಸವರ್ೆ ನಂ.20/2ಕ್ಕೆ ಅಜರ್ಿ ಸಲ್ಲಿಸಿದ್ದಾರೆ. ಅಜರ್ಿ ಸಲ್ಲಿಕೆ ಸಂದರ್ಭ ಸಚಿವ ರೈಯವರ ಪತ್ನಿ ಇತರೆ ಭೂಮಿಯಾಗಿ 1.90 ಎಕರೆ ಜಾಗ ಹೊಂದಿರುವುದಾಗಿ ಹೇಳಿದ್ದಾರೆ. ಅಕ್ರಮ-ಸಕ್ರಮ ನಿಯಮಾವಳಿ ಪ್ರಕಾರ ಯಾವುದೇ ವ್ಯಕ್ತಿಗೆ ತಾನು ಹೊಂದಿರುವ ಜಮೀನು ಮತ್ತು ಮಂಜೂರಾತಿ ನೀಡಿರುವ ಜಮೀನು ನಾಲ್ಕು ಯುನಿಟ್ಗಿಂತ ಮೀರಿರಬಾರದು. ಆದರೆ, ಇಲ್ಲಿ ಆ ಮಿತಿಯನ್ನು ಮೀರಲಾಗಿದೆ. ಇದೊಂದು ಅಕ್ರಮವಾದರೆ, ಸವರ್ೆ ನಂ.38/2ರ ಜಾಗಕ್ಕೆ ಯಾವುದೇ ಅಜರ್ಿ ಸಲ್ಲಿಸದೆ ತಮ್ಮ ಪ್ರಭಾವವನ್ನು ಬಳಸಿ, ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಇದೆಂಥ ಕಾನೂನು ಎಂದು ಪ್ರಶ್ನಿಸಿದ್ದಾರೆ.
ಇಷ್ಟೆಲ್ಲಾ ಸಾಲದೆಂಬಂತೆ ಕಳ್ಳಿಗೆಯಲ್ಲಿ ಹತ್ತು ಎಕರೆ ಸರಕಾರಿ ಜಾಗದಲ್ಲಿ ತಮ್ಮದೇ ಜಾಗದಂತೆ ರಬ್ಬರ್ ತೋಟ ಮಾಡಿದ್ದಾರೆಂದರೆ ಒಬ್ಬ ಸಚಿವರಾದವರು ಜನರಿಗೆ, ಸರಕಾರಕ್ಕೆ, ಕಾನೂನಿಗೆ ಇದಕ್ಕಿಂತ ದೊಡ್ಡ ಅನ್ಯಾಯ ಮಾಡಲು ಸಾಧ್ಯವೇ ಎಂದು ಕೇಳಿದ್ದಾರೆ. ಸಚಿವರು ತಾಕತ್ತಿದ್ದರೆ ತಮ್ಮ ಅಕ್ರಮ ಜಮೀನನ್ನು ಬಿಟ್ಟು ಬಡವರಿಗೆ ಹಂಚಲಿ ಎಂದರು.
ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸಚಿವರ ಭೂಕಬಳಿಕೆಯ ತನಿಖೆಯನ್ನು ಎಸಿಬಿಗೆ ನೀಡಲಿ. ತನಿಖೆಯ ಸತ್ಯಾಸತ್ಯತೆ ಹೊರಬರಲಿ. ಇದು ಸಾಧ್ಯವಿಲ್ಲವಾದರೆ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ಪ್ರಾಮಾಣಿಕ ಐಎಎಸ್ ಅಧಿಕಾರಿಯಾಗಿದ್ದರೆ ಈ ಪ್ರಕರಣದ ತನಿಖೆಯನ್ನು ತಾವೇ ಮಾಡಲಿ ಎಂದು ಸವಾಲು ಹಾಕಿದ್ದಾರೆ.
ತಾನಂತೂ ಸಚಿವ ರೈಯವರಿಂದ ರಾಜೀನಾಮೆ ಕೇಳುವುದಿಲ್ಲ. ಇನ್ನು ಕೇವಲ ಆರು ತಿಂಗಳಲ್ಲಿ ಚುನಾವಣೆ ಘೋಷಣೆಯಾಗುತ್ತದೆ. ಸಚಿವರ ಈ ಅಕ್ರಮಗಳನ್ನು ಜನತಾ ನ್ಯಾಯಾಲಯದ ಮುಂದಿಡುತ್ತೇನೆ. ಅವರೇ ತೀಮರ್ಾನಿಸಲಿ ಎಂದರು.
ಸಚಿವರ ಅಕ್ರಮ ಭೂ ಕಬಳಿಕೆ ತನಗೆ ಈ ಹಿಂದೆಯೇ ಗೊತ್ತಿತ್ತು. ಆದರೆ, ಕಾಂಗ್ರೆಸ್ ಪಕ್ಷದಲ್ಲಿ ಮಾತೆತ್ತಿದ್ದರೆ ಪಕ್ಷದಿಂದ ಉಚ್ಛಾಟನೆ ಮಾಡುವ ಬೆದರಿಕೆಯೊಡ್ಡುತ್ತಿದ್ದರು. ಆದರೆ, ತಾನು ಜನಾರ್ದನ ಪೂಜಾರಿಯವರಿಗೋಸ್ಕರ ಸುಮ್ಮನಿದ್ದೆ. ಅವರು ನಮ್ಮವರು ಎಂದು ತನ್ನ ಬಾಯಿ ಮುಚ್ಚಿಸುತ್ತಿದ್ದರು. ಆದರೆ, ಈಗ ಅಂಥಹ ನಿಷ್ಠಾವಂತ ಕಾರ್ಯಕರ್ತನನ್ನೇ ಪಕ್ಷ ದೂರ ಮಾಡಿಕೊಂಡಿದೆ.
ಇಂದಿಗೂ ಸರಕಾರಿ ಐಬಿಯಲ್ಲಿ ದುಡ್ಡುಕೊಟ್ಟು ಊಟ ಮಾಡುವ ಪ್ರಾಮಾಣಿಕ ಜನಾರ್ದನ ಪೂಜಾರಿಯಂತಹ ನಾಯಕರು ಬೇಡ. ಅಕ್ರಮ, ಭೂ ಮಾಫಿಯಾದಲ್ಲಿರುವವರೇ ಬೇಕು ಎಂದ ಅವರು, ಕಾಂಗ್ರೆಸ್ ಎಂದರೆ ಲೂಟಿಕೋರರ ಕಂಪೆನಿ ಎಂದು ಟೀಕಿಸಿದರು.
ಬಂಟ್ವಾಳದಲ್ಲಿ ಸಚಿವರ ರೈಯವರ ವಿರುದ್ಧ ಯಾರೂ ಸೊಲ್ಲೆತ್ತುವಂತಿಲ್ಲ. ಅದೀಗ ರಿಪಬ್ಲಿಕ್ ಹಬ್ ಆಗಿದೆ. ಮಾತೆತ್ತಿದ್ದರೆ ಬೆದರಿಕೆ ಕರೆಗಳು. ತನಗೂ ಬೆದರಿಕೆ ಕರೆಗಳು, ಪತ್ರಗಳು ಈಗಾಗಲೇ ಬಂದಿವೆ ಎಂದ ಅವರು, ನಾನು ಸಚಿವರ ಬೆದರಿಕೆಗೆ ಜಗ್ಗುವುದಿಲ್ಲ ಎಂದಿದ್ದಾರೆ.

0
Shares
  • Share On Facebook
  • Tweet It




Trending Now
ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಸ್ಥಾಪಿಸಿದ ನಿಟ್ಟೆ ವಿನಯ್ ಹೆಗ್ಡೆ ಎಂಬ ಮಹಾಚೇತನ ಅಸ್ತಂಗತ
Tulunadu News January 1, 2026
ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
Tulunadu News December 27, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಸ್ಥಾಪಿಸಿದ ನಿಟ್ಟೆ ವಿನಯ್ ಹೆಗ್ಡೆ ಎಂಬ ಮಹಾಚೇತನ ಅಸ್ತಂಗತ
    • ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ
    • ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!
    • ಭಕ್ತಿಗೀತೆ ಹಾಡುತ್ತಿದ್ದ ಗಾಯಕಿಯ ಮೇಲೆ ದರ್ಪ! ಜಾತ್ಯಾತೀತ ಗೀತೆ ಹಾಡಲು ಒತ್ತಾಯ!
    • ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ನೀಡಿ - ಸರಕಾರಕ್ಕೆ ಶಾಸಕ ಆಗ್ರಹ!
    • ವಿಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ-ಎಲ್ ಇಡಿ ಸ್ಕ್ರೀನ್ ಗೆ ಆರತಿ!
  • Popular Posts

    • 1
      ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಸ್ಥಾಪಿಸಿದ ನಿಟ್ಟೆ ವಿನಯ್ ಹೆಗ್ಡೆ ಎಂಬ ಮಹಾಚೇತನ ಅಸ್ತಂಗತ
    • 2
      ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search