• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಮೋದಿ ವಿರೋಧಿಗಳಿಗೊಂದು ಕಹಿ ಸುದ್ದಿ, ಮುಂದಿನ ವರ್ಷ ಶೇ.8 ತಲುಪಲಿದೆ ಜಿಡಿಪಿ!

TNN Correspondent Posted On November 28, 2017
0


0
Shares
  • Share On Facebook
  • Tweet It

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನೋಟು ನಿಷೇಧ, ಜಿಎಸ್ಟಿ ಜಾರಿಗೊಳಿಸುತ್ತಲೇ ಅವರ ಖ್ಯಾತಿ ವಿಶ್ವವಿಖ್ಯಾತವಾಯಿತು. ಅದೇ ದೇಶದಲ್ಲಿರುವ ಕೆಲವು ರಾಜಕೀಯ ಪಕ್ಷಗಳಿಗೆ, ಮೋದಿ ವಿರೋಧಿಗಳಿಗೆ ಉರಿಯಿತು. ಆದರೆ ಟೀಕೆ ಮಾಡಲು ಕಾರಣ ಬೇಕಲ್ಲ, ಅದಕ್ಕಾಗಿಯೇ ತುಸು ಜಿಡಿಪಿ ಕುಸಿದಿದ್ದನ್ನೇ ದೊಡ್ಡದು ಮಾಡಿ ಮೋದಿ ಅವರನ್ನು ತೆಗಳಿದರು. ನೋಡಿ, ಮೋದಿ ಅವರು ನೋಟು ನಿಷೇಧ ಮಾಡಿದರು, ಜಿಎಸ್ಟಿ ಜಾರಿಗೊಳಿಸಿದರು. ಅದಕ್ಕಾಗಿಯೇ ಜಿಡಿಪಿ ಕುಸಿದಿದೆ. ನೋಡ್ತಿರಿ, ದೇಶದ ಆರ್ಥಿಕ ವ್ಯವಸ್ಥೆ ಮಣ್ಣುಮುಕ್ಕುತ್ತಿದೆ ಎಂದು ಬೊಬ್ಬೆ ಹಾಕಿದರು.

ಆದರೆ, ಈ ಹುಸಿ ಟೀಕೆಯನ್ನೂ ಅವರು ನುಂಗಿಕೊಳ್ಳುವ, ಗಂಟಲಲ್ಲೇ ಸಿಕ್ಕಿಕೊಂಡು ಕೆಮ್ಮುವ ಸ್ಥಿತಿ ದೂರದಲ್ಲಿಲ್ಲ.

ಹೌದು, ಅಮೆರಿಕದ ವಾಲ್ ಸ್ಟ್ರೀಟ್ ವಹಿವಾಟು ಸಂಸ್ಥೆ ಗೋಲ್ಡ್ ಮನ್ ಸಾಚ್ಸ್ ಸಂಸ್ಥೆ ಪ್ರಕಾರ ಮುಂದಿನ ವಿತ್ತೀಯ ವರ್ಷದಲ್ಲಿ ಭಾರತದ ಜಿಡಿಪಿ ಶೇ.8ರಷ್ಟು ತಲುಪುತ್ತದೆ ಎಂದು ಹೇಳಿದೆ.

ಕೇಂದ್ರ ಸರ್ಕಾರ ಕಳೆದ ತಿಂಗಳು 2.11 ಲಕ್ಷ ಕೋಟಿ ರೂಪಾಯಿ ಬ್ಯಾಂಕುಗಳ ಮರುಬಂಡವಾಳ ಹೂಡಿಕೆ ಮಾಡುವುದಾಗಿ ಘೋಷಿಸಿದ ಹಿನ್ನೆಲೆಯಲ್ಲಿ ದೇಶದ ಜಿಡಿಪಿ ಶೇ.8 ತಲುಪಲಿದೆ ಎಂದು ಸಂಸ್ಥೆ ತಿಳಿಸಿದೆ.

ದೇಶದಲ್ಲಿ ಬ್ಯಾಂಕುಗಳಿಂದ ಆದಾಯ ಹೆಚ್ಚಲಿದ್ದು, ಷೇರು ಮಾರುಕಟ್ಟೆಯ ನಿಫ್ಟಿ 11,600 ಅಂಕಗಳ ದಾಖಲೆ ಮೊತ್ತದ ಏರಿಕೆಯಾಗಲಿದ್ದು, ಇದು ಸಹ ಜಿಡಿಪಿ ಏರಿಕೆಗೆ ಕಾರಣವಾಗಲಿದೆ ಎಂದು ವರದಿ ಮಾಡಿದೆ.

ನೋಟು ನಿಷೇದ ಹಾಗೂ ಜಿಎಸ್ಟಿಯಿಂದ ಆರ್ಥಿಕತೆಗೆ ತುಸು ಹೊಡೆತ ಬಿದ್ದರೂ, ಇವು ಆರ್ಥಿಕ ಸುಧಾರಣೆಯ ಭಾಗವೇ ಆಗಿರುವುದರಿಂದ ದೇಶದ ಜಿಡಿಪಿ ಹೆಚ್ಚಲಿದೆ ಎಂದು ತಿಳಿಸಿದೆ.

0
Shares
  • Share On Facebook
  • Tweet It




Trending Now
ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
Tulunadu News October 28, 2025
ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
Tulunadu News October 27, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
    • ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?
    • ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
    • "ಒಂದು ಶೋಗಾಗಿ ಕೈಕಾಲು ಹಿಡಿಯುತ್ತಿದ್ದ ಕಾಲದಿಂದ..." ರಿಷಬ್ ಶೆಟ್ಟಿ 2016 ರ ಘಟನೆಯನ್ನು ನೆನಪಿಸಿಕೊಂಡದ್ದು ಯಾಕೆ?
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಕಸಾಯಿಖಾನೆ ಮುಟ್ಟುಗೋಲು ಹಾಕಿದ ಪ್ರಥಮ ಪ್ರಕರಣ ದಾಖಲು - ಎಸ್ಪಿ
    • ಗೆದ್ದರೂ ಟ್ರೋಫಿ ಪಡೆಯದೇ ದಿಟ್ಟ ಉತ್ತರ ನೀಡಿದ ಭಾರತೀಯ ತಂಡಕ್ಕೆ ಭೇಷ್!
  • Popular Posts

    • 1
      ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • 2
      ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • 3
      ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • 4
      ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!

  • Privacy Policy
  • Contact
© Tulunadu Infomedia.

Press enter/return to begin your search