• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಸುದ್ದಿ 

ವಿ.ಟಿ ರಸ್ತೆಯ ಕಾಲುದಾರಿ ಈ ಆಸ್ಪತ್ರೆಯ ಪಾರ್ಕಿಂಗ್ ವ್ಯವಸ್ಥೆ.

TNN Correspondent Posted On July 4, 2017
0


0
Shares
  • Share On Facebook
  • Tweet It

ಕೋಡಿಯಲ್ ಬೇಲ್ ರಸ್ತೆಯಿಂದ ಅದೆಷ್ಟೋ ಮಂದಿ ಕಾರ್ ಸ್ಟ್ರೀಟ್ ಗೆ ಹೋಗುವುದು ವಿ ಟಿ ರಸ್ತೆಯಾಗಿ, ಆದ್ರೆ ಅಲ್ಲೊಂದು ಸಮಸ್ಯೆ ಈಗ ಎಲ್ಲಾ ವಾಹನ ಚಾಲಕರನ್ನು ಕಾಡ ತೊಡಗಿದೆ, ಅದೆನೆಂದರೆ ಅಲ್ಲಿರುವ ಆಸ್ಪತ್ರೆಯವರು ಈ ರಸ್ತೆಯನ್ನು ತಮ್ಮ ಪಾರ್ಕಿಂಗ್ ವ್ಯವಸ್ಥೆಯಾಗಿ ಮಾಡುಕೊಂಡಿದ್ದಾರೆ.
ಇಲ್ಲಿನ ಭದ್ರತ ಸಿಬ್ಬಂದಿಯ ಬಳಿ ನಿಮ್ಮ ಆಸ್ಪತ್ರೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲವೇ ಎಂದು ಕೇಳಿದರೆ “ಇದೆ ಆದ್ರೆ ಇವತ್ತು ಒಂದು ಮೀಟಿಂಗ್ ಇರುವ ಕಾರಣ ಅವರ ಕಾರಿಗಾಗಿ ವ್ಯವಸ್ಥೆ ಮಾಡಲಾಗಿದೆ ಹಾಗಾಗಿ ಚಿಕಿತ್ಸೆ ಬಂದಿರುವವರ ಕಾರು ಇಲ್ಲಿ ರಸ್ತೆಯಲ್ಲಿ ನಿಲ್ಲಿಸಲಾಗಿದೆ ಎಂದು ಸುಸೂತ್ರ ವಾಗಿ ನಗು ನಗುತ್ತ ಹಿಂದಿಯಲ್ಲಿ ಹೇಳತೊಡಗಿದ”
ಕಾಲುದಾರಿಯಲ್ಲಿ ನಿಂತಿದ್ದ ಕಾರನ್ನು ತೋರಿಸಿ ಇದು ಆಸ್ಪತ್ರೆಯಾ ಜಾಗನ ಅಂತ ಕೇಳಿದಕ್ಕೆ “ನಹಿಂ ಸಾಬ್ ಹೇ ತೋ ಸರಕಾರ್ ಕಾ ಜಗಾ ಹೇ” ಎಂದು ಮತ್ತೊಮ್ಮೆ ಮುಗುಳ್ ನಕ್ಕ. ಸುಮಾರು ನಾಲ್ಕು ಜನಕ್ಕಿಂತ ಹೆಚ್ಚಿನ ಭದ್ರತ ಸಿಬ್ಬಂದಿ ಅಲ್ಲಿ ಇದ್ದಾರೆ ಆದ್ರೆ ಎಲ್ಲರ ಕೆಲಸ ಒಂದೇ ಬಂದ ಕಾರನ್ನು ಸರಿಯಾಗಿ ಕಾಲುದಾರಿಯ ಮೇಲೆ ನಿಲ್ಲಿಸುವುದು!
ಈ ಆಸ್ಪತ್ರೆಯ ಗಾಡಿ ಹೋಗಲು ಕೂಡ ಇಲ್ಲಿ ಜಾಗವಿಲ್ಲದ್ದು ಮಾತ್ರ ವಿಪರ್ಯಾಸ! 
ಯಾರು ಅದರೊಳಗೆ ಇದ್ರೋ ಗೊತ್ತಿಲ್ಲ, ಆದ್ರೆ ಆಂಬ್ಯುಲೆನ್ಸ್ ಮಾತ್ರ ಆ ಜಾಗದಿಂದ ಹೊರ ಬರಲು ಹರಸಹಾಸ ಪಡುವುದನ್ನು ಕಂಡು ‘ಇನ್ನಾದ್ರೂ ಕಾಲುದಾರಿಯನ್ನು ಪಾರ್ಕಿಂಗ್ ವ್ಯವಸ್ಥೆಗೆ ಬಳಸದಂತಿರಲಿ ಎಂಬ ಮಾತು ದಾರಿ ಹೋಕರಿಂದ ಕೇಳಿ ಬಂತು.
ನಡೆದುಕೊಂಡು ಹೋಗುವವರಿಗೆ ಎಲ್ಲಿದೆ ದಾರಿ?
ವಾಹನ ಸವಾರರ ಸಮಸ್ಯೆ ಒಂದೆಡೆ ಆದ್ರೆ ನಡೆದು ಕೊಂಡು ಹೋಗುವವರಿಗೆ  ದಾರಿ ಇಲ್ಲದಂತಾಗಿದೆ! ಒಟ್ಟಿನಲ್ಲಿ ಈ ರಸ್ತೆ ಈಗ ಕೇವಲ  ಆಸ್ಪತ್ರೆಯ ಪಾರ್ಕಿಂಗ್ ಲಾಟ್ ಆಗಿರುವುದು ಪಾದಚಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ!
ಎಲ್ಲಿದ್ದೀರಾ ಟ್ರ್ಯಾಫಿಕ್ ಪೋಲೀಸ್?
ಅಲ್ಲಲಿ ಲೈಸೆನ್ಸ್ ತೋರಿಸಿ, ಇನ್ಶುರೆನ್ಸ್ ತೋರಿಸಿ, ಎಮಿಶನ್ ರಿಪೋರ್ಟ್ ತೋರಿಸಿ ಎಂದು ದ್ವಿಚಕ್ರ ವಾಹನ ಸವಾರರನ್ನು ನಿಲ್ಲಿಸಿ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರವನ್ನು ಪ್ರಯೋಗಿಸುವ ಪೋಲೀಸ್ ಅಧಿಕಾರಿಗಳಿಗೆ ಈ ಕಾಲುದಾರಿಯಲ್ಲಿ ನಿಲ್ಲಿಸುವ ಕಾರುಗಳು ಕಾಣುವುದಿಲ್ಲವೇ??
ಅಂತು ಇಂತು ಈ ಆಸ್ಪತ್ರೆಯವರು ಆದಷ್ಟು ಬೇಗ ತಮ್ಮ ಜಾಗದಲ್ಲೇ ಪಾರ್ಕಿಂಗ್ ವೈವಸ್ಥೆಯನ್ನು ಮಾಡಿದರೆ ಒಳಿತು!
–ಜನ ಸಾಮಾನ್ಯ–
0
Shares
  • Share On Facebook
  • Tweet It




Trending Now
ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
Tulunadu News October 6, 2025
ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
Tulunadu News October 6, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
    • "ಒಂದು ಶೋಗಾಗಿ ಕೈಕಾಲು ಹಿಡಿಯುತ್ತಿದ್ದ ಕಾಲದಿಂದ..." ರಿಷಬ್ ಶೆಟ್ಟಿ 2016 ರ ಘಟನೆಯನ್ನು ನೆನಪಿಸಿಕೊಂಡದ್ದು ಯಾಕೆ?
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಕಸಾಯಿಖಾನೆ ಮುಟ್ಟುಗೋಲು ಹಾಕಿದ ಪ್ರಥಮ ಪ್ರಕರಣ ದಾಖಲು - ಎಸ್ಪಿ
    • ಗೆದ್ದರೂ ಟ್ರೋಫಿ ಪಡೆಯದೇ ದಿಟ್ಟ ಉತ್ತರ ನೀಡಿದ ಭಾರತೀಯ ತಂಡಕ್ಕೆ ಭೇಷ್!
    • ಕೇವಲ ₹100 ಲಂಚದ ಪ್ರಕರಣದಲ್ಲಿ 39 ವರ್ಷಗಳ ಬಳಿಕ ನಿರ್ದೋಷಿ ಘೋಷಣೆ!
    • ನಮ್ಮ ಜಿಲ್ಲೆಗೆ ಕಳುಹಿಸಬೇಡಿ, ಬೇಕಾದರೆ ಕಾಡಿಗೆ ಕಳುಹಿಸಿ ಎಂದು ರಾಯಚೂರಿನಲ್ಲಿ ತಿಮರೋಡಿ ವಿರುದ್ಧ ಪ್ರತಿಭಟನೆ!
    • ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ: 6 ತಿಂಗಳಲ್ಲಿ ಕತ್ರೀನಾ ಕೈಪ್ ಸಂತಾನ ಭಾಗ್ಯ!
    • ಪ್ರಧಾನ ಮಂತ್ರಿಯವರ ನಿವಾಸದ ಮುಂಭಾಗದಲ್ಲಿಯೂ ಸಹ ಗುಂಡಿಗಳು ಇವೆ- ಡಿಸಿಎಂ ಡಿಕೆಶಿ.
    • ಹಿಂದೂ ದೇವರ ಹಾಡನ್ನು ಹಾಡಿದ್ದ ಸುಹಾನಾ ತಮ್ಮ ಭಾವಿ ಪತಿಯ ಬಗ್ಗೆ ಹೇಳಿದ್ದಾರೆ! ಆ ಹಿಂದೂ ಯುವಕ ಯಾರು ಗೊತ್ತಾ!

  • Privacy Policy
  • Contact
© Tulunadu Infomedia.

Press enter/return to begin your search