• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಜಾಗತಿಕವಾಗಿ ಭಾರತದ ಸ್ಥಾನಮಾನ ಬದಲಾಗಿದ್ದಾದರೂ ಹೇಗೆ?

ಸಾತ್ವಿಕ್ ಸೂರ್ಯನಾರಾಯಣ, ಕಾಸರಗೋಡು Posted On November 29, 2017
0


0
Shares
  • Share On Facebook
  • Tweet It

ದೇಶದಲ್ಲಿ ಚುನಾವಣೆ ಬಂದ ಬಳಿಕ ಹಾಗೂ ಚುನಾವಣೆ ಮುಗಿದ ಮೇಲೆ ಕಾಂಗ್ರೆಸ್ಸಿನ ಒಂದೇ ಕೆಲಸ ಎಂದರೆ, ಅದು ನರೇಂದ್ರ ಮೋದಿ ಅವರನ್ನು ವಿನಾಕಾರಣ ತೆಗಳುವುದು. ಕಾಂಗ್ರೆಸ್ ಸೇರಿ ಹಲವು ಪ್ರತಿಪಕ್ಷಗಳು ಮೋದಿ ಅವರನ್ನು ತೆಗಳಿದರೂ, ಟೀಕೆ, ಅವಮಾನ ಮಾಡಿದರೂ, ಪ್ರಧಾನಿಯವರ ಘನತೆ, ಕೀತಿ, ಜನರ ಬೆಂಬಲ, ಪ್ರಭಾವ ಮಾತ್ರ ದುಪ್ಪಟ್ಟಾಗುತ್ತಲೇ ಇದೆ. ಅದಕ್ಕೆ ಕಳೆದ ಮೂರು ವರ್ಷಗಳಲ್ಲಿ ಅಂತಾರಾಷ್ಟ್ರೀಯವಾಗಿ ಭಾರತಕ್ಕೆ ಸಿಕ್ಕ ಮನ್ನಣೆಯೇ ಸಾಕ್ಷಿಯಾಗಿದೆ. ಈ ಮೂರೂವರೆ ವರ್ಷದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಸಿಕ್ಕ ಮನ್ನಣೆಗಳಾವವು ಎಂಬುದರ ಪಟ್ಟಿ ಇಲ್ಲಿದೆ.

ಉದ್ಯಮ ಕೈಗೊಳ್ಳುವುದು ಸರಾಗ

ವಿಶ್ವಬ್ಯಾಂಕೇ ನೀಡುವ ಯಾವುದೇ ದೇಶದಲ್ಲಿ ಉದ್ಯಮ ಆರಂಭಿಸುವಲ್ಲಿ ಇರುವ ಸರಳ ನಿಯಮಗಳ ಪೈಕಿ ಭಾರತ 32ನೇ ಸ್ಥಾನಕ್ಕೇರಿದೆ. ಎಂದರೆ ಪ್ರಸ್ತುತ ಭಾರತದ ಸ್ಥಾನ 132ರಿಂದ 100ಕ್ಕೆ ಏರಿದೆ. ಒಂದೇ ವರ್ಷದಲ್ಲಿ ಜಗತ್ತಿನ ಯಾವ ರಾಷ್ಟ್ರವೂ ಇಷ್ಟು ಅಂಕ ಏರಿಲ್ಲ. ಮೋದಿ ಸರ್ಕಾರ ಮಾತ್ರ ಇದನ್ನು ಸಾಧಿಸಿದ್ದು.

ಸ್ಪರ್ಧೆಯಲ್ಲೂ ಭಾರತ ಮುಂದು

ವರ್ಲ್ಡ್ ಎಕನಾಮಿಕ್ ಫೋರಂ ಸಂಸ್ಥೆಯ ಜಾಗತಿಕ ಸ್ಪರ್ಧಾತ್ಮಕತೆ ಸೂಚ್ಯಕ್ಕದಲ್ಲಿ ಭಾರತ ಕಳೆದ ಎರಡು ವರ್ಷಗಳಲ್ಲಿ 32 ಸ್ಥಾನ ಮೇಲಕ್ಕೇರಿದೆ. ಇದು ಯಾವುದೇ ರಾಷ್ಟ್ರ ಗಳಿಸಬಹುದಾದ ಉತ್ತಮ ಶ್ರೇಯಾಂಕವಾಗಿದೆ.

ನಾವೀನ್ಯದ ಚಿಂತನೆಯಲ್ಲಿ ಪ್ರಾಬಲ್ಯ

ಅಮೆರಿಕದ ವಿಪೋ ಸಂಸ್ಥೆ ನೀಡುವ ಗ್ಲೋಬಲ್ ಇನೋವೇಶನ್ ಸೂಚ್ಯಂಕದಲ್ಲಿ ಭಾರತ ಪ್ರಸಕ್ತ ಸಾಲಿನಲ್ಲಿ 21 ಅಂಕ ಮೇಲೇರಿದೆ. ದೇಶದಲ್ಲಿ ಜನರ ನವ ಚಿಂತನೆ, ಸರ್ಕಾರದ ಹೊಸ ಹೊಸ ಐಡಿಯಾ, ಯೋಜನೆಗಳು ಈ ಸೂಚ್ಯಂಕದಲ್ಲಿ ಏರಿಕೆ ಕಾಣಲು ಸಾಧ್ಯವಾಗಿದೆ.

ಸಾಗಣೆ ಪ್ರಮಾಣದಲ್ಲೂ ಎತ್ತಿದ ಕೈ

ವಿಶ್ವ ಬ್ಯಾಂಕ್ 2016ರಲ್ಲಿ ಜಾಗತಿಕವಾಗಿ ಸಾಗಣೆ ಪ್ರಮಾಣದ ಸೂಚ್ಯಂಕ ಪಟ್ಟಿ ಬಿಡುಗಡೆಗೊಳಿಸಿದ್ದು, ಭಾರತ 19 ಸ್ಥಾನ ಮೇಲೇರಿ ಪ್ರಸ್ತುತ 35ನೇ ಸ್ಥಾನ ಪಡೆದಿದೆ. ದೇಶದಲ್ಲಿ ಮೇಕ್ ಇನ್ ಇಂಡಿಯಾ ಯೋಜನೆ ಜಾರಿಯಲ್ಲಿದ್ದರೂ, ವಹಿವಾಟಿನ ದೃಷ್ಟಿಯಿಂದ ಭಾರತ ಸರಕು ಸಾಗಣೆ ಮಾಡುತ್ತಿರುವುದು ಏರಿಕೆಗೆ ಕಾರಣ ಎನ್ನಲಾಗಿದೆ.

ವಿದೇಶಿ ಬಂಡವಾಳ, ಅದೂ ಹೇರಳ

ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಬರೀ ವಿದೇಶ ಸುತ್ತುತ್ತಾರೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತವೆ. ಆದರೆ ಮೋದಿ ವಿದೇಶ ಸುತ್ತಿ ಬರೀ ಗೈಯಲ್ಲಿ ಬಂದಿಲ್ಲ. 2016-17ನೇ ಸಾಲಿನಲ್ಲಿ ಭಾರತದಲ್ಲಿ ಹೂಡಿಕೆಯಾಗುವ ಪ್ರಮಾಣ ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಶೇ.67ರಷ್ಟು ಜಾಸ್ತಿಯಾಗಿದೆ.

ನಂಬಿಕಸ್ಥ ಸರ್ಕಾರ

ಆರ್ಥಿಕ ಸಹಕಾರ ಹಾಗೂ ಅಭಿವೃದ್ಧಿ ಸಂಸ್ಥೆ (ಒಇಸಿಡಿ) ಇತ್ತೀಚೆಗೆ ನೀಡಿರುವ ವರದಿ ಪ್ರಕಾರ ಭಾರತ ಸರ್ಕಾರ ವಿಶ್ವದ ಮೂರನೇ ವಿಶ್ವಾಸಾರ್ಹ ಸರ್ಕಾರ ಎಂದು ತಿಳಿಸಿದೆ. ಶೇ.73ರಷ್ಟು ಭಾರತೀಯರು ಮೋದಿ ಸರ್ಕಾರದ ಮೇಲೆ ವಿಶ್ವಾಸ ಇಟ್ಟಿದ್ದಾರಂತೆ.

ಒಟ್ಟಿನಲ್ಲಿ ಈ ಎಲ್ಲ ಅಂಕಿ-ಅಂಶಗಳನ್ನು ನೋಡುವುದಾದರೆ, ಕೇಂದ್ರ ಸರ್ಕಾರದ ಹಗರಣ ರಹಿತ, ಅಭಿವೃದ್ಧಿ ಕೇಂದ್ರಿತ ಆಡಳಿತ, ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ, ದಿಟ್ಟ ನಿರ್ಧಾರಗಳು ಭಾರತವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿವೆ ಎಂಬುದರಲ್ಲಿ ಎರಡು ಮಾತಿಲ್ಲ.

0
Shares
  • Share On Facebook
  • Tweet It




Trending Now
ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
ಸಾತ್ವಿಕ್ ಸೂರ್ಯನಾರಾಯಣ, ಕಾಸರಗೋಡು September 16, 2025
ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
ಸಾತ್ವಿಕ್ ಸೂರ್ಯನಾರಾಯಣ, ಕಾಸರಗೋಡು September 16, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
  • Popular Posts

    • 1
      ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • 2
      ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • 3
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • 4
      ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • 5
      ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search