• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ತಪ್ಪು ತಪ್ಪಾಗಿ ಟ್ವೀಟ್ ಮಾಡಿ ಬೆಪ್ಪಾದ ರಾಹುಲ್ ಗಾಂಧಿ…

TNN Correspondent Posted On December 5, 2017
0


0
Shares
  • Share On Facebook
  • Tweet It

ಮೊದಲ ಟ್ವೀಟ್..

ದೆಹಲಿ: ಕಾಂಗ್ರೆಸ್ ನಿರ್ಧರಿತ ಅಧ್ಯಕ್ಷ ರಾಹುಲ್ ಗಾಂಧಿ ಎಡವಟ್ಟುಗಳ ಮೂಲಕವೇ ಹೆಸರುವಾಸಿ ಮತ್ತು ಭಾರತ ಕೋಟ್ಯಂತರ ಜನರಿಗೆ ಅಪಹಾಸ್ಯದ ವಸ್ತುವಾಗಿಬಿಟ್ಟಿದ್ದಾರೆ. ಅದು ಅವರಿಗೆ ಪದೇ ಪದೆ ಘಟಿಸುತ್ತಿದೆ. ಇದೀಗ ಮತ್ತೊಮ್ಮೆ ಕೇಂದ್ರ ಸರ್ಕಾರವನ್ನು ನಿಂಧಿಸುವ ಭರದಲ್ಲಿ ದಿನಸಿ ವಸ್ತುಗಳ ಬಗ್ಗೆ ಪ್ರಕಟಿಸಿದ್ದ ಟ್ವೀಟ್ ನಲ್ಲಿ ಬೇಕಾಬಿಟ್ಟಿಯಾಗಿ ದರಗಳನ್ನು ಲಿಸ್ಟ್ ಮಾಡಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರವೇ ಕಾರಣ ಎಂದು ಮೇಲೋಂದು ಆಕ್ರೋಶದ ನುಡಿ ಬರೆದಿದ್ದಾರೆ. ತಪ್ಪನ್ನು ಗುರುತಿಸಿ ಹಾಸ್ಯ, ಅಪಹಾಸ್ಯಗಳು ಬರುತ್ತಲೇ ಆಫಿಸ್ ಆಫ್ ಆರ್ ಜಿ ಮೂಲ ಟ್ವೀಟ್ ಅಳಿಸಿ, ಮತ್ತೊಂದು ಟ್ವೀಟ್ ಪ್ರಕಟಿಸಿದ್ದಾರೆ.

ಟ್ವಿಟರ್ ನಲ್ಲಿ ತಾವು ಪ್ರಕಟಿಸಿದ್ದ ದಿನಸಿ ವಸ್ತುಗಳ ದರ ವಾಸ್ತವಕ್ಕೆ ಬಹುದೂರ ಎಂಬುದನ್ನು ಟ್ವಿಟ್ಟಿಗರು ಹಾಸ್ಯ ಮಾಡಿದ್ದರು. ರಾಹುಲ್ ನಿಮಗೆ ವಾಸ್ತವದ ಅರಿವಿಲ್ಲ. ಅದ್ಯಾಕೆ ಸುಮ್ಮನೆ ಟ್ವೀಟ್ ಮಾಡುತ್ತೀರಿ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದರೇ, ಕೆಲವರು ಪಾಪ ಅವರಿಗೇನು ಗೊತ್ತು ರಸ್ತೆ ಬದಿಯಲ್ಲಿ ಮಾರಾಟವಾಗುವ ದಿನಸಿ ವಸ್ತುಗಳ ಬೆಲೆ. ಸುಮ್ಮನೇ ಕಾಟಾಚಾರಕ್ಕೆ ವಿರೋಧಕ್ಕಾಗಿ ಟ್ವೀಟ್ ಮಾಡುತ್ತಾರೆ. ಪಾಪಚ್ಚಿ ಎಂದು ಕಾಲೆಳೆದಿದ್ದಾರೆ.

ನಂತರದ ಟ್ವೀಟ್..

ಸೋಮವಾರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುವ ರಾಹುಲ್ ಗಾಂಧಿಗೆ ಈ ಟ್ವೀಟ್ ಭಾರಿ ಇರಿಸು ಮುರಿಸು ಉಂಟು ಮಾಡಿತ್ತು. ರಾಹುಲ್ ಟ್ವೀಟ್ ಗೆ ‘ರಾಹುಲ್ ಗಾಂಧಿ ದಾಖಲೆಗಳಿಲ್ಲದ, ವಾಸ್ತವಕ್ಕೆ ದೂರವಾದ ಅಂಕಿಅಂಶಗಳನ್ನು ಟ್ವೀಟ್ ಮಾಡುತ್ತಿದ್ದಾರೆ. ಅದಕ್ಕೆ ಯಾವುದೇ ಬೆಲೆ ನೀಡುವಂತಿಲ್ಲ ಪ್ರಧಾನ ಮಂತ್ರಿ ಕಾರ್ಯಾಲಯದ ರಾಜ್ಯ ಸಚಿವ ಜೀತೆಂದ್ರ ಸಿಂಗ್ ಹೇಳಿದ್ದಾರೆ.

ಇತ್ತೀಚೆಗೆ ಅಮೆರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮರನ್ನು ಭೇಟಿ ಮಾಡಿದ ಚಿತ್ರವನ್ನು ಟ್ವೀಟ್ ಮಾಡಿ, ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಅವರೊಂದಿಗೆ ಎಂದು ಅಡಿ ಬರಹ ಬರೆದಿದ್ದರು. ಅದೂ ತೀವ್ರ ಹಾಸ್ಯಕ್ಕಿಡಾಗಿ ಹಲೋ ರಾಹುಲ್ ಅವರು ಮಾಜಿ ಅಧ್ಯಕ್ಷರು, ಅಧ್ಯಕ್ಷರಲ್ಲ ಎಂದು ಟ್ವಿಟ್ಟಿಗರು ಕಾಲೆಳೆದ್ದರು.

0
Shares
  • Share On Facebook
  • Tweet It


rahulgandhi


Trending Now
ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
Tulunadu News January 16, 2026
ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
Tulunadu News January 12, 2026
You may also like
ಆರ್ ಎಸ್ ಎಸ್ ನಲ್ಲಿ ಮಹಿಳೆಯರು ಚಡ್ಡಿ ಹಾಕಿದ್ದನ್ನು ರಾಹುಲ್ ನೋಡಿಲ್ಲ!
October 10, 2017
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
    • ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
    • ರಾಜ್ಯ ರಾಜಕೀಯಕ್ಕೆ ಧುಮುಕಿದ ಪ್ರತಾಪ್ ಸಿಂಹ! ಕ್ಷೇತ್ರ ಯಾವುದು ಗೊತ್ತಾ?
    • ಕೊರಗಜ್ಜ ಸಿನೆಮಾದ ಹಾಡುಗಳಿಗೆ ರೀಲ್ಸ್ ಮಾಡಿ ಕೋಟಿ ಗೆಲ್ಲಿ ಎನ್ನುವ ಆಫರ್ ನೀಡಿದ ಚಿತ್ರತಂಡ! ದೈವ ನರ್ತಕರಿಂದ ಆಕ್ರೋಶ...
    • ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನ ಭೇಟಿ: ನಟಿ ನುಶ್ರತ್ ಭರುಚ್ಚಾ ವಿರುದ್ಧ ಫತ್ವಾ – ಭಾರೀ ವಿವಾದ
    • ಐದು ದಿನಗಳಲ್ಲಿ ಏಳುನೂರಕ್ಕೂ ಹೆಚ್ಚು ಕಿ.ಮೀ. ಸೈಕಲ್ ತುಳಿದ 70 ರ ಹರೆಯದ ಶಾಸಕ!
    • ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಸ್ಥಾಪಿಸಿದ ನಿಟ್ಟೆ ವಿನಯ್ ಹೆಗ್ಡೆ ಎಂಬ ಮಹಾಚೇತನ ಅಸ್ತಂಗತ
  • Popular Posts

    • 1
      ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
    • 2
      ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!

  • Privacy Policy
  • Contact
© Tulunadu Infomedia.

Press enter/return to begin your search