• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ತಪ್ಪು ತಪ್ಪಾಗಿ ಟ್ವೀಟ್ ಮಾಡಿ ಬೆಪ್ಪಾದ ರಾಹುಲ್ ಗಾಂಧಿ…

TNN Correspondent Posted On December 5, 2017
0


0
Shares
  • Share On Facebook
  • Tweet It

ಮೊದಲ ಟ್ವೀಟ್..

ದೆಹಲಿ: ಕಾಂಗ್ರೆಸ್ ನಿರ್ಧರಿತ ಅಧ್ಯಕ್ಷ ರಾಹುಲ್ ಗಾಂಧಿ ಎಡವಟ್ಟುಗಳ ಮೂಲಕವೇ ಹೆಸರುವಾಸಿ ಮತ್ತು ಭಾರತ ಕೋಟ್ಯಂತರ ಜನರಿಗೆ ಅಪಹಾಸ್ಯದ ವಸ್ತುವಾಗಿಬಿಟ್ಟಿದ್ದಾರೆ. ಅದು ಅವರಿಗೆ ಪದೇ ಪದೆ ಘಟಿಸುತ್ತಿದೆ. ಇದೀಗ ಮತ್ತೊಮ್ಮೆ ಕೇಂದ್ರ ಸರ್ಕಾರವನ್ನು ನಿಂಧಿಸುವ ಭರದಲ್ಲಿ ದಿನಸಿ ವಸ್ತುಗಳ ಬಗ್ಗೆ ಪ್ರಕಟಿಸಿದ್ದ ಟ್ವೀಟ್ ನಲ್ಲಿ ಬೇಕಾಬಿಟ್ಟಿಯಾಗಿ ದರಗಳನ್ನು ಲಿಸ್ಟ್ ಮಾಡಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರವೇ ಕಾರಣ ಎಂದು ಮೇಲೋಂದು ಆಕ್ರೋಶದ ನುಡಿ ಬರೆದಿದ್ದಾರೆ. ತಪ್ಪನ್ನು ಗುರುತಿಸಿ ಹಾಸ್ಯ, ಅಪಹಾಸ್ಯಗಳು ಬರುತ್ತಲೇ ಆಫಿಸ್ ಆಫ್ ಆರ್ ಜಿ ಮೂಲ ಟ್ವೀಟ್ ಅಳಿಸಿ, ಮತ್ತೊಂದು ಟ್ವೀಟ್ ಪ್ರಕಟಿಸಿದ್ದಾರೆ.

ಟ್ವಿಟರ್ ನಲ್ಲಿ ತಾವು ಪ್ರಕಟಿಸಿದ್ದ ದಿನಸಿ ವಸ್ತುಗಳ ದರ ವಾಸ್ತವಕ್ಕೆ ಬಹುದೂರ ಎಂಬುದನ್ನು ಟ್ವಿಟ್ಟಿಗರು ಹಾಸ್ಯ ಮಾಡಿದ್ದರು. ರಾಹುಲ್ ನಿಮಗೆ ವಾಸ್ತವದ ಅರಿವಿಲ್ಲ. ಅದ್ಯಾಕೆ ಸುಮ್ಮನೆ ಟ್ವೀಟ್ ಮಾಡುತ್ತೀರಿ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದರೇ, ಕೆಲವರು ಪಾಪ ಅವರಿಗೇನು ಗೊತ್ತು ರಸ್ತೆ ಬದಿಯಲ್ಲಿ ಮಾರಾಟವಾಗುವ ದಿನಸಿ ವಸ್ತುಗಳ ಬೆಲೆ. ಸುಮ್ಮನೇ ಕಾಟಾಚಾರಕ್ಕೆ ವಿರೋಧಕ್ಕಾಗಿ ಟ್ವೀಟ್ ಮಾಡುತ್ತಾರೆ. ಪಾಪಚ್ಚಿ ಎಂದು ಕಾಲೆಳೆದಿದ್ದಾರೆ.

ನಂತರದ ಟ್ವೀಟ್..

ಸೋಮವಾರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುವ ರಾಹುಲ್ ಗಾಂಧಿಗೆ ಈ ಟ್ವೀಟ್ ಭಾರಿ ಇರಿಸು ಮುರಿಸು ಉಂಟು ಮಾಡಿತ್ತು. ರಾಹುಲ್ ಟ್ವೀಟ್ ಗೆ ‘ರಾಹುಲ್ ಗಾಂಧಿ ದಾಖಲೆಗಳಿಲ್ಲದ, ವಾಸ್ತವಕ್ಕೆ ದೂರವಾದ ಅಂಕಿಅಂಶಗಳನ್ನು ಟ್ವೀಟ್ ಮಾಡುತ್ತಿದ್ದಾರೆ. ಅದಕ್ಕೆ ಯಾವುದೇ ಬೆಲೆ ನೀಡುವಂತಿಲ್ಲ ಪ್ರಧಾನ ಮಂತ್ರಿ ಕಾರ್ಯಾಲಯದ ರಾಜ್ಯ ಸಚಿವ ಜೀತೆಂದ್ರ ಸಿಂಗ್ ಹೇಳಿದ್ದಾರೆ.

ಇತ್ತೀಚೆಗೆ ಅಮೆರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮರನ್ನು ಭೇಟಿ ಮಾಡಿದ ಚಿತ್ರವನ್ನು ಟ್ವೀಟ್ ಮಾಡಿ, ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಅವರೊಂದಿಗೆ ಎಂದು ಅಡಿ ಬರಹ ಬರೆದಿದ್ದರು. ಅದೂ ತೀವ್ರ ಹಾಸ್ಯಕ್ಕಿಡಾಗಿ ಹಲೋ ರಾಹುಲ್ ಅವರು ಮಾಜಿ ಅಧ್ಯಕ್ಷರು, ಅಧ್ಯಕ್ಷರಲ್ಲ ಎಂದು ಟ್ವಿಟ್ಟಿಗರು ಕಾಲೆಳೆದ್ದರು.

0
Shares
  • Share On Facebook
  • Tweet It


rahulgandhi


Trending Now
ಡ್ರೋಣ್ ಕ್ಷೇತ್ರದ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಗೆ ಡಿಎಫ್ ಐ ಅಧ್ಯಕ್ಷರ ಕೌಂಟರ್!
Tulunadu News July 30, 2025
ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
Tulunadu News July 29, 2025
You may also like
ಆರ್ ಎಸ್ ಎಸ್ ನಲ್ಲಿ ಮಹಿಳೆಯರು ಚಡ್ಡಿ ಹಾಕಿದ್ದನ್ನು ರಾಹುಲ್ ನೋಡಿಲ್ಲ!
October 10, 2017
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಡ್ರೋಣ್ ಕ್ಷೇತ್ರದ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಗೆ ಡಿಎಫ್ ಐ ಅಧ್ಯಕ್ಷರ ಕೌಂಟರ್!
    • ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
    • ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟ ಅನಿವಾರ್ಯ -ನಳಿನ್ ಕುಮಾರ್ ಕಟೀಲ್
    • SSLC ಮಕ್ಕಳಿಗೆ ರಾಜ್ಯ ಸರಕಾರದಿಂದ ಶುಭ ಸುದ್ದಿ!
    • ಬಹುಮುಖ ಪ್ರತಿಭೆ ರಾಜಶ್ರೀ ಪೂಜಾರಿ ಇನ್ನಿಲ್ಲ!
    • ಚಕ್ರವರ್ತಿ ವಿರುದ್ಧದ FIR ರದ್ದು! ಸುಪ್ರೀಂ ಕೋರ್ಟಿನಲ್ಲಿ ಅರುಣ್ ಶ್ಯಾಮ್ ವಾದ
    • 6 ಡ್ರೋನ್ ಗಳಲ್ಲಿ ಪಾಕ್ ನಿಂದ ಪಿಸ್ತೂಲ್, ಹೆರಾಯಿನ್ ಸಾಗಾಟ: ಧರೆಗುರುಳಿಸಿದ ಬಿಎಸ್ ಎಫ್..
    • ಶಿವದೂತ ಗುಳಿಗೆ ನಾಟಕದ "ಭೀಮರಾವ್" ರಮೇಶ್ ಕಲ್ಲಡ್ಕ ನಿಧನ!
    • ನೂರಾರು ಜನರಿಗೆ ಸಾಲಕೊಡಿಸುವ ನೆಪದಲ್ಲಿ ವಂಚನೆ: ರೋಶನ್ ಸಲ್ದಾನಾ ಪ್ರಕರಣ ಸಿಐಡಿಗೆ
    • ಕರ್ನಾಟಕದಲ್ಲಿ "ಮನೆಮನೆಗೆ ಪೊಲೀಸ್" ಏನು ಕಥೆ!
  • Popular Posts

    • 1
      ಡ್ರೋಣ್ ಕ್ಷೇತ್ರದ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಗೆ ಡಿಎಫ್ ಐ ಅಧ್ಯಕ್ಷರ ಕೌಂಟರ್!
    • 2
      ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
    • 3
      ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟ ಅನಿವಾರ್ಯ -ನಳಿನ್ ಕುಮಾರ್ ಕಟೀಲ್
    • 4
      SSLC ಮಕ್ಕಳಿಗೆ ರಾಜ್ಯ ಸರಕಾರದಿಂದ ಶುಭ ಸುದ್ದಿ!
    • 5
      ಬಹುಮುಖ ಪ್ರತಿಭೆ ರಾಜಶ್ರೀ ಪೂಜಾರಿ ಇನ್ನಿಲ್ಲ!

  • Privacy Policy
  • Contact
© Tulunadu Infomedia.

Press enter/return to begin your search