• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಆ ಪೀರ್ ಬಾಬಾ 500 ಮುಸ್ಲಿಂ ಮಹಿಳೆಯರನ್ನು ಅತ್ಯಾಚಾರ ಮಾಡಿದನೇ?

TNN Correspondent Posted On December 11, 2017
0


0
Shares
  • Share On Facebook
  • Tweet It

ಶ್ರೀನಗರ: ಜಮ್ಮು-ಕಾಶ್ಮಿರದಲ್ಲಿ ಮದರಸಾವೊಂದರ ಮೇಲೆ ಪೊಲೀಸರು ದಾಳಿ ಮಾಡಿದ್ದು, ಮದರಸಾದಲ್ಲಿ ಇಸ್ಲಾಂ ಕುರಿತು ಬೋಧನೆ ಮಾಡುತ್ತಿದ್ದ ಪೀರ್ ಸಾಬ್ ಸುಮಾರು 500 ಮುಸ್ಲಿಂ ಮಹಿಳೆಯರನ್ನು ಅತ್ಯಾಚಾರ ಮಾಡಿದ್ದಾನೆ ಎಂದು ಶಂಕಿಸಲಾಗಿದೆ.

ಜಮ್ಮು-ಕಾಶ್ಮೀರದ ಬದ್ಗಾಮ್ ಜಿಲ್ಲೆ ಖಾನ್ ಸಾಹೀಬ್ ಎಂಬಲ್ಲಿ ಕಳೆದ 18 ವರ್ಷಗಳಿಂದ ಮದರಸಾ ನಡೆಸುತ್ತಿದ್ದ ಪೀರ್ ಬಾಬಾ ಎಂದೇ ಖ್ಯಾತಿಯಾಗಿದ್ದ ಗುಲ್ಜಾರ್ ಅಹ್ಮದ್ ಎಂಬಾತ ಮಹಿಳೆಯರಿಗೆ ಧರ್ಮದ ಬೋಧನೆ ಹೆಸರಲ್ಲಿ ಸುಮಾರು 500 ಮಹಿಳೆಯರನ್ನು ಲೈಂಗಿಕವಾಗಿ ದುರುಪಯೋಗಪಡಿಸಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಜಮ್ಮು-ಕಾಶ್ಮೀರ ಡಿಎಸ್ಪಿ ಬಷೀರ್ ಅಹಮ್ಮದ್ ನೇತೃತ್ವದ ಪೊಲೀಸ್ ತಂಡ ಮದರಸಾದ ಕಚೇರಿ, ಹಾಸ್ಟೆಲ್, ಶಾಲೆ ಮೇಲೆ ದಾಳಿ ನಡೆಸಿದ್ದು, ಲೈಂಗಿಕ ಉದ್ರೇಕ ನೀಡುವ ಮಾತ್ರೆ ಸೇರಿ ಹಲವು ವಸ್ತು ಸಿಕ್ಕಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಲ್ಲದೆ ಹಲವು ಸಿಡಿ ಸಹ ದೊರೆತಿದ್ದು, ಮುಸ್ಲಿಂ ಮಹಿಳೆ, ಯುವತಿಯರನ್ನು ಧರ್ಮದ ಹೆಸರಲ್ಲಿ ಅತ್ಯಾಚಾರ ಎಸಗುತ್ತಿದ್ದ ಎಂದು ತಿಳಿದುಬಂದಿದೆ.

ಶಾಲೆಯ ಕೋಣೆಗಳಲ್ಲೇ ಮಲಗುವ ಕೋಣೆ ಪತ್ತೆಯಾಗಿದ್ದು, ಹರಿಯಾಣದ ಡೇರಾ ಸಚ್ಚಾದಲ್ಲಿ ಸಿಕ್ಕ ಹಲವು ವಸ್ತು, ಗುಹೆಗಳಿಗೆ ಹೋಲಿಕೆ ಮಾಡಲಾಗಿದೆ.

ಈ ಸ್ವಯಂಘೋಷಿತ ದೇವಮಾನವನ ಸಹಚರರಾದ ಅಬ್ದುಲ್ ಗನಿ, ಬಷೀರ್ ಅಹ್ಮದ್ ಮಿರ್ ಹಾಗೂ ಮಹಿಳಾ ಉದ್ಯೋಗಿಗಳಾದ ಶಕೀಲಾ ಬಾನೋ ಎಂಬುವವರು ಮಹಿಳೆಯರು ಹಾಗೂ ಯುವತಿಯರನ್ನು ಮದರಸಾಗಳಿಗೆ ಕರೆತರುವಲ್ಲಿ ಸಹಕರಿಸಿದ್ದರು ಎಂದು ತಿಳಿದುಬಂದಿದೆ. ಆದಾಗ್ಯೂ, ದೇವಮಾನವನನ್ನು ವಶಪಡಿಸಿಕೊಂಡಿದ್ದು, ನ್ಯಾಯಾಲಯಕ್ಕೆ ಪೀರ್ ಬಾಬಾ ವಿರುದ್ಧ ದಾಖಲೆ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

0
Shares
  • Share On Facebook
  • Tweet It




Trending Now
ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
Tulunadu News October 6, 2025
ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
Tulunadu News October 6, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
    • "ಒಂದು ಶೋಗಾಗಿ ಕೈಕಾಲು ಹಿಡಿಯುತ್ತಿದ್ದ ಕಾಲದಿಂದ..." ರಿಷಬ್ ಶೆಟ್ಟಿ 2016 ರ ಘಟನೆಯನ್ನು ನೆನಪಿಸಿಕೊಂಡದ್ದು ಯಾಕೆ?
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಕಸಾಯಿಖಾನೆ ಮುಟ್ಟುಗೋಲು ಹಾಕಿದ ಪ್ರಥಮ ಪ್ರಕರಣ ದಾಖಲು - ಎಸ್ಪಿ
    • ಗೆದ್ದರೂ ಟ್ರೋಫಿ ಪಡೆಯದೇ ದಿಟ್ಟ ಉತ್ತರ ನೀಡಿದ ಭಾರತೀಯ ತಂಡಕ್ಕೆ ಭೇಷ್!
    • ಕೇವಲ ₹100 ಲಂಚದ ಪ್ರಕರಣದಲ್ಲಿ 39 ವರ್ಷಗಳ ಬಳಿಕ ನಿರ್ದೋಷಿ ಘೋಷಣೆ!
    • ನಮ್ಮ ಜಿಲ್ಲೆಗೆ ಕಳುಹಿಸಬೇಡಿ, ಬೇಕಾದರೆ ಕಾಡಿಗೆ ಕಳುಹಿಸಿ ಎಂದು ರಾಯಚೂರಿನಲ್ಲಿ ತಿಮರೋಡಿ ವಿರುದ್ಧ ಪ್ರತಿಭಟನೆ!
    • ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ: 6 ತಿಂಗಳಲ್ಲಿ ಕತ್ರೀನಾ ಕೈಪ್ ಸಂತಾನ ಭಾಗ್ಯ!
    • ಪ್ರಧಾನ ಮಂತ್ರಿಯವರ ನಿವಾಸದ ಮುಂಭಾಗದಲ್ಲಿಯೂ ಸಹ ಗುಂಡಿಗಳು ಇವೆ- ಡಿಸಿಎಂ ಡಿಕೆಶಿ.
    • ಹಿಂದೂ ದೇವರ ಹಾಡನ್ನು ಹಾಡಿದ್ದ ಸುಹಾನಾ ತಮ್ಮ ಭಾವಿ ಪತಿಯ ಬಗ್ಗೆ ಹೇಳಿದ್ದಾರೆ! ಆ ಹಿಂದೂ ಯುವಕ ಯಾರು ಗೊತ್ತಾ!

  • Privacy Policy
  • Contact
© Tulunadu Infomedia.

Press enter/return to begin your search