• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಅಮರನಾಥಕ್ಕೆ ತೆರಳಿ ಹರ ಹರ ಮಹಾದೇವ ಎನ್ನುವೆ, ತಾಕತ್ತಿದ್ದರೆ ತಡೆಯಿರಿ ಎಂದಿದ್ದು ಯಾರು ಗೊತ್ತಾ?

TNN Correspondent Posted On December 14, 2017


  • Share On Facebook
  • Tweet It

ದೆಹಲಿ: ಅಮರನಾಥ ದೇವಾಲಯಕ್ಕೆ ತೆರಳುವ ಗುಹಾ ಮಾರ್ಗದಲ್ಲಿ ದೇವರ ನಾಮ ಪಠಿಸುವ ಹಾಗಿಲ್ಲ, ಮೊಬೈಲ್ ಒಯ್ಯುವ ಹಾಗಿಲ್ಲ, ಅದು “ಶಾಂತ ವಲಯ (ಸೈಲೆನ್ಸ್ ಜೋನ್)” ಎಂದು ಘೋಷಿಸಿದ್ದ ರಾಷ್ಟ್ರೀಯ ಹಸಿರು ನ್ಯಾಯಪೀಠದ ಆದೇಶಕ್ಕೆ ದೇಶಾದ್ಯಂತ ಭಾರಿ ವಿರೋಧ ವ್ಯಕ್ತವಾಗಿದೆ.

ಅದರಲ್ಲೂ ಈ ಆದೇಶವನ್ನು ಬಿಜೆಪಿ ಖಂಡಿಸಿದ್ದು,  “ನಾನು ಅಮರನಾಥ ಯಾತ್ರೆ ಕೈಗೊಳ್ಳುತ್ತೇನೆ. ಭಂ ಭಂ ಬೋಲೇ, ಹರ ಹರ ಮಹಾದೇವ ಮಂತ್ರ ಪಠಿಸುತ್ತೇನೆ. ತಾಕತ್ತಿದ್ದವರು ತಡೆಯಲಿ ನೋಡೋಣ” ಎಂದು ಬಿಜೆಪಿ ಮುಖಂಡ ತಜಿಂದರ್ ಬಗ್ಗಾ ಸವಾಲು ಹಾಕಿದ್ದಾರೆ.

ಅಲ್ಲದೆ, ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಆದೇಶವನ್ನು ವಿಶ್ವ ಹಿಂದೂ ಪರಿಷತ್ ಸಹ ಖಂಡಿಸಿದ್ದು, ಭೂಮಿಯ ಮೇಲೆ ಪರಿಸರಕ್ಕೆ ಆಗುವ ಎಲ್ಲ ಹಾನಿಗೆ ಹಿಂದೂಗಳೇ ಕಾರಣರಲ್ಲ” ಎಂದಿದ್ದಾರೆ.

ಅಲ್ಲದೆ ರಾಷ್ಟ್ರೀಯ ನ್ಯಾಯಾಧಿಕರಣದ ಇಂಥ ತುಘ್ಲಕ್ ಫತ್ವಾ ಹಿಂಪಡೆಯುವಂತೆ ಸರ್ಕಾರ ತಿಳಿಸಬೇಕು ಎಂದು ಆದೇಶಿಸಿದ್ದಾರೆ.

ಪ್ರತಿವರ್ಷ ಲಕ್ಷಾಂತರ ಹಿಂದೂಗಳು ಅಮರನಾಥ ಯಾತ್ರೆ ಕೈಗೊಳ್ಳುತ್ತಾರೆ. ಆದರೆ ಗಂಟೆ ಬಾರಿಸುವುದರಿಂದ, ಮಂತ್ರ ಪಠಿಸುವುದರಿಂದ ಹಿಮ ಕುಸಿಯುತ್ತದೆ ಎಂಬ ಕಾರಣಕ್ಕೆ ನಿಯಮ ರೂಪಿಸಲಾಗಿದೆ ಎಂದು ಹಸಿರು ನ್ಯಾಯಾಧಿಕರಣ ತಿಳಿಸಿದೆ. ಆದರೆ, ಯಾವಾಗಲೂ ಹಿಂದೂಗಳೇ, ಹಿಂದೂಗಳ ಆಚರಣೆಗಳೇ ಟಾರ್ಗೆಟ್ ಆಗುತ್ತಿವೆ ಎಂಬುದು ಕೋಟ್ಯಂತರ ಹಿಂದೂಗಳ ಪ್ರಶ್ನೆಯಾಗಿದೆ.

  • Share On Facebook
  • Tweet It


- Advertisement -


Trending Now
ರಾಮ ಮಂದಿರ ಉದ್ಘಾಟನೆಯ ಬಳಿಕ ಗೋಧ್ರಾ ಹತ್ಯಾಕಾಂಡ ನಡೆಯಬಹುದು - ಠಾಕ್ರೆ
Tulunadu News September 25, 2023
ಮಂಗಳೂರು - ಗೋವಾ ವಂದೇ ಭಾರತ್ ರೈಲು ಸೇವೆ
Tulunadu News September 22, 2023
Leave A Reply

  • Recent Posts

    • ರಾಮ ಮಂದಿರ ಉದ್ಘಾಟನೆಯ ಬಳಿಕ ಗೋಧ್ರಾ ಹತ್ಯಾಕಾಂಡ ನಡೆಯಬಹುದು - ಠಾಕ್ರೆ
    • ಮಂಗಳೂರು - ಗೋವಾ ವಂದೇ ಭಾರತ್ ರೈಲು ಸೇವೆ
    • ಕುಕ್ಕರ್ ಬಾಂಬ್ ಸಂಚಿನ ಹಿಂದಿನ ಮಾಸ್ಟರ್ ಮೈಂಡ್ ಅರಾಫತ್ ಆಲಿ ಬಂಧನ
    • ಅಂದು ಸಿದ್ದು, ಇಂದು ಹರಿ!
    • ಆ ನಿರೂಪಕ ಇದ್ದರೆ ಬರಲ್ಲ ಎನ್ನುವುದು ಶೂರತನವೇ?
    • ಏನಂತ ಚೈತ್ರಾಳಿಗೆ ಅಷ್ಟು ಹಣ ಕೊಟ್ರು ಪೂಜಾರಿ!?
    • ಉತ್ತರಖಂಡದ ಮದರಸಾಗಳಲ್ಲಿ ಇನ್ನು ಸಂಸ್ಕೃತ ಶಿಕ್ಷಣ
    • ಭಾರತ್ ಮಾತಾ ಕೀ ಜೈ ಎಂದು ಮೀಡಿಯಾ ಸೆಂಟರ್ ನಲ್ಲಿ ಉದ್ಘೋಷಣೆ!
    • ಈ ಬಾರಿ ಮಹಿಷ ದಸರಾ ಯಾಕೆ ನಡೆಯಬೇಕು!
    • ಸೌದಿಗೆ ಇಂಧನ ಶಕ್ತಿ ತುಂಬಲಿರುವ ಭಾರತ!
  • Popular Posts

    • 1
      ರಾಮ ಮಂದಿರ ಉದ್ಘಾಟನೆಯ ಬಳಿಕ ಗೋಧ್ರಾ ಹತ್ಯಾಕಾಂಡ ನಡೆಯಬಹುದು - ಠಾಕ್ರೆ
    • 2
      ಮಂಗಳೂರು - ಗೋವಾ ವಂದೇ ಭಾರತ್ ರೈಲು ಸೇವೆ


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search