• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ಪ್ರಕಾಶ್ ರೈ, ನಿಮಗೆ ತಾಕತ್ತಿದ್ದರೆ ಈ ಪ್ರಶ್ನೆಗಳನ್ನೂ ಕೇಳಿ ನೋಡೋಣ!

ವಿಶಾಲ್ ಗೌಡ ಕುಶಾಲನಗರ Posted On December 23, 2017
0


0
Shares
  • Share On Facebook
  • Tweet It

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗುತ್ತಲೇ, ಏನಾಗ್ತಿದೆರೀ ಕರ್ನಾಟಕದಲ್ಲಿ?
ಗುಜರಾತ್, ಹಿಮಾಚಲ ಪ್ರದೇಶ ಚುನಾವಣೆ ಗೆಲ್ಲುತ್ತಲೇ, ಮೋದಿ ಅವರೇ ಗೆದ್ದರೂ ನೆಮ್ಮದಿಯಿಂದಿದ್ದೀರಾ?
ಯೋಗಿ ಆದಿತ್ಯನಾಥ ಅವರು ಟಿಪ್ಪು ಜಯಂತಿ ಬೇಡ ಎನ್ನುತ್ತಲೇ, ಆದಿತ್ಯನಾಥರೇ ನಿಮ್ಮ ಅಜೆಂಡಾ ಏನು?
ಪ್ರತಾಪ್ ಸಿಂಹ ರೈ ಎರಡು ಹೆಸರಿನ ಕುರಿತು ಮಾತನಾಡುತ್ತಲೇ, ಪ್ರತಾಪ್ ಸಿಂಹ ಮನುಷ್ಯನೋ, ಪ್ರಾಣಿಯೋ?
ಸ್ವಚ್ಛಂದವಾಗಿ ಉಸಿರಾಡುವ ಕೇರಳದಲ್ಲಿ ಸರ್ವಾಧಿಕಾರಿ ಕಿಮ್ ಉಂಗ್ ಜಾನ್ ನನ್ನು ಆರಾಧನೆ ನಡೆತಿದೆ ಏನಂತೀರಿ?
ಕೇರಳದ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆ ನಡೆಯುತ್ತಿವೆ.. ಪ್ರಶ್ನಿಸಿದ್ದೀರಾ..?

ಕಳೆದ ನಾಲ್ಕೈದು ತಿಂಗಳಿಂದ ಹೀಗೆ ಪ್ರಕಾಶ್ ರೈ (ರಾಜ್ ಓಕೆನಾ, ರೈ ಓಕೆನಾ ಅವರನ್ನೇ ಕೇಳಬೇಕು) ಹೀಗೆ ಬಾಯಿಗೆ ಬಂದ ಹಾಗೆ ಚೀರಾಟ, ಮನಸ್ಸಿಗೆ ಬಂದಹಾಗೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಖಂಡಿತವಾಗಿಯೂ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸರ್ಕಾರ, ವ್ಯವಸ್ಥೆ, ರಾಜಕಾರಣಿಗಳನ್ನು ಪ್ರಶ್ನಿಸುವುದರಲ್ಲಿ ತಪ್ಪಿಲ್ಲ ಹಾಗೂ ಪ್ರಶ್ನಿಸುವುದು ಸಮಂಜಸ ಸಹ.

ಆದರೆ ಹೀಗೆ ಪ್ರಶ್ನಿಸುವಾಗ ಇಬ್ಬಂದಿತನ ಇರಬಾರದಲ್ಲವೇ? ಪ್ರಶ್ನೆಯಲ್ಲಿ ಹುರುಳು, ಸಾಚಾತನ, ಸುಬಗತನ ಇರಬೇಕಲ್ಲವೇ? ಪ್ರಶ್ನೆ ಏಕಾಭಿಮುಖವಾಗಿ, ಯಾರನ್ನೋ ಮೆಚ್ಚಿಸಲು ಕೇಳಬಾರದಲ್ಲವೇ?

ಪ್ರಕಾಶ್ ರೈ ಅವರ ಇತ್ತೀಚಿನ ನಡವಳಿಕೆ, ಪ್ರಶ್ನೆಯ ಧಾಟಿ ನೋಡಿದರೆ ಇದರ ಯಾವುದೇ ಲವಲೇಷವೂ ಇಲ್ಲ ಎಂಬುದು ಢಾಳಾಗುತ್ತದೆ. ಪ್ರಕಾಶ್ ರೈ ಎಂಬ ಇಬ್ಬಂದಿತನದ ವ್ಯಕ್ತಿಯ ಅನಾವರಣವಾಗುತ್ತಿದೆ.

ರೀ ಸ್ವಾಮಿ ಪ್ರಕಾಶ್ ರೈ, ಇಷ್ಟೆಲ್ಲ ಮಾತನಾಡುತ್ತೀರಲ್ಲ ನೀವು, ಪರೇಶ್ ಮೇಸ್ತಾ ಸಾವಿನ ಬಗ್ಗೆ ರಾಜ್ಯ ಸರ್ಕಾರವನ್ನು, ಸಿದ್ದರಾಮಯ್ಯರನ್ನು ಪ್ರಶ್ನಿಸುವ ತಾಕತ್ತಿಲ್ಲವೇ? ದಾನೇಶ್ವರಿಯ ಅತ್ಯಾಚಾರ, ಹತ್ಯೆಯಾಯಿತಲ್ಲ, ಅದರ ಕುರಿತು, ರಾಜ್ಯ ಸರ್ಕಾರದ ಕಾನೂನು ಸುವ್ಯವಸ್ಥೆ ಕುರಿತು ಪ್ರಶ್ನಿಸಲು ನಿಮಗೆ ಗುಂಡಿಗೆಯಿಲ್ಲವೇ? ಕಳೆದ ನಾಲ್ಕೂವರೆ ವರ್ಷದಲ್ಲಿ ರಾಜ್ಯದಲ್ಲಿ ಬಿಜೆಪಿ, ಆರೆಸ್ಸೆಸ್ ಕಾರ್ಯಕರ್ತರ ಹತ್ಯೆಯಾಯಿತಲ್ಲ, ಅದರ ಕುರಿತು ಮಾತನಾಡಲು, ಸರ್ಕಾರವನ್ನು ಟೀಕಿಸಲು ನಿಮಗೆ ಆಗುವುದಿಲ್ಲವೇ?

ಯಾಕ್ರೀ ಇಂಥಾ ಇಬ್ಬಂದಿತನ ಮಾಡುತ್ತೀರಿ? ಗೌರಿ ಲಂಕೇಶ್ ಹತ್ಯೆಯಾದಾಗ ಏನ್ ನಡೀತಿದೆರೀ ಕರ್ನಾಟಕದಲ್ಲಿ ಎನ್ನುವ ಬದಲು, ಸಿದ್ದರಾಮಯ್ಯನವರೇ ಏನ್ ಮಾಡ್ತಿದೀರಿ ನೀವು ಅಂತ ಕೇಳಬಹುದಿತ್ತಲ್ಲ? ಪರೇಶ್ ಮೇಸ್ತಾ, ದಾನೇಶ್ವರಿ ಹತ್ಯೆಯಾದಾಗ ರಾಜ್ಯ ಸರ್ಕಾರವೇನು ಮಲಗಿದೆಯಾ ಎಂದು ನಿಮ್ಮ ಧಾಟಿಯಲ್ಲೇ ತರಾಟೆಗೆ ತೆಗೆದುಕೊಳ್ಳಬಹುದಿತ್ತಲ್ಲ? ಹೀಗೆ ಪ್ರಶ್ನೆ ಮಾಡಲು ನಿಮಗೆ ಯಾವ ಅಳುಕಿದೆ ಸ್ವಾಮಿ? ನಿಮ್ಮ ನಾಲಗೆಯನ್ನೇನು ಕಟ್ಟಿ ಹಾಕಿದ್ದೀರಾ?

ದೇಶದಲ್ಲಿ ಸಿಂಹ ಎಂದು ಹೆಸರಿನ ಮುಂದೆ ಇರುವುದು ಸಾಮಾನ್ಯ. ಭಗತ್ ಸಿಂಗ್, ರಾಣಾ ಪ್ರತಾಪ್ ಸಿಂಗ್ ಅವರ ಸಿಂಗ್ ಸಿಂಹ ಎಂಬ ಅರ್ಥವನ್ನೇ ನೀಡುತ್ತದೆ. ಅದೇ ರೀತಿ ಸಂಸದ ಪ್ರತಾಪ್ ಅವರ ಹೆಸರಿನ ಮುಂದೆ ಸಿಂಹ ಇದೆ. ಇಷ್ಟಕ್ಕೇ ನೀವು ಪ್ರಾಣಿಯೋ, ಮನುಷ್ಯನೋ ಎಂದು ಪ್ರಶ್ನಿಸಬಹುದೇ? ಹಾಗಾದರೆ ಭಗತ್ ಸಿಂಗ್, ರಾಣಾ ಪ್ರತಾಪ್ ಸಿಂಗರೂ ಪ್ರಾಣಿಗಳೇ? ಇದು ಅವರಿಗೆ ಮಾಡುವ ಅವಮಾನವಲ್ಲವೇ? ಹೀಗೆ ಮಾತನಾಡಲು ನಿಮಗೆ ನಾಚಿಕೆಯೇ ಆಗುವುದಿಲ್ಲವೇ?

ಇನ್ನು ಯೋಗಿ ಆದಿತ್ಯನಾಥರನ್ನ ಪ್ರಶ್ನಿಸಿರುವ ವಿಷಯಕ್ಕೆ ಬರೋಣ. ಅಲ್ಲಾ ಸ್ವಾಮಿ, ಇಂಗ್ಲಿಷಿನಲ್ಲಿ ಮಾತನಾಡುವ ನಿಮಗೆ ಇತಿಹಾಸದ ಕನಿಷ್ಠ ಜ್ಞಾನವೂ ಇಲ್ಲವೇ? ಟಿಪ್ಪು ಎಂಥ ಮತಾಂಧ ಎಂಬುದು ಎಲ್ಲರಿಗೂ ಗೊತ್ತಿದೆ. ಆತ ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಎಂಬುದು ಸಹ ಜಗಜ್ಜಾಹೀರು. ಹೀಗಿರುವಾಗ ಯೋಗಿ ಆದಿತ್ಯನಾಥರು ಟಿಪ್ಪು ಜಯಂತಿ ಆಚರಿಸಬೇಡಿ ಎಂದು ಹೇಳಿರುವುದರಲ್ಲಿ ಯಾವ ತಪ್ಪಿದೆ?

ಹೊಟ್ಟೆಗೆ ಅನ್ನ ಹಾಕಿದ ಹಾಗೆ, ಮಿದುಳಿಗೆ ಸಹ ವಿಚಾರಗಳ ಮೇವು ಹಾಕಬೇಕು. ಆದರೆ ಒಂದು ವಿಷಯ ಮುಚ್ಚಿಟ್ಟು, ಇನ್ನೊಂದು ವಿಷಯದ ಬಗ್ಗೆ ರಾಜಾರೋಷವಾಗಿ ಮಾತನಾಡುವ ರೈ ಅವರು ಮಿದುಳಿಗೆ ಬೇರೆಯದ್ದೇ ಹಾಕುತ್ತಿದ್ದಾರೆ ಎಂದು ಕಾಣುತ್ತಿದೆ. ಪ್ರಕಾಶ್ ರೈ, ಮತ್ತೆ ಕೇಳುತ್ತಿದ್ದೇನೆ, ನಿಮಗೆ ನಿಜವಾಗಿಯೂ ತಾಕತ್ತಿದ್ದರೆ, ಈ ಪ್ರಶ್ನೆಗಳನ್ನೂ ಕೇಳಿ.

 

0
Shares
  • Share On Facebook
  • Tweet It




Trending Now
ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
ವಿಶಾಲ್ ಗೌಡ ಕುಶಾಲನಗರ June 29, 2026
ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!
ವಿಶಾಲ್ ಗೌಡ ಕುಶಾಲನಗರ June 26, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
    • ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!
    • ಕರ್ನಾಟಕದ ಪ್ರತಿಭೆ ದೀಕ್ಷಿತ್ ಅಮೀನ್‌ಗೆ ವಿಶ್ವ ಶಾಲಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ
    • Najlepsze bonusy i sloty w polskim kasynie online
    • ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
  • Popular Posts

    • 1
      ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
    • 2
      ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!

  • Privacy Policy
  • Contact
© Tulunadu Infomedia.

Press enter/return to begin your search