• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಉಗ್ರ ಸಂಘಟನೆಗೆ ಸೇರದ ಮುಸ್ಲಿಂ ಯುವಕ ಏನಾದ ಗೊತ್ತಾ..? ಕೇಳಿ ಆ ಸ್ಫೂರ್ತಿಯ ಕಥೆಯಾ…

TNN Correspondent Posted On December 23, 2017
0


0
Shares
  • Share On Facebook
  • Tweet It

ಶ್ರೀನಗರ: 18 ವರ್ಷಗಳ ಹಿಂದೆ ಭಯೋತ್ಪಾದನಾ ಗುಂಪಿನೊಂದಿಗೆ ಕೈಜೋಡಿಸು ಎಂದು ಯುವಕನನ್ನು ಹಿಂಸಿಸುತ್ತಾರೆ ಉಗ್ರರು, ಆದರೆ ಆ ಯುವಕನ ಕುಟುಂಬದವರು ಉಗ್ರರಿಗೆ ತಕ್ಕ ಉತ್ತರ ನೀಡಿ, ನಮ್ಮ ಮಗ ಉಗ್ರರೊಂದಿಗೆ ಕೈಜೋಡಿಸಲ್ಲ ಎನ್ನುತ್ತಾರೆ. ಅದಕ್ಕೆ ಉಗ್ರರು ನೆಮ್ಮದಿಯಿಂದ ಇದ್ದ ಆ ಕುಟುಂಬದ ಮನೆಯನ್ನೇ ಸುಟ್ಟು ಹಾಕುತ್ತಾರೆ. ಉಗ್ರರು ಸುಟ್ಟ ಮನೆಯಿಂದಲೇ ಅಂದು 2 ವರ್ಷದ ಹಸುಗೂಸು ಇಂದು ಕಾಶ್ಮೀರದ ಸಿವಿಲ್ ಪರೀಕ್ಷೆಯಲ್ಲಿ ಪಾಸಾಗಿ ಕಲ್ಲೆಸೆಯುವ ಯುವಕರಿಗೆ ಮಾದರಿಯಾಗಿದ್ದಾನೆ.

ಕಾಶ್ಮೀರದ ಸುರಾನ್ ಕೋಟ್ ನಲ್ಲಿ ಕುಟುಂಬಸ್ಥರೆಲ್ಲರು ವಾಸಿಸುತ್ತಿರುವ 27 ವರ್ಷದ ಅಂಜುಮ್ ಬಷೀರ್ ಖಾನ್ ಉಗ್ರರ ಕಿರುಕುಳ ಮೆಟ್ಟಿ ನಿಂತು, ಪ್ರತ್ಯೇಕವಾದಿಗಳೊಡನೆ ಕೈಜೋಡಿಸದೇ ಉತ್ತಮ ಅಭ್ಯಾಸ ಮಾಡಿ, ಕಾಶ್ಮೀರ್ ಸಿವಿಲ್ ಪರೀಕ್ಷೆಯಲ್ಲಿ ಪಾಸಾಗಿ ಸರ್ಕಾರಿ ನೌಕರಿ ಪಡೆದು ನೆಮ್ಮದಿ ಜೀವನ ಸಾಗಿಸುತ್ತಿರುವ ಮಾದರಿ ಯುವಕ.

ಜಮ್ಮು ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಪಾಸಾಗಿರುವ ಯುವಕ ಅಂಜುಮ್ ‘ಭಯೋತ್ಪಾದನೆಯ ಕರಾಳ ಛಾಯೆಯಿಂದ ಸಂಕಷ್ಟದಲ್ಲಿರುವ ಸುರಾನ್ ಕೋಟ್ ಜನರ ಸೇವೆ ಮಾಡಲು ಇಚ್ಛಿಸಿದ್ದಾರೆ. ಶಿಕ್ಷಣವೇ ಬದಲಾವಣೆಗೆ ಮೂಲ ಕಾರಣ. ಯುವಕರು ಶಿಕ್ಷಣದತ್ತ ಒಲವು ಹೊಂದಬೇಕು. ಆಗ ಮಾತ್ರ ಏಳಿಗೆ ಸಾಧ್ಯ ಎಂದು ಹೇಳುವ ಮೂಲಕ ಭಯೋತ್ಪಾದನೆಗೆ ಒಳಗಾಗುತ್ತಿರುವ ಯುವಕರಿಗೆ ಸಂದೇಶ ನೀಡಿದ್ದಾರೆ.

ಸುರಾನ್ ಕೋಟ್ ನ ತೆಹ್ಸಿಲ್ ಪ್ರದೇಶ ಜಮ್ಮುಕಾಶ್ಮೀರದಲ್ಲೇ ಅತಿ ಹೆಚ್ಚು ಭಯೋತ್ಪಾದಕರಿಂದ ಪೀಡನೆಗೆ ಒಳಗಾದ್ದದ್ದು. 1999ರಲ್ಲಿ  ಅಂಜುಮ್ ತಂದೆ  ಮಹಮ್ಮದ್ ಬಷೀರ್ ಭಾರಿ ಸಂಕಷ್ಟವನ್ನು ಎದುರಿಸಿದ್ದರು. ನಿತ್ಯ ಮಕ್ಕಳನ್ನು ಭಯೋತ್ಪಾದಕರೊಂದಿಗೆ ಕೈಜೋಡಿಸಿ ಎಂದು ಕಿರುಕುಳ ನೀಡಲಾಗುತ್ತಿತ್ತು. ವಿರೋಧಿಸಿದಕ್ಕೆ ಮನೆಯನ್ನೇ ಭಯೋತ್ಪಾದಕರು ಸುಟ್ಟು ಕರಕಲಾಗಿ ಮಾಡಿದರು. ಅದನ್ನು ಎದುರಿಸಿ ಮಹಮ್ಮದ್ ಬಷೀರ್ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಹೊಸ ಲೋಕವನ್ನು ಪರಿಚಯಿಸಿದರು.

ನನ್ನ ಮಕ್ಕಳು ಶಾಂತಿಯ ಪ್ರತಿರೂಪವಾಗಬೇಕು ಎಂದು ನಾನು ಭಯಸುತ್ತೇನೆ. ಯಾವ ಮಕ್ಕಳು ಭಯೋತ್ಪಾದನೆಯ ಪಾಶಕ್ಕೆ ಸಿಲುಕಿ ಒದ್ದಾಡುತ್ತಿದ್ದಾರೋ ಅವರಿಗೆ ನನ್ನ ಮಕ್ಕಳು ಮಾದರಿಯಾಗಬೇಕು ಎನ್ನುತ್ತಾರೆ ಖಾನ್ ತಂದೆ ಮಹಮ್ಮದ್ ಬಷೀರ್.

ಪರೀಕ್ಷೆ ಬರೆದ 1200 ಜನರಲ್ಲಿ ಕೇವಲ 51 ಜನ ಪಾಸಾಗಿದ್ದು, ಅದರಲ್ಲಿ ಅಂಜುಮ್ ಖಾನ್ ಸಾಧನೆ ಸ್ಫೂರ್ತಿದಾಯಕವಾಗಿದ್ದು, ಕುಟುಂಬಸ್ಥರು ಖುಷಿಯಲ್ಲಿದ್ದಾರೆ. ಅಲ್ಲದೇ ಇತರ ಮಕ್ಕಳು ಖಾನ್ ನಂತೆ ಶಿಕ್ಷಣ ಪಡೆದು ನೆಮ್ಮದಿಯ ಜೀವನ ನಡೆಸಲಿ ಎಂದು ಆಶಿಸಿದ್ದಾರೆ.

0
Shares
  • Share On Facebook
  • Tweet It




Trending Now
ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
Tulunadu News January 30, 2026
ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
Tulunadu News January 28, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
    • ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
  • Popular Posts

    • 1
      ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • 2
      ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ

  • Privacy Policy
  • Contact
© Tulunadu Infomedia.

Press enter/return to begin your search