• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಫೋನ್ ನಲ್ಲಿ ತಲಾಕ್ ಕೊಟ್ಟ ಇರಾನಿ ಗಂಡನಿಂದ ಪರಿಹಾರ ಕೊಡಿಸಿ!

Nagendra Shenoy Posted On December 27, 2017
0


0
Shares
  • Share On Facebook
  • Tweet It

ಒಂದು ಕಡೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುಸ್ಲಿಂ ಮಹಿಳೆಯರಿಗೆ ನ್ಯಾಯ ಕೊಡಿಸುವುದಕ್ಕಾಗಿ ತ್ರಿವಳಿ ತಲಾಕ್ ಅನ್ನು ನಿಷೇಧಿಸಿ ಅದನ್ನು ಕ್ರಿಮಿನಲ್ ಅಪರಾಧ ಎನ್ನುವ ಕಾನೂನು ತರಲು ಪ್ರಯತ್ನಿಸುತ್ತಿರುವಾಗಲೇ ಮತ್ತೊಂದು ತ್ರಿವಳಿ ತಲಾಕ್ ಪ್ರಕರಣ ಬೆಳಕಿಗೆ ಬಂದಿದೆ.

ಈ ಕುರಿತು ಅನ್ಯಾಯಕ್ಕೊಳಗಾದ ಮಹಿಳೆಯೊಬ್ಬರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಪತ್ರ ಬರೆದು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. 31 ವರ್ಷದ ಗೌಸೀಯ ಬೇಗಂ ಅವರು ಸುಶ್ಮಾ ಸ್ವರಾಜ್ ಅವರಿಗೆ ಬರೆದ ಪತ್ರದಲ್ಲಿ 2008 ರಲ್ಲಿ ತಮಗೆ ಹಾಗೂ ಇರಾನ್ ನಿವಾಸಿ ಸೈದ್ ಝಾರನ್ ಹಮೀದ್ ಆಲ್ ರಾಜಿಹಿ ಅವರಿಗೆ ಮದುವೆಯಾಗಿತ್ತು. ಒಮನ್ ಸುಲ್ತಾನೇಟ್ ನಿಝ್ವಾನ್ ನಲ್ಲಿ ವಾಸಿಸುವ ಸೈದ್ ಝಾರನ್ ಅವರಿಗೆ ಆ ಸಮಯದಲ್ಲಿ ಏಳು ಮಹಿಳೆಯರನ್ನು ತೋರಿಸಲಾಗಿತ್ತು. ಅದರಲ್ಲಿ ಆತ ನನ್ನನ್ನು ಆಯ್ಕೆ ಮಾಡಿದ್ದ ಎಂದು ಸಂತ್ರಸ್ತೆ ಮಹಿಳೆ ತನ್ನ ನೋವು ತೋಡಿಕೊಂಡಿದ್ದಾಳೆ. ಅದರ ನಂತರ ಆತ ತನಗೆ ಪ್ರತಿ ತಿಂಗಳು ಹಣ ಕಳುಹಿಸುತ್ತಿದ್ದ. ತಾನು ತನ್ನ ತಾಯಿಯೊಂದಿಗೆ ಹೈದ್ರಾಬಾದ್ ನಲ್ಲಿ ವಾಸಿಸುತ್ತಿದ್ದೇನೆ. ಮೊನ್ನೆ ಅಗಸ್ಟ್  ನಲ್ಲಿ ಫೋನ್ ಮಾಡಿ ಸೈದ್ ಮೂರು ಬಾರಿ ತಲಾಕ್ ಹೇಳಿದ್ದಾನೆ. ಅದರ ನಂತರ ತನಗೆ ಯಾವುದೇ ಹಣ ಕಳುಹಿಸಿಲ್ಲ. ಅದಲ್ಲದೆ ಜೀವನಾಂಶದ ಬಗ್ಗೆ  ಯಾವುದೇ ಮಾತನ್ನು ಹೇಳಿಲ್ಲ. ಇದರಿಂದ ತನಗೆ ಮತ್ತು ತನ್ನ ಮುದಿ ತಾಯಿಗೆ ಜೀವನ ಸಾಗಿಸುವುದೇ ಕಷ್ಟವಾಗಿದೆ. ತಮಗೆ ಆದ ಅನ್ಯಾಯಕ್ಕೆ  ಭಾರತ ಸರಕಾರ ಒಮನ್ ಸರಕಾರದೊಂದಿಗೆ ಮಾತನಾಡಿ ಮೋಸ ಮಾಡಿದ ಸೈದ್ ಜಝಾನ್ ಕಡೆಯಿಂದ ನ್ಯಾಯ ಕೊಡಿಸಬೇಕಾಗಿ ಗೌಸೀಯಾ ಬೇಗಂ ಸರಕಾರವನ್ನು ಒತ್ತಾಯಿಸಿದ್ದಾರೆ.

2008 ರಲ್ಲಿ ಮದುವೆ ಆದ ಬಳಿಕ ವರ್ಷಕ್ಕೊಮ್ಮೆ  ಸೈದ್ ಹೈದ್ರಾಬಾದ್ ಗೆ ಬರುತ್ತಿದ್ದ. ಬಡ ಕುಟುಂಬದಲ್ಲಿ ಹುಟ್ಟಿರುವ ತನಗೆ ಶ್ರೀಮಂತ ಗಂಡ ಸಿಕ್ಕಿದ ಖುಷಿ ಆಗಿತ್ತು. ಆದರೆ ತನ್ನ ಯಾವ ತಪ್ಪು ಇಲ್ಲದಿದ್ದರೂ ತನಗೆ ತಲಾಕ್ ಕೊಟ್ಟಿರುವ ಗಂಡನ ಬಗ್ಗೆ  ತನಗೆ ಅತೀವ ನೋವಿದೆ ಎಂದು ಬೇಗಂ ಪತ್ರದಲ್ಲಿ ಹೇಳಿದ್ದಾರೆ.

ತ್ವರಿತ  ತ್ರಿವಳಿ ತಲಾಕ್ ಅಮಾನವೀಯ ಪದ್ಧತಿಯಾಗಿದ್ದು  ಅದಕ್ಕೆ ಬಲಿಯಾಗುವ ಮುಸ್ಲಿಂ ಮಹಿಳೆಯರನ್ನು ಕಾಪಾಡುವುದಕ್ಕಾಗಿ ಕೇಂದ್ರ ಸರಕಾರ ಶತಾಯಗತಾಯ ಪ್ರಯತ್ನಿಸುತ್ತಿದ್ದರೂ ಅಖಿಲ ಭಾರತೀಯ ಪರ್ಸನಲ್ ಲಾ ಬೋರ್ಡ್ ಅದಕ್ಕೆ ವಿರುದ್ಧವಾಗಿ ನಿಂತಿದೆ.

ಹೆಣ್ಣು ಕೇವಲ ಭೋಗಕ್ಕಾಗಿ ಬಳಕೆಯಾಗುವ ವಸ್ತುವಲ್ಲ ಎನ್ನುವುದು ಭಾರತೀಯ ಸಂಸ್ಕೃತಿ. ಆಕೆಯನ್ನು ಕೇವಲ ದೈಹಿಕ ಸುಖಕ್ಕಾಗಿ ಬಳಸಿ ಬಿಸಾಡುವ ಅನಿಷ್ಟ ಪದ್ಧತಿ ತ್ವರಿತ ತಲಾಕ್ ಅನ್ನು ನಿಷೇಧಿಸಿ ಮುಸ್ಲಿಂ ಹೆಣ್ಣುಮಕ್ಕಳಿಗೂ ದೇಶದಲ್ಲಿ ಗೌರವಯುತವಾಗಿ ಬದುಕಲು ಅವಕಾಶ ಕೊಡಲು ಯಾವುದೇ ತ್ಯಾಗಕ್ಕೂ ಸಿದ್ಧ ಎಂದು ಸುಶ್ಮಾ ಸ್ವರಾಜ್ ಹೇಳಿದ್ದಾರೆ.

0
Shares
  • Share On Facebook
  • Tweet It




Trending Now
ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
Nagendra Shenoy January 30, 2026
ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
Nagendra Shenoy January 28, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
    • ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
  • Popular Posts

    • 1
      ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • 2
      ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ

  • Privacy Policy
  • Contact
© Tulunadu Infomedia.

Press enter/return to begin your search