• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಆರೋಗ್ಯ

ಹಲ್ಲುಗಳ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆoದು ತಿಳಿದುಕೊಳ್ಳಿ.

TNN Correspondent Posted On July 8, 2017
0


0
Shares
  • Share On Facebook
  • Tweet It

ಹಲ್ಲುಗಳು ಮುಖದ ಅಂದಕ್ಕೆ ಪುಟವಿಡುತ್ತವೆ.ಅದಕ್ಕಿಂತ ಹೆಚ್ಚಾಗಿ ಆಹಾರವನ್ನು ಕಡಿಯಲು,ಅರೆಯಲು ಬೇಕು.ದೈನಂದಿನ ಕೆಲಸದ ನಡುವೆ ನಾವು ಇವುಗಳ ಪೋಷಕತೆಯನ್ನು ಮರೆಯುತ್ತೇವೆ ಆಮೇಲೆ ಹಲ್ಲು ನೋವಾದಾಗ ಅತ್ತು ಕರೆದು ರಂಪಾಟ ಮಾಡಿ ,ಹಲ್ಲಿನ ವೈದ್ಯರ ಬಳಿ ತಪಾಸಣೆಗೆ ಹೋಗುತ್ತೇವೆ.ಈಗ ಮನೆಯಲ್ಲೇ ಇವುಗಳ ರಕ್ಷಣೆಯ ಬಗ್ಗೆ ಕಲಿಯೋಣ.

ಹಿಂದಿನ ಕಾಲದಲ್ಲಿ ನಮ್ಮ ಅಜ್ಜ ಅಜ್ಜಿಯರು ಗೇರುಮರದ ಎಲೆ,ಮಾವಿನ ಎಲೆಯಲ್ಲಿ ಹಲ್ಲುಜ್ಜುತ್ತಿದ್ದರು.ಈ.ಆಧುನಿಕತೆಯನ್ನು ಮೈಗೂಡಿಸಿಕೊಂಡ ನಮಗೆ ಅದು ಸರಿಬರಲಿಲ್ಲ.ಆದರೆ ಇದರಲ್ಲೇ ಆರೋಗ್ಯದ ಗುಟ್ಟು ಅಡಗಿದೆ.ಈ ಎಲೆಗಳು ನಾಲಿಗೆಯಲ್ಲಿ ಸೇರುವ ಅಗ್ರವನ್ನು(ಬಿಳಿ ಪೊರೆ )ಯನ್ನು ತೆಗೆದು ಹಾಕುತ್ತವೆ.ಹಲ್ಲುಗಳು ಕಲೆಗಳಿಂದ ಮುಕ್ತವಾಗುತ್ತವೆ.

ತೆಂಗಿನ ಕಾಯಿಯ ನಾರಿನಿಂದ ಹಲ್ಲನ್ನು ಉಜ್ಜುವುದು ಸಹ ಒಳ್ಳೆಯದು.ಇದರಿಂದ ಹಲ್ಲುಗಳ ಮೇಲೆ ಬರುವ ಪದರ ಮತ್ತು ಕಪ್ಪು ಕಲೆಗಳು ನಿವಾರಣೆಯಾಗುತ್ತವೆ.ಸ್ವಲ್ಪ ತೆಂಗಿನ ನಾರನ್ನು ತೆಗೆದುಕೊಂಡು ಉಂಡೆ ಮಾಡಿ ಹಲ್ಲುಗಳ ಮೇಲೆ ಉಜ್ಜಬೇಕು .ಆಮೇಲೆ ಹಲ್ಲು ತೊಳೆಯುವುದರಿಂದ ಸುಂದರ ಹಲ್ಲುಗಳು ನಿಮ್ಮದಾಗುತ್ತವೆ.

“ನಿಮ್ಮ ಟೂತ್ ಪೇಸ್ಟ್ ನಲ್ಲಿ ಉಪ್ಪು ಇದೆಯೇ? “ಈ ಜಾಹೀರಾತು ಟಿವಿಯಲ್ಲಿ ಬರುವಾಗ ನಮ್ಮ ಹಿರಿಯರು ಉಪ್ಪಿನಿಂದ ಹಲ್ಲು ತೊಳೆಯಿರಿ ಎಂದು ಹೇಳುತ್ತಿದ್ದುದು ನೆನಪಾಗುತ್ತದೆ. ಉಪ್ಪು ಮತ್ತು ಮಸಿಯಿಂದ ಹಲ್ಲುಜ್ಜುವುದು ಹಲ್ಲಿಗೆ ಹೊಳಪನ್ನು ನೀಡುತ್ತದೆ.ಕಲ್ಲುಪ್ಪು ಮತ್ತು ಚೆನ್ನಾಗಿ ಗುದ್ದಿ ಪುಡಿ ಮಾಡಿದ ಮಸಿಯನ್ನು ಸೇರಿಸಿ ಹಲ್ಲು ಉಜ್ಜಬೇಕು .ಸಣ್ಣ ಮಕ್ಕಳ ಪಾಚಿ ಕಟ್ಟಿದ ಹಲ್ಲುಗಳು ಸಹ ಬಿಳಿಯಾಗುತ್ತದೆ .

ಕೆಲವರಿಗೆ ಹಲ್ಲಿಗೆ ಸಣ್ಣ ಕೋಲು ,ಪಿನ್ನು ಹಾಕುವ ದುರಭ್ಯಾಸವಿರುತ್ತದೆ.ಇಲ್ಲವೇ,ಪೆನ್ನು ,ಸೂಜಿ  ಹೀಗೆ ಏನಾದರೊಂದು ಹಾಕಿ ಹಲ್ಲನ್ನು ಕೊರೆದು  ಸಂಶೋಧನೆ ಮಾಡುವ ಚಟವಿರುತ್ತದೆ .ಇದು ಅಸಭ್ಯ ಮತ್ತು ಹಾನಿಕಾರಕ .ಸೋಂಕು ಆಗುವ ಸಾಧ್ಯತೆ ಇರುತ್ತದೆ.ಆದ್ದರಿಂದ ಇದನ್ನು ಬಿಟ್ಟು ಬಿಡಿ.ಅನಿವಾರ್ಯ ಇದ್ದಾಗ ಶುಚಿಯಾದ ಟೂತ್ ಪಿಕ್ ಉಪಯೋಗಿಸಿ .

ದಾಳಿಂಬೆಯಂತ ಸುಂದರ ದಂತ ನಿಮ್ಮದಾಗಲಿ .

0
Shares
  • Share On Facebook
  • Tweet It




Trending Now
ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
Tulunadu News November 21, 2025
ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
Tulunadu News November 20, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
  • Popular Posts

    • 1
      ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • 2
      ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ

  • Privacy Policy
  • Contact
© Tulunadu Infomedia.

Press enter/return to begin your search