• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಸಂವಿಧಾನ ಬದಲಾಯಿಸಿದರೆ ರಕ್ತಪಾತವಾಗುತ್ತದೆ ಎನ್ನುವವರು 42ನೇ ತಿದ್ದುಪಡಿ ಬಗ್ಗೆ ಏನೆನುತ್ತಾರೆ?

ವಿಶಾಲ್ ಗೌಡ, ಕುಶಾಲನಗರ Posted On December 29, 2017


  • Share On Facebook
  • Tweet It

ಕೇಂದ್ರ ಕೌಶಲಾಭಿವೃದ್ಧಿ ಖಾತೆ ರಾಜ್ಯ ಸಚಿವ ಅನಂತಕುಮಾರ್ ಹೆಗಡೆ “ನಾವು ಸಂವಿಧಾನ ಬದಲಾಯಿಸುತ್ತೇವೆ” ಎಂದು ಹೇಳುತ್ತಲೇ, ಭಾರಿ ವಿರೋಧ ವ್ಯಕ್ತವಾಗಿದೆ. ಅನಂತಕುಮಾರ್ ಒಬ್ಬ ಸಂವಿಧಾನ ವಿರೋಧಿ, ಸಂವಿಧಾನ ಬದಲಾಯಿಸಿದರೆ ರಕ್ತಪಾತವಾಗುತ್ತದೆ ಎಂದು ಕಾಂಗ್ರೆಸ್ ಲೋಕಸಭೆ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ವಿರೋಧ ವ್ಯಕ್ತವಾಗಿದೆ. ಕೊನೆಗೆ ಅನಂತಕುಮಾರ್ ಸಂಸತ್ತಿನಲ್ಲಿ ಕ್ಷಮೆ ಕೇಳುವಂತಾಗಿದೆ.

ಹಾಗಾದರೆ ಇದುವರೆಗೆ ಸಂವಿಧಾನ ಬದಲಾವಣೆಯೇ ಆಗಿಲ್ಲವೇ? ಬದಲಾಯಿಸಿಲ್ಲ ಎಂದರೆ 100ಕ್ಕೂ ಅಧಿಕ ಬಾರಿ ತಿದ್ದುಪಡಿ ಹೇಗೆ ತರಲಾಯಿತು? ತಿದ್ದುಪಡಿ ತಂದಮೇಲೆ ಬದಲಾವಣೆಯಾಯಿತು ಎಂದರ್ಥವಲ್ಲವೇ? ಈ ಕನಿಷ್ಠ ಜ್ಞಾನವೂ ಮಲ್ಲಿಕಾರ್ಜುನ ಖರ್ಗೆಯವರಿಗೆ ಇಲ್ಲವೇ? ಕಾಂಗ್ರೆಸ್ ಸರ್ಕಾರದಲ್ಲೇ ಬಹುತೇಕ ತಿದ್ದುಪಡಿ ತರಲಾಗಿದೆ ಎಂಬುದು ಖರ್ಗೆಯವರಿಗೆ ಮರೆತು ಹೋಯಿತೇ? ಅವರಿಗೆ ಸಂವಿಧಾನದ 42ನೇ ತಿದ್ದುಪಡಿಯ ಬಗ್ಗೆ ಗೊತ್ತಿದೆಯೇ?

ಹೌದು, ಇದುವರೆಗೂ ಸಂವಿಧಾನಕ್ಕೆ ತಂದ 100ಕ್ಕೂ ಅಧಿಕ ತಿದ್ದುಪಡಿ ಮಾಡಿದ ತೂಕವೂ ಒಂದೇ, ಸಂವಿಧಾನದ 42ನೇ ತಿದ್ದುಪಡಿಯೂ ಒಂದೇ. ಹೀಗೆ ಎನ್ನುವಷ್ಟರಮಟ್ಟಿಗೆ 42ನೇ ತಿದ್ದುಪಡಿ ಮೂಲಕ ಸಂವಿಧಾನದಲ್ಲಿ ಹಲವು ಮಾರ್ಪಾಡು ಮಾಡಲಾಗಿದೆ.

ಹಾಗಿದ್ದರೂ ಇದರ ಬಗ್ಗೆ ಮಲ್ಲಿಕಾರ್ಜುನ ಖರ್ಗೆಯವರೇಕೆ ಹೇಳುವುದಿಲ್ಲ. 1976ರಲ್ಲಿ ಇಂದೇ ಕಾಂಗ್ರೆಸ್ ಪಕ್ಷದ ಇಂದಿರಾಗಾಂಧಿ ಅವರ ನೇತೃತ್ವದಲ್ಲೇ ಸಂವಿಧಾನಕ್ಕೆ ತಿದ್ದುಪಡಿ ತರಲಾಗಿದೆ. ಹೀಗೆ ಸಂವಿಧಾನ ಮಾರ್ಪಾಡು ಮಾಡಿದವರು ಕಾಂಗ್ರೆಸ್ಸಿನವರೇ ಅಲ್ಲವೇ ಖರ್ಗೆಯವರೇ?

42ನೇ ತಿದ್ದುಪಡಿ ಮೂಲಕ ಸಂವಿಧಾನದ ಪ್ರಸ್ತಾವನೆ (ಪ್ರಿಯಾಂಬಲ್)ಗೆ ಸಮಾಜವಾದ, ಸಮಗ್ರತೆ ಹಾಗೂ ಜಾತ್ಯತೀತ ವಾದ ಎಂಬ ಪದ ಸೇರಿಸಲಾಯಿತು. ಮೂಲಭೂತ ಕರ್ತವ್ಯಗಳನ್ನು ಸೇರಿಸಲಾಯಿತು. ನಾಲ್ಕು ನಿರ್ದೇಶನಾತ್ಮಕ ತತ್ವ, ರಾಜ್ಯಗಳ ಮೇಲೆ ರಾಷ್ಟ್ರಪತಿಯವರು ಹೇರುವ ತುರ್ತುಪರಿಸ್ಥಿತಿಗೆ ಇದ್ದ ಆರು ತಿಂಗಳ ಸಮಯವನ್ನು ವರ್ಷಕ್ಕೆ ಹೆಚ್ಚಿಸಲಾಯಿತು. ಅಲ್ಲದೆ ನ್ಯಾಯಾಂಗ ಸೇರಿ ಹಲವು ಕ್ಷೇತ್ರಗಳಲ್ಲಿ ಒಂದೇ ತಿದ್ದುಪಡಿ ಮೂಲಕ ವಿವಿಧ ಬದಲಾವಣೆ ಮಾಡಲಾಯಿತು.

ಈ ಎಲ್ಲ ಕಾರಣಗಳಿಂದಲೇ ಸಂವಿಧಾನದ 42ನೇ ತಿದ್ದುಪಡಿಯನ್ನೇ ಮಿನಿ ಸಂವಿಧಾನ ಎಂದು ಕರೆಯುತ್ತಾರೆ. ಅಷ್ಟು ದೊಡ್ಡ ಮಟ್ಟದಲ್ಲಿ ತಿದ್ದುಪಡಿ ಮಾಡಲಾಗಿದೆ. ಹೀಗಿದ್ದರೂ ಅನಂತಕುಮಾರ್ ಹೇಳಿಕೆಗೆ ವಿರೋಧ ವ್ಯಕ್ತಪಡಿಸುವುದೇಕೆ? ರಕ್ತಪಾತವಾಗುತ್ತದೆ ಎಂದು ಬೆದರಿಸುವುದೇಕೆ ಖರ್ಗೆಯವರೇ? ಅನಂತಕುಮಾರ್ ಅವರ ಹೇಳಿಕೆ ಟೀಕಿಸುವ ಮೊದಲು ಸಂವಿಧಾನದ 42ನೇ ತಿದ್ದುಪಡಿ ನೆನಪಿಸಿಕೊಳ್ಳಿ. ಅಷ್ಟಕ್ಕೂ ಸಂವಿಧಾನದ ತಿದ್ದುಪಡಿಗೆ ಅವಕಾಶವಿದೆ ಎಂದು ಅದೇ ಸಂವಿಧಾನವೇ ಹೇಳಿದೆ ಎಂಬುದು ಸಹ ನಿಮಗೆ ಗೊತ್ತಿಲ್ಲ ಎಂದರೆ ಎಂಥ ಬೌದ್ಧಿಕ ದಿವಾಳಿತನ ನಿಮಗೆ ಆವರಿಸಿರಬೇಕು ಎಂಬ ಅನುಮಾನ ಕಾಡುತ್ತಿದೆ. ಛೇ!

 

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
ವಿಶಾಲ್ ಗೌಡ, ಕುಶಾಲನಗರ May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
ವಿಶಾಲ್ ಗೌಡ, ಕುಶಾಲನಗರ May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search