• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ರಾಹುಲ್ ಗಾಂಧಿಯವರೇ ಲೋಕಪಾಲ್ ವಿಷಯದಲ್ಲಿ ಅಣ್ಣಾ ಹಜಾರೆಯವರನ್ನು ಬಂಧಿಸಿದ್ದು ನಿಮ್ಮ ಸರ್ಕಾರವೇ ಅಲ್ಲವೇ?

ವಿಶಾಲ್ ಗೌಡ ಕುಶಾಲನಗರ Posted On January 6, 2018


  • Share On Facebook
  • Tweet It

ಇದ್ದಿಲು ಮಸಿಗೆ ಹೇಳಿತ್ತಂತೆ ನೀನು ಕಪ್ಪು ಎಂದು, ಹಾಗಾಯಿತು ಈ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯವರ ಕತೆ.

ಅಣ್ಣಾ ಹಜಾರೆಯವರು ಜನಲೋಕಪಾಲ ಮಸೂದೆ ಜಾರಿ ಕುರಿತು ಹೋರಾಟ ಮಾಡುವುದಾಗಿ ಘೋಷಿಸುತ್ತಲೇ, ನಂದೆಲ್ಲಿ ಇಡಲಿ ಎಂಬಂತೆ ಮಧ್ಯಪ್ರವೇಶಿಸಿದ ರಾಹುಲ್ ಗಾಂಧಿಯವರು ಪ್ರಧಾನಿ ನರೇಂದ್ರ ಮೋದಿಯವರೇ, ನಾಲ್ಕು ವರ್ಷವಾದರೂ ಜನಲೋಕಪಾಲ ಮಸೂದೆ ಏಕೆ ಜಾರಿಗೊಳಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. ತಾವೇನು, ತಮ್ಮ ಸರ್ಕಾರ ಇದ್ದಾಗವೇನು ಜನಲೋಕಪಾಲ ಮಸೂದೆ ಜಾರಿಗೆ ತಾವೇ ಒತ್ತಾಯಿಸಿದವರು ಎಂಬಂತೆ ಮಾತನಾಡಿದ್ದಾರೆ. ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇಂಥ ಇಬ್ಬಂದಿತನಕ್ಕೆ, ಉಳುಕು ಮುಚ್ಚಿಕೊಳ್ಳುವ ಪ್ರಯತ್ನಕ್ಕೆ, ಮುಖವಾಡಕ್ಕೆ ಪರದೆ ಎಳೆಯುವ ವಿಫಲ ಯತ್ನಕ್ಕೆ ಏನೆನ್ನಬೇಕು ನೀವೇ ಹೇಳಿ?

ಅದು 2011. ಇದೇ ಅಣ್ಣಾ ಹಜಾರೆಯವರು ಜನಲೋಕಪಾಲ ಮಸೂದೆ ಜಾರಿಗಾಗಿ ಒತ್ತಾಯಿಸಿ ಅಣ್ಣಾ ಹಜಾರೆಯವರು ಉಪವಾಸ ಕುಳಿತಿದ್ದರು. ಇಡೀ ದೇಶಕ್ಕೆ ದೇಶವೇ ಅಣ್ಣಾ ಹಜಾರೆಯವರ ಪರ ನಿಂತಿತ್ತು. ಎಲ್ಲೆಡೆ ಬೆಂಬಲ ವ್ಯಕ್ತವಾಗಿತ್ತು. ಈಗ ಸುಬಗರಂತೆ ಮಾತನಾಡುತ್ತಿರುವ ರಾಹುಲ್ ಗಾಂಧಿಯವರ ತಾಯಿ, ಸೋನಿಯಾ ಗಾಂಧಿಯೇ ದೇಶವನ್ನು ಪರೋಕ್ಷವಾಗಿ ಆಳುತ್ತಿದ್ದರು, ಇವರ ಕೈಗೊಂಬೆಯಂತೆಯೇ ಇದ್ದ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರು.

ಆದರೆ ಕಾಂಗ್ರೆಸ್ ಸರ್ಕಾರ ಮಾತ್ರ ಅಣ್ಣಾ ಹಜಾರೆಯವರನ್ನು ಬಂಧಿಸಿತ್ತು. ಮಸೂದೆಗಾಗಿ ಹೋರಾಟ ನಡೆಸಿದ ಯೋಗಿ ಬಾಬಾ ರಾಮದೇವ್ ಅವರನ್ನೂ ಇದೇ ಕಾಂಗ್ರೆಸ್ ಸರ್ಕಾರ ಬಂಧನಕ್ಕೆ ಆದೇಶಿಸಿತ್ತು. ಆಗೆಲ್ಲ ಬಾಯಿಯಲ್ಲಿ ಕಡುಬು ತುರುಕಿಕೊಂಡಂತಿದ್ದ ರಾಹುಲ್ ಗಾಂಧಿ, ಮಸೂದೆ ಜಾರಿ ಪರ ನಿಲ್ಲದ ರಾಹುಲ್ ಗಾಂಧಿ ಈಗ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದಾರೆ.

ಖಂಡಿತವಾಗಿಯೂ ಮಸೂದೆ ಜಾರಿಗಾಗಿ ಒತ್ತಾಯಿಸುವ ಎಲ್ಲ ಹಕ್ಕೂ ಅಣ್ಣಾ ಹಜಾರೆಯವರಿಗೆ. ಅವರು ಉಪವಾಸ ಕೂರಲೂ ಹಕ್ಕು ಹೊಂದಿದ್ದಾರೆ. ಆದರೆ ತಮ್ಮ ಸರ್ಕಾರವಿದ್ದಾಗ ಸುಮ್ಮನಿದ್ದ ರಾಹುಲ್ ಗಾಂಧಿ ಈಗ ಪ್ರಧಾನಿ ಮೋದಿ ಅವರನ್ನು ಟೀಕಿಸುವ ಹಿಂದೆ ಯಾವ ನೈತಿಕತೆ ಇದೆ? ಇಬ್ಬಂದಿತನ ಎಂದರೆ ಇದೇ ಅಲ್ಲವೇ?

 

  • Share On Facebook
  • Tweet It


- Advertisement -


Trending Now
ಕೇರಳ ಸ್ಟೋರಿ ಸಿನೆಮಾ ಕಾಲ್ಪನಿಕ ಕಥೆ ಅಲ್ಲ!!
ವಿಶಾಲ್ ಗೌಡ ಕುಶಾಲನಗರ May 31, 2023
ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
ವಿಶಾಲ್ ಗೌಡ ಕುಶಾಲನಗರ May 30, 2023
Leave A Reply

  • Recent Posts

    • ಕೇರಳ ಸ್ಟೋರಿ ಸಿನೆಮಾ ಕಾಲ್ಪನಿಕ ಕಥೆ ಅಲ್ಲ!!
    • ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
    • ಗ್ಯಾರಂಟಿ ಇಲ್ಲದ ಸರಕಾರದಿಂದ ದ್ವೇಷದ ಆಡಳಿತ: ವೇದವ್ಯಾಸ್ ಕಾಮತ್
    • ನಾವು ಬೇರೆ ಧರ್ಮದ ಯುವಕರ ಜಾಲಕ್ಕೆ ಬಲಿಯಾಗಲ್ಲ!
    • ಗೆದ್ದ ಕೂಡಲೇ ಕಾಂಗ್ರೆಸ್ಸಿಗರ ದಬ್ಬಾಳಿಕೆ ಶುರು!!
    • ಮೇ ಮಳೆ ತೆರೆದಿಟ್ಟಿತ್ತು ಹಣೆಬರಹ!
    • ಚುನಾವಣೆ ಪ್ರಜಾಪ್ರಭುತ್ವದ ಹಬ್ಬ ಬೆಟ್ಟಿಂಗ್ ನವರಿಗೆ!!
    • ಕೇರಳ ಸ್ಟೋರಿ ಮೇ ಮೇರಾ ಅಬ್ದುಲ್ಲಾ ಅಲಗ್ ಹೇ?
    • ಪ್ರಣಾಳಿಕೆಯಲ್ಲಿ ಪಾರ್ಕಿಂಗ್ ಸಮಸ್ಯೆ ಪರಿಹರಿಸಲು ಮೂರು ಸೂತ್ರ!!
    • ಫೇಕ್ ನ್ಯೂಸ್ ಜಮಾನದಲ್ಲಿ ಸಂತೋಷ್ ವಿರುದ್ಧ ಷಡ್ಯಂತ್ರ!!
  • Popular Posts

    • 1
      ಕೇರಳ ಸ್ಟೋರಿ ಸಿನೆಮಾ ಕಾಲ್ಪನಿಕ ಕಥೆ ಅಲ್ಲ!!
    • 2
      ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
    • 3
      ಗ್ಯಾರಂಟಿ ಇಲ್ಲದ ಸರಕಾರದಿಂದ ದ್ವೇಷದ ಆಡಳಿತ: ವೇದವ್ಯಾಸ್ ಕಾಮತ್
    • 4
      ನಾವು ಬೇರೆ ಧರ್ಮದ ಯುವಕರ ಜಾಲಕ್ಕೆ ಬಲಿಯಾಗಲ್ಲ!
    • 5
      ಗೆದ್ದ ಕೂಡಲೇ ಕಾಂಗ್ರೆಸ್ಸಿಗರ ದಬ್ಬಾಳಿಕೆ ಶುರು!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search