ಸಿದ್ದರಾಮಯ್ಯನವರೇ ಏಳಿ ಎದ್ದೇಳಿ… ನಿದ್ದೆ ಮಾಡಿದ್ದು ಸಾಕು
Posted On January 10, 2018
0
ಉಡುಪಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತದಲ್ಲಿ ಅಷ್ಟೇ ಅಲ್ಲ, ವರ್ತನೆಯಲ್ಲೂ ನಿಯಂತ್ರಣ ಕಳೆದುಕೊಂಡಿದ್ದಾರೆ ಎಂಬುದಕ್ಕೆ ಬಹಿರಂಗ ಸಮಾವೇಶದಲ್ಲಿ ನಡೆದ ಈ ಘಟನೆಯೇ ಸಾಕ್ಷಿಯಾಗಿದೆ. ಒಂದೆಡೆ ಜೈ ಕಾರ ಕೂಗುವ ಕಾಂಗ್ರೆಸ್ ಕಾರ್ಯಕರ್ತರು, ಮತ್ತೊಂದೆಡೆ ಭರ್ಜರಿ ಭಾಷಣ ಬೀಗಿಯುತ್ತಿರುವ ಸಚಿವರು ಇದೆಲ್ಲದರ ಮಧ್ಯೆ ಮಾನ್ಯ ಮುಖ್ಯಮಂತ್ರಿಗಳು ನಿದ್ದೆಗೆ ಜಾರಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಕಾರ್ಯಕ್ರಮದಲ್ಲಿ ಸಚಿವ ಪ್ರಮೋದ್ ಮದ್ವರಾಜ್ ವೇದಿಕೆ ಮೇಲೆ ತಮ್ಮ ಕ್ಷೇತ್ರ ಸಮಸ್ಯೆಗಳನ್ನು ಸಿದ್ದರಾಮಯ್ಯನವರ ಮುಂದೆ ಹೇಳುವಾಗ ಸಿದ್ದರಾಮಯ್ಯ ಗಡದ್ದಾಗಿ ನಿದ್ದೇ ಹೊಡೆಯುತ್ತಿದ್ದರು. ಸರ್ ಸರ್.. ನಮಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ನೀಡಿ ಸರ್ ಎಂದು ಮೂರು ಬಾರಿ ಕೂಗಿದಾಗ ಎಚ್ಚೆತ್ತ ಸಿದ್ದರಾಮಯ್ಯ. ಹೂ.. ಆಯ್ತು .. ಆಯ್ತು ಎಂದು ಮತ್ತೆ ತಲೆ ಕೆಳಗೆ ಮಾಡಿದ್ದಾರೆ.
Trending Now
ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
January 12, 2026









