• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಕೇರಳ ಮದರಸಾಗಳಲ್ಲಿ ವಹಾಬಿಸಂ ಪಾಠ: ಕುಟುಕು ಕಾರ್ಯಾಚರಣೆಯಿಂದ ಬಹಿರಂಗ

TNN Correspondent Posted On January 11, 2018


  • Share On Facebook
  • Tweet It

ತಿರುವನಂತಪುರ: ಕೇರಳದಲ್ಲಿ ಲವ್ ಜಿಹಾದ್ ಪ್ರಕರಣ ಹಾಗೂ ಕ್ರಿಶ್ಚಿಯನ್ನರ ಮತಾಂತರಗಳು ದೇಶವನ್ನೇ ಬೆಚ್ಚಿಬೀಳುತ್ತಿರುವ ಬೆನ್ನಲ್ಲೇ ಮತ್ತೊಂದು ಭಯಂಕರ ಅಂಶ ಬಹಿರಂಗವಾಗಿದ್ದು, ಕೇರಳದಲ್ಲಿರುವ ಮದರಸಾಗಳಲ್ಲಿ ವಹಬಿಸಂ ಹಾಗೂ ಫ್ಯಾಸಿಸ್ಟ್ ಮನೋಭಾವನೆ ಕುರಿತು ಬೋಧನೆ ಮಾಡಲಾಗುತ್ತಿದೆ ಎಂದು ಖಾಸಗಿ ಮಾಧ್ಯಮಗಳು ನಡೆಸಿದ ಕಾರ್ಯಾಚರಣೆಯಿಂದ ತಿಳಿದು ಬಂದಿದೆ.

ಹೌದು, ಸೌದಿ ಅರೇಬಿಯಾ ಸೇರಿ ಹಲವು ಗಲ್ಫ್ ರಾಷ್ಟ್ರಗಳು ಕೇರಳದ ಮದರಸಾಗಳಿಗೆ ಹಣ ಪೂರೈಸುತ್ತಿದ್ದು, ಮುಸ್ಲಿಮರ ಮನಸ್ಥಿತಿ ಬದಲಾಯಿಸಲು ಹಾಗೂ ಹಾಗೆ ಬದಲಾಯಿಸಿ ಹಿಂದೂಗಳ ಮತಾಂತರಕ್ಕೆ ಅಣಿ ಮಾಡುವುದು ಈ ಬೋಧನೆಯ ಉದ್ದೇಶವಾಗಿದೆ ಎಂದು ಕುಟುಕು ಕಾರ್ಯಚರಣೆ ವೇಳೆ ಬಹಿರಂಗವಾಗಿದೆ.

ಇದಕ್ಕಾಗಿ ಕೇರಳದ ಹಲವು ಮದರಸಾಗಳಲ್ಲಿ ಕಾರ್ಯಾಚರಣೆ ನಡೆಸಿದ್ದು, ಬಹುತೇಕ ಮದರಸಾಗಳು ಧರ್ಮ ಬೋಧನೆ ಹಾಗೂ ಕುರಾನ್ ನ ಸದ್ವಿಚಾರ ಬೋಧಿಸದೆ ವಿಕ್ಷಿಪ್ತ ಮನಸ್ಥಿತಿಯನ್ನು ಬೋಧಿಸುತ್ತಿವೆ ಎಂದು ತಿಳಿದುಬಂದಿದೆ.

ನಾವು ಸಾರ್ವಜನಿಕವಾಗಿ ಖಲೀಫನ ಬಗ್ಗೆ ಮಾತನಾಡಿದರೆ ನಮ್ಮ ಸುತ್ತ ಇರುವ ಹಿಂದೂಗಳು ನಮ್ಮನ್ನು ಐಸಿಸ್ ಸಂಘಟನೆ ಕಾರ್ಯಕರ್ತರು ಎಂದೇ ಭಾವಿಸುತ್ತಾರೆ. ಹಾಗಾಗಿ ನಾವು ಪರೋಕ್ಷವಾಗಿ, ಮಕ್ಕಳ ಹೃದಯದಲ್ಲಿ ಸಣ್ಣ ಪ್ರಮಾಣದ ಮೂಲಕ ಖಲೀಫನ ತತ್ವ, ವಹಾಬಿಸಂ ಬಿತ್ತುತ್ತೇವೆ ಎಂದು ಕಾರ್ಯಾಚರಣೆ ವೇಳೆ ಕೊಝಿಕೋಡ್ ನ ಕರುಣಾ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಮೊಹಮ್ಮದ್ ಬಷೀರ್ ಒಪ್ಪಿಕೊಂಡಿದ್ದು, ದೇಶವನ್ನೇ ಬೆಚ್ಚಿಬೀಳಿಸುವಂತಿದೆ.

ಅಲ್ಲದೆ ಸೌದಿ ಅರೇಬಿಯಾ ಸೇರಿ ಗಲ್ಫ್ ರಾಷ್ಟ್ರಗಳು ಹೇಗೆ ಹಣ ಸಂದಾಯ ಮಾಡುತ್ತವೆ, ಆ ಮೂಲಕ ಮನಸ್ಥಿತಿ ಬದಲಾವಣೆ ಹಾಗೂ ಮತಾಂತರವನ್ನು ಹೇಗೆ ಪ್ರಚೋದಿಸುತ್ತವೆ ಎಂಬ ಕುರಿತು ಸಹ ಕಾರ್ಯಾಚರಣೆಯಲ್ಲಿ ಬಹಿರಂಗವಾಗಿದೆ.

ಒಟ್ಟಿನಲ್ಲಿ ಲವ್ ಜಿಹಾದ್ ಹಾಗೂ ಮತಾಂತರದಿಂದ ತತ್ತರಿಸಿ ಹೋಗಿದ್ದ ಕೇರಳದಲ್ಲಿ ಈಗ ಮದರಸಾಗಳು ವಹಾಬಿಸಂ ಹಾಗೂ ಫ್ಯಾಸಿಸ್ಟ್ ಮನೋಭಾವನೆ ಬಿತ್ತಿ ರಾಜ್ಯವನ್ನು ಹಾಳು ಮಾಡುತ್ತಿರುವುದು ದಿಟವಾಗಿದೆ. ಇಷ್ಟಾದರೂ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾತ್ರ ಕಣ್ಣು ಮುಚ್ಚಿಕೊಂಡು ಕುಳಿತಿದ್ದಾರೆ.

  • Share On Facebook
  • Tweet It


- Advertisement -


Trending Now
ಮೇಲಿನವರು ಏನೂ ಹೇಳಬಹುದು, ಅನುಷ್ಟಾನ ಆಗಬೇಕಲ್ಲ!
Tulunadu News July 2, 2022
ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
Tulunadu News July 1, 2022
Leave A Reply

  • Recent Posts

    • ಮೇಲಿನವರು ಏನೂ ಹೇಳಬಹುದು, ಅನುಷ್ಟಾನ ಆಗಬೇಕಲ್ಲ!
    • ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
    • ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?
    • ಕನ್ನಯ್ಯ ಹತ್ಯೆ ಮಾಡಿದವರಿಗೆ ಮೂರೇ ತಿಂಗಳಲ್ಲಿ ಗಲ್ಲಾಗಬಹುದಾ?
    • ರಾಹುಲ್ ಕಚೇರಿ ಧ್ವಂಸವಾದರೂ ಕಾಂಗ್ರೆಸ್ ಪ್ರತಿಭಟಿಸಲಿಲ್ಲ, ಯಾಕೆ?
    • ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
    • ಮಂಗಳೂರಿನಲ್ಲಿ ಐಲ್ಯಾಂಡ್ ಪ್ಲಾನ್ ಹಾಕಿದ ಬುದ್ಧಿವಂತ ಯಾರು?
    • ಉತ್ತರ ಭಾರತದಲ್ಲಿ ಸೇನೆಗೆ ಸೇರಿಸುವುದು ಉದ್ಯಮ!!
  • Popular Posts

    • 1
      ಮೇಲಿನವರು ಏನೂ ಹೇಳಬಹುದು, ಅನುಷ್ಟಾನ ಆಗಬೇಕಲ್ಲ!
    • 2
      ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
    • 3
      ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?
    • 4
      ಕನ್ನಯ್ಯ ಹತ್ಯೆ ಮಾಡಿದವರಿಗೆ ಮೂರೇ ತಿಂಗಳಲ್ಲಿ ಗಲ್ಲಾಗಬಹುದಾ?
    • 5
      ರಾಹುಲ್ ಕಚೇರಿ ಧ್ವಂಸವಾದರೂ ಕಾಂಗ್ರೆಸ್ ಪ್ರತಿಭಟಿಸಲಿಲ್ಲ, ಯಾಕೆ?


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search