• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಜಸ್ಟೀಸ್ ಲೋಯಾ ಪುತ್ರನೇ ನನ್ನ ತಂದೆ ಹೃದಯಾಘಾತದಿಂದ ಸತ್ತರು ಎಂದ ಮೇಲೆ ತನಿಖೆ ಉಸಾಬರಿ ಇವರಿಗೇಕೆ?

ರವೀಂದ್ರ ಶೆಣೈ ಉಡುಪಿ Posted On January 16, 2018


  • Share On Facebook
  • Tweet It

ಸಂತೋಷ್ ಕೋಲಿ ಅವರ ತಾಯಿ: ನನ್ನ ಮಗಳನ್ನು ಕೊಲೆ ಮಾಡಲಾಗಿದೆ.

ಎಡಬಿಡಂಗಿ ಗುಂಪು: ಇಲ್ಲ, ಕೊಲೆ ಅಲ್ಲ. ಸಹಜ ಸಾವು. ಇದರಲ್ಲಿ ರಾಜಕೀಯ ಮಾಡಬೇಡಿ. ಸುಮ್ಮನಿರಿ.

ಇಂಥಾದ್ದೇ ಮತ್ತೊಂದು ಪ್ರಕರಣ…

ನ್ಯಾಯಮೂರ್ತಿ ಲೋಯಾ ಅವರ ಮಗ: ನನ್ನ ತಂದೆಯದ್ದು ಸಹಜ ಸಾವು ಎಂಬುದರ ಬಗ್ಗೆ ನನಗೆ ಯಾವ ಅನುಮಾನವೂ ಇಲ್ಲ.

ಎಡಬಿಡಂಗಿ ತಂಡ: ನೀನ ಆರೆಸ್ಸೆಸ್ಸಿನವನು. ನಿನಗೇನೂ ಗೊತ್ತಿಲ್ಲ. ನಿನ್ನ ತಂದೆಯದ್ದು ಕೊಲೆ.

ಸೋಹ್ರಾಬುದ್ದೀನ್ ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಸೋಕಾಲ್ಡ್ ಬುದ್ಧಿ ಜೀವಿಗಳು, ಪ್ರಗತಿಪರರು, ಎಡಬಿಡಂಗಿಗಳ ವರ್ತನೆಯಲ್ಲಿ ಇಂಥಾದ್ದೊಂದು ವಾಸ್ತವ ಹಾಗೂ ಇವರ ಜನ್ಮಜಾಲಾಡುವ ಇಂಥಾದ್ದೊಂದು ಜೋಕ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಜಸ್ಟಿಸ್ ಲೋಯಾ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬ ಮೊದಲಿನಿಂದಲೂ ಹೇಳುತ್ತಿದೆ. ಮೊನ್ನೆಯೂ ನ್ಯಾಯಮೂರ್ತಿಗಳು ಪ್ರಕರಣದ ಕುರಿತು ತಗಾದೆ ತೆಗೆದಾಗ ಲೋಯಾ ಅವರ ಪುತ್ರನೇ ನನ್ನ ತಂದೆಯ ಸಾವಿನ ಕುರಿತು ಯಾವುದೇ ಶಂಕೆಯಿಲ್ಲ, ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಆದರೂ ಪ್ರಕರಣದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೆಸರಿರುವುದರಿಂದ ಹಾಗೂ ಅವರ ವಿರುದ್ಧ ಮಾತನಾಡಲು ಇರುವುದೊಂದು ಅಂಶವಿರುವುದರಿಂದ ಈ ಎಡಬಿಡಂಗಿಗಳ ತಂಡ ಹೀಗೆ ವರ್ತಿಸುತ್ತಿದ್ದಾರೆ.

ಲೋಯಾ ಮಗನೇ ತಂದೆ ಸಾವು ಸಹಜ ಎನ್ನುತ್ತಿದ್ದರೂ ಪತ್ರಕರ್ತೆ ಸಾಗರಿಕಾ ಘೋಸ್ ಅವರು ಲೋಯಾ ಗೆಳೆಯ ಉದಯ ಗವಾರೆ ಅವರು ಲೋಯಾ ಸಾವು ಪೂರ್ವಯೋಜಿತ ಕೊಲೆ ಎಂದಿದ್ದಾರೆ ಎಂದು ಟ್ವೀಟ್ ಮಾಡಿ ಸಾಮಾಜಿಕ ಜಾಲತಾಣಿಗರಿಂದ ಉಗಿಸಿಕೊಂಡಿದ್ದಾರೆ.

ಯಾವುದೇ ವ್ಯಕ್ತಿಯ ಸಾವು ಅಥವಾ ಅನುಮಾನಾಸ್ಪದ ಸಾವಿನ ಬಗ್ಗೆ ಅವರ ಕುಟುಂಬದವರಿಗಿಂತ ಬೇರೆ ಯಾರಿಗೂ ಗೊತ್ತಿರಲು ಸಾಧ್ಯವಿಲ್ಲ. ಲೋಯಾ ಪ್ರಕರಣದಲ್ಲೂ ಹಾಗೆಯೇ ಆಗಿದ್ದು. ಅವರ ವೈದ್ಯಕೀಯ ದಾಖಲೆ, ಅವರಿಗೆ ಇದ್ದ ಒಡನಾಟ ಎಲ್ಲವನ್ನು ನೋಡಿಯೇ ಕುಟುಂಬಸ್ಥರು ಲೋಯಾ ಅವರದ್ದು ಸಹಜ ಸಾವು ಎಂಬ ನಿರ್ಧಾರಕ್ಕೆ ಬಂದಿದೆ.

ಒಂದು ವೇಳೆ ಲೋಯಾ ಸಾವಿನ ಹಿಂದೆ ಪಿತೂರಿ ಇದ್ದರೆ, ಅವರಿಗಾರಾದರೂ ವೈರಿಗಳಿದ್ದರೆ, ಕುಟುಂಬಸ್ಥರೇ ಮುಂದೆ ಬಂದು ತನಿಖೆಯಾಗಲಿ ಎನ್ನುತ್ತಿದ್ದರು. ಅವರ್ಯಾಕೆ ಸಹಜ ಸಾವು ಎನ್ನುತ್ತಿದ್ದರು.

ಇಷ್ಟಾದರೂ ಈ ಬುದ್ಧಿಜೀವಿಗಳು ಪ್ರಕರಣದ ತನಿಖೆಯಾಗಲಿ, ತನಿಖೆಯಾಗಲಿ ಎಂದು ಬೊಬ್ಬೆ ಹಾಕುತ್ತಾರೆ. ಆದರೆ ಕರ್ನಾಟಕ, ಕೇರಳ ಸೇರಿ ಹಲವೆಡೆ ಹಿಂದೂಗಳ ಹತ್ಯೆಯಾದರೂ, ಯಾರ ವಿರುದ್ಧವೂ ಕ್ರಮ ಕೈಗೊಳ್ಳದಿದ್ದರೂ, ತನಿಖೆಯಾಗಲಿ ಎಂದು ಬಾಯಿಬಿಡಲ್ಲ ಇವರು. ಯಾಕೆಂದರೆ ಈ ಪ್ರಕರಣಗಳಲ್ಲಿ ಅಮಿತ್ ಶಾ ಹೆಸರು ಇಲ್ಲವಲ್ಲ!

 

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
ರವೀಂದ್ರ ಶೆಣೈ ಉಡುಪಿ May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
ರವೀಂದ್ರ ಶೆಣೈ ಉಡುಪಿ May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search