• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ಜಸ್ಟೀಸ್ ಲೋಯಾ ಪುತ್ರನೇ ನನ್ನ ತಂದೆ ಹೃದಯಾಘಾತದಿಂದ ಸತ್ತರು ಎಂದ ಮೇಲೆ ತನಿಖೆ ಉಸಾಬರಿ ಇವರಿಗೇಕೆ?

ರವೀಂದ್ರ ಶೆಣೈ ಉಡುಪಿ Posted On January 16, 2018
0


0
Shares
  • Share On Facebook
  • Tweet It

ಸಂತೋಷ್ ಕೋಲಿ ಅವರ ತಾಯಿ: ನನ್ನ ಮಗಳನ್ನು ಕೊಲೆ ಮಾಡಲಾಗಿದೆ.

ಎಡಬಿಡಂಗಿ ಗುಂಪು: ಇಲ್ಲ, ಕೊಲೆ ಅಲ್ಲ. ಸಹಜ ಸಾವು. ಇದರಲ್ಲಿ ರಾಜಕೀಯ ಮಾಡಬೇಡಿ. ಸುಮ್ಮನಿರಿ.

ಇಂಥಾದ್ದೇ ಮತ್ತೊಂದು ಪ್ರಕರಣ…

ನ್ಯಾಯಮೂರ್ತಿ ಲೋಯಾ ಅವರ ಮಗ: ನನ್ನ ತಂದೆಯದ್ದು ಸಹಜ ಸಾವು ಎಂಬುದರ ಬಗ್ಗೆ ನನಗೆ ಯಾವ ಅನುಮಾನವೂ ಇಲ್ಲ.

ಎಡಬಿಡಂಗಿ ತಂಡ: ನೀನ ಆರೆಸ್ಸೆಸ್ಸಿನವನು. ನಿನಗೇನೂ ಗೊತ್ತಿಲ್ಲ. ನಿನ್ನ ತಂದೆಯದ್ದು ಕೊಲೆ.

ಸೋಹ್ರಾಬುದ್ದೀನ್ ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಸೋಕಾಲ್ಡ್ ಬುದ್ಧಿ ಜೀವಿಗಳು, ಪ್ರಗತಿಪರರು, ಎಡಬಿಡಂಗಿಗಳ ವರ್ತನೆಯಲ್ಲಿ ಇಂಥಾದ್ದೊಂದು ವಾಸ್ತವ ಹಾಗೂ ಇವರ ಜನ್ಮಜಾಲಾಡುವ ಇಂಥಾದ್ದೊಂದು ಜೋಕ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಜಸ್ಟಿಸ್ ಲೋಯಾ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬ ಮೊದಲಿನಿಂದಲೂ ಹೇಳುತ್ತಿದೆ. ಮೊನ್ನೆಯೂ ನ್ಯಾಯಮೂರ್ತಿಗಳು ಪ್ರಕರಣದ ಕುರಿತು ತಗಾದೆ ತೆಗೆದಾಗ ಲೋಯಾ ಅವರ ಪುತ್ರನೇ ನನ್ನ ತಂದೆಯ ಸಾವಿನ ಕುರಿತು ಯಾವುದೇ ಶಂಕೆಯಿಲ್ಲ, ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಆದರೂ ಪ್ರಕರಣದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೆಸರಿರುವುದರಿಂದ ಹಾಗೂ ಅವರ ವಿರುದ್ಧ ಮಾತನಾಡಲು ಇರುವುದೊಂದು ಅಂಶವಿರುವುದರಿಂದ ಈ ಎಡಬಿಡಂಗಿಗಳ ತಂಡ ಹೀಗೆ ವರ್ತಿಸುತ್ತಿದ್ದಾರೆ.

ಲೋಯಾ ಮಗನೇ ತಂದೆ ಸಾವು ಸಹಜ ಎನ್ನುತ್ತಿದ್ದರೂ ಪತ್ರಕರ್ತೆ ಸಾಗರಿಕಾ ಘೋಸ್ ಅವರು ಲೋಯಾ ಗೆಳೆಯ ಉದಯ ಗವಾರೆ ಅವರು ಲೋಯಾ ಸಾವು ಪೂರ್ವಯೋಜಿತ ಕೊಲೆ ಎಂದಿದ್ದಾರೆ ಎಂದು ಟ್ವೀಟ್ ಮಾಡಿ ಸಾಮಾಜಿಕ ಜಾಲತಾಣಿಗರಿಂದ ಉಗಿಸಿಕೊಂಡಿದ್ದಾರೆ.

ಯಾವುದೇ ವ್ಯಕ್ತಿಯ ಸಾವು ಅಥವಾ ಅನುಮಾನಾಸ್ಪದ ಸಾವಿನ ಬಗ್ಗೆ ಅವರ ಕುಟುಂಬದವರಿಗಿಂತ ಬೇರೆ ಯಾರಿಗೂ ಗೊತ್ತಿರಲು ಸಾಧ್ಯವಿಲ್ಲ. ಲೋಯಾ ಪ್ರಕರಣದಲ್ಲೂ ಹಾಗೆಯೇ ಆಗಿದ್ದು. ಅವರ ವೈದ್ಯಕೀಯ ದಾಖಲೆ, ಅವರಿಗೆ ಇದ್ದ ಒಡನಾಟ ಎಲ್ಲವನ್ನು ನೋಡಿಯೇ ಕುಟುಂಬಸ್ಥರು ಲೋಯಾ ಅವರದ್ದು ಸಹಜ ಸಾವು ಎಂಬ ನಿರ್ಧಾರಕ್ಕೆ ಬಂದಿದೆ.

ಒಂದು ವೇಳೆ ಲೋಯಾ ಸಾವಿನ ಹಿಂದೆ ಪಿತೂರಿ ಇದ್ದರೆ, ಅವರಿಗಾರಾದರೂ ವೈರಿಗಳಿದ್ದರೆ, ಕುಟುಂಬಸ್ಥರೇ ಮುಂದೆ ಬಂದು ತನಿಖೆಯಾಗಲಿ ಎನ್ನುತ್ತಿದ್ದರು. ಅವರ್ಯಾಕೆ ಸಹಜ ಸಾವು ಎನ್ನುತ್ತಿದ್ದರು.

ಇಷ್ಟಾದರೂ ಈ ಬುದ್ಧಿಜೀವಿಗಳು ಪ್ರಕರಣದ ತನಿಖೆಯಾಗಲಿ, ತನಿಖೆಯಾಗಲಿ ಎಂದು ಬೊಬ್ಬೆ ಹಾಕುತ್ತಾರೆ. ಆದರೆ ಕರ್ನಾಟಕ, ಕೇರಳ ಸೇರಿ ಹಲವೆಡೆ ಹಿಂದೂಗಳ ಹತ್ಯೆಯಾದರೂ, ಯಾರ ವಿರುದ್ಧವೂ ಕ್ರಮ ಕೈಗೊಳ್ಳದಿದ್ದರೂ, ತನಿಖೆಯಾಗಲಿ ಎಂದು ಬಾಯಿಬಿಡಲ್ಲ ಇವರು. ಯಾಕೆಂದರೆ ಈ ಪ್ರಕರಣಗಳಲ್ಲಿ ಅಮಿತ್ ಶಾ ಹೆಸರು ಇಲ್ಲವಲ್ಲ!

 

0
Shares
  • Share On Facebook
  • Tweet It




Trending Now
ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
ರವೀಂದ್ರ ಶೆಣೈ ಉಡುಪಿ November 21, 2025
ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
ರವೀಂದ್ರ ಶೆಣೈ ಉಡುಪಿ November 20, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
  • Popular Posts

    • 1
      ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • 2
      ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • 3
      ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!

  • Privacy Policy
  • Contact
© Tulunadu Infomedia.

Press enter/return to begin your search