• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಜರ್ಮನಿಯಲ್ಲಿ ಹಿಂದೂ ದೇವಾಲಯ ನಿರ್ಮಾಣ ಮಾಡಲು ಆಶೀರ್ವಾದ ಮಾಡಿತು ಗೋವು, ನಮ್ಮವರಿಗೆ ಗೋವೆಂದರೆ ನೋವು!

TNN Correspondent Posted On January 22, 2018


  • Share On Facebook
  • Tweet It

ಬರ್ಲಿನ್: ಗೋವು ಎಂದರೆ ಭಾರತದಲ್ಲಿ ಮಾತ್ರವಲ್ಲ, ಅನ್ಯ ದೇಶಗಳಲ್ಲೂ ಪೂಜ್ಯನೀಯ ಭಾವನೆಯಿಂದ ನೋಡುತ್ತಾರೆ ಎಂಬುದು ಸಾಬೀತಾಗಿದೆ.

ಜರ್ಮನಿಯ ಬ್ರೆಮೆನ್ ಎಂಬ ಪ್ರದೇಶದಲ್ಲಿ ಹಿಂದೂಗಳು ದೇವಾಲಯ ಕಟ್ಟಲು ಗೋವಿನ ಆಶೀರ್ವಾದ ಪಡೆದಿದ್ದು, ದೇವಾಲಯ ನಿರ್ಮಾಣಕ್ಕೆ ಹಸು ಅನುಮತಿ ನೀಡಿದೆ ಎಂದೇ ಭಾವಿಸಲಾಗಿದೆ.

ಹೌದು, ಜರ್ಮನಿಯ ಈ ಪ್ರದೇಶದಲ್ಲಿ ಸುಮಾರು 300 ಹಿಂದೂ ಕುಟುಂಬಗಳಿದ್ದು, ಹಿಂದೂ ದೇವಾಲಯ ಕಟ್ಟಲು ತೀರ್ಮಾನಿಸಿದ್ದಾರೆ. ಅದಕ್ಕಾಗಿ ಜಾಗವೊಂದನ್ನು ಸಹ ನಿಗದಿಪಡಿಸಿದ್ದು, ಸಂಪ್ರದಾಯದಂತೆ ಗೋವಿನ ಅನುಮತಿ ಪಡೆದಿದ್ದಾರೆ. ಅದಕ್ಕಾಗಿ ರೈತ ಫ್ರ್ಯಾಂಕ್ ಇಮ್ಹಾಫ್ ಎಂಬುವವರ ಮಾಡೆಲ್ ಎಂಬ ಗೋವನ್ನು ದೇವಾಲಯ ನಿರ್ಮಾಣ ಮಾಡಲು ನಿಗದಿಪಡಿಸಿರುವ ಜಾಗಕ್ಕೆ ಕರೆದುಕೊಂಡು ಬಂದು ಆಶೀರ್ವಾದ ಪಡೆದಿದ್ದಾರೆ. ನಂಬಿಕೆಯ ಪ್ರಕಾರ, ಗೋವು ದೇವಾಲಯ ನಿರ್ಮಾಣ ಮಾಡುವ ಸ್ಥಳದಲ್ಲಿ ಕೆಲಹೊತ್ತು ನಿಂತರೆ ದೇವಾಲಯ ನಿರ್ಮಾಣಕ್ಕೆ ಅನುಮತಿ ಸಿಕ್ಕಿದೆ ಎಂದು, ಹಾಗೂ ನಿಲ್ಲದಿದ್ದರೆ ಬೇಡ ಎಂದು ಅರ್ಥ. ಅದರಂತೆ ಸ್ಥಳದಲ್ಲಿ ಮಾಡೆಲ್ ಕೆಲಹೊತ್ತು ನಿಂತಿದ್ದು, ದೇವಾಲಯ ನಿರ್ಮಾಣಕ್ಕೆ ಅನುಮತಿ ನೀಡಿದೆ ಎಂದೇ ನಂಬಲಾಗಿದೆ.

ದೇವಾಲಯ ನಿರ್ಮಿಸಲು ಗೋವು ಅನುಮತಿ ನೀಡಿದೆ. ಈ ಪ್ರಾಶಸ್ತ್ಯವಾದ ಸ್ಥಳದಲ್ಲಿ ನಾವು ಹಿಂದೂ ದೇವಾಲಯ ನಿರ್ಮಿಸುತ್ತೇವೆ ಎಂದು ಹಿಂದೂಗಳ ಮುಖಂಡ ಪದ್ಮನಾಥನ್ ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಭಾರತೀಯರೂ ಸೇರಿ ಸುಮಾರು 10 ಸಾವಿರ ಹಿಂದೂಗಳು ವಾಸಿಸುತ್ತಾರೆ.

ವಿದೇಶದಲ್ಲೂ ಗೋವು ಎಂದರೆ ಪೂಜ್ಯನೀಯ ಭಾವನೆಯಿದ್ದು, ದುರದೃಷ್ಟವಶಾತ್ ಭಾರತದಲ್ಲಿ ಮಾತ್ರ ಗೋವು ಎಂದರೆ ತಿನ್ನುವ ಮಾಂಸ ಎಂದೇ ಭಾವಿಸುವವರೂ ಇದ್ದಾರೆ.

  • Share On Facebook
  • Tweet It


- Advertisement -


Trending Now
ನಾವು ಬೇರೆ ಧರ್ಮದ ಯುವಕರ ಜಾಲಕ್ಕೆ ಬಲಿಯಾಗಲ್ಲ!
Tulunadu News May 27, 2023
ಗೆದ್ದ ಕೂಡಲೇ ಕಾಂಗ್ರೆಸ್ಸಿಗರ ದಬ್ಬಾಳಿಕೆ ಶುರು!!
Tulunadu News May 25, 2023
Leave A Reply

  • Recent Posts

    • ನಾವು ಬೇರೆ ಧರ್ಮದ ಯುವಕರ ಜಾಲಕ್ಕೆ ಬಲಿಯಾಗಲ್ಲ!
    • ಗೆದ್ದ ಕೂಡಲೇ ಕಾಂಗ್ರೆಸ್ಸಿಗರ ದಬ್ಬಾಳಿಕೆ ಶುರು!!
    • ಮೇ ಮಳೆ ತೆರೆದಿಟ್ಟಿತ್ತು ಹಣೆಬರಹ!
    • ಚುನಾವಣೆ ಪ್ರಜಾಪ್ರಭುತ್ವದ ಹಬ್ಬ ಬೆಟ್ಟಿಂಗ್ ನವರಿಗೆ!!
    • ಕೇರಳ ಸ್ಟೋರಿ ಮೇ ಮೇರಾ ಅಬ್ದುಲ್ಲಾ ಅಲಗ್ ಹೇ?
    • ಪ್ರಣಾಳಿಕೆಯಲ್ಲಿ ಪಾರ್ಕಿಂಗ್ ಸಮಸ್ಯೆ ಪರಿಹರಿಸಲು ಮೂರು ಸೂತ್ರ!!
    • ಫೇಕ್ ನ್ಯೂಸ್ ಜಮಾನದಲ್ಲಿ ಸಂತೋಷ್ ವಿರುದ್ಧ ಷಡ್ಯಂತ್ರ!!
    • ಕಾಶ್ಮೀರಿ ಫೈಲ್ಸ್ ಚರಿತ್ರೆ, ಕೇರಳ ಸ್ಟೋರಿ ವರ್ತಮಾನ!!
    • ಕಾಂಗ್ರೆಸ್ ಬಾಯಿಗೆ ಬಂದ ತುತ್ತನ್ನು ಮೈಮೇಲೆ ಚೆಲ್ಲಿಕೊಂಡಿದೆ!!
    • ಕಾಂಗ್ರೆಸ್ಸಿಗರೇ ಕ್ಯಾಲ್ಕುಲೇಟರ್ ನಲ್ಲಿ ಲೆಕ್ಕ ಹಾಕಿ ಘೋಷಣೆ ಕೂಗಿ!!
  • Popular Posts

    • 1
      ನಾವು ಬೇರೆ ಧರ್ಮದ ಯುವಕರ ಜಾಲಕ್ಕೆ ಬಲಿಯಾಗಲ್ಲ!
    • 2
      ಗೆದ್ದ ಕೂಡಲೇ ಕಾಂಗ್ರೆಸ್ಸಿಗರ ದಬ್ಬಾಳಿಕೆ ಶುರು!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search