• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ನರೇಂದ್ರ ಮೋದಿ ಅವರು 56 ಇಂಚಿನ ಎದೆಯನ್ನು ಯಾರ್ಯಾರ ಎದುರು ತೋರಿಸಿದ್ದಾರೆ ಗೊತ್ತಾ ಓವೈಸಿ?

ವಿಶ್ವನಾಥ್ ಶೆಟ್ಟಿ ಮಂಗಳೂರು Posted On January 26, 2018
0


0
Shares
  • Share On Facebook
  • Tweet It

ಅಸಾದುದ್ದೀನ್ ಓವೈಸಿ

ಮಮತಾ ಬ್ಯಾನರ್ಜಿ

ಸೋನಿಯಾ ಗಾಂಧಿ

ರಾಹುಲ್ ಗಾಂಧಿ

ಲಾಲೂ ಪ್ರಸಾದ್ ಯಾದವ್

ಮಲ್ಲಿಕಾರ್ಜುನ ಖರ್ಗೆ

ಸಿದ್ದರಾಮಯ್ಯ

ಜಿಗ್ನೇಶ್ ಮೇವಾನಿ

ಹಾರ್ದಿಕ್ ಪಟೇಲ್

ಅರವಿಂದ್ ಕೇಜ್ರಿವಾಲ್…

ಭಾರತದಲ್ಲಿ ಈ ಪಟ್ಟಿಗೆ ತುಂಬ ಜನ ಇದ್ದಾರೆ. ಇವರೆಲ್ಲರ ನಿತ್ಯ ಹಾಗೂ ಒಂದೇ ಕಾಯಕ. ಪ್ರಧಾನಿ ನರೇಂದ್ರ ಮೋದಿ ಅವರನ್ನು ತೆಗಳುವುದು. ಇವರು ಮೋದಿಯವರನ್ನು ತೆಗಳದಿದ್ದರೆ ಉಂಡ ಅನ್ನ ಕರಗುವುದಿಲ್ಲ, ನಿದ್ದೆ ಬರುವುದಿಲ್ಲ ಎಂಬುವಷ್ಟರ ಮಟ್ಟಿಗೆ ಸುಖಾಸುಮ್ಮನೆ ಟೀಕೆಗೆ ಒಗ್ಗಿಕೊಂಡಿದ್ದಾರೆ ಹಾಗೂ ಅದನ್ನೇ ಕೆಲಸ, ರಾಜಕಾರಣವನ್ನಾಗಿ ಮಾಡಿಕೊಂಡಿದ್ದಾರೆ.

ಇವರೆಲ್ಲರಿಗೂ ಮುಖ್ಯಸ್ಥರಂತಿರುವ ಸಂಸದ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಎಂದಿನ ನಿತ್ಯ ಕಾಯಕ ಮುಂದುವರಿಸಿದ್ದು, “ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 56 ಇಂಚಿನ ಎದೆಯನ್ನು ಕೇವಲ ಮುಸ್ಲಿಮರ ಎದುರು ಮಾತ್ರ ಪ್ರದರ್ಶಿಸುತ್ತಾರೆ. ಸಂಸತ್ತಿನಲ್ಲಿ ಮುಸ್ಲಿಂ ಸಂಸದರ ಅಭಿಪ್ರಾಯ ಕೇಳದೆ ತ್ರಿವಳಿ ತಲಾಖ್ ಜಾರಿಗೊಳಿಸಿದ್ದಾರೆ” ಎಂದು ಹೇಳಿಕೆ ನೀಡಿದ್ದಾರೆ. ರಜಪೂತರ ಕರ್ಣಿ ಸೇನಾ ಪ್ರತಿಭಟನೆ ಟೀಕಿಸುವ ಭರದಲ್ಲಿ ಮೋದಿ ಅವರನ್ನು ಟೀಕಿಸಿದ್ದಾರೆ.

ಹಾಗಾದರೆ ಪ್ರಧಾನಿ ನರೇಂದ್ರ ಮೋದಿ ಅವರು ಮುಸ್ಲಿಮರ ವಿರೋಧಿಯೇ? ಮುಸ್ಲಿಮರ ಎದುರು ಮಾತ್ರ ಮೋದಿ ತಮ್ಮ ಶೌರ್ಯ ಪ್ರದರ್ಶಿಸಿದ್ದಾರೆಯೇ? ತ್ರಿವಳಿ ತಲಾಖ್ ವಿರುದ್ಧ ಕಾನೂನು ರಚಿಸಲು ಲೋಕಸಭೆಯಲ್ಲಿ ಮಸೂದೆ ಅಂಗೀಕಾರ ಪಡೆದಿದ್ದು ಮುಸ್ಲಿಮರಿಗೆ ಮಾಡಿದ ಅನ್ಯಾಯವೇ? ಅಸಲಿಗೆ ಮೋದಿ ಅವರು ಯಾರ ವಿರುದ್ಧ ತಮ್ಮ 56 ಇಂಚಿನ ಎದೆ ತೋರಿದ್ದಾರೆ? ಏನಾಗಿದೆ ಈ ಅಸಾದುದ್ದೀನ್ ಓವೈಸಿಗೆ?

ಹೌದು, ತ್ರಿವಳಿ ತಲಾಖ್ ವಿರುದ್ಧ ಲೋಕಸಭೆಯಲ್ಲಿ ಮಸೂದೆ ಅಂಗೀಕಾರ ಪಡೆಯುವಲ್ಲಿ ಪ್ರಧಾನಿ ಮೋದಿ ಅವರ ಪಾಲು ತುಂಬ ಇದೆ. ಹಾಗಂತ ಇದರಲ್ಲಿ ಮುಸ್ಲಿಮರ ವಿರೋಧ ಜಾರಿಗೊಳಿಸುವ ಕಾನೂನು ಹೇಗಾಗುತ್ತದೆ ಸ್ವಾಮಿ? ದೇಶಾದ್ಯಂತ ಲಕ್ಷಾಂತರ ಮುಸ್ಲಿಂ ಮಹಿಳೆಯರು ತ್ರಿವಳಿ ತಲಾಖ್ ನಿಂದ ಬೇಸತ್ತು ಸಹಿ ಸಂಗ್ರಹಕ್ಕೆ ಮುಂದಾಗಿದ್ದರು. ಇದನ್ನು ಗಮನಿಸಿಯೇ ಸುಪ್ರೀಂ ಕೋರ್ಟ್ ತ್ರಿವಳಿ ತಲಾಖ್ ವಿರುದ್ಧ ಕಾನೂನು ರಚಿಸುವಂತೆ ನಿರ್ದೇಶನ ನೀಡಿತ್ತು. ಅದರಂತೆ ಕೇಂದ್ರ ಸರ್ಕಾರ ತ್ರಿವಳಿ ತಲಾಖ್ ವಿರುದ್ಧ ಕಾನೂನು ರಚಿಸಲು ಮುಂದಾಗಿದೆ.

ಇಷ್ಟಕ್ಕೂ ತ್ರಿವಳಿ ತಲಾಖ್ ಅನ್ನು ಇಡೀ ದೇಶದ ಮುಸ್ಲಿಂ ಮಹಿಳೆಯರು ಸ್ವಾಗತಿಸಿದ್ದಾರೆ. ಹಾಗೊಂದು ವೇಳೆ ಮೋದಿ ಮುಸ್ಲಿಂ ವಿರೋಧಿಯಾಗಿದ್ದರೆ, ತಲಾಖ್ ನಿಷೇಧಿಸಲು ನಿರ್ದೇಶಿಸಿದ ಸುಪ್ರೀಂ ಕೋರ್ಟ್ ಸಹ ಮುಸ್ಲಿಮರ ವಿರೋಧಿಯಾಗುತ್ತದೆಯೇ? ಈ ಓವೈಸಿ ಮಾತಿನಲ್ಲಿ ಯಾವ ಅರ್ಥವಿದೆ?

ಹಾಗೆ ನೋಡಿದರೆ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕವೇ ಮುಸ್ಲಿಮರಿಗೆ ಅನೇಕ ಅನುಕೂಲಗಳಾಗಿವೆ. ಪುರುಷರ ಸಹಾಯವಿಲ್ಲದೆ ಮುಸ್ಲಿಂ ಮಹಿಳೆಯರು ಮೆಕ್ಕಾ ಪ್ರವಾಸ ಕೈಗೊಳ್ಳಲು, ತ್ರಿವಳಿ ತಲಾಖ್ ಎಂಬ ಜ್ವಲಂತ ತೊಲಗಿಸಲು, ಹಜ್ ಯಾತ್ರೆ ಸಬ್ಸಿಸಿ ರದ್ದುಗೊಳಿಸಿ, ಆ ಹಣವನ್ನು ಮುಸ್ಲಿಂ ಮಹಿಳೆಯರ ಶಿಕ್ಷಣಕ್ಕೆ ಮೀಸಲಿಡಲು ಮುಂದಾಗಿರುವುದು ಮುಸ್ಲಿಮರ ಸಬಲೀಕರಣ ತೋರಿಸುತ್ತದೆ. ಇಷ್ಟಿದ್ದರೂ ಓವೈಸಿ ಟೀಕಿಸುವುದೇಕೆ? ನಿಜವಾದ ಮುಸ್ಲಿಂ ವಿರೋಧಿಗಳು ಮಹಿಳೆಯರ ಪ್ರಗತಿ ತಡೆಯುವ ಓವೈಸಿಯೋ, ಮಹಿಳಾ ಸಬಲೀಕರಣಕ್ಕೆ ಪಣ ತೊಟ್ಟಿರುವ ನರೇಂದ್ರ ಮೋದಿಯವರೋ?

ಖಂಡಿತವಾಗಿಯೂ ಪ್ರಧಾನಿ ನರೇಂದ್ರ ಮೋದಿ ಅವರು ಈ ಮೂರುವರೆ ವರ್ಷದಲ್ಲಿ ತಮ್ಮ 56 ಇಂಚಿನ ಎದೆಯ ತಾಕತ್ತನ್ನು ತೋರಿಸಿದ್ದಾರೆ. ಆದರೆ ಅದು ಯಾವುದೇ ಸಮುದಾಯ ಅಥವಾ ಜಾತಿಯ ವಿರುದ್ಧ ಅಲ್ಲ ಎಂಬುದನ್ನು ಪ್ರತಿ ಭಾರತೀಯನೂ ಮನಗಾಣಬೇಕು.

ಉಗ್ರರನ್ನು ಬಿಟ್ಟು ಉಪಟಳ ಮಾಡುತ್ತಿದ್ದ ಪಾಕಿಸ್ತಾನಕ್ಕೆ ಸರ್ಜಿಕಲ್ ಸ್ಟ್ರೈಕ್ ಮೂಲಕ ಮೋದಿ ಅವರು 56 ಇಂಚಿನ ಎದೆ ತೋರಿಸಿದ್ದಾರೆ. ಅಷ್ಟೇ ಅಲ್ಲ, ಕಾಳಧನಿಕರಿಗೆ ನೋಟು ನಿಷೇಧ, ತೆರಿಗೆ ಚೋರರಿಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ), ಭಯೋತ್ಪಾದನೆ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ, ಚೀನಾ ವಿರುದ್ಧ, ಸುಮ್ಮನೆ ವಿರೋಧಿಸುವ ರಾಜಕಾರಣಿಗಳಿಗೆ ಮೋದಿ ಅವರು ತಮ್ಮ ಎದೆಯ ತಾಕತ್ತು ತೋರಿಸಿದ್ದಾರೆ.

ಮೋದಿ ಅವರ ಈ ತಾಕತ್ತಿನ ಫಲವಾಗಿಯೇ ಇಂದು ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿದೆ. ಆರ್ಥಿಕವಾಗಿ ಬಲಾಢ್ಯವಾಗುತ್ತಿದೆ. ಹೀಗಿರುವಾಗ ಸುಖಾಸುಮ್ಮನೆ ಓವೈಸಿಯಂಥವರು ಟೀಕಿಸುವ ಭರದಲ್ಲಿ ಬಾಯಿಗೆ ಬಂದಹಾಗೆ ಮಾತನಾಡುತ್ತಾರೆ. ಆದರೇನು ಬಂತು, ಅದರಿಂದ ಯಾವ ಪ್ರಯೋಜನವೂ ಇಲ್ಲ. ದೇಶದ ಜನ ಮೋದಿ ಅವರ ಬೆಂಬಲಕ್ಕೆ ಇರುವಷ್ಟು ದಿನವೂ ಮೋದಿ ಅವರ 56 ಇಂಚಿನ ಎದೆಯ ಒಂದು ರೋಮವನ್ನೂ ಅಲ್ಲಾಡಿಸಲು ಆಗುವುದಿಲ್ಲ.

0
Shares
  • Share On Facebook
  • Tweet It




Trending Now
ಐದು ದಿನಗಳಲ್ಲಿ ಏಳುನೂರಕ್ಕೂ ಹೆಚ್ಚು ಕಿ.ಮೀ. ಸೈಕಲ್ ತುಳಿದ 70 ರ ಹರೆಯದ ಶಾಸಕ!
ವಿಶ್ವನಾಥ್ ಶೆಟ್ಟಿ ಮಂಗಳೂರು January 2, 2026
ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಸ್ಥಾಪಿಸಿದ ನಿಟ್ಟೆ ವಿನಯ್ ಹೆಗ್ಡೆ ಎಂಬ ಮಹಾಚೇತನ ಅಸ್ತಂಗತ
ವಿಶ್ವನಾಥ್ ಶೆಟ್ಟಿ ಮಂಗಳೂರು January 1, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಐದು ದಿನಗಳಲ್ಲಿ ಏಳುನೂರಕ್ಕೂ ಹೆಚ್ಚು ಕಿ.ಮೀ. ಸೈಕಲ್ ತುಳಿದ 70 ರ ಹರೆಯದ ಶಾಸಕ!
    • ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಸ್ಥಾಪಿಸಿದ ನಿಟ್ಟೆ ವಿನಯ್ ಹೆಗ್ಡೆ ಎಂಬ ಮಹಾಚೇತನ ಅಸ್ತಂಗತ
    • ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ
    • ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!
    • ಭಕ್ತಿಗೀತೆ ಹಾಡುತ್ತಿದ್ದ ಗಾಯಕಿಯ ಮೇಲೆ ದರ್ಪ! ಜಾತ್ಯಾತೀತ ಗೀತೆ ಹಾಡಲು ಒತ್ತಾಯ!
    • ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ನೀಡಿ - ಸರಕಾರಕ್ಕೆ ಶಾಸಕ ಆಗ್ರಹ!
  • Popular Posts

    • 1
      ಐದು ದಿನಗಳಲ್ಲಿ ಏಳುನೂರಕ್ಕೂ ಹೆಚ್ಚು ಕಿ.ಮೀ. ಸೈಕಲ್ ತುಳಿದ 70 ರ ಹರೆಯದ ಶಾಸಕ!
    • 2
      ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಸ್ಥಾಪಿಸಿದ ನಿಟ್ಟೆ ವಿನಯ್ ಹೆಗ್ಡೆ ಎಂಬ ಮಹಾಚೇತನ ಅಸ್ತಂಗತ
    • 3
      ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search