• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಚಂಪಾ, ನರೇಂದ್ರ ಮೋದಿ ಕರ್ನಾಟಕಕಕ್ಕೆ ಬಂದರೆ ನಿಮ್ಮದ್ಯಾಕೀ ರಂಪ?

ನವೀನ್ ಶೆಟ್ಟಿ ಮಂಗಳೂರು Posted On February 2, 2018
0


0
Shares
  • Share On Facebook
  • Tweet It

ಚಂದ್ರಶೇಖರ್ ಪಾಟೀಲ್ ಎನ್ನುವುದಕ್ಕಿಂತ ಅವರು ಚಂಪಾ ಎಂದೇ ಪರಿಚಿತ. ಮೊದಲು ಸಾಹಿತಿಯಾಗಿದ್ದ (ಈಗಲೂ ಎಲ್ಲ ಆಮಂತ್ರಣ ಪತ್ರಿಕೆಗಳಲ್ಲಿ ಹಿರಿಯ ಸಾಹಿತಿ ಎಂದೇ ಮುದ್ರಣವಾಗುತ್ತದೆ) ಅವರು ಈಗ ರಾಜಕಾರಣಿಗಳ ಹಾಗೆ ಹೇಳಿಕೆ ಶುರು ಮಾಡಿದ್ದಾರೆ.

ಹಾಗೆ ನೋಡಿದರೆ ಚಂಪಾ ಸಾಹಿತ್ಯ ಕ್ಷೇತ್ರದಿಂದ ಅಧಿಕೃತವಾಗಿ ನಿವೃತ್ತಿ ಪಡೆದಿಲ್ಲ, ಹಾಗಂತ ಅವರು ಸಾಹಿತ್ಯ ಕೃಷಿಯಲ್ಲೂ ತೊಡಗಿಲ್ಲ. ಅವರ ಇತ್ತೀಚಿನ ಕೃತಿ ಯಾವುದು? ಯಾವ ಪುಸ್ತಕ ಬರೆದರು? ಅವರ ಯಾವ ಪುಸ್ತಕ ಮಾಧ್ಯಮಗಳಲ್ಲಿ ಚರ್ಚೆಯಾಯಿತು? ಯಾವ ಲೇಖನ ಒರೆಗೆ ಹಚ್ಚಿತು? ಯಾವ ಹೋರಾಟದ ಮುಂದಾಳತ್ವ ಪಡೆದು ಕನ್ನಡ ನಾಡು, ನುಡಿ ಪರ ನಿಂತರು?

ಹೂಂ, ಹೂಂ. ಯಾವುದೂ ಇಲ್ಲ. ಪೆನ್ನು ಕೆಳಗಿಟ್ಟು ಚಂಪಾ ತುಂಬ ದಿನ ಆಯಿತೇನೋ ಎನ್ನುವಷ್ಟರ ಮಟ್ಟಿಗೆ ಅವರು ಸಾಹಿತ್ಯದಿಂದ ದೂರವೇ ಉಳಿದಿದ್ದಾರೆ. ಆದರೂ ಚಂಪಾ ಹಿರಿಯ ಸಾಹಿತಿ.

ಇಂತಿಪ್ಪ ಚಂಪಾ, ಈಗ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದಾರೆ. ಅದೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮಾತನಾಡುವ ಮೂಲಕ ಸುದ್ದಿಯಾಗಿದ್ದಾರೆ. ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಬರುವ ಅವಶ್ಯಕತೆ ಇಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ವಕ್ತಾರರಂತೆ ಮಾತನಾಡಿ ಸುದ್ದಿಯಾಗಿದ್ದಾರೆ.

ಅಷ್ಟಕ್ಕೂ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಬಂದರೆ ಚಂಪಾ ಅವರಿಗೇಕೆ ತ್ರಾಸ? ಮಹದಾಯಿ ಹೋರಾಟದಲ್ಲಿ ನರೇಂದ್ರ ಮೋದಿ ಅವರನ್ನು ಟೀಕಿಸಿದ ಚಂಪಾ ಸಿದ್ದರಾಮಯ್ಯನವರ ವಿರುದ್ಧ ಸೊಲ್ಲೆತ್ತಿದರಾ? ಇವರಿಗೇಕೆ ಈ ಇಬ್ಬಂದಿತನ?

ಖಂಡಿತವಾಗಿಯೂ ಕನ್ನಡ ನಾಡಿನ, ಅದರಲ್ಲೂ ಉತ್ತರ ಕರ್ನಾಟಕದ ಜನರಿಗೆ ಮಹದಾಯಿ ನೀರು ಸಿಗಬೇಕು ಎಂಬುದು ಎಲ್ಲರ ಅಭಿಪ್ರಾಯ ಹಾಗೂ ಒತ್ತಾಸೆ. ಈ ವಿಚಾರದಲ್ಲಿ ಮೋದಿ ಅವರೂ ಮಧ್ಯಸ್ಥಿಕೆ ವಹಿಸಬೇಕು ಎಂಬ ಆಗ್ರಹದಲ್ಲಿ ನ್ಯಾಯವಿದೆ.

ಆದರೆ ಚಂದ್ರಶೇಖರ ಪಾಟೀಲರೇ, ನರೇಂದ್ರ ಮೋದಿ ಅವರು ಕರ್ನಾಟಕಕ್ಕೇ ಬರುವ ಅವಶ್ಯಕತೆ ಇಲ್ಲ ಎಂದು ಹೇಳಲು ನಿಮಗೆ ಯಾವ ಹಕ್ಕಿದೆ ಸ್ವಾಮಿ? ಅಷ್ಟಕ್ಕೂ ಮೋದಿ ಅವರು ರಾಜ್ಯಕ್ಕೆ ಮಾಡಿದ ಅನ್ಯಾಯವೇನು? ರಾಜ್ಯ ಬಿಜೆಪಿ ನಾಯಕರು ಗೋವಾ ಸರ್ಕಾರದ ಜತೆ ಮಾತುಕತೆ ನಡೆಸುತ್ತಿಲ್ಲವೇ? ಬಿಜೆಪಿಯವರು ಮಹದಾಯಿ ನೀರು ಬೇಡ ಎಂದಿದ್ದಾರೆಯೇ? ಯಡಿಯೂರಪ್ಪನವರ ಮಾತುಕತೆ ಫಲವಾಗಿಯೇ ಇಂದು ಗೋವಾ ಸರ್ಕಾರ ಕರ್ನಾಟಕಕ್ಕೆ ಕುಡಿಯುಲು ನೀರು ಬಿಡುವುದಾಗಿ ಒಪ್ಪಿಲ್ಲವೇ? ಹಾಗಿದ್ದಮೇಲೆ ಮೋದಿ ಅವರ ವಿರುದ್ಧ ನಿಮ್ಮದೇನು ತಕರಾರು ಸ್ವಾಮಿ?

ಹಾಗೊಂದು ವೇಳೆ ಚಂಪಾ ಅವರಿಗೆ ನಿಜವಾಗಿಯೂ ಮಹದಾಯಿ ನೀರು ಉತ್ತರ ಕರ್ನಾಟಕದ ಜನರಿಗೆ ಬೇಕು ಎಂದಿದ್ದರೆ, ಆ ಕುರಿತು ನಿಜವಾಗಿಯೂ ಕಳಕಳಿ ಇಟ್ಟುಕೊಂಡು ಪ್ರತಿಭಟನೆ ಮಾಡುತ್ತಿದ್ದರೆ, ಚಂಪಾ ರಾಜ್ಯ ಸರ್ಕಾರದ ವಿರುದ್ಧವೂ ಮಾತನಾಡುತ್ತಿದ್ದರು. ಗೋವಾ ಕಾಂಗ್ರೆಸ್ಸಿಗೂ, ಕರ್ನಾಟಕ ಕಾಂಗ್ರೆಸ್ಸಿಗೂ ಸಂಬಂಧವೇ ಇಲ್ಲ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಟೀಕೆ ಮಾಡುತ್ತಿದ್ದರು. ಆದರೆ ಅದಾವುದನ್ನೂ ಚಂಪಾ ಮಾಡಿಲ್ಲ.

ಮಹದಾಯಿ ವಿಚಾರದ ಕುರಿತು ಮೋದಿ ಒಂದೂ ಮಾತನಾಡಿಲ್ಲ ಎಂದು ಚಂಪಾ ಹೇಳಿದ್ದಾರಲ್ಲ, ಅದೇ ಈ ವಿಷಯದ ಕುರಿತು ಮಾತನಾಡದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ವಿರುದ್ಧ ಮಾತನಾಡುವುದಿಲ್ಲವೇಕೆ? ಮಹದಾಯಿ ಕುರಿತು ಮಾತನಾಡದ ಮೋದಿ ಕರ್ನಾಟಕಕ್ಕೆ ಬರುವ ಅವಶ್ಯಕತೆ ಇಲ್ಲ ಎನ್ನುವ ನೀವು, ಗೋವಾ ಕಾಂಗ್ರೆಸ್ಸಿಗೂ ನಮಗೂ ಸಂಬಂಧ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕರ್ನಾಟಕದಿಂದ ಹೋಗಿ ಎಂದು ಏಕೆ ಒತ್ತಾಯಿಸಲಿಲ್ಲ? ಇದೆಂಥ ಇಬ್ಬಂದಿತನ ಚಂಪಾ ಅವರೇ ನಿಮ್ಮದು? ಮಾಧ್ಯಮಗಳಲ್ಲಿ ನಿಮ್ಮ ವೀಡಿಯೋ, ಚಿತ್ರ ಬರಲಿ ಎಂದು ಹೀಗೆ ಮಾಡುತ್ತಿದ್ದೀರಾ ಅಥವಾ ಮಾನಸಿಕವಾಗಿ ಕಾಂಗ್ರೆಸ್ ಸೇರಿಬಿಟ್ಟಿರಾ? ಹೇಗೆ? ಉತ್ತರಿಸಿ.

 

0
Shares
  • Share On Facebook
  • Tweet It




Trending Now
ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
ನವೀನ್ ಶೆಟ್ಟಿ ಮಂಗಳೂರು September 17, 2025
ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
ನವೀನ್ ಶೆಟ್ಟಿ ಮಂಗಳೂರು September 17, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
  • Popular Posts

    • 1
      ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • 2
      ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • 3
      ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • 4
      ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • 5
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!

  • Privacy Policy
  • Contact
© Tulunadu Infomedia.

Press enter/return to begin your search