• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಚಂಪಾ, ನರೇಂದ್ರ ಮೋದಿ ಕರ್ನಾಟಕಕಕ್ಕೆ ಬಂದರೆ ನಿಮ್ಮದ್ಯಾಕೀ ರಂಪ?

ನವೀನ್ ಶೆಟ್ಟಿ ಮಂಗಳೂರು Posted On February 2, 2018
0


0
Shares
  • Share On Facebook
  • Tweet It

ಚಂದ್ರಶೇಖರ್ ಪಾಟೀಲ್ ಎನ್ನುವುದಕ್ಕಿಂತ ಅವರು ಚಂಪಾ ಎಂದೇ ಪರಿಚಿತ. ಮೊದಲು ಸಾಹಿತಿಯಾಗಿದ್ದ (ಈಗಲೂ ಎಲ್ಲ ಆಮಂತ್ರಣ ಪತ್ರಿಕೆಗಳಲ್ಲಿ ಹಿರಿಯ ಸಾಹಿತಿ ಎಂದೇ ಮುದ್ರಣವಾಗುತ್ತದೆ) ಅವರು ಈಗ ರಾಜಕಾರಣಿಗಳ ಹಾಗೆ ಹೇಳಿಕೆ ಶುರು ಮಾಡಿದ್ದಾರೆ.

ಹಾಗೆ ನೋಡಿದರೆ ಚಂಪಾ ಸಾಹಿತ್ಯ ಕ್ಷೇತ್ರದಿಂದ ಅಧಿಕೃತವಾಗಿ ನಿವೃತ್ತಿ ಪಡೆದಿಲ್ಲ, ಹಾಗಂತ ಅವರು ಸಾಹಿತ್ಯ ಕೃಷಿಯಲ್ಲೂ ತೊಡಗಿಲ್ಲ. ಅವರ ಇತ್ತೀಚಿನ ಕೃತಿ ಯಾವುದು? ಯಾವ ಪುಸ್ತಕ ಬರೆದರು? ಅವರ ಯಾವ ಪುಸ್ತಕ ಮಾಧ್ಯಮಗಳಲ್ಲಿ ಚರ್ಚೆಯಾಯಿತು? ಯಾವ ಲೇಖನ ಒರೆಗೆ ಹಚ್ಚಿತು? ಯಾವ ಹೋರಾಟದ ಮುಂದಾಳತ್ವ ಪಡೆದು ಕನ್ನಡ ನಾಡು, ನುಡಿ ಪರ ನಿಂತರು?

ಹೂಂ, ಹೂಂ. ಯಾವುದೂ ಇಲ್ಲ. ಪೆನ್ನು ಕೆಳಗಿಟ್ಟು ಚಂಪಾ ತುಂಬ ದಿನ ಆಯಿತೇನೋ ಎನ್ನುವಷ್ಟರ ಮಟ್ಟಿಗೆ ಅವರು ಸಾಹಿತ್ಯದಿಂದ ದೂರವೇ ಉಳಿದಿದ್ದಾರೆ. ಆದರೂ ಚಂಪಾ ಹಿರಿಯ ಸಾಹಿತಿ.

ಇಂತಿಪ್ಪ ಚಂಪಾ, ಈಗ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದಾರೆ. ಅದೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮಾತನಾಡುವ ಮೂಲಕ ಸುದ್ದಿಯಾಗಿದ್ದಾರೆ. ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಬರುವ ಅವಶ್ಯಕತೆ ಇಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ವಕ್ತಾರರಂತೆ ಮಾತನಾಡಿ ಸುದ್ದಿಯಾಗಿದ್ದಾರೆ.

ಅಷ್ಟಕ್ಕೂ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಬಂದರೆ ಚಂಪಾ ಅವರಿಗೇಕೆ ತ್ರಾಸ? ಮಹದಾಯಿ ಹೋರಾಟದಲ್ಲಿ ನರೇಂದ್ರ ಮೋದಿ ಅವರನ್ನು ಟೀಕಿಸಿದ ಚಂಪಾ ಸಿದ್ದರಾಮಯ್ಯನವರ ವಿರುದ್ಧ ಸೊಲ್ಲೆತ್ತಿದರಾ? ಇವರಿಗೇಕೆ ಈ ಇಬ್ಬಂದಿತನ?

ಖಂಡಿತವಾಗಿಯೂ ಕನ್ನಡ ನಾಡಿನ, ಅದರಲ್ಲೂ ಉತ್ತರ ಕರ್ನಾಟಕದ ಜನರಿಗೆ ಮಹದಾಯಿ ನೀರು ಸಿಗಬೇಕು ಎಂಬುದು ಎಲ್ಲರ ಅಭಿಪ್ರಾಯ ಹಾಗೂ ಒತ್ತಾಸೆ. ಈ ವಿಚಾರದಲ್ಲಿ ಮೋದಿ ಅವರೂ ಮಧ್ಯಸ್ಥಿಕೆ ವಹಿಸಬೇಕು ಎಂಬ ಆಗ್ರಹದಲ್ಲಿ ನ್ಯಾಯವಿದೆ.

ಆದರೆ ಚಂದ್ರಶೇಖರ ಪಾಟೀಲರೇ, ನರೇಂದ್ರ ಮೋದಿ ಅವರು ಕರ್ನಾಟಕಕ್ಕೇ ಬರುವ ಅವಶ್ಯಕತೆ ಇಲ್ಲ ಎಂದು ಹೇಳಲು ನಿಮಗೆ ಯಾವ ಹಕ್ಕಿದೆ ಸ್ವಾಮಿ? ಅಷ್ಟಕ್ಕೂ ಮೋದಿ ಅವರು ರಾಜ್ಯಕ್ಕೆ ಮಾಡಿದ ಅನ್ಯಾಯವೇನು? ರಾಜ್ಯ ಬಿಜೆಪಿ ನಾಯಕರು ಗೋವಾ ಸರ್ಕಾರದ ಜತೆ ಮಾತುಕತೆ ನಡೆಸುತ್ತಿಲ್ಲವೇ? ಬಿಜೆಪಿಯವರು ಮಹದಾಯಿ ನೀರು ಬೇಡ ಎಂದಿದ್ದಾರೆಯೇ? ಯಡಿಯೂರಪ್ಪನವರ ಮಾತುಕತೆ ಫಲವಾಗಿಯೇ ಇಂದು ಗೋವಾ ಸರ್ಕಾರ ಕರ್ನಾಟಕಕ್ಕೆ ಕುಡಿಯುಲು ನೀರು ಬಿಡುವುದಾಗಿ ಒಪ್ಪಿಲ್ಲವೇ? ಹಾಗಿದ್ದಮೇಲೆ ಮೋದಿ ಅವರ ವಿರುದ್ಧ ನಿಮ್ಮದೇನು ತಕರಾರು ಸ್ವಾಮಿ?

ಹಾಗೊಂದು ವೇಳೆ ಚಂಪಾ ಅವರಿಗೆ ನಿಜವಾಗಿಯೂ ಮಹದಾಯಿ ನೀರು ಉತ್ತರ ಕರ್ನಾಟಕದ ಜನರಿಗೆ ಬೇಕು ಎಂದಿದ್ದರೆ, ಆ ಕುರಿತು ನಿಜವಾಗಿಯೂ ಕಳಕಳಿ ಇಟ್ಟುಕೊಂಡು ಪ್ರತಿಭಟನೆ ಮಾಡುತ್ತಿದ್ದರೆ, ಚಂಪಾ ರಾಜ್ಯ ಸರ್ಕಾರದ ವಿರುದ್ಧವೂ ಮಾತನಾಡುತ್ತಿದ್ದರು. ಗೋವಾ ಕಾಂಗ್ರೆಸ್ಸಿಗೂ, ಕರ್ನಾಟಕ ಕಾಂಗ್ರೆಸ್ಸಿಗೂ ಸಂಬಂಧವೇ ಇಲ್ಲ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಟೀಕೆ ಮಾಡುತ್ತಿದ್ದರು. ಆದರೆ ಅದಾವುದನ್ನೂ ಚಂಪಾ ಮಾಡಿಲ್ಲ.

ಮಹದಾಯಿ ವಿಚಾರದ ಕುರಿತು ಮೋದಿ ಒಂದೂ ಮಾತನಾಡಿಲ್ಲ ಎಂದು ಚಂಪಾ ಹೇಳಿದ್ದಾರಲ್ಲ, ಅದೇ ಈ ವಿಷಯದ ಕುರಿತು ಮಾತನಾಡದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ವಿರುದ್ಧ ಮಾತನಾಡುವುದಿಲ್ಲವೇಕೆ? ಮಹದಾಯಿ ಕುರಿತು ಮಾತನಾಡದ ಮೋದಿ ಕರ್ನಾಟಕಕ್ಕೆ ಬರುವ ಅವಶ್ಯಕತೆ ಇಲ್ಲ ಎನ್ನುವ ನೀವು, ಗೋವಾ ಕಾಂಗ್ರೆಸ್ಸಿಗೂ ನಮಗೂ ಸಂಬಂಧ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕರ್ನಾಟಕದಿಂದ ಹೋಗಿ ಎಂದು ಏಕೆ ಒತ್ತಾಯಿಸಲಿಲ್ಲ? ಇದೆಂಥ ಇಬ್ಬಂದಿತನ ಚಂಪಾ ಅವರೇ ನಿಮ್ಮದು? ಮಾಧ್ಯಮಗಳಲ್ಲಿ ನಿಮ್ಮ ವೀಡಿಯೋ, ಚಿತ್ರ ಬರಲಿ ಎಂದು ಹೀಗೆ ಮಾಡುತ್ತಿದ್ದೀರಾ ಅಥವಾ ಮಾನಸಿಕವಾಗಿ ಕಾಂಗ್ರೆಸ್ ಸೇರಿಬಿಟ್ಟಿರಾ? ಹೇಗೆ? ಉತ್ತರಿಸಿ.

 

0
Shares
  • Share On Facebook
  • Tweet It




Trending Now
ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
ನವೀನ್ ಶೆಟ್ಟಿ ಮಂಗಳೂರು June 30, 2025
ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
ನವೀನ್ ಶೆಟ್ಟಿ ಮಂಗಳೂರು June 30, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?
    • ಸಂವಿಧಾನದಿಂದ "ಜಾತ್ಯಾತೀತತೆ" ಮತ್ತು "ಸಮಾಜವಾದ" ಶಬ್ದಗಳನ್ನು ತೆಗೆಯುವ ಬಗ್ಗೆ ಚರ್ಚೆ ನಡೆಯಲಿ - ಆರ್ ಎಸ್ ಎಸ್
    • PFI ಟಾರ್ಗೆಟ್- 950 ಜನರ ಹಿಟ್ ಲಿಸ್ಟ್ ರೆಡಿ! NIA ಕೋರ್ಟ್ ನಲ್ಲಿ ವಕೀಲರಿಂದ ಮಾಹಿತಿ...
    • ಎಮರ್ಜೆನ್ಸಿ ದಿನಗಳಲ್ಲಿ ಮೋದಿಯವರ ಅನುಭವ ಕಥನ "ದಿ ಎಮರ್ಜೆನ್ಸಿ ಡೈರಿಸ್"!
    • ಬಾಹ್ಯಕಾಶಕ್ಕೆ ಜಿಗಿಯುವ ಮೊದಲು ಪತ್ನಿಗೆ ಭಾವನಾತ್ಮಕ ಸಂದೇಶ: "ನೀನಿಲ್ಲದೆ..... " ಶುಭಾಂಶು ಹೇಳಿದ್ದೇನು?
    • ಪಹಲ್ಗಾಮ್ ಉಗ್ರರಿಗೆ ಆಹಾರ, ಆಶ್ರಯ: ಸ್ಥಳೀಯರಿಬ್ಬರ ಬಂಧನ!
    • ಬೊಮ್ಮಾಯಿ 40% ಲಂಚದ ಆರೋಪ ಬಂದಾಗ ಸುಮ್ಮನೆ ಕುಳಿತು ತಪ್ಪು ಮಾಡಿದ್ರು - ಮೋಹನದಾಸ್ ಪೈ
    • ನಿಜವಾಯ್ತು ದೈವದ ನುಡಿ: 36 ವರ್ಷಗಳ ಬಳಿಕ ತಾಯಿಯ ಮಡಿಲು ಸೇರಿದ ಹಿರಿಮಗ
  • Popular Posts

    • 1
      ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • 2
      ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • 3
      ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?
    • 4
      ಸಂವಿಧಾನದಿಂದ "ಜಾತ್ಯಾತೀತತೆ" ಮತ್ತು "ಸಮಾಜವಾದ" ಶಬ್ದಗಳನ್ನು ತೆಗೆಯುವ ಬಗ್ಗೆ ಚರ್ಚೆ ನಡೆಯಲಿ - ಆರ್ ಎಸ್ ಎಸ್
    • 5
      PFI ಟಾರ್ಗೆಟ್- 950 ಜನರ ಹಿಟ್ ಲಿಸ್ಟ್ ರೆಡಿ! NIA ಕೋರ್ಟ್ ನಲ್ಲಿ ವಕೀಲರಿಂದ ಮಾಹಿತಿ...

  • Privacy Policy
  • Contact
© Tulunadu Infomedia.

Press enter/return to begin your search