• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಸೌಜನ್ಯ ಮರೆತ ಕಾಂಗ್ರೆಸ್ ಸಂಸದರು, ಗದ್ದಲದ ಮಧ್ಯೆ ಕಾಂಗ್ರೆಸ್ ಬಂಡವಾಳ ಹೊರಹಾಕಿದ ಮೋದಿ

TNN Correspondent Posted On February 7, 2018


  • Share On Facebook
  • Tweet It

ದೆಹಲಿ: ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯನ್ನು ಉದ್ದೇಶಿಸಿ ಮಾತನಾಡುವಾಗ ಪ್ರತಿಪಕ್ಷಗಳ ಸದಸ್ಯರು ಸೌಜನ್ಯ ಮರೆತವರಂತೆ ವರ್ತಿಸುವ ಮೂಲಕ ತಮ್ಮ ಅಸಹಿಷ್ಣುತೆಯನ್ನು ಹೊರಹಾಕಿದ್ದಾರೆ. ಬಿಜೆಪಿ ನೇತೃತ್ವದ ಎನ್ ಡಿಎ ಒಕ್ಕೂಟ ಆಡಳಿತಕ್ಕೆ ಬಂದ ನಂತರ ದೇಶದಲ್ಲಿ ಯಾವ ಅಭಿವೃದ್ಧಿ ಕಾರ್ಯಗಳು ಆಗಿವೆ ಎಂದು ಪ್ರಶ್ನಿಸಿದ್ದ ಕಾಂಗ್ರೆಸ್ ಗೆ ಗದ್ದಲದ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ತಕ್ಕ ಉತ್ತರ ನೀಡಿದರು.

ಕಾಂಗ್ರೆಸ್ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರುವ ಮೂಲಕ ಪ್ರಜಾಪ್ರಭುತ್ವದ ಕೊಲೆ ಮಾಡಿದೆ, ಭಾರತವನ್ನು ಜಾತಿ, ಧರ್ಮಗಳ ಆಧಾರದಲ್ಲಿ ಒಡೆಯುವ ಹೀನ ವೃತ್ತಿಗಿಳಿದಿದೆ, ಕಾಶ್ಮೀರ ಸಮಸ್ಯೆಗೆ ಮುಕ್ತಿ ನೀಡುವ ತಾಕತ್ತು ಹೊಂದಿದ್ದ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರಿಗೂ ಕಾಂಗ್ರೆಸ್ ವಂಚಿಸಿದೆ ಎಂದು ಕಾಂಗ್ರೆಸ್ ನ ಹುಳುಕುಗಳನ್ನು ಒಂದೋಂದೆ ಹೊರ ಹಾಕಿದರು.

ದೇಶದ ಇಂದಿನ ಇಂತಹ ದುಸ್ತಿತಿಗೆ 70 ವರ್ಷದ ನಿರಾಕಸ್ತಿಯುಳ್ಳ ಕಾಂಗ್ರೆಸ್ ನ ಆಡಳಿತವೇ ಕಾರಣ. ಕಾಂಗ್ರೆಸ್ ಸುಸ್ಸಜ್ಜಿತ ಆಡಳಿತ ನೀಡಿದ್ದರೇ ಇಂದು ದೇಶ ಯಾವುದೇ ಹಂತದಲ್ಲಿರುತ್ತಿತ್ತು. ಕಾಂಗ್ರೆಸ್ ಅಧಿಕಾರದಿಂದ ಮುಕ್ತವಾದ ಮೂರ್ನಾಲ್ಕು ವರ್ಷದಲ್ಲೇ ಭಾರತದ ಚಿತ್ರಣ ತಕ್ಕ ಮಟ್ಟಿಗೆ ಬದಲಾಗಿದೆ. 20022ರ ಹೊತ್ತಿಗೆ ಭಾರತ ನವ ಯುಗಕ್ಕೆ ನಾಂಧಿ ಹಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ವ್ಯಕ್ತಪಡಿಸಿದರು.

ಗಾಂಧಿ ಕುಟುಂಬಕ್ಕೆ ಸೇರಿದ್ದ ಒಂದೇ ಕಾರಣಕ್ಕೇ ರಾಹುಲ್ ಗಾಂಧಿ ಅವರನ್ನು ಅಧ್ಯಕ್ಷ ಸ್ಥಾನಕ್ಕೇರಿಸಲಾಗಿದೆ. ಅದು ಪ್ರಜಾಪ್ರಭುತ್ವ ವಿರೋಧಿಯಲ್ಲವೇ. ರಾಜೀವ ಗಾಂಧಿ ಹೈದರಾಬಾದ್ ಗೆ ಪ್ರಧಾನಿಯಾಗಿದ್ದಾಗ ಭೇಟಿ ನೀಡಿದ್ದಾಗ ಸ್ವಾಗತಕ್ಕೆ ಬಂದಿದ್ದ ದಲಿತ ಮುಖಂಡನನ್ನು ಅವಮಾನಿಸಿದ್ದರು. ಇದೆಲ್ಲವನ್ನು ದೇಶ ಮರೆತ್ತಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ಗೆ ಮೋದಿ ವಾಗ್ಭಾಣಗಳು

  • ದೇಶ ಡೋಕ್ಲಾಮ್ ನಲ್ಲಿ ಹೋರಾಡುತ್ತಿದ್ದರೇ, ಕಾಂಗ್ರೆಸ್ ಚೀನಾ ಜತೆ ಆಲಂಗಿನ ಮಾಡಿಕೊಳ್ಳುತ್ತಿತ್ತು.
  • ಆರೋಪ ಮಾಡಿದಷ್ಟು ಕಮಲ ಅರಳಲಿದೆ,
  • ಸ್ವಚ್ಛ ಭಾರತ ಕಸಕ್ಕೆ ಮಾತ್ರ ಸಿಮೀತವಲ್ಲ, ದೇಶದ ಆಡಳಿತವನ್ನು ಕಸದಿಂದ ಮುಕ್ತ ಮಾಡುವುದು
  • ರೈತರಿಗಾಗಿ ಹಲವು ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಅದು ಸಾಕಾರಗೊಳ್ಳುತ್ತಿದೆ.
  • ದೇಶದಲ್ಲಿ ಉದ್ಯೋಗಗಳು ನಿರ್ಮಾಣವಾಗಿವೆ. ನಿಮ್ಮ ಕಣ್ಣು ತೆರೆದು ನೋಡಿ
  • ಎನ್ ಡಿಎ ಅಧಿಕಾರದಲ್ಲಿ ಇರದೇ ಇರುವ ನಾಲ್ಕು ರಾಜ್ಯಗಳಲ್ಲಿ 1 ಕೋಟಿ ಉದ್ಯೋಗ ಸೃಷ್ಟಿಯಾಗಿವೆ. ಅದಕ್ಕೆ ಕೇಂದ್ರದ ಪಾಲು ಹೆಚ್ಚಿದೆ. ನೀವು ಅದೇ ಹಳೇ ಹಾಡು ಹಾಡುತ್ತಿದ್ದೀರಿ.
  • ಎನ್ ಡಿಎ ದೇಶದಲ್ಲಿ ಕಾರ್ಯನಿರ್ವಹಣೆಯ ಪದ್ಧತಿಯನ್ನೇ ಬದಲಾಯಿಸಿ, ಸರ್ವರನ್ನು ತಲುಪುತ್ತಿದೆ.
  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search