• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ದೆಹಲಿಗೆ ಹೋಗಿ ಮನವಿಗೆ ಕೊಟ್ಟಾಯ್ತು, ಭರವಸೆ ಸಿಕ್ಕಿದೆ!!

Hanumantha Kamath Posted On July 18, 2019


  • Share On Facebook
  • Tweet It

ದೆಹಲಿಗೆ ಹೋಗಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ರೈಲ್ವೆ ರಾಜ್ಯ ಸಹಾಯಕ ಸಚಿವ ಸುರೇಶ್ ಅಂಗಡಿಯವರನ್ನು ಭೇಟಿಯಾದೆ. ಸುರೇಶ್ ಅಂಗಡಿಯವರು ನಮ್ಮದೇ ರಾಜ್ಯದವರು. ಅವರಿಗೆ ಮನವರಿಕೆ ಮಾಡುವುದು ಸುಲಭ. ಅಪಾಯಿಟ್ ಮೆಂಟ್ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರೊಂದಿಗೆ ಇತ್ತು. ಆದರೆ ಕೊನೆಯ ಕ್ಷಣದಲ್ಲಿ ಬೇರೆ ಕೆಲಸದ ಒತ್ತಡದಲ್ಲಿ ಗೋಯಲ್ ಇದ್ದ ಕಾರಣ ಅವರ ಮನವಿಯಂತೆ ಸುರೇಶ್ ಅಂಗಡಿಯವರನ್ನು ಭೇಟಿಯಾದೆವು. ನಾವು ಹೇಳಿದ ವಿಷಯವನ್ನು ಸಾವಧಾನವಾಗಿ ಕೇಳಿದ ಸುರೇಶ್ ಅಂಗಡಿಯವರು ಈ ಕೆಲಸವನ್ನು ಶೀಘ್ರದಲ್ಲಿ ಮಾಡಿಕೊಡುವ ಭರವಸೆ ನೀಡಿದರು. ಅಲ್ಲಿಗೆ ಇಲ್ಲಿ ತನಕ ಮಂಗಳೂರಿನ ಮೇಲೆ ಆಗುತ್ತಿದ್ದ ಮಲತಾಯಿ ಧೋರಣೆ ನಿಂತು ಹೋಗಲಿದೆ ಎನ್ನುವ ವಿಶ್ವಾಸ ಒಬ್ಬ ರೈಲ್ವೆ ಹೋರಾಟಗಾರನಾಗಿ ನನ್ನಲ್ಲಿ ಮೂಡಿದೆ. ಅಷ್ಟಕ್ಕೂ ನಾವು ಕೊಟ್ಟ ಮನವಿ ಏನು? ಅದನ್ನು ವಿವರಿಸುತ್ತೇನೆ

ಈ ವಿಷಯವನ್ನು ನಾನು ಈ ಹಿಂದೆ ಒಮ್ಮೆ ಬರೆದಿದ್ದೆ. ಡಿ ವಿ ಸದಾನಂದ ಗೌಡ ರೈಲ್ವೆ ಸಚಿವರಾಗಿದ್ದಾಗಲೇ ಮನಸ್ಸು ಮಾಡಿದ್ದರೆ ಆಗಲೇ ನಮ್ಮ ಮೇಲೆ ಆಗುತ್ತಿರುವ ಅನ್ಯಾಯ ಕೊನೆಗಾಣುತ್ತಿತ್ತು. ಆದರೆ ಹಾಗೆ ಆಗಲಿಲ್ಲ. ಈಗಲಾದರೂ ಆಗಬಹುದು ಎನ್ನುವ ಧೈರ್ಯ ಬಂದಿರುವುದು ಸುರೇಶ್ ಅಂಗಡಿಯವರು ತಮಗೆ ಈ ವಿಷಯ ಈಗಾಗಲೇ ಅರಿವಿಗೆ ಬಂದಿದೆ. ಸರಿ ಮಾಡಿ ಕೊಡುತ್ತೇವೆ ಎಂದು ಹೇಳಿದ ಕಾರಣ. ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ನಿತೀಶ್ ಕುಮಾರ್ ರೈಲ್ವೆ ಸಚಿವರಾಗಿದ್ದರು. ಆಗ ರೈಲ್ವೆ ಇಲಾಖೆಯಿಂದ ರೈಲ್ವೆ ಬೋರ್ಡಿಗೆ ಒಂದು ಲಿಖಿತ ಮನವಿ ಹೋಗುತ್ತದೆ. ಅದೇನೆಂದರೆ ನೇತ್ರಾವತಿ ಸೇತುವೆ ಅಂದರೆ ಉಳ್ಳಾಲ ಸೇತುವೆಯಿಂದ ತೋಕೂರುವರೆಗಿನ ಪ್ರದೇಶವನ್ನು ಫಾಲ್ಗಾಟ್ ನಿಂದ ಅಂದರೆ ಸೌತರ್ನ್ ರೈಲ್ವೆಯಿಂದ ನೈರುತ್ಯ ರೈಲ್ವೆಗೆ ಶೀಫ್ಟ್ ಮಾಡಬೇಕು. ಯಾಕೆಂದರೆ ಈ ಪ್ರದೇಶ ರೈಲ್ವೆ ಇಲಾಖೆಯ ಪಾಲಿಗೆ ಅಪ್ಪಟ ಚಿನ್ನದ ಮೊಟ್ಟೆ ಇಡುವ ಕೋಳಿ. ತಿಂಗಳಿಗೆ ಅಂದಾಜು ನಾಲ್ಕು ಕೋಟಿ ರೂಪಾಯಿ ಲಾಭ ತರುವ ಪ್ರದೇಶವಿದು. ಎನ್ ಎಂಪಿಟಿ, ಎಂಸಿಎಫ್, ಎಂಆರ್ ಪಿಎಲ್ ಸಹಿತ ಅನೇಕ ಕೈಗಾರಿಕೆಗಳಿಂದ ಉತ್ತಮ ಫಸಲು ಇರುವ ಸ್ಥಳ ಫಾಲ್ಗಾಟ್ ಡಿವಿಜನ್ ಗೆ ಹೋಗಿರುವುದರಿಂದ ಅವರು ಚೆನ್ನಾಗಿದ್ದಾರೆ. ಆದರೆ ಲಾಭ ಇಲ್ಲಿಂದ ಬಂದರೂ ನಮ್ಮ ಮಂಗಳೂರು ಸೆಂಟ್ರಲ್ ಮತ್ತು ಜಂಕ್ಷನ್ ರೈಲ್ವೆ ನಿಲ್ದಾಣಗಳ ಅಭಿವೃದ್ಧಿಯ ವಿಚಾರ ಬಂದಾಗ ಅಪ್ಪಟ ಕಣ್ಣಿಗೆ ಬಟ್ಟೆ ಕಟ್ಟಿದ್ದಂತೆ ದಕ್ಷಿಣ ರೈಲ್ವೆ ವರ್ತಿಸುತ್ತದೆ. ಅಷ್ಟೇ ಅಲ್ಲ, ದೇಶದ ಪ್ರಮುಖ ನಗರಗಳಿಗೆ ಮಂಗಳೂರು ಸೆಂಟ್ರಲ್ ನಿಂದ ರೈಲು ಓಡಿಸಿ ಎಂದರೆ ಇಲ್ಲಿ ಫ್ಲಾಟ್ ಫಾರಂ ಕೊರತೆ ಇದೆ ಎನ್ನುತ್ತಾರೆ. ನಂತರ ಕೆಲವು ದಿನ ಮಂಗಳೂರು ಜಂಕ್ಷನ್ ನಿಂದ ಓಡಿಸಿ ನಂತರ ಅಲ್ಲಿ ಪ್ರಯಾಣಿಕರಿಲ್ಲದೆ ಆ ರೈಲು ನಷ್ಟದಲ್ಲಿದೆ ಎಂದು ಸಬೂಬು ಹೇಳಿ ಆ ರೈಲನ್ನು ಕೇರಳದ ಯಾವುದಾದರೂ ನಗರಕ್ಕೆ ಇವರು ವಿಸ್ತರಿಸುತ್ತಾರೆ. ಅಲ್ಲಿಗೆ ಕೇರಳದ ಲಾಬಿ ನಮ್ಮ ರೈಲು ನಿಲ್ದಾಣಗಳಲ್ಲಿ ತಮಗೆ ಬೇಕಾದ ಹಾಗೆ ಹೇಗೆ ಕೆಲಸ ಮಾಡುತ್ತದೆ ಎಂದು ಗೊತ್ತಾಗುತ್ತದೆ. ಅಷ್ಟಕ್ಕೂ ರೈಲ್ವೆ ಬೋರ್ಡಿನಲ್ಲಿ ಇರುವ ಅರವತ್ತು ಶೇಕಡಾ ಅಧಿಕಾರಿಗಳು ಕೇರಳದವರು. ಅವರು ತಮ್ಮ ರಾಜ್ಯಕ್ಕೆ ಯಾವ ಲಾಬಿ ಮಾಡಲು ಕೂಡ ತಯಾರು. 2004 ಮತ್ತು 2014 ರಲ್ಲಿ ಮಂಗಳೂರನ್ನು ದಕ್ಷಿಣ ರೈಲ್ವೆಯಿಂದ ನೈರುತ್ಯ ರೈಲ್ವೆಗೆ ಸೇರಿಸುವ ಪ್ರಕ್ರಿಯೆ ಮುಗಿಯಬೇಕಿದ್ದರೂ ಆ ಕೇರಳದ ಲಾಬಿಯಿಂದ ನಡೆಯಲಿಲ್ಲ. ಆದ್ದರಿಂದ ಈಗಲಾದರೂ ಈ ಪ್ರಕ್ರಿಯೆ ಮುಗಿಸಿ ನಮಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದೇನೆ. ಆಗುತ್ತೆ ಎನ್ನುವ ವಿಶ್ವಾಸವಿದೆ. ಉಳಿದ ವಿಷಯವನ್ನು ನಾಳೆ ಬರೆಯುತ್ತೇನೆ.

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search