ತುಳುನಾಡಿನ ಆಟಿ ತಿಂಗಳು!
Posted On August 10, 2017
ನಮ್ಮ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕಾಸರಗೋಡು ಜಿಲ್ಲೆಯಲ್ಲಿ ಸಾಮಾನ್ಯವಾಗಿ ತುಳು ಸಂಸ್ಕೃತಿಯನ್ನು ಆಚರಿಸಲಾಗುತ್ತದೆ. ತುಳುನಾಡಿನ ಎಲ್ಲಾ ಹಬ್ಬ ಹರಿದಿನಗಳು ಹಾಗೂ ಒಂದೇ ರೀತಿಯ ಆಚರಣೆಗಳನ್ನು ಕಾಣಬಹುದು. ಪ್ರದೇಶವಾರು ಅಲ್ಪಸ್ವಲ್ಪ ಬದಲಾವಣೆ ಬಿಟ್ಟರೆ ಆಚರಣೆಯ ಮೂಲ ಸತ್ವ ಒಂದೇ ರೀತಿಯಾಗಿದೆ. ಉತ್ತರದ ಬ್ರಹ್ಮಾವರದಿಂದ ಹಿಡಿದು ದಕ್ಷಿಣದ ನೀಲೇಶ್ವರದ ತನಕ ತುಳುನಾಡು ಎಂದು ಸಾಮಾನ್ಯವಾಗಿ ತಿಳಿಯಬಹುದು. ಹಾಗಾಗಿ ಇಲ್ಲಿನ ಎಲ್ಲಾ ರೀತಿ ರಿವಾಜು ಕಟ್ಟು ಕಟ್ಟಳೆಗಳು ಆಚರಣೆಯಲ್ಲಿ ಕಾಣಬಹುದು. ಇಂತಹ ಆಚರಣೆಯಲ್ಲಿ ತುಳುನಾಡಿನ ತುಳು ಪಂಚಾಂಗದ ರೀತಿ ತುಳುವರಿಗೆ ಪಗ್ಗು ತಿಂಗಳಲ್ಲಿ ವರ್ಷ ಪ್ರಾರಂಭವಾದರೆ ಸುಗ್ಗಿ ತಿಂಗಳು ವರ್ಷದ ಕೊನೆಯ ತಿಂಗಳು ಅನ್ನುವುದು ವಾಡಿಕೆ. ಆದರೆ ಇತ್ತೀಚೆಗೆ ಹೊರಗಿನ ಆಚರಣೆಯ ಪ್ರಭಾವದಿಂದ ಈ ತುಳು ತಿಂಗಳು ಹೆಚ್ಚಿನವರಿಗೆ ತಿಳಿದಿಲ್ಲ. ತುಳುವರಿಗೆ ಪ್ರತಿಯೊಂದು ತಿಂಗಳು ವಿಶೇಷವೇ ಆಗಿದೆ. ಈಗ ಚಾಲ್ತಿಯಲ್ಲಿರುವ ಆಟಿ ತಿಂಗಳು ಕೂಡಾ ತುಳುವರಿಗೆ ಒಂದು ರೀತಿಯಲ್ಲಿ ಪವಿತ್ರವೇ ಆಗಿದೆ. ಯಾಕೆಂದರೆ ತುಳುನಾಡಿನ ಮೊದಲ ಹಬ್ಬ ಶುರುವಾಗುವುದು ಆಟಿ ಅಮವಾಸ್ಯೆಯ ದಿನ. ಆವತ್ತು ಬೆಳಿಗ್ಗೆ ಹಾಲೆಯ ಮರದ ಕಷಾಯ ಕುಡಿದು ಆನಂತರ ಆಟಿ ಅಮವಾಸ್ಯೆ ತೀರ್ಥ ಸ್ನಾನ ಮಾಡುವುದು ವಿಶೇಷ. ಅದರ ನಂತರ ಬರುವ ಸಾರ್ವತ್ರಿಕ ಹಬ್ಬ ನಾಗರ ಪಂಚಮಿ ಕೂಡಾ ಇದೇ ಆಟಿ ತಿಂಗಳಲ್ಲಿಯೇ ಬರುವುದು. ಹಾಗಾಗಿ ಆಟಿ ತಿಂಗಳು ತುಳುನಾಡಲ್ಲಿ ಹೊಸ ಕಳೆಯನ್ನು ಕೊಡುತ್ತದೆ ಅನ್ನುವುದು ಸತ್ಯ.


ನೀರು ಹೊಯ್ಯುವ ಈ ಕೆಳಗಿನ ಸಂದರ್ಭಗಳನ್ನು ನಾವು ಗುರುತಿಸಬಹುದು.
1. ಮಕ್ಕಳಿಗೆ ಸೌಖ್ಯ ಇಲ್ಲದಿದ್ದರೆ ಮಕ್ಕಳ ತಲೆಗೆ
2. ವಯಸ್ಸಾದರೂ ಋತುಮತಿಯಾಗದ ಹುಡುಗಿಯ ತಲೆಗೆ
3. ಮದುವೆಯಾಗಿ ಗರ್ಭಿಣಿಯಾಗದ ಹೆಂಗಸರ ತಲೆಗೆ
4. ದನ ಕರು ಹಾಕದಿದ್ದರೆ ಅದರ ತಲೆಗೆ
5. ತೆಂಗು ಫಲ ನೀಡದಿದ್ದರೆ ಅದರ ಬುಡಕ್ಕೆ ನೀರು ಹೊಯ್ಯುವುದು.
1. ಮಕ್ಕಳಿಗೆ ಸೌಖ್ಯ ಇಲ್ಲದಿದ್ದರೆ ಮಕ್ಕಳ ತಲೆಗೆ
2. ವಯಸ್ಸಾದರೂ ಋತುಮತಿಯಾಗದ ಹುಡುಗಿಯ ತಲೆಗೆ
3. ಮದುವೆಯಾಗಿ ಗರ್ಭಿಣಿಯಾಗದ ಹೆಂಗಸರ ತಲೆಗೆ
4. ದನ ಕರು ಹಾಕದಿದ್ದರೆ ಅದರ ತಲೆಗೆ
5. ತೆಂಗು ಫಲ ನೀಡದಿದ್ದರೆ ಅದರ ಬುಡಕ್ಕೆ ನೀರು ಹೊಯ್ಯುವುದು.
ಹೀಗೆ ಮನುಷ್ಯ, ಪ್ರಾಣಿ, ಪಕ್ಷಿಗಳ ರೋಗ ರುಜಿನಾದಿಗಳನ್ನು ತನ್ನ ಮಾಂತ್ರಿಕ ಶಕ್ತಿಯಿಂದ ಹೋಗಲಾಡಿಸಿ ಜನಸಮುದಾಯ ಮತ್ತು ಸಾಕುಪ್ರಾಣಿಗಳ,ನಾಡಿನ ಫಸಲಿನ ಸಂರಕ್ಷಕನಾಗಿ ಕಲೆಂಜ ಕಾಣುತ್ತಾನೆ. ಊರಿಗೆ ಬಂದ ಮಾರಿಯನ್ನು ಓಡಿಸಿ ನೆಮ್ಮದಿಯ ಬದುಕನ್ನು ಜನಸಮುದಾಯಕ್ಕೆ ತರುವುದೇ ಕಲೆಂಜ ಕುಣಿತದ ಆಶಯವಾಗಿದೆ.(ಮಾಹಿತಿ: ಡಾ. ಕೋಯಿರಾ ಎನ್. ಬಾಳೆಪುಣಿ ರವರ ಮುಗೇರರ ದುಡಿ ಕುಣಿತಗಳು: ಸ್ವರೂಪ ಮತ್ತು ಸಂಸ್ಕೃತಿ ಕೃತಿಯಿಂದ)


ಹೀಗೆ ತುಳುನಾಡಿನಲ್ಲಿ ಮಳೆಗಾಲ ಅನ್ನುವುದು ಒಂದು ರೀತಿಯ ಆಚರಣೆ ಅಂತಲೇ ಹೇಳಬಹುದು. ಈಗೀಗ ಆಟಿಡೊಂಜಿ ಕೂಟ ಅಂತ ಆಚರಣೆ ಮಾಡುತ್ತಾರೆ. ಮುಖ್ಯವಾದ ಅಂಶಗಳನ್ನು ಹೊರತು ಪಡಿಸಿ ಇದು ಒಂದು ರೀತಿಯ ಒಣ ಆಚರಣೆಯಂತಾಗಿದೆ. ತುಳುನಾಡಿನ ನಿಜವಾದ ಆಟಿ ಆಚರಣೆ ಮಾಡಬೇಕಾದರೆ ಹಿಂದೆ ಬಂದ ರೀತಿಯಲ್ಲೇ ಮಳೆ ಬರಬೇಕು. ಅಂತಹ ಮಳೆಯಲ್ಲಿ ಸಾಂಪ್ರಾದಾಯಿಕ ಆಟಿ ಆಚರಣೆ ಮಾಡಬೇಕು. ಅದಕ್ಕಾಗಿ ಈಗಿರುವ ಪರಿಸರದ ಅಸಮತೋಲನ ನಿವಾರಣೆ ಮಾಡಬೇಕು. ಮಳೆಯ ಪ್ರಮಾಣ ಹೆಚ್ಚು ಮಾಡಿ ನಿಜವಾದ ಆಟಿ ಆಚರಣೆ ಮುಂದೆ ಮಾಡೋಣ.
- Advertisement -
Leave A Reply