• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಮೀಸಲಾತಿ ಪಂಚೆಯೊಳಗಿನ ಕೆಂಡದಂತೆ, ಬಿಟ್ಟರೆ ನಷ್ಟ, ಇಟ್ಟರೆ ಕಷ್ಟ!!

Hanumantha Kamath Posted On April 1, 2021
0


0
Shares
  • Share On Facebook
  • Tweet It

ಮುಂದಿನ ಚುನಾವಣೆಯ ಹೊತ್ತಿನಲ್ಲಿ ಈಗ ಮುಖ್ಯಮಂತ್ರಿಯಾಗಿರುವ ಬಿ.ಎಸ್.ಯಡಿಯೂರಪ್ಪನವರು ತಮ್ಮ ಕುರ್ಚಿ ಉಳಿಸುವುದಕ್ಕಾಗಿ ಕೊಟ್ಟಿರುವ ಭರವಸೆಯನ್ನು ಈಡೇರಿಸದೇ ಹೋದರೆ ಅವರು ಯಾರಿಗೆಲ್ಲ ಮೀಸಲಾತಿಯ ಭರವಸೆ ಕೊಟ್ಟಿದ್ದಾರೋ ಅವರು ಬಿಜೆಪಿಗೆ ಕೈ ನೀಡಲಿದ್ದಾರೆ. ಅಂತಹ ಒಂದು ಪರಿಸ್ಥಿತಿ ನಿರ್ಮಾಣವಾಗುವ ಎಲ್ಲಾ ಸಾಧ್ಯತೆಗಳಿವೆ. ಹಾಗಂತ ಒಂದು ಜಾತಿಗೆ ಮೀಸಲಾತಿ ಕೊಟ್ಟ ತಕ್ಷಣ ಏನೂ ಸಮಸ್ಯೆ ಆಗದೇ ಅದು ನೇರವಾಗಿ ಬಿಜೆಪಿಗೆ ಅನುಕೂಲವಾಗುತ್ತಾ ಎಂದು ನೋಡಿದರೆ ನೋ ಚಾನ್ಸ್, ಒಂದು ಸಮುದಾಯ ಖುಷಿಯಾಗಬಹುದು. ಆದರೆ ಅನೇಕ ಚಿಕ್ಕಪುಟ್ಟ ಸಮಾಜಗಳು ಕೋಪಗೊಳ್ಳುತ್ತವೆ. ಯಾಕೆಂದರೆ ಒಂದು ಸಮುದಾಯಕ್ಕೆ ನೀಡಿರುವ ಶೇಕಡಾವಾರು ಮೀಸಲಾತಿಯಲ್ಲಿ ಶೇಕಡಾ ಪ್ರಮಾಣ ಜಾಸ್ತಿ ಮಾಡಿದರೆ ಅದು ಆಟೋಮೇಟಿಕ್ ಆಗಿ ಬೇರೆ ಸಮುದಾಯದ ಹಕ್ಕನ್ನು ಕಡಿಮೆ ಮಾಡಿದಂತೆ ಆಗುತ್ತದೆ.

50% ಗಿಂತ ಜಾಸ್ತಿ ಮೀಸಲಾತಿ ನೀಡಬೇಡಿ ಎಂದು ಸುಪ್ರೀಂಕೋರ್ಟ್ ಹೇಳಿರುವುದರಿಂದ ಇದ್ದದ್ದರಲ್ಲಿ ಸೌಲಭ್ಯಗಳನ್ನು ಎಲ್ಲರೂ ಹಂಚಿ ತಿನ್ನಬೇಕಾಗುತ್ತದೆ. ಈ ಮೀಸಲಾತಿಯ ಪರಿಧಿಯೊಳಗೆ ಇದ್ದ ಜಾತಿಗಳೇ ಈಗ ಒಂದು ರೊಟ್ಟಿ ಸಿಕ್ಕಿದರೆ ಅದೆಷ್ಟೋ ತುಂಡು ಮಾಡಿ ತಿನ್ನಬೇಕಾಗುತ್ತಿದೆ. ಅದೇ ಇನ್ನಷ್ಟು ಜಾತಿಗಳು ಸೇರಿದರೆ ತುಂಡು ಜಾಸ್ತಿಯಾಗುತ್ತದೆ ವಿನ: ಯಾರಿಗೂ ಹೊಟ್ಟೆ ತುಂಬುವುದಿಲ್ಲ. ಆದ್ದರಿಂದ ಬೇರೆ ಬೇರೆ ಜಾತಿಗಳು ಮೀಸಲಾತಿ ಜಾಸ್ತಿ ಮಾಡಿ ಅಥವಾ ನಮಗೆ ಮೀಸಲಾತಿ ಕೊಡಿ ಎಂದು ಒತ್ತಡ ಹಾಕಿದಾಗ ಸಹಜವಾಗಿ ಮೀಸಲಾತಿಯ ಒಳಗಿರುವವರು ಗುರ್ ಎನ್ನುತ್ತಾರೆ ವಿನ: ಅವರಿಗೂ ಕೊಡಿ, ಇವರಿಗೂ ಕೊಡಿ, ಮತ್ತೊಬ್ಬರಿಗೂ ಕೊಡಿ ಎಂದು ಹೇಳುವುದಿಲ್ಲ. ನೀವು ಸರಿಯಾಗಿ ಗಮನಿಸಿ, ಈ ಮೀಸಲಾತಿಯ ಹೋರಾಟ ನಡೆದಾಗ ಸಿದ್ಧರಾಮಯ್ಯ ಎಷ್ಟು ಆಗುತ್ತೋ ಅಷ್ಟು ಸೈಲೆಂಟಾಗಿ ದೂರ ಉಳಿಯುವ ಪ್ರಯತ್ನ ಮಾಡಿದ್ದರು. ಇದರಲ್ಲಿ ರಾಜಕೀಯ ಮಾಡಲು ಹೋಗಿ ಬಿಜೆಪಿ ಸರಕಾರದ ಮೇಲೆ ಒತ್ತಡ ತಂದರೆ ಆಗ ತಮ್ಮ ವೋಟ್ ಬ್ಯಾಂಕಿಲ್ಲಿರುವ ಇತರ ಜಾತಿಯವರು ಕೈಬಿಟ್ಟಾರು ಎನ್ನುವ ಹೆದರಿಕೆ ಅವರಲ್ಲಿತ್ತು. ಯಾಕೆಂದರೆ ಮೀಸಲಾತಿ ಎನ್ನುವುದು ಪ್ರತಿ ರಾಜಕೀಯ ಪಕ್ಷದ ನಾಯಕರಿಗೂ ತಮ್ಮ ಪಂಚೆಯೊಳಗಿನ ಕೆಂಡದಂತೆ. ಪಂಚೆ ಸುಡುತ್ತೆ ಎಂದು ಗೊತ್ತಿದ್ದರೂ ಅದನ್ನು ಬಿಟ್ಟು ಇರಲು ಆಗಲ್ಲ. ಯಾಕೆಂದರೆ ಜಾತಿಗಳು ಇಲ್ಲದೆ ನಮ್ಮ ರಾಜಕೀಯದಲ್ಲಿ ಏನೂ ನಡೆಯುವುದೇ ಇಲ್ಲ. ಆವತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರು ತಮ್ಮ ಸಮಾಜಕ್ಕೆ ಮೀಸಲಾತಿ ನೀಡಿದ್ದು ಏಕೆಂದರೆ ಆಗ ಪರಿಸ್ಥಿತಿ ಹಾಗೆ ಇತ್ತು. ಸವರ್ಣೀಯರ ಎದುರು ನಿಂತು ಸಮಬಲ ಸಾಧಿಸಬೇಕಾದರೆ ಮೀಸಲಾತಿ ಅಗತ್ಯ ಇತ್ತು. ಆವತ್ತು ಕೊಟ್ಟ ಮೀಸಲಾತಿಯನ್ನು ಅವರು ಭಾರತ ದೇಶದ ಸಂವಿಧಾನ ಇರುವ ತನಕ ಯಾರೂ ನಿಷೇಧ ಮಾಡಬಾರದು ಎಂದು ಹೇಳಿಯೇ ಇಲ್ಲ. ಈಗ ಒಂದು ವೇಳೆ ಸ್ವತ: ಡಾ.ಅಂಬೇಡ್ಕರ್ ಇದ್ದರೂ ಅವರು ಮೀಸಲಾತಿಯನ್ನು ವಿರೋಧಿಸುತ್ತಿದ್ದರು. ಆದರೆ ಅಂಬೇಡ್ಕರ್ ಅವರ ವಿರುದ್ಧ ತಮ್ಮ ಅಭ್ಯರ್ಥಿ ನಿಲ್ಲಿಸಿ ಸಂವಿಧಾನದ ಜನಕನನ್ನು ಸೋಲಿಸಿದ ಕಾಂಗ್ರೆಸ್ಸಿಗೆ ಮೀಸಲಾತಿ ಮುಗಿಯುವುದು ಬೇಕಿಲ್ಲ. ಅವರು ಇನ್ನಷ್ಟು ಜಾತಿಗಳಿಗೆ ಮೀಸಲಾತಿಯನ್ನು ಒದಗಿಸಿ ಆ ಸಮುದಾಯದ ಕೃಪೆಗೆ ಪಾತ್ರರಾಗುತ್ತಾ ಹೋದರು. ಆದರೆ ನಂತರ ಬಂದದ್ದು ಭಾರತೀಯ ಜನತಾ ಪಾರ್ಟಿ. ಹಾಗಂತ ಬಿಜೆಪಿ ಏನು ಮೀಸಲಾತಿ ರದ್ದು ಮಾಡುತ್ತೇವೆ ಎಂದು ಹೇಳುವ ಸ್ಥಿತಿಯಲ್ಲಿ ಇರಲೇ ಇಲ್ಲ. ಹೇಳಲು ಹೋದರೆ ಅದು ಬಿಜೆಪಿಯ ವಿರೋಧ ಜ್ವಾಲಾಮುಖಿಯಾಗಿ ಪರಿವರ್ತನೆಯಾಗುವ ಸ್ಥಿತಿಯಲ್ಲಿತ್ತು. ಆದ್ದರಿಂದ ಅದು ಮುಂದುವರೆಯುತ್ತಾ ಹೋಯಿತು. ಆದ್ದರಿಂದ ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಮೀಸಲಾತಿಯ ಪರಿಮಾಣ ಹೆಚ್ಚುತ್ತಾ ಹೋಗುತ್ತೆ ವಿನ: ಕಡಿಮೆಯಾಗುವ ಲಕ್ಷಣಗಳು ಕಾಣಿಸಲೇ ಇಲ್ಲ. ಪರಿಸ್ಥಿತಿ ಹೀಗಿರುವಾಗಲೇ ಸುಪ್ರೀಂಕೋರ್ಟ್ ಈ ಪ್ರಶ್ನೆಯನ್ನು ಕೇಳಿದೆ. ಮೀಸಲಾತಿಯ ವಿಷಯದಲ್ಲಿ ನಿಮ್ಮ ನಿಮ್ಮ ರಾಜ್ಯಗಳ ಅಭಿಪ್ರಾಯ ತಿಳಿಸಿ.

ನನ್ನ ಪ್ರಕಾರ ಮೀಸಲಾತಿ ಇರಲೇಬೇಕು. ಆದರೆ ಅದು ಜಾತಿ ಆಧಾರಿತವಾಗಿ ಇರಬಾರದು. ಆರ್ಥಿಕ ಶಕ್ತಿ ಆಧರಿಸಿ ಇರಬೇಕು. ಪ್ರತಿ ಸಮುದಾಯದಲ್ಲಿ ಬಡವರು, ಕೆಳಮಧ್ಯಮ ವರ್ಗದವರು ಇದ್ದೇ ಇರುತ್ತಾರೆ. ಅದು ಒಕ್ಕಲಿಗ, ಲಿಂಗಾಯಿತ ಅಥವಾ ಬ್ರಾಹ್ಮಣನೇ ಇರಬಹುದು. ಅದು ಪರಿಶಿಷ್ಟ ಜಾತಿ, ಪಂಗಡ, ಕುರುಬ ಅಥವಾ ಹಿಂದುಳಿದ ಜಾತಿಗಳೇ ಇರಬಹುದು. ಬಡತನ ಇಲ್ಲದ ಜಾತಿಯೇ ಇಲ್ಲ. ಆದ್ದರಿಂದ ಇನ್ನು ಮುಂದೆ ನೈಜವಾಗಿ ಬಡವರು ಯಾರು ಇದ್ದಾರೆ ಅವರಿಗೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಇರಬೇಕು. ಕಾರಿನಲ್ಲಿ ಬಂದು ಬಿಪಿಎಲ್ ಕಾರ್ಡ್ ತೋರಿಸುವ “ಬಡ” ಮನಸ್ಸಿನವರಿಗೆ ಅಲ್ಲ. ಈಗ ಏನಾಗುತ್ತಿದೆ ಎಂದರೆ ಮೀಸಲಾತಿ ಇಲ್ಲದ ಬಡ ಕುಟುಂಬದಿಂದ ಹೆಣ್ಣುಮಗಳಿಗೆ 95 ಶೇಕಡಾ ಅಂಕ ಬಂದರೂ ಮೀಸಲಾತಿ ಇರುವ ಅನುಕೂಲಸ್ಥ ಮನೆತನದ ಹುಡುಗಿಗೆ 59 ಶೇಕಡಾ ಇದ್ದರೂ ನೈಜವಾಗಿ ಯಾರಿಗೆ ಏನು ಸಿಗಬೇಕೋ ಅದು ಸಿಗುತ್ತಿಲ್ಲ. ಇದರಿಂದ ಅಂಬೇಡ್ಕರ್ ಅವರ ಮೀಸಲಾತಿಯ ಉದ್ದೇಶವೇ ಹಾಳಾಗಿ ಹೋಗುತ್ತಿದೆ. ಮೇಲ್ವರ್ಗದವರು ಮೀಸಲಾತಿ ತೆಗೆಸಲು ಹವಣಿಸುತ್ತಿದ್ದಾರೆ ಎಂದು ಕೆಲವರ ಆಕ್ಷೇಪ ಇರಬಹುದು. ಆದರೆ ಇನ್ನು ಮುಂದೆ ಮೇಲು, ಕೀಳು ಎನ್ನುವುದಕ್ಕಿಂತ ನೈಜ ಬಡತನ ಮತ್ತು ಆರ್ಥಿಕ ಸಂಕಟತನ ಪರಿಗಣನೆಗೆ ಬರಲಿ ಎಂದು ಆಶಯ!

0
Shares
  • Share On Facebook
  • Tweet It




Trending Now
ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
Hanumantha Kamath September 16, 2025
ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
Hanumantha Kamath September 16, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
  • Popular Posts

    • 1
      ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • 2
      ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • 3
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • 4
      ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • 5
      ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search