• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಮಧುಮೇಹಿಗಳಿಗೆ ಸಿಹಿ ಸುದ್ದಿ! ಇನ್ನು ಮಾತ್ರೆಗೆ ಅಷ್ಟು ಹಣ ಕೊಡಬೇಕಿಲ್ಲ!

Tulunadu News Posted On March 14, 2025
0


0
Shares
  • Share On Facebook
  • Tweet It

ಭಾರತವನ್ನು ಮಧುಮೇಹಿಗಳ ತವರೂರು ಎನ್ನುವ ನೋವಿನ ಹಣೆಪಟ್ಟಿ ಭಾರತೀಯರಿಗೆ ಸಿಕ್ಕಿದೆ. ಡಯಾಬೀಟಿಸ್ ಕಾಯಿಲೆ ಬರದಿರಲಿ ಎಂದು ಬೇಡುವವರಿಗೇನೂ ತೊಂದರೆ ಇಲ್ಲ. ಬಹುತೇಕರು ಈ ಕಾಯಿಲೆಯನ್ನು ನಿಯಂತ್ರಣದಲ್ಲಿಡಲು ಮಾತ್ರೆಗಳನ್ನು ತಿನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಮಧುಮೇಹಿಗಳು ಪ್ರಮುಖವಾಗಿ ಬಳಸುವ ಎಂಪಾಗ್ಲಿಫ್ಲೋಜಿನ್ ಮಾತ್ರೆಗೆ ಈ ಮೊದಲು 60 ರೂಪಾಯಿ ಇತ್ತು. ಆದರೆ ಎಂಪಾಗ್ಲಿಪ್ಲೋಜಿನ್ ಔಷಧದ ತಯಾರಿಕಾ ಕಂಪೆನಿಯಾದ ಬೋರಿಂಜರ್ ಇಂಗ್ಲ್ ಹೈಂ (ಬಿಐ) ಹೊಂದಿದ ಪೇಟೆಂಟ್ ಅವಧಿ ಮಾರ್ಚ್ ಗೆ ಮುಕ್ತಾಯವಾಗಿದೆ.

ಹೀಗಾಗಿ ಹಲವು ಕಂಪೆನಿಗಳು ಇದರ ಜನೆರಿಕ್ ಮಾದರಿಯ ಔಷಧಗಳನ್ನು ತಯಾರಿಸಿ ಸಾರ್ವಜನಿಕರಿಗೆ ಬಿಡುಗಡೆ ಮಾಡಿವೆ. ಇದರ ಪರಿಣಾಮ ಔಷಧಗಳ ಮುಕ್ತ ಮಾರುಕಟ್ಟೆಯಲ್ಲಿ ಸ್ಪರ್ಧೆ ಏರ್ಪಟ್ಟು ದರ ಪಾತಾಳ ತಲುಪಿದೆ. ಪ್ರಸ್ತುತ ಒಂದು ಮಾತ್ರೆಗೆ ಐದು ರೂಪಾಯಿಯಿಂದ ದರ ಆರಂಭವಾಗಿದೆ. ಇದರಿಂದ ಭಾರತದ ಕೋಟ್ಯಾಂತರ ನಾಗರಿಕರಿಗೆ ಉಪಯೋಗವಾಗಲಿದೆ. ಇಲ್ಲಿಯ ತನಕ ಪಾಪದವರ ದುಡಿಯುವ ಗಮನಾರ್ಹ ಮೊತ್ತ ಈ ಮಾತ್ರೆಗಳಿಗೆ ತಗಲುತ್ತಿತ್ತು. ಇನ್ನು ಅದು ಉಳಿತಾಯವಾಗಲಿದೆ. ದೆಹಲಿ ಮೂಲದ ಕಂಪೆನಿ ಮ್ಯಾನ್ ಕ್ಲೈಂಡ್ ಇದರ ಬೆಲೆಯನ್ನು ಐದೂವರೆ ರೂಪಾಯಿಯಿಂದ ಆರಂಭಿಸಿದ್ದರೆ ಮುಂಬೈ ಮೂಲದ ಗ್ಲೆನ್ ಮಾರ್ಕ್ 11 ರೂಪಾಯಿಯಿಂದ ಆರಂಭಿಸಿದೆ. ಇನ್ನು ಆಲ್ಕೆಂ ಕಂಪೆನನಿಯು ಮೂಲ ದರಕ್ಕಿಂತ 80 ಶೇಕಡಾ ಕಡಿಮೆ ದರವನ್ನು ನಿಗದಿಪಡಿಸಿದೆ.

ಒಟ್ಟಿನಲ್ಲಿ ವಿಷಯ ಚಿಕ್ಕದಿದ್ದರೂ ಇದರ ಪ್ರಯೋಜನ ಮಾತ್ರ ದೊಡ್ಡದು. ಒಂದು ಸಂಸ್ಥೆಗೆ ಪೇಟೆಂಟ್ ಇದ್ದರೆ ಅದರ ದರ ಹೇಗಿರುತ್ತದೆ ಮತ್ತು ಪೇಟೆಂಟ್ ಇಲ್ಲದಿದ್ದರೆ ಬಡವರಿಗೆ ಎಷ್ಟು ಲಾಭವಾಗುತ್ತದೆ ಎನ್ನುವುದು ಇದರಿಂದ ಗೊತ್ತಾಗುತ್ತದೆ.

0
Shares
  • Share On Facebook
  • Tweet It




Trending Now
ಕೇರಳದ ಸನ್ಯಾನಿಸಿಯರಿಗೆ ಜಾಮೀನು ಇಲ್ಲ; ಕಾಂಗ್ರೆಸ್ ಪ್ರತಿಭಟನೆ
Tulunadu News July 31, 2025
ಡ್ರೋಣ್ ಕ್ಷೇತ್ರದ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಗೆ ಡಿಎಫ್ ಐ ಅಧ್ಯಕ್ಷರ ಕೌಂಟರ್!
Tulunadu News July 30, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕೇರಳದ ಸನ್ಯಾನಿಸಿಯರಿಗೆ ಜಾಮೀನು ಇಲ್ಲ; ಕಾಂಗ್ರೆಸ್ ಪ್ರತಿಭಟನೆ
    • ಡ್ರೋಣ್ ಕ್ಷೇತ್ರದ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಗೆ ಡಿಎಫ್ ಐ ಅಧ್ಯಕ್ಷರ ಕೌಂಟರ್!
    • ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
    • ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟ ಅನಿವಾರ್ಯ -ನಳಿನ್ ಕುಮಾರ್ ಕಟೀಲ್
    • SSLC ಮಕ್ಕಳಿಗೆ ರಾಜ್ಯ ಸರಕಾರದಿಂದ ಶುಭ ಸುದ್ದಿ!
    • ಬಹುಮುಖ ಪ್ರತಿಭೆ ರಾಜಶ್ರೀ ಪೂಜಾರಿ ಇನ್ನಿಲ್ಲ!
    • ಚಕ್ರವರ್ತಿ ವಿರುದ್ಧದ FIR ರದ್ದು! ಸುಪ್ರೀಂ ಕೋರ್ಟಿನಲ್ಲಿ ಅರುಣ್ ಶ್ಯಾಮ್ ವಾದ
    • 6 ಡ್ರೋನ್ ಗಳಲ್ಲಿ ಪಾಕ್ ನಿಂದ ಪಿಸ್ತೂಲ್, ಹೆರಾಯಿನ್ ಸಾಗಾಟ: ಧರೆಗುರುಳಿಸಿದ ಬಿಎಸ್ ಎಫ್..
    • ಶಿವದೂತ ಗುಳಿಗೆ ನಾಟಕದ "ಭೀಮರಾವ್" ರಮೇಶ್ ಕಲ್ಲಡ್ಕ ನಿಧನ!
    • ನೂರಾರು ಜನರಿಗೆ ಸಾಲಕೊಡಿಸುವ ನೆಪದಲ್ಲಿ ವಂಚನೆ: ರೋಶನ್ ಸಲ್ದಾನಾ ಪ್ರಕರಣ ಸಿಐಡಿಗೆ
  • Popular Posts

    • 1
      ಕೇರಳದ ಸನ್ಯಾನಿಸಿಯರಿಗೆ ಜಾಮೀನು ಇಲ್ಲ; ಕಾಂಗ್ರೆಸ್ ಪ್ರತಿಭಟನೆ
    • 2
      ಡ್ರೋಣ್ ಕ್ಷೇತ್ರದ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಗೆ ಡಿಎಫ್ ಐ ಅಧ್ಯಕ್ಷರ ಕೌಂಟರ್!
    • 3
      ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
    • 4
      ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟ ಅನಿವಾರ್ಯ -ನಳಿನ್ ಕುಮಾರ್ ಕಟೀಲ್
    • 5
      SSLC ಮಕ್ಕಳಿಗೆ ರಾಜ್ಯ ಸರಕಾರದಿಂದ ಶುಭ ಸುದ್ದಿ!

  • Privacy Policy
  • Contact
© Tulunadu Infomedia.

Press enter/return to begin your search