• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸಿನಿಮಾ ಸುದ್ದಿ 

20, 30 ವಯಸ್ಸಿನಲ್ಲಿ ಮಗು ಬೇಕೆನ್ನುವ ಆಸೆ ಹುಟ್ಟಿರಲಿಲ್ಲ, 40 ರಲ್ಲಿ ಬಂತು! ಖ್ಯಾತ ನಟಿಯ ಮನದಿಂಗಿತ…

TULUNADU NEWS Posted On July 5, 2025
0


0
Shares
  • Share On Facebook
  • Tweet It

ಅನೇಕ ಐವಿಎಫ್ ಸೆಂಟರ್ ಗಳಿಗೆ ಹೋದೆ. ಆದರೆ ಅವಿವಾಹಿತೆ, ಸಿಂಗಲ್ ಮದರ್ ಎನ್ನುವ ಕಾರಣಕ್ಕೆ ಅಲ್ಲಿ ವೈದ್ಯರು ಅಷ್ಟಾಗಿ ಆಸಕ್ತಿ ತೋರಿಸಲಿಲ್ಲ. ಸಮಯ ದೂಡುತ್ತಾ ಬಂದರು. ಕೊನೆಗೆ ಮನೆಯ ಹತ್ತಿರವೇ ಇದ್ದ ಐವಿಎಫ್ ನಲ್ಲಿ ವೀರ್ಯದಾನಿಯೊಬ್ಬರ ಸಹಾಯದಿಂದ ಗರ್ಭವತಿ ಆದೆ. ವೈದ್ಯರು ಪ್ರತಿ ಹಂತದಲ್ಲಿಯೂ ಸಹಾಯ ಮಾಡಿದರು ಎಂದು ಕನ್ನಡ ಚಿತ್ರರಂಗದ ನಟಿ ಕಮ್ ರಾಜಕಾರಣಿ ಭಾವನಾ ರಾಮಣ್ಣ ಹೇಳಿದ್ದಾರೆ.

ತಾಯಿಯಾಗಬೇಕು ಎನ್ನುವ ಆಸೆ 20 ಅಥವಾ 30 ನೇ ವಯಸ್ಸಿನಲ್ಲಿ ಬಂದಿರಲಿಲ್ಲ. 30 ನೇ ವಯಸ್ಸಿನಲ್ಲಿ ಲವ್ ಮಾಡುವ ಮನಸ್ಸಿತ್ತಾದರೂ ಆಗಲೂ ಮಕ್ಕಳು ಆಗಬೇಕೆನ್ನುವ ಆಸೆ ಬಂದಿರಲಿಲ್ಲ. ಆದರೆ ನಲ್ವತ್ತರಲ್ಲಿ ಈ ಆಸೆ ದೊಡ್ಡದಾಗಿ ಮನಸ್ಸಿನಲ್ಲಿ ಬಂದಿತ್ತು. ಅದನ್ನು ನಿರ್ಲಕ್ಷಿಸಲು ಸಾಧ್ಯವೇ ಆಗಲಿಲ್ಲ. ಈಗ ಆರು ತಿಂಗಳ ಗರ್ಭೀಣಿ. ಅವಳಿ ಮಕ್ಕಳನ್ನು ಹೆರಲಿದ್ದೇನೆ ಎಂದು ಭಾವನಾ ಖುಷಿಯನ್ನು ತೆರೆದಿಟ್ಟಿದ್ದಾರೆ.

ವೈದ್ಯಕೀಯ ತಂತ್ರಜ್ಞಾನದ ಸಹಾಯದಿಂದ ತಾಯಿಯಾಗುತ್ತಿರುವ ಭಾವನ ಈ ಸಮಾಜದಲ್ಲಿ ಸಿಂಗಲ್ ಮದರ್ ಅವರ ಮುಂದಿರುವ ಸವಾಲುಗಳು ಮತ್ತು ತಂದೆ ಇಲ್ಲದೇ ತಾಯಿಯೊಬ್ಬಳು ಬೆಳೆಸುವ ಮಕ್ಕಳ ಭವಿಷ್ಯದ ಬಗ್ಗೆಯೂ ಮನಬಿಚ್ಚಿ ಮಾತನಾಡುತ್ತಾರೆ. ಮೊದಲು ಸಾಮಾನ್ಯ ರೀತಿಯಲ್ಲಿ ತಾಯಿಯಾಗಬೇಕು ಎನ್ನುವ ಮನಸ್ಸಿತ್ತು. ಆದರೆ ಮದುವೆ ಮತ್ತು ಮಕ್ಕಳು ಎನ್ನುವ ಕಾನ್ಸೆಪ್ಟ್ ಗಿಂತಲೂ ವೈದ್ಯಕೀಯ ತಂತ್ರಜ್ಞಾನದ ಸಹಾಯದಿಂದ ಮಕ್ಕಳನ್ನು ಪಡೆಯೋಣ ಎಂದು ಅನಿಸಿತು. ಆದರೆ ಬಹಳ ಕಾಲದ ತನಕ ಅವಿವಾಹಿತರು ತಾಯಿಯಾಗುವ ಬಗ್ಗೆ ನಮ್ಮಲ್ಲಿ ಸೂಕ್ತ ಕಾನೂನು ಬೆಂಬಲಿತ ವಿಷಯಗಳೇ ಇರಲಿಲ್ಲ. ಆದರೆ ಯಾವಾಗ ಕಾನೂನು ಈ ವಿಷಯದಲ್ಲಿ ನಮ್ಮಂತವರ ಬೆಂಬಲಕ್ಕೆ ರೂಪುರೇಶೆ ಹಾಕಿಕೊಟ್ಟ ಮೇಲೆ ಧೈರ್ಯ ಬಂತು. ಆದರೆ ನಾನು ಹೋದ ಐವಿಎಫ್ ಸೆಂಟರ್ ಗಳಲ್ಲಿ ಮದುವೆಯಾಗಲಿಲ್ಲ ಎಂದು ಗೊತ್ತಾದ ತಕ್ಷಣ ಅಲ್ಲಿನವರು ಹಿಂದೆ ಸರಿಯುತ್ತಿದ್ದರು” ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಮೊದಲ ಪ್ರಯತ್ನದಲ್ಲಿಯೇ ಇದು ಸಾಧ್ಯವಾಯಿತು. ನಂತರ ಮನೆಗೆ ಬಂದು ತಂದೆಗೆ ಈ ವಿಷಯ ತಿಳಿಸಿ ತಾನು ಐವಿಎಫ್ ಮೂಲಕ ತಾಯಿಯಾಗುವ ಬಗ್ಗೆ ಹೇಳಿದಾಗ ಅವರು ತುಂಬಾ ಸಂತಸಪಟ್ಟರು. ” ನೀನು ಓರ್ವ ಹೆಣ್ಣುಮಗಳಾಗಿ ನಿನಗೆ ತಾಯಿಯಾಗುವ ಸಂಪೂರ್ಣ ಹಕ್ಕಿದೆ” ಎಂದು ಖುಷಿಯಿಂದ ಹೇಳಿದರು. ಅದರೊಂದಿಗೆ ನನ್ನ ಸಂಬಂಧಿಕರು ಕೂಡ ತುಂಬಾ ಸಂಭ್ರಮಿಸುತ್ತಿದ್ದಾರೆ ಮತ್ತು ನನ್ನನ್ನು ಚೆನ್ನಾಗಿ ನೋಡಿಕೊಳ್ಳಲು ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದಾರೆ. ಅದರೊಂದಿಗೆ ಕೆಲವರು ಇದು ಮಕ್ಕಳನ್ನು ಮಾಡಲು ಸರಿಯಾದ ದಾರಿನಾ ಎನ್ನುವ ಪ್ರಶ್ನೆಯನ್ನು ನನ್ನಲ್ಲಿ ಕೇಳಿದ್ದಾರೆ. ಆದರೆ ನಾನು ಈ ವಿಷಯದಲ್ಲಿ ಬಹಳ ಸರಳ ಹಾಗೂ ಸ್ಪಷ್ಟವಾಗಿ ನನ್ನ ಭಾವನೆಗಳನ್ನು ಹೇಳಿದ್ದೇನೆ” ಎಂದು ತಿಳಿಸಿದ್ದಾರೆ.

ಭಾವನಾ ಅವರಿಗೆ ಸಿಂಗಲ್ ಮದರ್ ಆಗಿ ಇರುವುದು ಯಾವ ರೀತಿಯ ಸವಾಲು ಎನ್ನುವುದರ ಅರಿವಿದೆ. ಅವರ ಗೆಳತಿಯೊಬ್ಬರು ಸಿಂಗಲ್ ಮದರ್ ಆಗಿದ್ದು, ಅವರಿಗೆ ಬಾಡಿಗೆ ಮನೆ ಸಿಗುವುದೇ ಕಷ್ಟವಾಗಿತ್ತಂತೆ. ಆಕೆಗೆ 50 ವರ್ಷ. ಅವಳ ಮಗನಿಗೆ 20 ವರ್ಷ. ಆದರೆ ಕೆಲವರು ಬಾಡಿಗೆ ಮನೆ ನೀಡಲು ನಿರಾಕರಿಸಿದರು ಎಂದು ಭಾವನಾ ಹೇಳುತ್ತಾರೆ. ಇಂದಿನ ಕಾಲದಲ್ಲಿಯೂ ಮಹಿಳೆ ಇದನ್ನೆಲ್ಲಾ ಎದುರಿಸಬೇಕಾಗುತ್ತದೆ ಎನ್ನುವುದು ಗೊತ್ತಿದೆ. ಹಾಗಂತ ನಾನು ಮದುವೆ ಅಥವಾ ಸಂಬಂಧಗಳ ವಿರೋಧಿಯಲ್ಲ. ನಾನು ಸಮಾಜದ ಕಟ್ಟುಪಾಡುಗಳನ್ನು ವಿರೋಧಿಸಿ ಏನನ್ನೋ ಸಾಧಿಸಬೇಕೆಂದು ಹೊರಟವಳಲ್ಲ. ನನಗೂ ಓರ್ವ ಉತ್ತಮ ಸಂಗಾತಿ ಸಿಕ್ಕಿದರೆ ನಾನು ಕೂಡ ಎಲ್ಲರಂತೆ ಸಾಂಪ್ರದಾಯಿಕವಾದ ಹಾದಿಯಲ್ಲಿಯೇ ನಡೆದು ಮಕ್ಕಳನ್ನು ಹೊಂದುತ್ತಿದೆ. ಆದರೆ ಜೀವನ ಎಲ್ಲರದ್ದೂ ಒಂದೇ ರೀತಿ ಇರುವುದಿಲ್ಲವಲ್ಲ. ಆದರೆ ನನಗೆ ತಾಯಿಯಾಗಬೇಕೆಂಬ ಗುರಿ ಇತ್ತು. ನನ್ನ ಇಚ್ಚೇ ಸಹಜ ಮತ್ತು ಶಕ್ತಿಶಾಲಿಯಾಗಿತ್ತು. ಇನ್ನು ನನ್ನ ನಡೆ ಏಕಾಂಗಿಯಾಗಿದ್ದರೂ ಸ್ವಂತ ಮಗುವಿನ ತಾಯಿಯಾಗಬೇಕೆಂಬ ಆಸೆ, ತುಡಿತ ಹೊಂದಿರುವ ಮಹಿಳೆಯರಿಗೆ ಸ್ಫೂರ್ತಿ ಆದರೆ ಅದಕ್ಕಿಂತ ಖುಷಿ ಬೇರೆ ಏನು” ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

0
Shares
  • Share On Facebook
  • Tweet It




Trending Now
ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
TULUNADU NEWS January 10, 2026
ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
TULUNADU NEWS January 7, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
    • ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
    • ರಾಜ್ಯ ರಾಜಕೀಯಕ್ಕೆ ಧುಮುಕಿದ ಪ್ರತಾಪ್ ಸಿಂಹ! ಕ್ಷೇತ್ರ ಯಾವುದು ಗೊತ್ತಾ?
    • ಕೊರಗಜ್ಜ ಸಿನೆಮಾದ ಹಾಡುಗಳಿಗೆ ರೀಲ್ಸ್ ಮಾಡಿ ಕೋಟಿ ಗೆಲ್ಲಿ ಎನ್ನುವ ಆಫರ್ ನೀಡಿದ ಚಿತ್ರತಂಡ! ದೈವ ನರ್ತಕರಿಂದ ಆಕ್ರೋಶ...
    • ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನ ಭೇಟಿ: ನಟಿ ನುಶ್ರತ್ ಭರುಚ್ಚಾ ವಿರುದ್ಧ ಫತ್ವಾ – ಭಾರೀ ವಿವಾದ
    • ಐದು ದಿನಗಳಲ್ಲಿ ಏಳುನೂರಕ್ಕೂ ಹೆಚ್ಚು ಕಿ.ಮೀ. ಸೈಕಲ್ ತುಳಿದ 70 ರ ಹರೆಯದ ಶಾಸಕ!
    • ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಸ್ಥಾಪಿಸಿದ ನಿಟ್ಟೆ ವಿನಯ್ ಹೆಗ್ಡೆ ಎಂಬ ಮಹಾಚೇತನ ಅಸ್ತಂಗತ
    • ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
  • Popular Posts

    • 1
      ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • 2
      ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
    • 3
      ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
    • 4
      ರಾಜ್ಯ ರಾಜಕೀಯಕ್ಕೆ ಧುಮುಕಿದ ಪ್ರತಾಪ್ ಸಿಂಹ! ಕ್ಷೇತ್ರ ಯಾವುದು ಗೊತ್ತಾ?

  • Privacy Policy
  • Contact
© Tulunadu Infomedia.

Press enter/return to begin your search