• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ: ಪರಿಷ್ಕತಗೊಂಡ ಸೇವಾದರಗಳ ಮಾಹಿತಿ ಇಲ್ಲಿದೆ!

Tulunadu News Posted On September 20, 2025
0


0
Shares
  • Share On Facebook
  • Tweet It

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಿವಿಧ ಸೇವೆಗಳ ದರಗಳಲ್ಲಿ ಪರಿಷ್ಕರಣೆ ಮಾಡಲಾಗಿದ್ದು, ಪರಿಷ್ಕತ ದರ ಸೆ.1 ರಿಂದಲೇ ಜಾರಿಗೆ ಬಂದಿದೆ. ದೇವಸ್ಥಾನದ ಆದಾಯ ಹೆಚ್ಚಿಸುವ ದೃಷ್ಟಿಯಿಂದ ದೇವಸ್ಥಾನದಲ್ಲಿ ನಷ್ಟದಲ್ಲಿ ನಡೆಯುವ ಕೆಲವು ಪ್ರಮುಖ ಸೇವೆಗಳ ಸೇವಾದರ ಹೆಚ್ಚಿಸಿ ಪರಿಷ್ಕರಿಸುವ ಅಗತ್ಯವಿರುವುದರಿಂದ, ಸೇವಾದರ ಪರಿಷ್ಕರಣೆಗೆ ಈ ಹಿಂದಿನ ಆಡಳಿತಾಧಿಕಾರಿಗಳು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದರು. ಇಲಾಖೆಗೆ ಸಲ್ಲಿಸಿದ ವಿವಿಧ ಸೇವೆಗಳ ಪರಿಷ್ಕರಣೆಗಳಲ್ಲಿ ಸುಮಾರು 40 ರಷ್ಟು ಸೇವೆಗಳ ದರ ಹೆಚ್ಚಳಗೊಂಡು ಪರಿಷ್ಕರಣೆ ಆಗಿದೆ.

ಪರಿಷ್ಕರಣೆಯನ್ನು ಮುಂದಿನ ಅವಧಿಗೆ ಜಾರಿಗೊಳಿಸುವಂತೆ ಇಲಾಖೆಯ ಅಯುಕ್ತರು ಆದೇಶಿಸಿದಂತೆ ಪರಿಷ್ಕರಣೆ ದರ ಜಾರಿಗೆ ಬಂದಿದೆ. ಈ ಹಿಂದೆ 2010 ರ ನವೆಂಬರ್ ನಲ್ಲಿ ಕೊನೆಗೆ ಪರಿಷ್ಕರಣೆ ಮಾಡಲಾಗಿತ್ತು. ಇದೀಗ 15 ವರ್ಷಗಳ ಬಳಿಕ ಸೇವೆಗಳ ದರ ಪರಿಷ್ಕರಣೆಗೊಂಡಿದೆ.

ಪರಿಷ್ಕರಣೆಗೊಂಡು ಹೆಚ್ಚಳಗೊಂಡ ಸೇವೆಗಳ ದರ ಈ ರೀತಿ ಇದೆ: ಚಿಕ್ಕರಥೋತ್ಸವ ಪರಿಷ್ಕತ ದರ ರೂ 12000, ಚಂದ್ರಮಂಡಲ ಉತ್ಸವ – 9500, ಹೂವಿನ ತೇರಿನ ಉತ್ಸವ – ರೂ 8700, ರಾಜಾಂಗಣದಲ್ಲಿ ಶೇಷ ವಾಹನಯುಕ್ತ ಭಂಡಿ ಉತ್ಸವ -ರೂ 4500, ದೀಪಾರಾಧನೆಯುಕ್ತ ಪಾಲಕಿ ಉತ್ಸವ – ರೂ 5600, ಪಾಲಕಿ ಉತ್ಸವಯುಕ್ತ ಮಹಾಪೂಜೆ ರೂ4000, ಇಡೀ ದಿನದ ಸಪರಿವಾರ ಸೇವೆ ರೂ4050, ಪವಮಾನಯುಕ್ತ ಪಂಚಾಮೃತ ಅಭಿಷೇಕ ರೂ 160, ಕಲಶ ಪೂಜಾಯುಕ್ತ ಪಂಚಾಮೃತ ಅಭಿಷೇಕ ರೂ 160, ಪಂಚಾಮೃತ ಅಭಿಷೇಕ – ರೂ 100, ರುದ್ರಾಭಿಷೇಕ – ರೂ 100, ಶೇಷ ಸೇವೆ (ಅಷ್ಟೋತ್ತರ ಸಹಿತ) ರೂ 160, ಹರಿವಾಣ ನೈವೇದ್ಯ ರೂ 125, ಕಾರ್ತಿಕ ಪೂಜೆ ರೂ 100, ಚಿತ್ರಾನ್ನ ಸಮರ್ಪಣೆ – ರೂ 200, ಹಾಲು ಪಾಯಸ – ರೂ 160, ಸಹಸ್ರ ನಾಮಾರ್ಚನೆ – ರೂ 25, ಮೃಷ್ಟಾನ್ನ ಸಮರ್ಪಣೆ – ರೂ 925, ರಾತ್ರಿ ಮಹಾಪೂಜೆಯುಕ್ತ ಪಾಲಕಿ ಉತ್ಸವ ರೂ 4600, ಹರಿಕೆಗಳಾದ ನಾಗ ಪ್ರತಿಷ್ಠೆ ರೂ 500, ನಾಮಕರಣ ರೂ 250, ಆಶ್ಲೆಷ ಬಲಿ ರೂ 500, ಆಶ್ಲೇಷ ಬಲಿ ಉದ್ಯಾಪನೆ ರೂ 500, ಷಷ್ಠಿವೃತ ಉದ್ಯಾಪನೆ ರೂ 500, ಮಂಗಳ ಕಾರ್ಯಗಳಾದ ಉಪನಯನ (ಬ್ರಹ್ಮಪತಿಷ್ಠೆ) ರೂ 800, ಸತ್ಯನಾರಾಯಣ ಪೂಜೆ ರೂ 1000, ಶ್ರೀ ಉಮಾಮಹೇಶ್ವರ ದೇವರ ಸನ್ನಿದಿಯಲ್ಲಿ ಏಕದಶಾವತಾರ ರುದ್ರಾಭಿಷೇಕ ರೂ 120, ಪಂಚಾಮೃತಾಭಿಷೇಕ ರೂ 100, ಹರಿವಾಣ ನೈವೇದ್ಯ ರೂ 150, ಕಾರ್ತಿಕ ಪೂಜೆ ರೂ 100, ಶ್ರೀ ಕುಕ್ಕೆಲಿಂಗ ದೇವರ ಸನ್ನಿಧಿಯಲ್ಲಿ ಏಕದಶಾವತಾರ ರುದ್ರಾಭಿಷೇಕ ರೂ 120, ತ್ರಿಮಧುರ ಸಮರ್ಪಣೆ ರೂ 50, ಕಾರ್ತಿಕ ಪೂಜೆ 100 ಹೀಗೆ ವಿವಿಧ ಸೇವೆಗಳ ದರಗಳು ಪರಿಷ್ಕರಣೆಗೊಂಡಿವೆ.

ಪರಿಷ್ಕರಣೆಗೊಂಡ ಸೇವೆಗಳ ದರಗಳಲ್ಲಿ ಕೆಲವು ಸೇವೆಗಳಿಎ ಸ್ವಲ್ಪ ಮಟ್ಟಿನ ಪರಿಷ್ಕರಣೆ ಆಗಿದ್ದು, ಕೆಲ ಸೇವೆಗಳ ದರದಲ್ಲಿ ಅಧಿಕ ದರದ ಹೆಚ್ಚಳಗೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

ಈ ಬಗ್ಗೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಹರೀಶ್ ಎಸ್ ಇಂಜಾಡಿ ” ಸೇವೆಗಳಿಗೆ ಬಳಸುವ ಸುವಸ್ತುಗಳ ದರಗಳು ಹೆಚ್ಚಳಗೊಂಡಿವೆ. ಕೆಲವು ಸೇವೆಗಳು ನಷ್ಟದಲ್ಲಿ ನಡೆಯುತ್ತಿದ್ದವು. ನಿರ್ವಹಣಾ ಶುಲ್ಕ ಸರಿದೂಗಿಸಲು ಪರಿಷ್ಕರಣೆ ಪ್ರಸ್ತಾಪನೆ ಸಲ್ಲಿಸಲಾಗಿದ್ದು, ಇದೀಗ ಅನುಮೋದನೆಗಳು ಜಾರಿಯಾಗಿದೆ. ಭಕ್ತರಿಂದ ಯಾವುದೇ ಆಕ್ಷೇಪಣೆ ಬಂದಿಲ್ಲ ಎಂದಿದ್ದಾರೆ.

0
Shares
  • Share On Facebook
  • Tweet It




Trending Now
ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
Tulunadu News November 21, 2025
ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
Tulunadu News November 20, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
  • Popular Posts

    • 1
      ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • 2
      ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ

  • Privacy Policy
  • Contact
© Tulunadu Infomedia.

Press enter/return to begin your search