• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಸಿಎಂ ಸಿದ್ದರಾಮಯ್ಯನವರೇ, ಖಾಸಗಿ ವೈದ್ಯರೇ, ನೀವು ರಾಜಿಯಾಗಲು 80 ಜನರ ಬಲಿ ಬೇಕಾಯಿತೆ?

-ವಿಶಾಲ್ ಗೌಡ, ಕುಶಾಲನಗರ Posted On November 18, 2017


  • Share On Facebook
  • Tweet It

ಬೀದರಿನ ಹುಮನಾಬಾದ್ ನಲ್ಲಿ ಹೃದಯಾಘಾತ ಬಳಿಕ ಚಿಕಿತ್ಸೆ ದೊರಕದೆ ಅನಿವಾಶ್ (35) ಸಾವು…

ಖಾಸಗಿ ವೈದ್ಯರ ಮುಷ್ಕರಕ್ಕೆ ಪುತ್ತೂರಿನಲ್ಲಿ ಬಾಲಕಿ ಬಲಿ…

ಚಿಂತಾಮಣಿಯಲ್ಲಿ ಶಿಡ್ಲಘಟ್ಟ, ಚಿಂತಾಮಣಿ, ಕೋಲಾರ ಸುತ್ತಿದರೂ ವೈದ್ಯರು ಸಿಗದೆ 5 ತಿಂಗಳ ಮಗು ಸಾವು…

ಹಲವು ದಿನಗಳಿಂದ ರಾಜ್ಯದಲ್ಲಿ ಖಾಸಗಿ ವೈದ್ಯರ ಮುಷ್ಕರ, 80ಕ್ಕೂ ಅಧಿಕ ಜನ ಸಾವು…

ಅಷ್ಟಾದರೂ ಕಡೆದು ಕಟ್ಟೆ ಹಾಕಿದ್ದೇನು?

ಚಿಕಿತ್ಸೆ ನೀಡುವಾಗ ತಪ್ಪೆಸಗಿದ ವೈದ್ಯರಿಗೆ ಜೈಲು ಶಿಕ್ಷೆ ಬದಲಿಗೆ ದಂಡ…

ಶವ ಇಟ್ಟುಕೊಂಡು ಹಣಕ್ಕಾಗಿ ಪೀಡನೆ ಮಾಡುವಂತಿಲ್ಲ…

ಕುಂದು ಕೊರತೆ ಸಮಿತಿ ದೋಷ ಕೈ ಬಿಡುವುದು…

ಹೀಗೆ, ಇಂಥ ಕೆಲವು ಮಾರ್ಪಾಡುಗಳನ್ನು ಮಾಡಿಕೊಳ್ಳಲು ಒಪ್ಪಿ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಮಸೂದೆ ಅಂಗೀಕರಿಸಲು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ. ಖಾಸಗಿ ವೈದ್ಯರು ಸಹ ತಮಗೆ ಅನುಕೂಲವಾಯಿತು ಎಂದು ಸರ್ಕಾರದ ಜತೆ ರಾಜಿ ಮಾಡಿಕೊಂಡಿದ್ದಾರೆ. ಖಂಡಿತವಾಗಿಯೂ ವೈದ್ಯರು ಮುಷ್ಕರ ಕೈ ಬಿಟ್ಟಿದ್ದು ಸ್ವಾಗತಾರ್ಹವೇ ಆಗಿದೆ.

ಆದರೆ, ಐದು ದಿನಗಳಲ್ಲಿ ಮೃತಪಟ್ಟ 80 ಜೀವಗಳನ್ನು ಬದುಕಿಸಬಲ್ಲಿರೇ ಮುಖ್ಯಮಂತ್ರಿಯವರೇ? 80 ಜೀವಗಳ ಕುಟುಂಬಸ್ಥರನ್ನು ಯಾವ ಇಂಜೆಕ್ಷನ್ ಮೂಲಕ ಗುಣಪಡಿಸಬಲ್ಲಿರಿ ಖಾಸಗಿ ವೈದ್ಯರೇ?

ಇಂಥಾದ್ದೊಂದು ಮಸೂದೆ ಅಂಗೀಕರಿಸುವ ಮುನ್ನ ರಾಜ್ಯ ಸರ್ಕಾರ ಖಾಸಗಿ ವೈದ್ಯರ ಜತೆ ಚರ್ಚಿಸಬೇಕಿತ್ತು. ಖಾಸಗಿ ವೈದ್ಯರು ಸಹ ಆಸ್ಪತ್ರೆಗೆ ಬೀಗ ಜಡಿಯದೆಯೇ ಪ್ರತಿಭಟನೆ ಮಾಡಬಹುದಿತ್ತು. ಆದಾವುದೂ ಆಗಲಿಲ್ಲ. ರಾಜ್ಯ ಸರ್ಕಾರವೇನೋ ಮೊಂಡು ವಾದ ಹಿಡಿಯಿತು. ಇತ್ತ ವೈದ್ಯರೂ ಭಂಡತನಕ್ಕೆ ಬಿದ್ದರು, ಹಾಗಾಗಿ ಐದು ದಿನ ಖಾಸಗಿ ಆಸ್ಪತ್ರೆಗಳು ಬಂದ್ ಆದವು. ದಿನಕ್ಕಿಷ್ಟು ಜೀವಗಳು ತರೆಗೆಲೆಗಳಂತೆ ಉದುರಿದವು. ಅನಾರೋಗ್ಯಕ್ಕೀಡಾದ ಜನ ಬೀದಿ ಬೀದಿ, ಆಸ್ಪತ್ರೆ, ಆಸ್ಪತ್ರೆ ಅಲೆದಾಡಿದರು, ಬಸವಳಿದರು.

ಜನ ಹಿತಕ್ಕಾಗಿ ಜಾರಿ ಮಾಡಲು ಹೊರಟಿದ್ದೇವೆ ಎಂದ ಮುಖ್ಯಮಂತ್ರಿಯವರು ಖಾಸಗಿ ವೈದ್ಯರು ಪ್ರತಿಭಟನೆ ಮಾಡಲು ಶುರುಮಾಡಿದಾಗಲೇ ಅವರ ಜತೆ ರಾಜೀಮಾಡಿಕೊಳ್ಳಬಹುದಿತ್ತು. ಆದರೆ, ಕೇವಲ ಅರ್ಧತಾಸಿನ ಸಭೆ ಸೇರಲು, ಸಂಧಾನ ಮಾಡಿಕೊಳ್ಳಲು ಸಿದ್ದರಾಮಯ್ಯ ಅವರು 80 ಜೀವ ಹೋಗುವ ತನಕ ಕಾಯ್ದರು. ಅತ್ತ ವೈದ್ಯೋ ನಾರಾಯಣ ಹರಿ ಎಂಬ ಹಣೆಪಟ್ಟಿ ತೊಟ್ಟ ವೈದ್ಯರು, ಅಕ್ಷರಶಃ 80 ಜನರ ಪಾಲಿಗೆ ಯಮಧೂತರಾದರು. ಹೀಗೆ ಇವರಿಬ್ಬರು ಮಾಡಿದ ತಪ್ಪಿಗೆ ರಾಜ್ಯದ ಜನ ತೊಂದರೆ ಅನುಭವಿಸುವಂತಾಯಿತು. ಪ್ರಾಣ ಕಳೆದುಕೊಳ್ಳಬಹುದಾಯಿತು. ಒಟ್ಟಿನಲ್ಲಿ ಕರ್ನಾಟಕ ಖಾಸಗಿ ವೈದ್ಯ ಸಂಸ್ಥೆಗಳ ಮಸೂದೆ 80 ಜೀವಗಳನ್ನು ಪಡೆಯಿತು. ಈ 80 ಜನರ ಹಾಗೂ ಅವರ ಕುಟುಂಬದವರ ಶಾಪ ತಟ್ಟದೆ ಇರುತ್ತದೆಯೇ ಮುಖ್ಯಮಂತ್ರಿ ಹಾಗೂ ಖಾಸಗಿ ವೈದ್ಯರೇ? ನಿಮ್ಮ ಕುಟುಂಬಸ್ಥರಿಗೇ (ಹಾಗೆ ಆಗದಿರಲಿ) ಇಂಥ ಪರಿಸ್ಥಿತಿ ಬಂದಿದ್ದರೆ ಸುಮ್ಮನಿರುತ್ತಿದ್ರಾ? ಮನುಷ್ಯತ್ವ ಮರೆಯುವ ಮುನ್ನ ಒಮ್ಮೆಯಾದರೂ ಯೋಚಿಸಿ.

 

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
-ವಿಶಾಲ್ ಗೌಡ, ಕುಶಾಲನಗರ May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
-ವಿಶಾಲ್ ಗೌಡ, ಕುಶಾಲನಗರ May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search