• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ವಂದೇ ಮಾತರಂ ಹಾಡಿದರೆ ಬಹಿಷ್ಕಾರ ಹಾಕಿದ ಮುಸ್ಲಿಂ ಮೂಲಭೂತವಾದಿಗಳೇ, ಇದೆಂಥ ಅಸಹಿಷ್ಣುತೆ?

TNN Correspondent Posted On November 30, 2017
0


0
Shares
  • Share On Facebook
  • Tweet It

ಲಖನೌ: ದೇಶದ ಯಾವುದೇ ಮೂಲೆಯಲ್ಲಿ ವಿಚಾರವಾದಿಗಳ ಹತ್ಯೆಯಾಗಲಿ, ಕಾಂಗ್ರೆಸ್ ಸರ್ಕಾರವಿರುವ ರಾಜ್ಯಗಳಲ್ಲೇ ಹಲ್ಲೆಗಳಾಗಲಿ, ಯಾರೋ ಮುಸ್ಲಿಮರನ್ನು ಹತ್ಯೆ ಮಾಡಿದರೂ ಪ್ರಧಾನಿ ನರೇಂದ್ರ ಮೋದಿ ಅವರೇ ಅದನ್ನು ಮಾಡಿದ್ದಾರೆ ಎಂದು ಘೀಳಿಡುವವರಿದ್ದಾರೆ. ಸಣ್ಣ ಟೀಕೆ ವ್ಯಕ್ತವಾದರೂ ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂದು ಬೊಬ್ಬೆ ಹಾಕುತ್ತಾರೆ. ಆದರೆ ಉತ್ತರ ಪ್ರದೇಶದ ಆಗ್ರಾದಲ್ಲಿ ಮುಸ್ಲಿಂ ಕುಟುಂಕ್ಕೆ ಆದ ಅನ್ಯಾಯ ಪ್ರಶ್ನಿಸುವ ತಾಕತ್ತು, ಗುಂಡಿಗೆ ಮಾತ್ರ ಯಾರಿಗೂ ಇಲ್ಲ.

ಹೌದು, ಆಗ್ರಾದ ಅಜಂಪುರ ಎಂಬಲ್ಲಿ ವಾಸಿಸುತ್ತಿರುವ ಗುಲ್ಚಮನ್ ಶೇರ್ವಾನಿ ಮುಸ್ಲಿಂ ಎಂಬ ಕುಟುಂಬಕ್ಕೆ  ಇಸ್ಲಾಂನ ಮೂಲಭೂತವಾದಿಗಳೇ ಫತ್ವಾ ಹೊರಡಿಸಿದ್ದಾರೆ. ಶಾಲೆಯಿಂದ ಆತನ ಮಕ್ಕಳನ್ನು ಶಾಳೆಯಿಂದ ಹೊರಹಾಕಿದ್ದಾರೆ.

ಅಷ್ಟಕ್ಕೂ ಮುಸ್ಲಿಂ ಶೇರ್ವಾನಿ ಕುಟುಂಬ ಮಾಡಿರುವ ತಪ್ಪಾದರೂ ಏನು ಗೊತ್ತಾ?

ಗುಲ್ಚಮನ್ ಶೇರ್ವಾನಿ ಕುಟುಂಬಕ್ಕೆ ಎಲ್ಲಿಲ್ಲದ ದೇಶಭಕ್ತಿ. ಹಾಗಾಗಿಯೇ ಇಡೀ ಕುಟುಂಬ ಭಾರತದ ಧ್ವಜ ಹೋಲುವ ಬಟ್ಟೆ ತೊಡುತ್ತಾರೆ. ವಂದೇ ಮಾತರಂ ಹಾಡುತ್ತಾರೆ. ಆದರೆ ಇದೇ ಮೂಲಭೂತವಾದಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಬಹಿಷ್ಕಾರ ಹಾಕಿದ್ದಾರೆ.

ಇದೇ ಕಾರಣಕ್ಕೇ, ಅಜಂಪುರದ ಮುಸ್ಲಿಂ ಶಾಲೆಯೊಂದರಿಂದ ಶೇರ್ವಾನಿಯ ಇಬ್ಬರು ಮಕ್ಕಳನ್ನು ಹೊರಹಾಕಿದ್ದಾರೆ. ಅವರು ವಂದೇ ಮಾತರಂ ಹಾಡುವುದರಿಂದ ಸಮುದಾಯದವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅನಿವಾರ್ಯವಾಗಿ ಮಕ್ಕಳನ್ನು ಹೊರಹಾಕಲಾಗಿದೆ ಎಂದು ಶಾಲೆ ಪ್ರಾಂಶುಪಾಲ ಅಸ್ಲಾಂ ಖಾನ್ ಲಜ್ಜೆಯಿಲ್ಲದೆ ಹೇಳುತ್ತಾರೆ.

ಅಷ್ಟೇ ಅಲ್ಲ, ದೆಹಲಿಯ ಜಾಮಾ ಮಸೀದಿಯ ಮೌಲ್ವಿ ಮೌಲಾನಾ ಅಹ್ಮದ್ ಬುಖಾರಿ, ಶೇರ್ವಾನಿ ವಿರುದ್ಧ ಫತ್ವಾ ಹೊರಡಿಸಿದ್ದಾನೆ. ಶೇರ್ವಾನಿಯನ್ನು “ಕಾಫಿರ್, (ಮುಸ್ಲಿಮೇತರ)” ಎಂದು ಘೋಷಿಸಿದ್ದಾನೆ.

ಇಷ್ಟಾದರೂ ನಾನು ವಂದೇ ಮಾತರಂ ಹಾಡುವುದನ್ನು ನಿಲ್ಲಿಸುವುದಿಲ್ಲ. ದೇಶಭಕ್ತಿ ಸಾರುವ ರಾಷ್ಟ್ರಧ್ವಜದ ಬಟ್ಟೆ ಧರಿಸದೇ ಇರುವುದಿಲ್ಲ ಎಂದು ಶೇರ್ವಾನಿ ದಿಟ್ಟತನ ಮೆರೆದಿದ್ದಾರೆ.

ಆದರೆ ಒಂದು ಮುಸ್ಲಿಂ ಕುಟುಂಬ ವಂದೇ ಮಾತರಂ ಹಾಡಿದ್ದಕ್ಕಾಗಿ ಬಹಿಷ್ಕಾರ ಹಾಕಿದ ಮೂಲಭೂತವಾದಿಗಳ ವಿರುದ್ಧ ಒಬ್ಬನೇ ಒಬ್ಬ ಜಾತ್ಯತೀತವಾದಿ, ಪ್ರಗತಿಪರ, ಬುದ್ಧಿ ಜೀವಿ ಸೊಲ್ಲೆತ್ತುವುದಿಲ್ಲವಲ್ಲ. ನಾಚಿಕೆಯಾಗಬೇಕು. ಛೇ!

0
Shares
  • Share On Facebook
  • Tweet It




Trending Now
ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
Tulunadu News December 27, 2025
ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
Tulunadu News December 23, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ
    • ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!
    • ಭಕ್ತಿಗೀತೆ ಹಾಡುತ್ತಿದ್ದ ಗಾಯಕಿಯ ಮೇಲೆ ದರ್ಪ! ಜಾತ್ಯಾತೀತ ಗೀತೆ ಹಾಡಲು ಒತ್ತಾಯ!
    • ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ನೀಡಿ - ಸರಕಾರಕ್ಕೆ ಶಾಸಕ ಆಗ್ರಹ!
    • ವಿಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ-ಎಲ್ ಇಡಿ ಸ್ಕ್ರೀನ್ ಗೆ ಆರತಿ!
    • ಅಜಾನ್ ಚರ್ಚೆಯ ಸಂದರ್ಭದಲ್ಲಿ ದೀಪಾವಳಿ ಪಟಾಕಿ ವಿಷಯ ಎತ್ತಿದ ಸಚಿವ!
  • Popular Posts

    • 1
      ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search