• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಹುರ್ರಿಯತ್ ಸಂಘಟನೆ ಮುಖ್ಯಸ್ಥ ಸ್ಥಾನದಿಂದ ಗೀಲಾನಿ ಕೆಳಗಿಳಿಯಲು ಮೋದಿ ಕೊಟ್ಟ ಪೆಟ್ಟು ಕಾರಣವೇ?

TNN Correspondent Posted On March 20, 2018
0


0
Shares
  • Share On Facebook
  • Tweet It

ಶ್ರೀನಗರ: ಸೈಯ್ಯದ್ ಶಾ ಗೀಲಾನಿ. ದೇಹವನ್ನಷ್ಟೇ ಭಾರತದಲ್ಲಿಟ್ಟುಕೊಂಡು, ಮನಸ್ಸನ್ನು ಸಂಪೂರ್ಣ ಪಾಕಿಸ್ತಾನದಲ್ಲಿಟ್ಟಿರುವ ಈ ಪ್ರತ್ಯೇಕತವಾದಿ ನಾಯಕ ಈಗ ಬಸವಳಿದುಹೋಗಿದ್ದಾನೆ. ಕೇಂದ್ರ ಸರ್ಕಾರದ ಹಲವು ಕ್ರಮಗಳಿಂದ ಬೇಸತ್ತು ಈಗ ಪ್ರತ್ಯೇಕತವಾದಿ ಸಂಘಟನೆಯಾದ ತೆಹ್ರೀಕ್-ಏ-ಹುರ್ರಿಯತ್ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿದಿದ್ದಾನೆ.

ಈಗ ಗೀಲಾನಿ ಜಾಗಕ್ಕೆ ಗೆಳೆಯ ಮೊಹ್ಮದ್ ಆಶ್ರಫ್ ಸೆಹ್ರೈ ಎಂಬಾತ ಒಕ್ಕರಿಸಿಕೊಂಡಿದ್ದಾನೆ. ಆದರೆ ಇದ್ದಕ್ಕಿದ್ದ ಹಾಗೆ ಗೀಲಾನಿ ತನ್ನ ಸ್ಥಾನ ಬಿಟ್ಟುಕೊಡಲು ಕಾರಣವೇನು? ಇದರ ಹಿಂದೆ ಯಾರಿದ್ದಾರೆ? ಅಷ್ಟೆಲ್ಲ ಮೆರೆದಾಡುತ್ತಿದ್ದ ಗೀಲಾನಿ ಈಗ ಏಕೆ ಕರೆಂಟು ಹೊಡೆದ ಕಾಗೆಯಂತಾಗಿದ್ದಾನೆ. ಇದರ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರಿದ್ದಾರೆಯೇ?

ಪರೋಕ್ಷವಾಗಿ ನಾವು ಇದಕ್ಕೆಲ್ಲ ಹೂಂ ಎನ್ನಲೇಬೇಕು. ಗೀಲಾನಿ ತನ್ನ ರಾಜೀನಾಮೆಗೆ ಅನಾರೋಗ್ಯದ ಕಾರಣ ನೀಡಿದ್ದಾನಾದರೂ, ಅದರ ಹಿಂದೆ ಮೋದಿ ನೀಡಿದ ಪೆಟ್ಟುಗಳಿವೆ.

ಮೊದಲಿಗೆ ಜಮ್ಮು-ಕಾಶ್ಮೀರದಲ್ಲಿ ನರೇಂದ್ರ ಮೋದಿ ಅವರು ಪ್ರತ್ಯೇಕತಾವಾದಿಗಳ ಹೆಡೆಮುರಿಕಟ್ಟಿದ್ದು, ನೋಟು ನಿಷೇಧದ ಮೂಲಕ. 2016ರಲ್ಲಿ ನೋಟು ನಿಷೇಧವಾದ ಬಳಿಕ ಜಮ್ಮು-ಕಾಶ್ಮೀರದಲ್ಲಿ ಪಾಕಿಸ್ತಾನದ ನಕಲಿ ನೋಟು, ಕಪ್ಪು ಹಣ ಹರಿದಾಡುವುದು ನಿಂತುಹೋಯಿತು. ಇದರಿಂದ ಉಗ್ರ ಚಟುವಟಿಕೆ ನಿಂತುಹೋದವು. ಗೀಲಾನಿಗೆ ಪಾಕಿಸ್ತಾನದ ಹಣ ಹರಿದುಬರುವುದು ನಿಂತಿತು.

ಮೋದಿ ಅವರು ಇಷ್ಟಕ್ಕೇ ಸುಮ್ಮನಾಗಲಿಲ್ಲ, ಎನ್ ಐಎ ಅಧಿಕಾರಿಗಳ ದಾಳಿ ಮೂಲಕ ಇವರ ವಿರುದ್ಧ ಭಯೋತ್ಪಾದನೆಗಾಗಿ ಪಾಕಿಸ್ತಾನದಿಂದ ಹಣ ಪಡೆದ ಪ್ರಕರಣ ದಾಖಲಿಸಲಾಯಿತು. ಗೀಲಾನಿಯ ಬಂಧನವೂ ಆಯಿತು. ವಿಚಾರಣೆಯೂ ನಡೆಯಿತು. ಅತ್ತ ಗೀಲಾನಿ ನಿಷ್ಕ್ರಿಯನಾದಂತಾದ. ಇದರಿಂದ ಪಾಕಿಸ್ತಾನವೂ ಮರ್ಯಾದೆ ನೀಡುತ್ತಿರಲಿಲ್ಲ.

ಈ ಎಲ್ಲ ಕಾರಣಗಳಿಂದ ಬೇಸತ್ತ ಗೀಲಾನಿ, ಈಗ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾನೆ. ರಾಜೀನಾಮೆ ಹಿಂದೆ ಸಂಘಟನೆಯ ಸದಸ್ಯರ ಒತ್ತಡವೂ ಇತ್ತು ಎಂದು ತಿಳಿದುಬಂದಿದೆ. ದೆಹಲಿಯಲ್ಲಿ ಕೂತ ನರೇಂದ್ರ ಮೋದಿ ಕಾಶ್ಮೀರದಲ್ಲಿ ಇದ್ದ ವಿಷಕಾರಿ ಹಾವುಗಳ ಹಲ್ಲು ಕಿತ್ತಿದ್ದು ಹೀಗೆ ಎಂದರೆ ನಂಬದೇ ಇರಲಾದೀತೇ?

0
Shares
  • Share On Facebook
  • Tweet It




Trending Now
ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
Tulunadu News December 9, 2025
ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
Tulunadu News December 9, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
    • ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
    • ಸ್ಮೃತಿ ಹೊಸ ಇನ್ಸಿಂಗ್ಸ್ ಆರಂಭ!
    • ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
  • Popular Posts

    • 1
      ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
    • 2
      ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
    • 3
      ಸ್ಮೃತಿ ಹೊಸ ಇನ್ಸಿಂಗ್ಸ್ ಆರಂಭ!

  • Privacy Policy
  • Contact
© Tulunadu Infomedia.

Press enter/return to begin your search