• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಹುರ್ರಿಯತ್ ಸಂಘಟನೆ ಮುಖ್ಯಸ್ಥ ಸ್ಥಾನದಿಂದ ಗೀಲಾನಿ ಕೆಳಗಿಳಿಯಲು ಮೋದಿ ಕೊಟ್ಟ ಪೆಟ್ಟು ಕಾರಣವೇ?

TNN Correspondent Posted On March 20, 2018
0


0
Shares
  • Share On Facebook
  • Tweet It

ಶ್ರೀನಗರ: ಸೈಯ್ಯದ್ ಶಾ ಗೀಲಾನಿ. ದೇಹವನ್ನಷ್ಟೇ ಭಾರತದಲ್ಲಿಟ್ಟುಕೊಂಡು, ಮನಸ್ಸನ್ನು ಸಂಪೂರ್ಣ ಪಾಕಿಸ್ತಾನದಲ್ಲಿಟ್ಟಿರುವ ಈ ಪ್ರತ್ಯೇಕತವಾದಿ ನಾಯಕ ಈಗ ಬಸವಳಿದುಹೋಗಿದ್ದಾನೆ. ಕೇಂದ್ರ ಸರ್ಕಾರದ ಹಲವು ಕ್ರಮಗಳಿಂದ ಬೇಸತ್ತು ಈಗ ಪ್ರತ್ಯೇಕತವಾದಿ ಸಂಘಟನೆಯಾದ ತೆಹ್ರೀಕ್-ಏ-ಹುರ್ರಿಯತ್ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿದಿದ್ದಾನೆ.

ಈಗ ಗೀಲಾನಿ ಜಾಗಕ್ಕೆ ಗೆಳೆಯ ಮೊಹ್ಮದ್ ಆಶ್ರಫ್ ಸೆಹ್ರೈ ಎಂಬಾತ ಒಕ್ಕರಿಸಿಕೊಂಡಿದ್ದಾನೆ. ಆದರೆ ಇದ್ದಕ್ಕಿದ್ದ ಹಾಗೆ ಗೀಲಾನಿ ತನ್ನ ಸ್ಥಾನ ಬಿಟ್ಟುಕೊಡಲು ಕಾರಣವೇನು? ಇದರ ಹಿಂದೆ ಯಾರಿದ್ದಾರೆ? ಅಷ್ಟೆಲ್ಲ ಮೆರೆದಾಡುತ್ತಿದ್ದ ಗೀಲಾನಿ ಈಗ ಏಕೆ ಕರೆಂಟು ಹೊಡೆದ ಕಾಗೆಯಂತಾಗಿದ್ದಾನೆ. ಇದರ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರಿದ್ದಾರೆಯೇ?

ಪರೋಕ್ಷವಾಗಿ ನಾವು ಇದಕ್ಕೆಲ್ಲ ಹೂಂ ಎನ್ನಲೇಬೇಕು. ಗೀಲಾನಿ ತನ್ನ ರಾಜೀನಾಮೆಗೆ ಅನಾರೋಗ್ಯದ ಕಾರಣ ನೀಡಿದ್ದಾನಾದರೂ, ಅದರ ಹಿಂದೆ ಮೋದಿ ನೀಡಿದ ಪೆಟ್ಟುಗಳಿವೆ.

ಮೊದಲಿಗೆ ಜಮ್ಮು-ಕಾಶ್ಮೀರದಲ್ಲಿ ನರೇಂದ್ರ ಮೋದಿ ಅವರು ಪ್ರತ್ಯೇಕತಾವಾದಿಗಳ ಹೆಡೆಮುರಿಕಟ್ಟಿದ್ದು, ನೋಟು ನಿಷೇಧದ ಮೂಲಕ. 2016ರಲ್ಲಿ ನೋಟು ನಿಷೇಧವಾದ ಬಳಿಕ ಜಮ್ಮು-ಕಾಶ್ಮೀರದಲ್ಲಿ ಪಾಕಿಸ್ತಾನದ ನಕಲಿ ನೋಟು, ಕಪ್ಪು ಹಣ ಹರಿದಾಡುವುದು ನಿಂತುಹೋಯಿತು. ಇದರಿಂದ ಉಗ್ರ ಚಟುವಟಿಕೆ ನಿಂತುಹೋದವು. ಗೀಲಾನಿಗೆ ಪಾಕಿಸ್ತಾನದ ಹಣ ಹರಿದುಬರುವುದು ನಿಂತಿತು.

ಮೋದಿ ಅವರು ಇಷ್ಟಕ್ಕೇ ಸುಮ್ಮನಾಗಲಿಲ್ಲ, ಎನ್ ಐಎ ಅಧಿಕಾರಿಗಳ ದಾಳಿ ಮೂಲಕ ಇವರ ವಿರುದ್ಧ ಭಯೋತ್ಪಾದನೆಗಾಗಿ ಪಾಕಿಸ್ತಾನದಿಂದ ಹಣ ಪಡೆದ ಪ್ರಕರಣ ದಾಖಲಿಸಲಾಯಿತು. ಗೀಲಾನಿಯ ಬಂಧನವೂ ಆಯಿತು. ವಿಚಾರಣೆಯೂ ನಡೆಯಿತು. ಅತ್ತ ಗೀಲಾನಿ ನಿಷ್ಕ್ರಿಯನಾದಂತಾದ. ಇದರಿಂದ ಪಾಕಿಸ್ತಾನವೂ ಮರ್ಯಾದೆ ನೀಡುತ್ತಿರಲಿಲ್ಲ.

ಈ ಎಲ್ಲ ಕಾರಣಗಳಿಂದ ಬೇಸತ್ತ ಗೀಲಾನಿ, ಈಗ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾನೆ. ರಾಜೀನಾಮೆ ಹಿಂದೆ ಸಂಘಟನೆಯ ಸದಸ್ಯರ ಒತ್ತಡವೂ ಇತ್ತು ಎಂದು ತಿಳಿದುಬಂದಿದೆ. ದೆಹಲಿಯಲ್ಲಿ ಕೂತ ನರೇಂದ್ರ ಮೋದಿ ಕಾಶ್ಮೀರದಲ್ಲಿ ಇದ್ದ ವಿಷಕಾರಿ ಹಾವುಗಳ ಹಲ್ಲು ಕಿತ್ತಿದ್ದು ಹೀಗೆ ಎಂದರೆ ನಂಬದೇ ಇರಲಾದೀತೇ?

0
Shares
  • Share On Facebook
  • Tweet It


- Advertisement -


Trending Now
ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
Tulunadu News June 20, 2025
ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
Tulunadu News June 18, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
    • ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!
    • ಲಂಡನ್ನಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೊನೆಯ ಕ್ಷಣದಲ್ಲಿ ಪ್ರಯಾಣ ರದ್ದು!
    • ಗಿರೀಶ್ ಭಾರದ್ವಾಜ್ ಮನವಿಗೆ ಸ್ಪಂದನೆ: ಹಿಂದೂ ಮುಖಂಡರ ರಾತ್ರಿ ಮನೆ ಭೇಟಿಯ ಬಗ್ಗೆ ವರದಿ ಕೇಳಿದ ಪೊಲೀಸ್ ದೂರು ಪ್ರಾಧಿಕಾರ!
    • ಹಿಂದೂಗಳು 3 ಮಕ್ಕಳನ್ನು ಹೆರಲು ಕೊಪ್ಪಳದಲ್ಲಿ ತೊಗಾಡಿಯಾ ಕರೆ!
    • ಬೈಕ್ ಟ್ಯಾಕ್ಸಿ ಬ್ಯಾನ್ ನಿಂದ ಬೆಂಗಳೂರಿನ 1 ಲಕ್ಷ ಯುವಕರ ಉದ್ಯೋಗಕ್ಕೆ ಕುತ್ತು!
    • ಯುಪಿಐನಲ್ಲಿ ಇನ್ನು ಹಣ ವರ್ಗಾವಣೆಗೆ 15 ಸೆಕೆಂಡ್ ಸಾಕು!
  • Popular Posts

    • 1
      ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
    • 2
      ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • 3
      ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • 4
      ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • 5
      ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!

  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search