• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಮೊಯಿಲಿ ಪುತ್ರವಾತ್ಸಲ್ಯ ಕಾಂಗ್ರೆಸ್ ಜಾತಕ ಬಯಲಿಗೆ ತಂದು ಸಿದ್ದು ಕ್ಯಾಪೆಸಿಟಿ ತೋರಿಸಿತು!

Hanumantha Kamath Posted On March 21, 2018
0


0
Shares
  • Share On Facebook
  • Tweet It

ನಿನ್ನೆ ಮಂಗಳೂರಿಗೆ ಕಾಂಗ್ರೆಸ್ಸಿನ ಹಾಲಿ ಪರವೋಚ್ಚ ನಾಯಕ ರಾಹುಲ್ ಗಾಂಧಿಯವರು ಬಂದಿದ್ದಾಗ ಅವರ ಎಲ್ಲಾ ಕಾರ್ಯಕ್ರಮಗಳ ವೇದಿಕೆಯಲ್ಲಿ ಇದ್ದವರು ವೀರಪ್ಪ ಮೊಯಿಲಿ. ಪ್ರೋಟೋಕಾಲ್ ಪ್ರಕಾರ ರಾಹುಲ್ ಗಾಂಧಿಯವರಿಂದ ಕೆಲವು ಕುರ್ಚಿಗಳ ಅಂತರದಲ್ಲಿ ಅವರಿಗೆ ಕುಳಿತುಕೊಳ್ಳಲು ಕುರ್ಚಿ ಹಾಕಿರಬಹುದು. ಆದರೆ ವೀರಪ್ಪ ಮೊಯಿಲಿ ಅದೇ ವೇದಿಕೆಯಲ್ಲಿದ್ದ ಉಳಿದ ನಾಯಕರುಗಳಿಗಿಂತ ಯಾವುದೇ ರೀತಿಯಲ್ಲಿ ಕಡಿಮೆ ತೂಕದ ನಾಯಕರಲ್ಲ. ದೆಹಲಿಯಲ್ಲಿ ಇದ್ದರೆ ನೇರಾ ರಾಹುಲ್ ಗಾಂಧಿಯವರ ಮನೆಗೆ ಹೋಗಿ ಅವರ ಕಿವಿಯಲ್ಲಿಯೇ ಕರ್ನಾಟಕದಲ್ಲಿ ಏನೇನಾಗುತ್ತದೆ ಎಂದು ಹೇಳುವಷ್ಟು ಸಮರ್ಥತೆ ಮತ್ತು ಸ್ವಾತಂತ್ರ್ಯ ಎರಡೂ ಅವರಿಗೆ ಇದೆ. ಆದರೆ ಅವರೇ ಒಂದು ಚಿಕ್ಕ ವಾಕ್ಯವನ್ನು ಸಾಮಾಜಿಕ ತಾಣದಲ್ಲಿ ಬರೆಯುವ ಮೂಲಕ ಇಡೀ ಕಾಂಗ್ರೆಸ್ ಒಂದು ಸಲ ತನ್ನ ಮುಖವನ್ನು ಕನ್ನಡಿಯಲ್ಲಿ ನೋಡುವಂತೆ ಮಾಡಿದರಲ್ಲ ಅದೇ ಆಶ್ಚರ್ಯ.

ಇದು ಏನು ಸೂಚಿಸುತ್ತದೆ?

ವೀರಪ್ಪ ಮೊಯಿಲಿ ಅವರು ಕರ್ನಾಟಕದ ಮಾಜಿ ಮುಖ್ಯಮಂತ್ರಿ. ರಾಜೀವ್ ಗಾಂಧಿ ಪ್ರಧಾನ ಮಂತ್ರಿಯಾಗಿದ್ದಾಗ ಮೊಯಿಲಿಯವರು ರಾಜೀವ್ ಆಪ್ತರಾಗಿದ್ದರು. ವಕೀಲಿಕೆ ಕಲಿತ್ತಿದ್ದಾರೆ ಮತ್ತು ಒಂದಿಷ್ಟು ರಾಜತಾಂತ್ರಿಕ ನೈಪುಣ್ಯತೆ ಇದೆ ಎಂದು ಇವರ ಮಾತನ್ನು ರಾಜೀವ್ ಆಲಿಸುತ್ತಿದ್ದರು. ಆ ಬಳಿಕ ಸೋನಿಯಾ ಯುಗ ಪ್ರಾರಂಭವಾಗುವಾಗಲೂ ಶಿಕ್ಷಣ ಕ್ಷೇತ್ರದ ಸುಧಾರಣೆಯ ಬಗ್ಗೆ ಏನಾದರೂ ಆಯೋಗ ಮಾಡುವಾಗ ಸೋನಿಯಾ, ಮೊಯಿಲಿಯವರ ಸಲಹೆಯನ್ನು ಕೇಳಿ ಮುಂದುವರೆಯಿರಿ ಎಂದು ಸೂಚನೆ ಕೊಟ್ಟಿದ್ದು ಇದೆ. ಸಿಇಟಿ ಸುಧಾರಣೆಯಲ್ಲಿ ವೀರಪ್ಪ ಮೊಯಿಲಿ ಯಶಸ್ವಿಯಾದದ್ದೇ ಹಾಗೆ. ಆದರೆ ಯಾವಾಗ ಸೋನಿಯಾ ಗಾಂಧಿ ತಮ್ಮ ಹೆಗಲ ಮೇಲಿನ ಭಾರವನ್ನು ಇಳಿಸಿ ಮಗನ ಕೈಯಲ್ಲಿ ಚಾಟಿ ಕೊಟ್ಟು ಗದ್ದುಗೆಯನ್ನು ಕೂರಿಸಿದರಲ್ಲ, ಅದರ ಬಳಿಕ ವೀರಪ್ಪ ಮೊಯಿಲಿ ಬಹುತೇಕ ಏಕಾಂಗಿಯಾದರು. ಸಿದ್ಧರಾಮಯ್ಯನವರ ಬಗ್ಗೆ ಚಾಡಿ ಹೇಳುವುದು ಬಿಡಿ, ಅವರ ಹೆಸರೆತ್ತಿದರೆ ಸಾಕು “ಮೊಯಿಲಿಜಿ ಆಪ್ ವಹಾ ಕಾ ಬಾತ್ ಚೋಡಿಯೇ” ಎಂದು ರಾಹುಲ್ ಹೇಳುವಂತಹ ಪರಿಸ್ಥಿತಿ ನಿರ್ಮಾಣವಾಯಿತು. ಜನಾರ್ಧನ ಪೂಜಾರಿ, ಜಾಫರ್ ಷರೀಪ್ ನಂತರ ಮೊಯಿಲಿ ಅದೇ ಸಾಲಿನಲ್ಲಿ ಸೇರುವ ವಾತಾವರಣ ಜನಪಥ್ 10 ರಲ್ಲಿ ಸೃಷ್ಟಿಯಾಗಿತ್ತು.

ಅದು ಸಿದ್ಧರಾಮಯ್ಯ ಪವರ್

ನೀವು ಆ ಕಡೆಯ ಬಗ್ಗೆ ಹೆಚ್ಚು ಯೋಚಿಸಬೇಡಿ ಎಂದು ರಾಹುಲ್ ಗಾಂಧಿ ಹೇಳಿದ್ದರೂ ಹಾಗೆ ಸುಮ್ಮನೆ ಕುಳಿತುಕೊಳ್ಳಲು ಒಂದು ತಂದೆ ಜೀವಕ್ಕೆ ಹೇಗೆ ಸಾಧ್ಯ? ಮಗನನ್ನು ರಾಜಕೀಯವಾಗಿ ಲಾಂಚ್ ಮಾಡಲು ಕಾತರಿಸುತ್ತಿದ್ದರು ಮೊಯಿಲಿ ಎನ್ನುವ ಜವಾಬ್ದಾರಿ ತಂದೆ. ಆದರೆ ಕಳೆದ ಐದು ವರ್ಷಗಳಲ್ಲಿ ಕರ್ನಾಟಕದ ಕಾಂಗ್ರೆಸ್ಸನ್ನು ಒಂದೇ ಸಮನೆ ಸ್ವಾಹ ಮಾಡಿಕೊಂಡಿರುವ ಸಿದ್ಧರಾಮಯ್ಯ ತಮ್ಮ ವಿರುದ್ಧ ಹೈಕಮಾಂಡ್ ಗೆ ದೂರು ಕೊಡಲು ಹೋಗುವ ನಾಯಕರ ಮಾತು ಅಲ್ಲಿ ನಡೆಯದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಅದಕ್ಕೆ ಕಾರಣ ಅವರು ರಾಹುಲ್ ಮನಸ್ಸಿನಲ್ಲಿ ಹುಟ್ಟಿಸಿದ ಗುಮ್ಮ. ಸರ್, ಇಡೀ ರಾಷ್ಟ್ರದಲ್ಲಿ ನಿಮಗೆ ಮುಂದಿನ ಬಾರಿ ಲೋಕಸಭೆಗೆ ಚುನಾವಣೆಗೆ ಹೋಗಬೇಕಾದರೆ ಆರ್ಥಿಕ ಸಂಪನ್ಮೂಲ ಸಂಗ್ರಹಿಸುವ ಕ್ಯಾಪೆಸಿಟಿ ಇರುವುದು ಕರ್ನಾಟಕಕ್ಕೆ ಮಾತ್ರ. ಅದಕ್ಕಾಗಿ ನಾವು ಬೇರೆ ಬೇರೆ ಮಾರ್ಗಗಳನ್ನು ಅನುಸರಿಸುತ್ತಿದ್ದೇವೆ. ನೀವು ನಮಗೆ ಸ್ವಾತಂತ್ರ್ಯ ಕೊಡಬೇಕು ಎಂದು ಬಿಟ್ಟಿದ್ದರು ಸಿದ್ದು.

ಈ ಮೂಲಕ ಸಿದ್ಧರಾಮಯ್ಯ ಏಕಕಾಲದಲ್ಲಿ ಡಿಕೆಶಿ, ದೇಶಪಾಂಡೆ, ಖರ್ಗೆಯವರನ್ನು ಬದಿಗೆ ಸರಿಸಿ ಜನಪಥ್ ನಲ್ಲಿ ತಾವು ಕಾಲಿಟ್ಟರೆ ನಡೆದಾಡುವ ಒಂದು ಎಟಿಎಂ ಬರುತ್ತಿದೆಯೇನೋ ಎಂದು ರಾಹುಲ್ ಗಾಂಧಿಯವರಿಗೆ ಅನಿಸಬೇಕು ಹಾಗೆ ಫೋಸ್ ಕೊಟ್ಟಿದ್ದರು. ಬೇರೆ ಯಾರಾದರೂ ಸಿದ್ದು ವಿರುದ್ಧ ಕಟಿಪಿಟಿ ಮಾಡಿದರೆ “ನೀವು ಇಷ್ಟು ಸಾವಿರ ಕೋಟಿ ಹೊಂದಿಸಿ ಕೊಡಲು ತಯಾರಿದ್ದರೆ ಹೇಳಿ, ಸಿದ್ದು ಅವರನ್ನು ಸೈಡಿಗೆ ಸರಿಸಿ ನಿಮಗೆ ಪಟ್ಟಾಭಿಷೇಕ ಮಾಡುತ್ತೇನೆ” ಎಂದು ರಾಹುಲ್ ಹೇಳಿದ್ದು ಹಲವು ಕಾಂಗ್ರೆಸ್ ನಾಯಕರಿಗೆ ಅರಗಿಸಲಾರದ ತುತ್ತಾಯಿತು. ಆದ್ದರಿಂದ ಯಾರೂ ಕೂಡ ಈಗ ಸೊಲೆತ್ತುವ ಸ್ಥಿತಿಯಲ್ಲಿಲ್ಲ. ಈ ಮೂಲಕ ಕಾಂಗ್ರೆಸ್ಸಿನೊಳಗೆ ಸಿದ್ದು ಅಂಡ್ ಟೀಮ್ ಹುಟ್ಟಿಸಿರುವ ಕ್ರೇಜ್ ನೋಡಿ ಸ್ವತ: ವಿರೋಧ ಪಕ್ಷಗಳಾಗಿರುವ ಜೆಡಿಎಸ್ ಮತ್ತು ಬಿಜೆಪಿ ತಣ್ಣಗಾಗಿವೆ. ದೇವೆಗೌಡರು ತಮ್ಮ ದೆಹಲಿ ಸಂಪರ್ಕಗಳನ್ನು ಬಳಸಿ ಸಿದ್ಧರಾಮಯ್ಯ ವಿರುದ್ಧ ಚಾಡಿ ಹೇಳಿ ಸಿಎಂ ವರ್ಚಸ್ಸು ಕಡಿಮೆ ಮಾಡುವ ಪ್ರಯತ್ನ ಮಾಡಿದರಾದರೂ ಅದ್ಯಾವುದೂ ವರ್ಕೌಟ್ ಆಗಲಿಲ್ಲ. ಕಾರಣ ದೂರು ಹೇಳಲು ಬಂದ ಎಲ್ಲರ ಬಳಿ ರಾಹುಲ್ ಹೇಳಿದ್ದು ಒಂದೇ ಮಾತು ” ಅವರು ಇಷ್ಟು ಪ್ರಾಮಿಸ್ ಮಾಡಿದ್ದಾರೆ, ನೀವು ಅದನ್ನು ಕೊಡಲು ಸಾಧ್ಯವಾದರೆ ಹೇಳಿ, ನಾಳೆನೆ…” ಈ ಮೂಲಕ ದೇವೆಗೌಡರಿಂದ ಹಿಡಿದು ಅಶೋಕ್ ವರೆಗೆ ಯಾರೆಂದರೆ ಯಾರು ಕೂಡ ಎಂತಂಹ ಪ್ರಯತ್ನ ಮಾಡಿದರೂ ಸಿದ್ಧರಾಮಯ್ಯ ಅವರನ್ನು ತೆಗೆದು ಹಾಕುವುದು ಬಿಡಿ, ಅಲುಗಾಡಿಸಲು ಕೂಡ ಆಗಲಿಲ್ಲ.

ಪರಿಸ್ಥಿತಿ ಹೀಗಿರುವಾಗ ತಮ್ಮ ಮಗನನ್ನು ಕಾರ್ಕಳದಿಂದ ಚುನಾವಣೆಗೆ ನಿಲ್ಲಿಸಬೇಕು ಎಂದು ಗುರಿ ಇಟ್ಟುಕೊಂಡಿದ್ದ ವೀರಪ್ಪ ಮೊಯಿಲಿ ಅವರಿಗೆ ದಿಕ್ಕೆ ಕಾಣದಾಯಿತು. ತಮ್ಮ ಮಗಳು ರಾಹುಲ್ ಟೀಮ್ ನಲ್ಲಿ ಸಕ್ರಿಯ ಸದಸ್ಯೆ ನಿಜ, ಆದರೆ ರಾಹುಲ್ ಕರ್ನಾಟಕದ ವಿಷಯಕ್ಕೆ ಬಂದಾಗ ನೇರವಾಗಿ ಸಿದ್ದುಗೆ ಕರೆ ಮಾಡಿ ಮಾತನಾಡುತ್ತಿರುವುದು ಸ್ವತ: ಖರ್ಗೆಯಂತವರಿಗೆ ಬಿಸಿತುಪ್ಪವಾಗಿರುವುದು ಮೊಯಿಲಿಗೆ ಗೊತ್ತಿದೆ. ಕೊನೆಗೆ ಏನೂ ಮಾಡಲು ತೋಚದೆ ಮೊಯಿಲಿ ಆ ಕೋಪವನ್ನು ಟ್ವೀಟರ್ ನಲ್ಲಿ ಹೊರಗೆ ಹಾಕಿದ್ದಾರೆ. ಇದು ಬಹುತೇಕ ಮೊಯಿಲಿ ಕೈಯಿಂದ ಕಾರ್ಕಳ ಕಳೆದು ಹೋಗುತ್ತಿರುವ ಅಪ್ಪಟ ಸಂಕೇತ. ಅಷ್ಟಕ್ಕೂ ಕಾರ್ಕಳ ಬಿಟ್ಟರೆ ತಮ್ಮ ಮಗನನ್ನು ಬೇರೆಡೆಯಿಂದ ಇಳಿಸಲು ಮೊಯಿಲಿಯವರಿಗೆ ಧೈರ್ಯ ಇಲ್ಲ. ತಾವು ಏಳು ಸಲ ಗೆದ್ದ ಕ್ಷೇತ್ರದಲ್ಲಿ ಈಗಾಗಲೇ ಉದಯ ಕುಮಾರ್ ಶೆಟ್ಟಿ ಮುನಿಯಾಲು ಟವೆಲ್ ಹಾಕಿ ಆಗಿದೆ. ಅವರು ಸಿದ್ದು ಟೀಮಿನ ಸಕ್ರಿಯ ಸದಸ್ಯರಾದ ಮಹದೇವಪ್ಪ ಅವರ ಆಪ್ತರು. ಒಂದೊಂದು ಸೀಟ್ ನಿಂದಲೂ ಇಷ್ಟಿಷ್ಟು ಎಂದು ಲೆಕ್ಕ ಮಾಡಿದರೂ ರಾಹುಲ್ ಗೆ ಕೊಡಬೇಕಾಗಿರುವ ಕಪ್ಪ ಸಂಗ್ರಹವಾಗುವುದು ಕಷ್ಟವಾಗಿರುವಾಗ ಒಂದು ಅವರ ಮಗನಿಗೆ, ಒಂದು ಇವರ ಮಗಳಿಗೆ ಎಂದು ಕೊಟ್ಟರೆ ಮತ್ತೆ ತಾನು ಆಕಾಶ ನೋಡಬೇಕಾಗುವುದು ಎಂದು ಸಿದ್ಧರಾಮಯ್ಯನವರಿಗೆ ಅನಿಸಿದೆ. ಆದ್ದರಿಂದ ಅವರು ನೇರವಾಗಿ ಉದಯಕುಮಾರ್ ಶೆಟ್ಟಿಯವರಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಕಾರ್ಕಳದಲ್ಲಿ ಮೊಯಿಲಿ ಯುಗ ಅಂತ್ಯವಾಗುವ ಸಮಯ ಬಂದಿದೆ. ಮೊಯಿಲಿ ತಮ್ಮ ಮಗನ ರಾಜಕೀಯ ಭವಿಷ್ಯ ಮುಗಿಯುವ ಆತಂಕದಲ್ಲಿದ್ದಾರೆ.

ಕೊನೆಗೆ ಕಾಂಗ್ರೆಸ್ ಉಸ್ತುವಾರಿ ಜೋರು ಮಾಡಿದ್ದಕ್ಕೆ ನಾನಲ್ಲ, ಮಗ ಬರೆದದ್ದು ಎಂದು ಹೇಳಿ ತಪ್ಪಿಸಿಕೊಂಡಿದ್ದಾರೆ. ಹರ್ಷ ಮೊಯಿಲಿಗೆ ನೋಟಿಸ್ ಹೋಗಿದೆ. ಕಾರ್ಕಳದ ಬಿಜೆಪಿಗರು ಸುಲಭದಲ್ಲಿ ಗೆಲ್ಲಬಹುದು ಎಂದು ಅಂದುಕೊಂಡಿದ್ದ ಕ್ಷೇತ್ರ ಮೊಯಿಲಿ ಮಿಸ್ ಮಾಡಿಕೊಂಡ ಕಾರಣಕ್ಕೆ ಹೊಸ ಸವಾಲಿಗೆ ತಯಾರಾಗಬೇಕಿದೆ. ಪುತ್ರವಾತ್ಸಲ್ಯ ಕೆಲವೊಮ್ಮೆ ಏನೆಲ್ಲ ಮಾಡಿಸುತ್ತದೆ ಎನ್ನುವುದಕ್ಕೆ ಮೊಯಿಲಿ ತಾಜಾ ಉದಾಹರಣೆ ಎನ್ನುತ್ತಿದೆ ವಿಧಾನಸಭೆಯ ಪಡಸಾಲೆ!

0
Shares
  • Share On Facebook
  • Tweet It


bjpcongressharsha moilymoilyvedavyasvedavyas kamathveerappa moily


Trending Now
ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
Hanumantha Kamath September 16, 2025
ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
Hanumantha Kamath September 16, 2025
You may also like
ಸಂಸದ ನಳಿನ್ ಹಾಗೂ ಶಾಸಕ ಕಾಮತ್ ಪ್ರಯತ್ನದ ಫಲವಾಗಿ ಲೇಡಿಗೋಶನ್ ಗೆ 5.7 ಕೋಟಿ ಮಂಜೂರು
December 5, 2018
ಮುಸ್ಲಿಂ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ಕೊಡಬೇಕು ಎನ್ನುವ ಹಿಂದಿರುವ ರಹಸ್ಯ ಏನು?
October 31, 2018
ರಾಷ್ಟ್ರೀಯ ಕ್ರೀಡಾಪಟುವಿಗೆ 2 ಲಕ್ಷ ರೂ ಧನ ಸಹಾಯ ನೀಡಿದ ಕೊಡಿಯಾಲ್ ಸ್ಪೋರ್ಟ್ಸ್ ಅಸೋಸಿಯೇಶನ್!
October 9, 2018
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
  • Popular Posts

    • 1
      ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • 2
      ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • 3
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • 4
      ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • 5
      ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search