• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ರಾಜ್ಯಕ್ಕೆ ಯಾವಾಗ ಬೆಂಕಿ ಬೀಳುತ್ತೊ, ಪಾಪದವನ ಹೊಟ್ಟೆಗೆ ಈಗಲೇ ಬೆಂಕಿ ಬಿದ್ದಿದೆ!

TNN Correspondent Posted On July 18, 2017
0


0
Shares
  • Share On Facebook
  • Tweet It

ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಬಂಧಿಸಿದರೆ ಕರ್ನಾಟಕ ಹೊತ್ತಿ ಉರಿಯುತ್ತದೆ- ಮಾನ್ಯ ಸಂಸದ, ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರ ಹೇಳಿಕೆ ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಬಂಧಿಸುವುದು ಬಿಡಿ ಅವರನ್ನು ಧಮ್ ಇದ್ದರೆ ಮುಟ್ಟಿ ನೋಡಿ- ಮಾನ್ಯ ಸಂಸದೆ ಶೋಭಾ ಕರಂದ್ಲಾಜೆಯವರ ಹೇಳಿಕೆ.

ಕಲ್ಲಡ್ಕ ಪ್ರಭಾಕರ ಭಟ್ಟರನ್ನು ಬಂಧಿಸುವ ಗಂಡಸು ಪೊಲೀಸ್ ಇಲಾಖೆಯಲ್ಲಿ ಯಾರೂ ಇಲ್ವಾ? -ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ.
ಹೀಗೆ ಹೇಳುವ ಮೂಲಕ ಯಾರು ಯಾರನ್ನು ಕೆಣಕಲು ಹೊರಟಿದ್ದಾರೆ ಎನ್ನುವುದು ಸದ್ಯಕ್ಕೆ ಗೊತ್ತಾಗಬೇಕಾದ ಪ್ರಶ್ನೆ. ಹೀಗೆ ಇವರುಗಳು ಹೇಳಿದ ಕೂಡಲೇ ಏನಾಗುತ್ತದೆ? ಪೊಲೀಸ್ ಉನ್ನತ ಅಧಿಕಾರಿಗಳು ಗೊಂದಲಕ್ಕೆ ಬೀಳುತ್ತಾರೆ. ಬಂಧಿಸದಿದ್ದರೆ ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ಸಭೆಯಲ್ಲಿ ನಿಲ್ಲಿಸಿ ಜೋರು ಮಾಡುತ್ತಾರೆ. ಬಂಧಿಸಿದರೆ ಕರ್ನಾಟಕ ಹೊತ್ತಿ ಉರಿಯುತ್ತದೆ ಎಂದು ಬಿಜೆಪಿ ನಾಯಕರು ಬಹಿರಂಗವಾಗಿ ಬೆದರಿಕೆ ಹಾಕುತ್ತಾರೆ. ಬಂಧಿಸದೇ ಹೋದರೆ ನಮಗೆ ಧಮ್ ಇಲ್ಲ ಎಂದು ನಾವೇ ಒಪ್ಪಿಕೊಂಡಂತೆ ಆಗುತ್ತದೆ. ಅದೇ ಬಂಧಿಸಿದರೆ ಅಮಾಯಕ ನಾಲ್ಕು ಅಂಗಡಿಗಳು ಹೊತ್ತಿ ಉರಿದರೆ ಆಗ ರಾಜ್ಯದ ಶಾಂತಿ ಸುವ್ಯವಸ್ಥೆ ಹಾಳಾಗುತ್ತದೆ. ಆಗಲೂ ಜವಾಬ್ದಾರಿ ಮಾಡುವುದು ಪೊಲೀಸ್ ಇಲಾಖೆಯನ್ನು. ಅದಕ್ಕೂ ತಮ್ಮನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಹೀಗೆ ಒಟ್ಟಿನಲ್ಲಿ ಬಂಧಿಸಿದರೂ ಕಷ್ಟ. ಬಂಧಿಸದಿದ್ದರೂ ಕಷ್ಟ ಎನ್ನುವ ಸಂಕಷ್ಟಕ್ಕೆ ಇಲಾಖೆ ಬೀಳುತ್ತದೆ.

ಇನ್ನೊಂದೆಡೆ ಮುಂದಿನ ಬಾರಿ ಅಧಿಕಾರಕ್ಕೆ ಬರುವುದು ನಾವು, ಎಚ್ಚರವಿರಲಿ ಎಂದು ಬಿಜೆಪಿ ಮುಖಂಡರು ಭಾಷಣದಲ್ಲಿ ಬೀಗಿಯುತ್ತಾರೆ. ಅದು ಕೂಡ ಒಂದು ರೀತಿಯಲ್ಲಿ ಪರೋಕ್ಷ ಬ್ಲ್ಯಾಕ್ ಮೇಲ್. ಅದೇ ಹೊತ್ತಿನಲ್ಲಿ ಮುಂದಿನ ಬಾರಿ ಅಧಿಕಾರಕ್ಕೆ ಮತ್ತೆ ನಾವೇ ಬರುವುದು ಎಂದು ಕಾಂಗ್ರೆಸ್ ನಾಯಕರು ಹೇಳುತ್ತಾರೆ. ಅದು ಕೂಡ ಚುನಾವಣಾ ಭರವಸೆ. ನೀವು ಹೆದರಬೇಡಿ, ತಪ್ಪಿತಸ್ಥ ಹಿಂದೂಗಳ ಮೇಲೆ ಮತ್ತು ಇತರ ಧರ್ಮದವರ ಮೇಲೆ ಕೂಡ ಕ್ರಮ ತೆಗೆದುಕೊಳ್ಳಿ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳುತ್ತಾರೆ. ಇದರಿಂದ ಮತ್ತೆ ಉನ್ನತ ಪೊಲೀಸ್ ಅಧಿಕಾರಿಗಳು ಒತ್ತಡ ಅನುಭವಿಸುತ್ತಾರೆ.

ನಾನು ಹೇಳುವುದಿಷ್ಟೇ. ಕಲ್ಲಡ್ಕ ಪ್ರಭಾಕರ ಭಟ್ ಅವರು ತಪ್ಪು ಮಾಡಿದರೆ ಪೊಲೀಸರು ಸೂಕ್ತ ಸಾಕ್ಷಾಧಾರ ಇದ್ದರೆ ಬಂಧಿಸುತ್ತಾರೆ. ಅದೇ ಸಾಕ್ಷಾಧಾರಗಳು ಇಲ್ಲದೆ ಹೋದರೆ ಅವರು ಯಾರು ಬಂಧಿಸಲು ಹೇಳಿದರೂ ಬಂಧಿಸಲು ಆಗುವುದಿಲ್ಲ. ಅದಕ್ಕೆ ನಮ್ಮ ರಾಜಕಾರಣಿಗಳು ಯಾಕೆ ಮಧ್ಯ ಪ್ರವೇಶಿಸಬೇಕು. ನಮ್ಮ ರಾಜಕಾರಣಿಗಳು ಹೀಗೆ ಹೇಳುವುದರಿಂದಲೇ ತಾನೆ ಶಾಂತಿಗೆ ಭಂಗ ಬರುವುದು. ಯಡಿಯೂರಪ್ಪನವರು ಹೇಳಿದ ಪ್ರಕಾರ ಕರ್ನಾಟಕಕ್ಕೆ ಬೆಂಕಿ ಬಿದ್ದರೆ ಅದರಲ್ಲಿ ಅಲ್ಪಸಂಖ್ಯಾತರು ಮಾತ್ರ ಉರಿದು ಬೀಳುತ್ತಾರಾ ಅಥವಾ ಬೆಂಕಿ ಬಿದ್ದಾಗ ಅದರಲ್ಲಿ ಹಿಂದೂಗಳು ಕೂಡ ನೋವು ಅನುಭವಿಸುತ್ತಾರಾ, ಅದನ್ನು ಅವರು ಸ್ಪಷ್ಟಪಡಿಸಬೇಕು. ಅಷ್ಟಕ್ಕೂ ಕರ್ನಾಟಕ್ಕೆ ಬೆಂಕಿ ಬಿದ್ದರೆ ಇವರು ಏನೂ ಗೋವಾಕ್ಕೆ ಓಡಿ ಹೋಗಿ ಆಶ್ರಯ ಪಡೆದುಕೊಳ್ಳುತ್ತಾರಾ, ಅಥವಾ ಬೆಂಕಿ ಹಚ್ಚುವ ಗುತ್ತಿಗೆಯನ್ನು ಪಡೆದುಕೊಂಡವರು ಬಿಜೆಪಿಯವರನ್ನು ಬಿಟ್ಟು ಬೇರೆಯವರಿಗೆ ಮಾತ್ರ ಬೆಂಕಿ ಹಚ್ಚುತ್ತಾರಾ? ಅದು ಕೂಡ ಗೊತ್ತಾಗಬೇಕು. ಈಗ ಇವರು ಬೆಂಕಿ ಕೊಟ್ಟಾಗ ಅದರಲ್ಲಿ ಅಮಾಯಕ ಅಲ್ಪಸಂಖ್ಯಾತರು ಕೂಡ ಸಾಯುತ್ತಾರಾ ಅಥವಾ ಇವರ ಪ್ರಕಾರ ಆರೋಪಿಗಳು ಮಾತ್ರ ಸಾಯುತ್ತಾರಾ? ಇದೆಲ್ಲ ಲೆಕ್ಕ ಹಾಕಿ ಇವರು ಬೆಂಕಿ ಕೊಡಲಿ, ಅದು ಬಿಟ್ಟು ಇಡೀ ಕರ್ನಾಟಕಕ್ಕೆ ಬೆಂಕಿ ಕೊಟ್ಟರೆ ಸುಟ್ಟು ಹೋಗುವುದು ನಮ್ಮ ದೇಶದ ಆಸ್ತಿಪಾಸ್ತಿ ವಿನ: ಯಾವುದೇ ಒಬ್ಬ ರಾಜಕಾರಣಿ ಅಧಿಕಾರದಲ್ಲಿದ್ದಾಗ ಮಾಡಿಟ್ಟ ಕೋಟಿಗಟ್ಟಲೆ ಬೇನಾಮಿ ಆಸ್ತಿಯಲ್ಲ!

ಇದನ್ನೇ ಜನಸಾಮಾನ್ಯ ಕೇಳ್ತಾ ಇರುವುದು, ನೀವು ಒಬ್ಬ ವ್ಯಕ್ತಿಯನ್ನು ಬಂಧಿಸಿದರೆ ಬೆಂಕಿ ಬೀಳುತ್ತೆ ಎಂದು ಹೇಳುವುದಾದರೆ ಆ ಬಂಧನದ ದಿನ ಮತ್ತು ಬೆಂಕಿ ಬೀಳುವ ದಿನವನ್ನು ಎಡ್ವಾನ್ ಆಗಿ ಪತ್ರಿಕೆಯಲ್ಲಿ ತಿಳಿಸಿ. ಇಲ್ಲದಿದ್ದರೆ ಉದ್ಯೋಗಕ್ಕೆ ಹೋಗುವ, ಬೆಳ್ಳಂ ಬೆಳಿಗ್ಗೆ ಅಥವಾ ರಾತ್ರಿ ವ್ಯವಹಾರ, ಉದ್ಯೋಗ ಮುಗಿಸಿ ಬರುವ ನನ್ನಂತಹ ಪಾಪದವರು ಯಾರದ್ದೋ ಚೂರಿಗೆ ಎದೆಕೊಡುವ ಪರಿಸ್ಥಿತಿ ಬರುತ್ತದೆ. ಇನ್ನು ನೀವು ಹೇಳಿಕೆ ಕೊಟ್ಟು ಯಾರದ್ದೋ ಹಣದಲ್ಲಿ ಊಟ, ತಿಂಡಿ ಮಾಡಿ ವಿಮಾನದಲ್ಲಿ ಹತ್ತಿ ಹೋಗುತ್ತೀರಿ. ಆದರೆ ನಾವು ನಮ್ಮ ಊಟ, ತಿಂಡಿಗಾಗಿ ಇಲ್ಲಿ ದುಡಿಯಬೇಕು. ರಾಜ್ಯಕ್ಕೆ ಯಾವಾಗ ಇವರು ಬೆಂಕಿ ಹಾಕುತ್ತಾರೋ ಆದರೆ ಜನಸಾಮಾನ್ಯರ ಹೊಟ್ಟೆಗೆ ಈಗಲೇ ಬೆಂಕಿ ಬೀಳುತ್ತಿದೆ

0
Shares
  • Share On Facebook
  • Tweet It




Trending Now
ಭಾರತದ ಡ್ರೆಸ್ಸಿಂಗ್ ರೂಂನಲ್ಲಿ ಹನುಮಾನ್ ಚಾಲೀಸಾ ಪಠಣ!
Tulunadu News July 18, 2025
ಉತ್ತರಾಖಂಡದ ಎಲ್ಲಾ 17000 ಸರಕಾರಿ ಶಾಲೆಗಳಲ್ಲಿ ಭಗವದ್ಗೀತೆ ಪಠಣ ಕಡ್ಡಾಯ ಅದೇಶ!
Tulunadu News July 17, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಭಾರತದ ಡ್ರೆಸ್ಸಿಂಗ್ ರೂಂನಲ್ಲಿ ಹನುಮಾನ್ ಚಾಲೀಸಾ ಪಠಣ!
    • ಉತ್ತರಾಖಂಡದ ಎಲ್ಲಾ 17000 ಸರಕಾರಿ ಶಾಲೆಗಳಲ್ಲಿ ಭಗವದ್ಗೀತೆ ಪಠಣ ಕಡ್ಡಾಯ ಅದೇಶ!
    • ಯುವಕನನ್ನು ಲವ್ ಜಿಹಾದ್ ಮಾಡಿದ್ಲಾ ಮುಸ್ಲಿಂ ಯುವತಿ! ಹಿಂದೂ ಯುವಕ ಕಂಗಾಲು...
    • ಮೋದಿ ಮಾತ್ರ ವಾರಕ್ಕೆ 100 ಗಂಟೆ ಕೆಲಸ ಮಾಡ್ತಾರೆ- ಸಂಸದ ತೇಜಸ್ವಿಗೆ ಹೇಳಿದ ನಾರಾಯಣ್ ಮೂರ್ತಿ
    • ಗಂಡ ತಲೆಹಿಡುಕ ಎಂದ ಸಂತ್ರಸ್ತೆಗೆ ಪೊಲೀಸ್ ಪೇದೆಯೇ ಮುಕ್ಕಿದ ಮಂಗಳೂರಿನ ನೋವಿನ ಕಥೆ!
    • ನಿಟ್ಟೆ ಕಾಲೇಜು ಹಾಸ್ಟೆಲ್ ಶೌಚಾಲಯದಲ್ಲಿ ಹಿಂದೂ-ಮುಸ್ಲಿಂ ದ್ವೇಷ ಬರಹ! ವಿದ್ಯಾರ್ಥಿನಿ ಬಂಧನ
    • ಕಾರ್ಕಳ ಪರಶುರಾಮನ ವಿಗ್ರಹ ಕಂಚಿನದ್ದು ಅಲ್ಲ, ನಕಲಿ: ಚಾರ್ಜ್ ಶೀಟ್ ಸಲ್ಲಿಕೆ
    • ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
    • ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
    • ಪ್ರಾಜೆಕ್ಟ್ ಎಂದರೆ ಮಹಿಳೆ... ಪ್ರಾಜೆಕ್ಟ್ ಸಿಕ್ಕಿತಾ ಎಂದು ಬಾಬಾ ಯುವಕರಿಗೆ ಕೇಳುತ್ತಿದ್ದ! ಹೀಗೆ ಬೇರೆ ಬೇರೆ ಕೋಡ್ ವರ್ಡ್ ಗಳಿವೆ!
  • Popular Posts

    • 1
      ಭಾರತದ ಡ್ರೆಸ್ಸಿಂಗ್ ರೂಂನಲ್ಲಿ ಹನುಮಾನ್ ಚಾಲೀಸಾ ಪಠಣ!
    • 2
      ಉತ್ತರಾಖಂಡದ ಎಲ್ಲಾ 17000 ಸರಕಾರಿ ಶಾಲೆಗಳಲ್ಲಿ ಭಗವದ್ಗೀತೆ ಪಠಣ ಕಡ್ಡಾಯ ಅದೇಶ!
    • 3
      ಯುವಕನನ್ನು ಲವ್ ಜಿಹಾದ್ ಮಾಡಿದ್ಲಾ ಮುಸ್ಲಿಂ ಯುವತಿ! ಹಿಂದೂ ಯುವಕ ಕಂಗಾಲು...
    • 4
      ಮೋದಿ ಮಾತ್ರ ವಾರಕ್ಕೆ 100 ಗಂಟೆ ಕೆಲಸ ಮಾಡ್ತಾರೆ- ಸಂಸದ ತೇಜಸ್ವಿಗೆ ಹೇಳಿದ ನಾರಾಯಣ್ ಮೂರ್ತಿ
    • 5
      ಗಂಡ ತಲೆಹಿಡುಕ ಎಂದ ಸಂತ್ರಸ್ತೆಗೆ ಪೊಲೀಸ್ ಪೇದೆಯೇ ಮುಕ್ಕಿದ ಮಂಗಳೂರಿನ ನೋವಿನ ಕಥೆ!

  • Privacy Policy
  • Contact
© Tulunadu Infomedia.

Press enter/return to begin your search