ಕಾಲೇಜಿಗೆ ಹೋದ ಮಗಳು, ಕೆಲಸಕ್ಕೆ ಹೋದ ಮಗ, ಮೇಯಲು ಹೋದ ದನ ಹಿಂತಿರುಗಿ ಬರಬೇಕಾದರೆ……
Posted On May 11, 2018
0
ಇನ್ನು ಇವತ್ತು ಶುಕ್ರವಾರ. ಎಲ್ಲಾ ಮಸೀದಿಗಳಲ್ಲಿ ನಾಳೆ ಅವರು ಯಾರಿಗೆ ಮತ ಹಾಕಬೇಕು ಎಂದು ಅವರ ಗುರುಗಳು ಹೇಳಿಯಾಗಿದೆ. ಮೊನ್ನೆ ರವಿವಾರ ಎಲ್ಲಾ ಚರ್ಚುಗಳಲ್ಲಿ ನಮ್ಮವ ಯಾರು ಎಂದು ತಿಳಿಸಿಯಾಗಿದೆ. ಆದರೆ ಹಿಂದೂಗಳು ಬಂಟ, ಬಿಲ್ಲವ, ಗಾಣಿಗ, ಮೊಗವೀರ, ಕುಲಾಲ್, ಜಿಎಸ್ ಬಿ, ಕ್ಷತ್ರೀಯ ಹೀಗೆ ನೂರಾರು ಜಾತಿಗಳಲ್ಲಿ ಹಂಚಿಹೋಗಿದ್ದಾರೆ. ಹತ್ತಾರು ಗುರು ಪರಂಪರೆಯಲ್ಲಿ ಸೇರಿ ಹೋಗಿದ್ದಾರೆ. ಯಾರು ಕೂಡ ಇದೇ ದಿನ ದೇವಸ್ಥಾನಕ್ಕೆ ಹೋಗುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಇನ್ನು ನಮ್ಮ ಕರಾವಳಿಯ ಗುರುಗಳು ಇಂತವರಿಗೆ ಹಾಕಿ ಎಂದು ಹೇಳಲು ಹೋಗುವುದಿಲ್ಲ. ಆದ್ದರಿಂದ ನಮ್ಮವರಿಗೆ ಯಾರಿಗೆ ವೋಟ್ ಹಾಕಬೇಕು ಎಂದು ಹೇಳುವವರು ಯಾರೂ ಇಲ್ಲ. ಇದರಿಂದ ಗೆಲ್ಲಬೇಕಾದವರಿಗೆ ಗೆಲ್ಲಲು ಕಷ್ಟವಾಗುತ್ತಿತ್ತು. ಕಾಲೇಜಿಗೆ ಹೋದ ಮಗಳು, ಕೆಲಸಕ್ಕೆ ಹೋದ ಮಗ, ಮೇಯಲು ಹೋದ ದನ ಹಿಂದಕ್ಕೆ ಬರಬೇಕಾದರೆ ಯಾರಿಗೆ ಮತ ಚಲಾಯಿಸಬೇಕು ಎಂದು ನಿಮಗೆ ಗೊತ್ತಿರುತ್ತೆ ಎಂದು ಅಂದುಕೊಂಡಿದ್ದೇನೆ!
Trending Now
Najlepsze bonusy i sloty w polskim kasynie online
May 29, 2026








