• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಈ ಬಾರಿ ಪಾಲಿಕೆಗೆ ತಲೆ ಇದ್ದವರು ಬರಲಿ, ಹಸಿವಿದ್ದವರು ಅಲ್ಲ!!

Hanumantha Kamath Posted On October 22, 2019
0


0
Shares
  • Share On Facebook
  • Tweet It

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಸಿಸುವ ಜನರಿಗೆ ಪ್ರಜಾಪ್ರಭುತ್ವದ ಪ್ರಮುಖ ಅಸ್ತ್ರವನ್ನು ಬಳಸಲು ಮತ್ತೆ ಅವಕಾಶ ಸಿಕ್ಕಿದೆ. ಇದೇ ನವೆಂಬರ್ 12 ರಂದು ನಾವು ಮತದಾನ ಮಾಡುವ ಮೂಲಕ ನಮ್ಮ ವಾರ್ಡುಗಳ ಅಭಿವೃದ್ಧಿ ಮಾಡಲು ನಮಗೆ ಯಾರು ಬೇಕು ಎಂದು ನಿರ್ಧರಿಸುವ ಸಮಯ ಬಂದಿದೆ. ನಾನು ಹೇಳುವುದಾದರೆ ಇಲ್ಲಿ ನೀವು ಮುಖ್ಯವಾಗಿ ನೋಡಬೇಕಾಗಿರುವುದು ಯಾರಿಗೆ ನಿಜಕ್ಕೂ ಅಭಿವೃದ್ಧಿಯ ಕಾಳಜಿ ಇದೆ ಮತ್ತು ಯಾರು ಹಣ ಮಾಡಲು ಕಾರ್ಪೋರೇಟರ್ ಆಗಲು ಬಯಸುತ್ತಿದ್ದಾರೆ ಎನ್ನುವುದನ್ನು. ಇವತ್ತಿಗೂ ಅನೇಕ ವಾರ್ಡುಗಳಲ್ಲಿ ನಿರಂತರ ಎರಡು ಗಂಟೆ ಜೋರು ಮಳೆ ಬಂದರೆ ರಸ್ತೆ ಹೋಗಿ ಕೃತಕ ಕೆರೆ ನಿರ್ಮಾಣವಾಗುವ ಸಂಭವ ಇದೆ. ಹಾಗಂತ ನಮ್ಮ ಪಾಲಿಕೆಯಲ್ಲಿ ಅಭಿವೃದ್ಧಿಗೆ ಹಣ ಬಂದಿಲ್ಲ ಎಂದಲ್ಲ. ಎಡಿಬಿ ಸಾಲದಿಂದ ಹಿಡಿದು 14 ನೇ ಫೈನಾನ್ಸ್ ನಿಂದ ಮೊದಲ್ಗೊಂಡು ಅಮೃತ ಯೋಜನೆ, ಸ್ಮಾರ್ಟ್ ಸಿಟಿ ಯೋಜನೆಗಳ ತನಕ ವಿವಿಧ ರೀತಿಗಳಲ್ಲಿ ಇಲ್ಲಿ ವಿಶೇಷ ಅನುದಾನಗಳು ಬಂದಿವೆ. ಆದರೆ ಎಷ್ಟು ಅಭಿವೃದ್ಧಿ ಆಗಿದೆ.

ಎಡಿಬಿಯಿಂದ ಮೊದಲ ಹಂತದ 108 ಕೋಟಿ ಬಂದಾಗ ಮಂಗಳೂರಿನ ಎಲ್ಲಾ ವಾರ್ಡುಗಳಿಗೆ ದಿನದ ಇಪ್ಪತ್ತನಾಲ್ಕು ಘಂಟೆ ನೀರು ವಾರದ ಏಳು ದಿನವೂ ಪೂರೈಸುವ ಭರವಸೆ ಸಿಕ್ಕಿತ್ತು. ಆದರೆ ಇಲ್ಲಿಯ ತನಕ ಅದು ಈಡೇರಿದೆಯಾ? ಇವತ್ತಿಗೂ ವಾರದಲ್ಲಿ ಒಟ್ಟು 24 ಗಂಟೆ ನೀರು ಬರಲು ಸಂಶಯ ಇರುವ ಅನೇಕ ವಾರ್ಡುಗಳಿವೆ. ಆದ್ದರಿಂದ ಯೋಗ್ಯವಾಗಿರುವ ಆಡಳಿತವನ್ನು ನೀಡುವ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಅವಶ್ಯಕತೆ ಇದೆ. ಹಾಗಾದರೆ ಒನ್ ಬೈ ಒನ್ ಆಗಬೇಕಾದ ಕಾರ್ಯಗಳ ಬಗ್ಗೆ ನೋಡೋಣ.
ಮೊತ್ತ ಮೊದಲಿಗೆ ಮಂಗಳೂರು ಸ್ಮಾರ್ಟ್ ಸಿಟಿ ಆಗುವ ನಿಟ್ಟಿನಲ್ಲಿ ಸಾಗುತ್ತಿದೆ. ಒಳಗೆ ಬನಿಯನ್ ತೂತಾಗಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವೇ ಬೇಕು ಎನ್ನುವಂತಹ ಮನಸ್ಥಿತಿಯನ್ನು ನಮ್ಮ ಪಾಲಿಕೆ ಕೈ ಬಿಡಬೇಕು. ನೀವು ಮನೆಯ ಅಡುಗೆಕೋಣೆಯಲ್ಲಿ ಜಾಗ ಕಡಿಮೆ ಇದೆ ಎಂದು ನಿಮಗೆ ಅನಿಸಿದರೆ ಕೆಲವು ವಸ್ತುಗಳನ್ನು ತೆಗೆದು ಹೊರಗೆ ಬಿಸಾಡಿರುತ್ತಿರಿ ಅಥವಾ ಗುಜರಿಯವರಿಗೆ ಕೊಟ್ಟಿರುತ್ತೀರಿ. ಆದರೆ ಕೆಲವು ದಿನಗಳ ನಂತರ ಪುನ: ಅಂಗಡಿಯಿಂದ ಹೆಚ್ಚಿನ ಬೆಲೆ ಕೊಟ್ಟು ಕೆಲಸಕ್ಕೆ ಬಾರದ ವಸ್ತುಗಳನ್ನು ತಂದು ಅಡುಗೆಕೋಣೆಯ ಮಧ್ಯದಲ್ಲಿ ಇಟ್ಟರೆ ನಿಮ್ಮನ್ನು ಬುದ್ಧಿವಂತರು ಎಂದು ಕರೆಯುವುದಾ ಅಥವಾ ಸ್ವೇಚ್ಚಾಚಾರಿಗಳು ಎಂದು ಕರೆಯುವುದಾ? ಅದೇ ರೀತಿಯಲ್ಲಿ ಆಗಿದೆ.

ಮಂಗಳೂರಿನ ಟೌನ್ ಹಾಲ್ ಎದುರಿಗೆ ಮುಂಚೆ ಕ್ಲಾಕ್ ಟವರ್ ಇತ್ತು. ನಂತರ ಜಿಲ್ಲಧಿಕಾರಿಗಳು ಅದನ್ನು ತೆಗೆದರು. ಅದಕ್ಕೆ ಮುಖ್ಯ ಕಾರಣ ಅಲ್ಲಿ ಅದು ಸುಮ್ಮನೆ ಜಾಗ ತಿನ್ನುತ್ತದೆ ಎನ್ನುವ ಉದ್ದೇಶವಿತ್ತು. ಏಕೆಂದರೆ ಮಂಗಳೂರಿನಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗುತ್ತಾ ಹೋಗಿತ್ತು. ಈಗ ಇನ್ನೂ ಹೆಚ್ಚಾಗಿದೆ. ಅದರ ನಂತರ ಏನಾಯಿತು ಎಂದರೆ ಸ್ಮಾರ್ಟ್ ಸಿಟಿ ಯೋಜನೆ ಬಂತು. 99 ಲಕ್ಷ ರೂಪಾಯಿಯಲ್ಲಿ ( ಯಡಿಯೂರಪ್ಪನವರ ಲೆಕ್ಕದ ಪ್ರಕಾರ 5 ಲಕ್ಷದಂತೆ ಇಪ್ಪತ್ತು ಮನೆ ಪಾಪದವರಿಗೆ ಕಟ್ಟಿಕೊಡಬಹುದು) ಒಂದು ಕ್ಲಾಕ್ ಟವರ್ ನಿರ್ಮಾಣವಾಗಿದೆ. ಹಾಗಿದ್ದರೆ ಆವತ್ತು ಕ್ಲಾಕ್ ಟವರ್ ತೆಗೆದು ಅಲ್ಲಿ ವಾಹನಗಳ ಸುಲಲಿತ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದ ಜಿಲ್ಲಾಧಿಕಾರಿಗಳು ಏನೂ ದಡ್ಡರೇ, ದೂರದೃಷ್ಟಿಯುಳ್ಳವರಾಗಿಲ್ಲದಿದ್ದವರೇ? ಆದರೆ ಕಳೆದ ಪಾಲಿಕೆಯಲ್ಲಿ ಆಡಳಿತದಲ್ಲಿ ಕಾಂಗ್ರೆಸ್ ನ ಮೇಯರ್ ಸ್ಮಾರ್ಟ್ ಸಿಟಿ ಹಣದಲ್ಲಿ ಕ್ಲಾಕ್ ಟವರ್ ನಿರ್ಮಿಸಲು ಸ್ಮಾರ್ಟ್ ಸಿಟಿ ಮಂಡಳಿಯೊಂದಿಗೆ ಕೈಜೋಡಿಸಿದ್ದಾರೆ. ಇನ್ನು ನಗರದಲ್ಲಿ ಅಲ್ಲಲ್ಲಿ ನಿರ್ಮಾಣವಾಗಿರುವ ಬಸ್ ಸ್ಟಾಪ್ ಗಳು. ಹನ್ನೆರಡುವರೆ ಲಕ್ಷದಿಂದ ಇಪ್ಪತ್ತು ಲಕ್ಷ ವೆಚ್ಚದಲ್ಲಿ ರೆಡಿಯಾಗುತ್ತಿವೆ (ಯಡಿಯೂರಪ್ಪನವರ ಲೆಕ್ಕದ ಪ್ರಕಾರ ಎರಡರಿಂದ ನಾಲ್ಕು ಮನೆ ಪಾಪದವರಿಗೆ ಕಟ್ಟಿಕೊಡಬಹುದು) ಇದು ಅಗತ್ಯವೇ ಎನ್ನುವುದನ್ನು ನೋಡಬೇಕಿತ್ತು. ಇನ್ನು ನೋಡಿ ಪ್ರಯೋಜನವಿಲ್ಲ. ಯಾಕೆಂದರೆ ಅದು ಆಗಿ ಹೋಗಿದೆ. ಇವರಿಗೆ ನಾವು ಅಕ್ಕಿ ಕೊಟ್ಟರೆ ಅನ್ನ ಹೇಗೆ ಮಾಡುತ್ತಾರೆ ಎನ್ನುವುದನ್ನು ಪ್ರಾರಂಭದಲ್ಲಿಯೇ ಇವರ ಅರೆಬೆಂದಿರುವ ಅನ್ನದ ಅಗುಳನ್ನು ನೋಡಿ ಗೊತ್ತಾಗಿದೆ. ಅದರ ಬದಲಿಗೆ ಒಳ್ಳೆಯ ಜವಾಬ್ದಾರಿಯುತ ಆಡಳಿತ ಬಂದರೆ ಒಳ್ಳೆಯ ಜ್ಞಾನ ಇರುವ ಮೇಯರ್ ಮತ್ತು ಸದಸ್ಯರು ಆಯ್ಕೆಯಾದರೆ ಆಗ ಮಂಗಳೂರು ಸ್ಮಾರ್ಟ್ ಆಗಲು ಸುಲಭವಾಗಬಹುದು. ಇನ್ನು ಹಲವು ವಿಷಯಗಳಿಗಾಗಿ ನಾವು ಒಳ್ಳೆಯ ಆಡಳಿತವನ್ನು ಆಯ್ಕೆ ಮಾಡಬೇಕಿದೆ. ಒಂದೊಂದೆ ನೋಡುತ್ತಾ ಬರೋಣ, ನಾಳೆಯಿಂದ!

0
Shares
  • Share On Facebook
  • Tweet It


electionmangalore city corporationmangalore city corporation electionMCCvote


Trending Now
ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
Hanumantha Kamath July 1, 2025
ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
Hanumantha Kamath July 1, 2025
You may also like
ಮತದಾನಕ್ಕಾಗಿ ಸಿಡ್ನಿಯ ಕೆಲಸ ಬಿಟ್ಟು ಬಂದ ಸುಧೀಂದ್ರರಿಂದ ಇಲ್ಲಿನವರೇ ಕಲಿಯುವುದು ಬೇಕಾದಷ್ಟಿದೆ!!
April 15, 2019
ಮುಸ್ಲಿಂ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ಕೊಡಬೇಕು ಎನ್ನುವ ಹಿಂದಿರುವ ರಹಸ್ಯ ಏನು?
October 31, 2018
ಬಾವಿಗಳಿಗೆ ಬೆಳ್ಳಿಯ ರಿಂಗ್ ಹಾಕಿಸಿ ಚಿನ್ನದ ಲೇಪನ ಕೊಡುತ್ತಿರುವ ಪಾಲಿಕೆ!!
October 1, 2018
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?
    • ಸಂವಿಧಾನದಿಂದ "ಜಾತ್ಯಾತೀತತೆ" ಮತ್ತು "ಸಮಾಜವಾದ" ಶಬ್ದಗಳನ್ನು ತೆಗೆಯುವ ಬಗ್ಗೆ ಚರ್ಚೆ ನಡೆಯಲಿ - ಆರ್ ಎಸ್ ಎಸ್
    • PFI ಟಾರ್ಗೆಟ್- 950 ಜನರ ಹಿಟ್ ಲಿಸ್ಟ್ ರೆಡಿ! NIA ಕೋರ್ಟ್ ನಲ್ಲಿ ವಕೀಲರಿಂದ ಮಾಹಿತಿ...
    • ಎಮರ್ಜೆನ್ಸಿ ದಿನಗಳಲ್ಲಿ ಮೋದಿಯವರ ಅನುಭವ ಕಥನ "ದಿ ಎಮರ್ಜೆನ್ಸಿ ಡೈರಿಸ್"!
    • ಬಾಹ್ಯಕಾಶಕ್ಕೆ ಜಿಗಿಯುವ ಮೊದಲು ಪತ್ನಿಗೆ ಭಾವನಾತ್ಮಕ ಸಂದೇಶ: "ನೀನಿಲ್ಲದೆ..... " ಶುಭಾಂಶು ಹೇಳಿದ್ದೇನು?
    • ಪಹಲ್ಗಾಮ್ ಉಗ್ರರಿಗೆ ಆಹಾರ, ಆಶ್ರಯ: ಸ್ಥಳೀಯರಿಬ್ಬರ ಬಂಧನ!
  • Popular Posts

    • 1
      ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • 2
      ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • 3
      ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • 4
      ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • 5
      ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?

  • Privacy Policy
  • Contact
© Tulunadu Infomedia.

Press enter/return to begin your search