• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಇಂಟರ್ ಲಾಕ್ ಕಾಂಕ್ರೀಟ್ ಬ್ಯಾಂಡ್ ಗಳು ಪಪ್ಪಡ ಒಡೆದಂತೆ ಒಡೆದು ಹೋಗಿವೆ!

Hanumantha Kamath Posted On May 24, 2018


  • Share On Facebook
  • Tweet It

ಮಂಗಳೂರು ಮಹಾನಗರ ಪಾಲಿಕೆಯ ಅಂಗಣದಲ್ಲಿಯೇ ಪಾಲಿಕೆಯ ಅಧಿಕಾರಿಗಳ ಮೂಗಿನ ಕೆಳಗೆನೆ ಸಿಂಬಳ ಸುರಿಯುತ್ತಿದ್ದರೂ ಅದನ್ನು ಸರಿ ಮಾಡುವವರಿಲ್ಲ ಎನ್ನುವುದು ನನ್ನ ನಿನ್ನೆಯ ಜಾಗೃತ ಅಂಕಣದಲ್ಲಿ ಬರೆದಿದ್ದೆ. ಅವೈಜ್ಞಾನಿಕವಾಗಿ ಮ್ಯಾನ್ ಹೋಲ್ ನಿರ್ಮಿಸಿದ್ದ ಗುತ್ತಿಗೆದಾರರ ಕೆಲಸದಿಂದ ಪಾಲಿಕೆಯ ಮಾನ ಅವರ ಎದುರೇ ನಿತ್ಯ ಹರಾಜಾಗುವಂತಿತು. ನಾನು ಪಾಲಿಕೆಯ ಇಂಜಿನಿಯರ್ ಗಳ ಗಮನಕ್ಕೆ ತಂದ ಬಳಿಕ ಅದನ್ನು ಮತ್ತಿಷ್ಟು ಖರ್ಚು ವೆಚ್ಚ ಈಗ ಸರಿ ಮಾಡಿರುವುದು ಕೂಡ ನಿಮಗೆ ಹೇಳಿದ್ದೇನೆ. ಆ ಜಾಗದಲ್ಲಿ ಅವೈಜ್ಞಾನಿಕ ಕಾಮಗಾರಿ ಮಾತ್ರವಲ್ಲ ಕಳಪೆ ಕಾಮಗಾರಿಯೂ ನಡೆದು ನಮ್ಮ ಪಾಲಿಕೆ ತಮ್ಮ ಮನೆಯಂತಿರುವ ಅಂಗಣವನ್ನೂ ಸರಿಯಾಗಿ ನೋಡುವುದಿಲ್ಲ ಎನ್ನುವುದು ಮತ್ತೆ ಸಾಬೀತಾಗಿದೆ.
ನಾನು ನಿನ್ನೆ ಹೇಳಿದ ಜಾಗಕ್ಕೆ ಮತ್ತೆ ಬನ್ನಿ. ಅದೇ ಪಾಲಿಕೆಯ ಹಿಂದಿನ ದ್ವಾರ. ಅಲ್ಲಿ ನೆಲಕ್ಕೆ ಇಂಟರ್ ಲಾಕ್ ಹಾಕಿರುವುದನ್ನು ನೀವು ನೋಡಿರಬಹುದು. ಆ ಇಂಟರ್ ಲಾಕ್ ಗಳ ಮಧ್ಯದಲ್ಲಿ ಪಾತ್ರೆಗಳಿಗೆ ಬೆಸುಗೆ ಹಾಕಿದಂತೆ ಸಿಮೆಂಟಿನ ಬೆಸುಗೆ ಹಾಕಲಾಗುತ್ತದೆ. ಇದನ್ನು ಕಾಂಕ್ರೀಟ್ ಬ್ಯಾಂಡ್ ಎಂದು ಕರೆಯುತ್ತಾರೆ. ಈ ಕಾಂಕ್ರೀಟ್ ಬ್ಯಾಂಡ್ ಗಳು ಹಾಕಿರುವ ಕೆಲವೇ ದಿನಗಳ ಒಳಗೆನೆ ಪಪ್ಪಡ ಒಡೆದಂತೆ ಒಡೆದಿವೆ. ಅಲ್ಲಿಗೆ ಕಾಂಕ್ರೀಟ್ ಬ್ಯಾಂಡ್ ನ ಉದ್ದೇಶವೇ ಹಾಳಾಗಿ ಹೋಗಿದೆ. ಕಾಂಕ್ರೀಟ್ ಬ್ಯಾಂಡ್ ಹಾಕುವುದು ಇಂಟರ್ ಲಾಕ್ ಗಳು ಗಟ್ಟಿಯಾಗಿ ನಿಲ್ಲಬೇಕು ಎನ್ನುವ ಕಾರಣಕ್ಕೆ. ಆದರೆ ಇವರ ಕಳಪೆ ಕಾಮಗಾರಿಯಿಂದಾಗಿ ಕಾಂಕ್ರೀಟ್ ಬ್ಯಾಂಡ್ ಗಳ ಸ್ಥಿತಿ ಹಪ್ಪಳದ ಮೇಲೆ ಲಾರಿ ಹೋದಂತೆ ಆಗಿದೆ. ಇಂತಹ ಕಳಪೆ ಕಾಮಗಾರಿ ನಡೆದದ್ದು ಪಾಲಿಕೆಯ ಕಟ್ಟಡಕ್ಕೆ ತಾಗಿಯೇ ಇರುವ ಅಂಗಣದಲ್ಲಿ. ಇಲ್ಲಿಯೇ ಪರಿಸ್ಥಿತಿ ಹೀಗಿದೆ ಎಂದರೆ ಬೇರೆ ಕಡೆ ಹೇಗಿರಬೇಡಾ? ಆ ಕಾಂಕ್ರೀಟ್ ಬ್ಯಾಂಡ್ ಒಡೆದಿರುವ ಫೋಟೋ ನೋಡಿದರೆ ನಿಮಗೆ ಇದರ ಅವಸ್ಥೆ ಗೊತ್ತಾಗುತ್ತದೆ.
ಇನ್ನು ಇಲ್ಲಿ ಇಂಟರ್ ಲಾಕ್ ಹಾಕಿ ತುಂಬಾ ಸಮಯವೇನೂ ಕಳೆದು ಹೋಗಿಲ್ಲ. ಈಗಾಗಲೇ ಇಲ್ಲಿ ಹಾಕಿರುವ ಇಂಟರ್ ಲಾಕ್ ಗಳ ನಡುವೆ ಬಿರುಕು ಬಿದ್ದಿವೆ. ಇಷ್ಟು ಕಳಪೆ ಕಾಮಗಾರಿ ಅದರೂ ಇದನ್ನು ಯಾರು ಕೂಡ ಕೇಳುವವರಿಲ್ಲ ಎನ್ನುವುದು ಬೇಸರದ ವಿಷಯ. ಇದನ್ನು ನೋಡಿ ಸರಿ ಮಾಡಬೇಕಿದ್ದ ಇಂಜಿನಿಯರ್ಸ್ ತಮ್ಮ ಕಮೀಷನ್ ತಿಂದು ನೀರು ಕುಡಿದಾಗಿದೆ. ಗುತ್ತಿಗೆದಾರರಿಗೆ ಅವರ ಕೆಲಸ ಮುಗಿದು ಹೋದ ನಂತರ ಅದು ಬಿರುಕು ಬಿಡಲಿ ಅಥವಾ ಒಡೆದು ಹೋಗಲಿ ಬಿದ್ದು ಹೋಗಿಲ್ಲ. ಇಂಜಿನಿಯರ್ಸ್ ಮತ್ತು ಗುತ್ತಿಗೆದಾರರ ಅಪವಿತ್ರ ಮೈತ್ರಿ ಹೀಗೆ ಮುಂದುವರೆದರೆ ನಾಡಿದ್ದು ಪಾಲಿಕೆಯ ಒಳಗೆ ತಮ್ಮ ಕೋಣೆಯಲ್ಲಿಯೇ ಆಗುವ ಕಾಮಗಾರಿಯನ್ನು ಕೂಡ ಇವರು ಕಮೀಷನ್ ತಿಂದು ಕಳಪೆ ಮಾಡಿಬಿಡುತ್ತಾರೆ. ಮಂಗಳೂರು ನಗರ ದಕ್ಷಿಣ ಮತ್ತು ಉತ್ತರದ ಹೊಸ ಶಾಸಕರ ಹತ್ತಿರ ನನ್ನ ವಿನಂತಿ ಇಷ್ಟೇ. ವೈಜ್ಞಾನಿಕವಾಗಿ ಮತ್ತು ಕಳಪೆಯಾಗದಂತೆ ಕಾಮಗಾರಿ ಮಾಡಿಸುವ ಹೊಣೆ ನಿಮ್ಮ ಮೇಲೆನೂ ಇದೆ. ಕಳಪೆ ಕಾಮಗಾರಿ ಮಾಡಿರುವ ಗುತ್ತಿಗೆದಾರ ಮತ್ತು ಇಂಜಿನಿಯರ್ಸ್ ಮೇಲೆ ನೀವು ಕ್ರಮ ತೆಗೆದುಕೊಳ್ಳದೇ ಹೋದರೆ ನಮ್ಮ ತೆರಿಗೆ ಹಣ ಮುಂದಿನ ದಿನಗಳಲ್ಲಿಯೂ ಕೂಡ ಹೀಗೆ ಸೋರಿಕೆ ಆಗುತ್ತಾ ಹೋಗುತ್ತದೆ!!

  • Share On Facebook
  • Tweet It


- Advertisement -
MCC


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
You may also like
ಈ ಬಾರಿ ಪಾಲಿಕೆಗೆ ತಲೆ ಇದ್ದವರು ಬರಲಿ, ಹಸಿವಿದ್ದವರು ಅಲ್ಲ!!
October 22, 2019
ಮುಸ್ಲಿಂ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ಕೊಡಬೇಕು ಎನ್ನುವ ಹಿಂದಿರುವ ರಹಸ್ಯ ಏನು?
October 31, 2018
218.5 ಕೋಟಿ ಹಣ “ನೀರಿ”ನಂತೆ ಪೋಲು ಮಾಡಲು ಶಾಸಕ ಲೋಬೊ ಮತ್ತು ಪಾಲಿಕೆ ರೆಡಿ!
February 16, 2018
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search