• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ನಕ್ಸಲ ಪೀಡಿತ ಪ್ರದೇಶದವರಲ್ಲಿ ಮೂಡಿದ ಭರವಸೆ, ನಾವು ಮುಖ್ಯವಾಹಿನಿಗೆ ಬರಲು ಸಿದ್ಧ ಎಂದ ಯುವಕರು

TNN Correspondent Posted On May 30, 2018


  • Share On Facebook
  • Tweet It

ಬಸ್ತಾರ್(ಛತ್ತಿಸಗಡ್): ನಕ್ಸಲ ಹಿಡಿತ ಹೊಂದಿರುವ ಪ್ರದೇಶಗಳಲ್ಲಿ ಅಭಿವೃದ್ಧಿಯ ಮಾತನಾಡಿದವರಿಗೆ ನಕ್ಸಲರು ಹತ್ಯೆ ಮಾಡುವುದು, ಹಿಂಸೆ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದರು. ಆದ್ದರಿಂದ ನಕ್ಸಲ ಪೀಡಿತ ಪ್ರದೇಶದ ಜನ ನಕ್ಸಲರ ವಿರುದ್ಧ ಮಾತನಾಡುವುದು ಬಿಡಿ, ಸರ್ಕಾರದ ಪರ ಮಾತಾಡುವುದು, ಮುಖ್ಯವಾಹಿನಿಗೆ ಬರುವುದನ್ನೇ ನಿಲ್ಲಿಸಿದ್ದರು. ಆದರೆ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ನಕ್ಸಲರ ವಿರುದ್ಧ ಕೈಗೊಂಡ ಭರ್ಜರಿ ಕಾರ್ಯಾಚರಣೆ, ನಕ್ಸಲರನ್ನು ಯಶಸ್ವಿಯಾಗಿ ಹತ್ತಿಕ್ಕಿದ್ದು, ನಕ್ಸಲ ಪೀಡಿತ ಪ್ರದೇಶದ ಯುವಕರು ನಕ್ಸಲರ ವಿರುದ್ಧ ತಿರುಗಿಬಿದ್ದಿದ್ದಾರೆ. ನಮಗೂ ಅಭಿವೃದ್ಧಿ ಬೇಕು, ನಾವು ಮುಖ್ಯವಾಹಿನಿಗೆ ಬರಲು ಸಿದ್ಧರಾಗಿದ್ದೇವೆ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುವ ಮೂಲಕ ಹೊಸ ಭರವಸೆ ಮೂಡಿಸಿದ್ದಾರೆ.

ತೀವ್ರ ನಕ್ಸಲ ಪೀಡಿತ ಛತ್ತಿಸಗಡ್ ದ ಬಸ್ತಾರ್ ಜಿಲ್ಲಯ ಬದ್ರಿಮಾಹು ಗ್ರಾಮದ ಯುವಕರು ಇದುವರೆಗೆ ನಕ್ಸಲರಿಂದ ನಿತ್ಯ ಕಿರಿಕಿರಿಗೆ ಒಳಗಾಗಿದ್ದರು. ನಕ್ಸಲರ ಹಿಂಸಾ ಪವೃತ್ತಿಯಿಂದ ಹೊರ ಬಂದಿರುವ ಅವರು ಇದೀಗ ನಮಗೂ ಉತ್ತಮ ರಸ್ತೆ, ಶಾಲೆ, ವಿದ್ಯುತ್, ಆಸ್ಪತ್ರೆಗಳು ಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ದರ್ಭಾ ಪೊಲೀಸ್ ಠಾಣೆ ವ್ಯಾಪ್ತಿ ಯ ಜಿರಾಮ್ ಅರಣ್ಯ ಪ್ರದೇಶದ ಈ ಗ್ರಾಮದ ಯುವಕರು ನಕ್ಸಲರ ಪ್ರಭಾವದಿಂದ ಹೊರ ಬಂದಿದ್ದು, ನಮಗೆ ಸೂಕ್ತ ಸೌಲಭ್ಯ ಒದಗಿಸಿದ್ದರೇ ನಕ್ಸಲರ ಜೊತೆ ಕೈಜೋಡಿಸಿರುವ ಇನ್ನುಳಿದವರನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನಿಸಲಾಗುವುದು ಎಂದು ಹೇಳಿದ್ದಾರೆ.

ನಕ್ಸಲರ ಜೊತೆ ಕೈಜೋಡಿಸಿ, ಹೋರಾಟದಲ್ಲಿ ಭಾಗಿಯಾಗಿದ್ದೇ. ಆದರೆ ನಂತರ ಜ್ಞಾನೋದಯವಾಗಿ ಮುಖ್ಯವಾಹಿನಿಗೆ ಬಂದಿದ್ದೆ. ನನ್ನ ಸಹೋದರ ಗ್ರಾಮಕ್ಕೆ ಮುಖ್ಯಸ್ಥನಾಗಿದ್ದ, ಗ್ರಾಮದ ಅಭಿವೃದ್ಧಿ ಸರ್ಕಾರದ ಸಹಾಯ ಕೇಳಿದ್ದ. ಆದರೆ ಅಭಿವೃದ್ಧಿ ಸಹಿಸದ ನಕ್ಸಲರು ನನ್ನ ಸಹೋದರನನ್ನು ನಮ್ಮ ಮನೆಯಲ್ಲೇ ಗುಂಡಿಕ್ಕಿ ಕೊಲೆ ಮಾಡಿದ್ದಾರೆ ಎಂದು ಗ್ರಾಮದ ಯುವಕನೊಬ್ಬ ತಿಳಿಸಿದ್ದಾನೆ.

2013ರಲ್ಲಿ ಇದೇ ಜಿರಾಮ್ ಘಾಟಿ ಪ್ರದೇಶದಲ್ಲಿ ಕಾಂಗ್ರೆಸ್ ರ್ಯಾಲಿಗೆ ಹೋಗುತ್ತಿದ್ದ ವಾಹನಗಳ ಮೇಲೆ ನಕ್ಸಲರು ದಾಳಿ ನಡೆಸಿದ್ದರಿಂದ ಸಚಿವರಾದಿಯಾಗಿ ಹಲವರು ಮೃತಪಟ್ಟಿದ್ದರು. ಸಚಿವರಾಗಿದ್ದ ಮಹೇಂದ್ರ ಕುಮಾರ ಮತ್ತು ಛತ್ತಿಸಗಡ್ ಕಾಂಗ್ರೆಸ್ ಅಧ್ಯಕ್ಷ ನಂದಕುಮಾರ ಪಟೇಲ್ ಸೇರಿ 27 ಜನರು ಮೃತಪಟ್ಟಿದ್ದರು. ಇಂತಹ ಪರಿಣಾಮಕಾರಿ ನಕ್ಸಲರ ಗುಂಪು ಹೊಂದಿರುವ ಪ್ರದೇಶದ ಜನರೇ ಮುಖ್ಯವಾಹಿನಿಗೆ ಬರಲು ಮುಂದಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ಬಸ್ತಾರ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಹೇಳುವ ಪ್ರಕಾರ ‘ನಕ್ಸಲರ ಪ್ರಭಾವ ಕಡಿಮೆಯಾಗುತ್ತಿದ್ದು, ಜನ ಅಭಿವೃದ್ಧಿಯ ಚಿಂತನೆ ನಡೆಸುತ್ತಿದ್ದಾರೆ. ಕೆಲವೆಡೆ ಸೂಕ್ತ ಸೌಲಭ್ಯ ಮತ್ತು ರಕ್ಷಣೆ ಒದಗಿಸಲಾಗುತ್ತಿದೆ. ಮುಖ್ಯವಾಹಿನಿಗೆ ಬಂದವರಲ್ಲಿ ಭರವಸೆ ತುಂಬಲಾಗುತ್ತಿದೆ. ನಮ್ಮ ಎಲ್ಲ ದಳದ ನಿರಂತರ ಶ್ರಮದಿಂದ ಹೊಸ ಬದಲಾವಣೆಯಾಗುತ್ತಿದೆ ಎಂದು ತಿಳಿಸಿದ್ದಾರೆ.

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search