• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

18 ಸಾವಿರ ಅಡಿ ಎತ್ತರ ಹಿಮಗಡ್ಡೆಯ ಮೇಲೆ ಯೋಧ ಮಾಡಿ ಸ್ಫೂರ್ತಿ ಸಾರಿದ ಯೋಧರಿಗೊಂದು ನಮನ!

TNN Correspondent Posted On June 21, 2018
0


0
Shares
  • Share On Facebook
  • Tweet It

ಭಾರತೀಯ ಯೋಧರೆಂದರೇನೇ ಹಾಗೆ. ಅವರು ದೇಶಕ್ಕಾಗಿ ಯೋರಾಡುವ ಮೂಲಕ ನಮ್ಮೆಲ್ಲರನ್ನು ಹೆಮ್ಮೆಪಡಿಸುವ ಜತೆಗೆ, ದೇಶದ ಗೌರವವನ್ನು ಆಗಸದೆತ್ತರಕ್ಕೆ ಹಾರಿಸಲು ಎಂದಿಗೂ ಮುಂದಾಗುತ್ತಾರೆ. ಆ ಮೂಲಕ ಅವರು ನಮ್ಮ ಮನದಲ್ಲಿ ಅಚ್ಚಳಿಯದೆ ಅಮರರಾಗುತ್ತಾರೆ.

ಇಂತಹ ಹೆಮ್ಮೆಯ ಯೋಧರು ನಾಲ್ಕನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲೂ ಪಾಲ್ಗೊಳ್ಳುವ ಮೂಲಕ ಸ್ಫೂರ್ತಿ ಸಾರಿದ್ದಾರೆ. ಆ ಮೂಲಕ ದೇಶ ಹಾಗೂ ದೇಶದ ಘನತೆಯ ವಿಷಯ ಬಂದಾಗ ಯೋಧರು ಏನು ಮಾಡಲು ಸಹ ಸಿದ್ಧರು ಎಂಬುದನ್ನು ಸಾರಿ ತೋರಿಸಿದ್ದಾರೆ.

ಹೌದು, ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಇಂಡೋ-ಟಿಬೇಟಿಯನ್ ಬಾರ್ಡರ್ ಪೊಲೀಸ್ ಪಡೆಯ ಹಿಮವೀರರು ಲಢಾಕ್ ನ 18 ಸಾವಿರ ಅಡಿ ಎತ್ತರದ ಹಿಮಗುಡ್ಡದ ಮೇಲೆ ನಿಂತು ಸೂರ್ಯ ನಮಸ್ಕಾರ ಮಾಡುವ ಮೂಲಕ ಇಡೀ ದೇಶದ ಜನರಿಗೆ ಯೋಗ ಮಾಡಲು ಸ್ಫೂರ್ತಿ, ಉತ್ಸಾಹ ತುಂಬಿದ್ದಾರೆ.

ಅಲ್ಲದೆ ಇದೇ ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸರು ಅರುಣಾಚಲ ಪ್ರದೇಶದ ಲೋಹಿತ್ ಪುರದ ದಿಗಾರು ನದಿಯಲ್ಲಿ ಅರ್ಧ ಮುಳುಗಿ ನದಿಯೋಗ ಮಾಡುವ ಮೂಲಕ ಯೋಗದ ಮಹತ್ವದ ಸಾರಿದ್ದಾರೆ. ಮೈ ಕೊರೆಯುವ ಚಳಿ ಇದ್ದರೂ ಮೈ ಮುರಿದು ಯೋಗ ಮಾಡಿ ನಮಗೆಲ್ಲ ಸ್ಫೂರ್ತಿ ತುಂಬಿದ್ದಾರೆ.

ಅಷ್ಟೇ ಭಾರತೀಯ ನೌಕಾಪಡೆಯೂ ಯೋಗ ದಿನಾಚರಣೆಗೆ ಬೆಂಬಲ ಸೂಚಿಸಿದ್ದು, ವಿಶಾಖಪಟ್ಟಣದ ಸಮುದ್ರದಲ್ಲಿ ಭಾರತೀಯ ಯುದ್ಧನೌಕೆ ಐಎನ್ಎಸ್ ಜ್ಯೋಗಿ ಹಡಗಿನಲ್ಲಿ ಪೂರ್ವ ನೌಕಾಪಡೆಯ ಕಮಾಂಡೋಗಳು ಯೋಗ ಮಾಡುವ ಮೂಲಕ ಯೋಗದ ಮಹತ್ವ ಸಾರಿದ್ದಾರೆ. ಒಟ್ಟಿನಲ್ಲಿ ನರೇಂದ್ರ ಮೋದಿ ಅವರು ನೀಡಿದ ಕರೆಗೆ ಇಡೀ ವಿಶ್ವವೇ ಯೋಗ ದಿನ ಆರಿಸುತ್ತಿದ್ದು, ಇದಕ್ಕೆ ಯೋಧರು ಸಹ ಬೆಂಬಲ ನೀಡಿದ್ದು ಶ್ಲಾಘನೀಯವಾಗಿದೆ. ಇವರಿಗೊಂದು ಸೆಲ್ಯೂಟ್ ಇರಲಿ.

 

0
Shares
  • Share On Facebook
  • Tweet It




Trending Now
ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
Tulunadu News November 1, 2025
ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
Tulunadu News October 31, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
    • ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?

  • Privacy Policy
  • Contact
© Tulunadu Infomedia.

Press enter/return to begin your search