• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸಿನಿಮಾ ಸುದ್ದಿ 

ಇದು ಎಂಥಾ ಲೋಕವಯ್ಯಾ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ

TNN Correspondent Posted On June 23, 2018
0


0
Shares
  • Share On Facebook
  • Tweet It

ಮಂಗಳೂರಿನಲ್ಲಿ ಸಂಪೂರ್ಣವಾಗಿ ಚಿತ್ರಿತವಾಗಿರುವ ಮತ್ತು ಇಲ್ಲಿನ ಕಲಾವಿದರೇ ಅಭಿನಯಿಸಿರುವ ಆದರೆ ವಿಭಿನ್ನ ನಿರೂಪಣೆಯೊಂದಿಗೆ ತಯಾರಾಗಿರುವ “ಇದು ಎಂಥಾ ಲೋಕವಯ್ಯಾ” ಸಿನೆಮಾ ಪೋಸ್ಟ್ ಪ್ರೊಡಕ್ಷನ್ ನ ಅಂತಿಮ ಘಟ್ಟ ತಲುಪಿದೆ. ಮಂಗಳೂರಿನ ಉದ್ಯಮಿ ಮಂಗಲ್ಪಾಡಿ ನರೇಶ್ ನಾಮದೇವ್ ಶೆಣೈಯವರ ಕಡ್ಲೆಕಾಯಿ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಮೂಡಿಬಂದಿರುವ ಈ ಸಿನೆಮಾವನ್ನು ಸಿತೇಶ್ ಗೋವಿಂದ್ ನಿರ್ಧೇಶಿಸಿದ್ದಾರೆ. 
ಸಿನೆಮಾದಲ್ಲಿ ನಾಯಕ, ನಾಯಕಿ ಇರಲೇಬೇಕು ಎನ್ನುವ ಸಂಪ್ರದಾಯವನ್ನು ಬಿಟ್ಟು ಕಲಾವಿದರು ತಮ್ಮ ಪಾತ್ರಗಳ ಮೂಲಕ ಅದನ್ನು ಕಟ್ಟಿಕೊಡುವ ಕೆಲಸ ಮಾಡಿದ್ದಾರೆ. ಇದು ಎಂಥಾ ಲೋಕವಯ್ಯಾ ಸಿನೆಮಾದಲ್ಲಿ ನಮ್ಮ ನಿಮ್ಮ ನಡುವಿರುವ ಜೀವಿಯೊಂದು ಒಂದು ಮನೆಯೊಳಗೆ ಮತ್ತು ಆಸುಪಾಸಿನಲ್ಲಿ ನಡೆಯುವ ಘಟನೆಗಳಿಗೆ ಹೇಗೆ ಸಾಕ್ಷಿಯಾಗುತ್ತದೆ ಎನ್ನುವುದನ್ನು ತೋರಿಸಲಾಗಿದೆ. ಮಾರ್ಜಾಲದ ಕಣ್ಣುಗಳ ಮೂಲಕ ಚಿತ್ರವನ್ನು ಕಟ್ಟಿಕೊಟ್ಟಿರುವ ನಿರ್ಧೇಶಕರು ಹಾಸ್ಯದ ಹಿನ್ನಲೆಯಲ್ಲಿ ಸಿನೆಮಾವನ್ನು ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದಾರೆ. ಚಿತ್ರದಲ್ಲಿ ವಾಸ್ತವವನ್ನು ಮೂಡನಂಬಿಕೆಯ ಆಯಾಮದಲ್ಲಿ ಮೂಡಿಸಿ ಪಾತ್ರಗಳು ತಮ್ಮ ಗಂಭೀರ ನಟನೆಯಲ್ಲಿ ಹೇಗೆ ಹ್ಯೂಮರ್ ಹೊರಡಿಸಬಹುದು ಎಂದು ತೋರಿಸಿಕೊಡಲಾಗಿದೆ. ಕರಾವಳಿ ಕರ್ನಾಟಕದಲ್ಲಿರುವ ಮರಳು ಮಾಫಿಯಾದಂತಹ ವಿಷಯಗಳ ನಡುವೆ ಅಗೋಚರತೆ ಮಿಶ್ರಣವಾದರೆ ಹೇಗೆ ಚಿತ್ರ ರಸವತ್ತಾಗಿ ಮೂಡಿಬರುತ್ತದೆ ಎನ್ನುವುದನ್ನು ಇದರಲ್ಲಿ ನೋಡಬಹುದು. ಈ ಚಿತ್ರದಲ್ಲಿ ಪ್ರಾಣಿ, ಮರಗಳು ಕೂಡ ಪಾತ್ರವಾಗಿವೆ.
ಒಂದು ಮೊಟ್ಟೆಯ ಕಥೆಗೆ ಸಹನಿರ್ಧೇಶಕರಾಗಿ ಕೆಲಸ ಮಾಡಿದ ಅನುಭವ ಸಿತೇಶ್ ಗೋವಿಂದ್ ಅವರಿಗಿದೆ. ಚಿತ್ರಕ್ಕೆ ಹೊಸ ಲುಕ್ ಬರಲು ಕಾರಣ ಕನ್ನಡದ ಪ್ರಕಾಶ್ ರೈ ಎಂದೇ ಖ್ಯಾತರಾಗಿರುವ ಗೋಪಿನಾಥ್ ಅವರ ಸಹಜ ಅಭಿನಯ. ಮೈಮ್ ರಾಮದಾಸ್, ದೀಪಕ್ ರೈ ಪಾಣಾಜೆ, ಅರ್ಜುನ್ ಕಜೆ, ವಿಶ್ವನಾಥ ಅಸೈಗೋಳಿ, ಚಂದ್ರಹಾಸ್ ಉಳ್ಳಾಲ್, ಪ್ರಕಾಶ್ ತುಮಿನಾಡು, ಅನುರಾಜ್, ಸುಕನ್ಯಾ, ಪ್ರೀತಿ ಮುತ್ತಪ್ಪ, ಮೈತ್ರಿ ಎಂ ಜೆ ಸಹಿತ ಅನೇಕ ಖ್ಯಾತನಾಮರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. 
0
Shares
  • Share On Facebook
  • Tweet It


Naresh Shenoy Edu Entha Lokavyaya


Trending Now
ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
Tulunadu News November 21, 2025
ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
Tulunadu News November 20, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!

  • Privacy Policy
  • Contact
© Tulunadu Infomedia.

Press enter/return to begin your search