• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಮಂಗಳೂರು ವಿವಿಯಲ್ಲಿ ದಕ್ಷ ರಿಜಿಸ್ಟ್ರಾರ್ ಸ್ಥಾನಕ್ಕೆ ಭ್ರಷ್ಟರನ್ನು ತರಲು ಯುಟಿ ಖಾದರ್, ಫಾರೂಕ್ ಪ್ರಯತ್ನ!!

Ganesh Raj Posted On July 6, 2018
0


0
Shares
  • Share On Facebook
  • Tweet It

ಮಂಗಳೂರು ವಿಶ್ವವಿದ್ಯಾಲಯ ಎನ್ನುವ ಶಿಕ್ಷಣ ಕ್ಷೇತ್ರದ ಮಹಾನ್ ದೇಗುಲಗಳಲ್ಲಿ ಒಂದಾಗಿರುವ ಸಂಸ್ಥೆಯನ್ನು ನಿಕಟಪೂರ್ವ ಕುಲಪತಿಯವರು ಹೇಗೆ ಹಾಳು ಮಾಡಿಟ್ಟು ಹೋಗುತ್ತಿದ್ದಾರೆ ಎನ್ನುವುದನ್ನು ಕಳೆದ ವಾರ ಇಡೀ ಪ್ರಪಂಚ ನೋಡಿದೆ. ತಮಗೆ ಬೇಕಾದವರಿಗೆ ಹೇಗೆ ಎಲ್ಲದರಲ್ಲಿಯೂ ಹಣ ಹೊಡೆಯಲು ಭೈರಪ್ಪ ಅವಕಾಶ ಮಾಡಿಕೊಟ್ಟರು ಎನ್ನುವುದು ಎಲ್ಲರಿಗೂ ತಿಳಿದಿದೆ. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳ ಮೂಲಕ ಮಂಗಳೂರು ವಿಶ್ವವಿದ್ಯಾಲಯ ವಾಸ್ತವ ಜಗಜ್ಜಾಹೀರವಾಗಿದೆ. ನ್ಯೂಸ್ 18 ಮತ್ತು ದಿಗ್ವಿಜಯ ವಾಹಿನಿಗಳು ಸತ್ಯವನ್ನು ಜನರ ಮುಂದೆ ಇಟ್ಟವು. ಯಾವುದರಲ್ಲಿ ಯಾರೆಲ್ಲ ಸೇರಿ ಹಣ ಗುಳುಂ ಮಾಡಿದರು ಎನ್ನುವುದು ಗೊತ್ತಾಗಿದೆ. ಇನ್ನೇನೂ ಈ ಬಗ್ಗೆ ತನಿಖೆ ಶುರುವಾದರೂ ಆಗಬಹುದು ಎನ್ನುವ ಆತಂಕ ಇಲ್ಲಿನ ಭ್ರಷ್ಟರಲ್ಲಿ ಉಂಟಾಗಿದೆ. ಅದಕ್ಕಾಗಿ ಭ್ರಷ್ಟರ ಗ್ಯಾಂಗ್ ಸೇರಿ ಒಂದು ಪ್ಲಾನ್ ಮಾಡುತ್ತಿದ್ದಾರೆ. ಅದೇನೆಂದರೆ ಮಂಗಳೂರು ವಿವಿಯಲ್ಲಿ ತಮ್ಮ ಭ್ರಷ್ಟಾಚಾರದ ಬಗ್ಗೆ ಎಲ್ಲಾ ಗೊತ್ತಿರುವವರನ್ನು ಅಲ್ಲಿಂದ ಓಡಿಸಿ ತಮಗೆ ಅನುಕೂಲ ಇರುವವರನ್ನು ನಿರ್ಣಾಯಕ ಸ್ಥಾನಕ್ಕೆ ತರುವುದು, ಅದರಿಂದ ತಮ್ಮ ಭ್ರಷ್ಟಾಚಾರ ಹೊರಗೆ ಬರುವುದಿಲ್ಲ ಎನ್ನುವ ಉಪಾಯ ಅವರದ್ದು.

ನಾಗೇಂದ್ರ ಪ್ರಕಾಶ್ ಭ್ರಷ್ಟರಿಗೆ ಬೇಡಾ…

ಅರ್ಹತೆ ಮತ್ತು ಜೇಷ್ಟತೆಯ ಆಧಾರದಲ್ಲಿ ನೋಡಿದರೆ ಈಗ ಪ್ರಸ್ತುತ ಮಂಗಳೂರು ವಿಶ್ವವಿದ್ಯಾಲಯದ ಬಿಎಸ್ ನಾಗೇಂದ್ರ ಪ್ರಕಾಶ್ ಅವರು ರಿಜಿಸ್ಟ್ರಾರ್ ಹುದ್ದೆಯಲ್ಲಿದ್ದರೆ ಭ್ರಷ್ಟಾಚಾರಿಗಳ ಆಟ ನಡೆಯುವುದಿಲ್ಲ. ಅಂದರೆ ಅವರು ರಿಜಿಸ್ಟ್ರಾರ್ ಆಗಿಯೇ ಇದ್ದರೆ ಇಲ್ಲಿಯ ತನಕ ನಡೆದ ಭ್ರಷ್ಟಾಚಾರ ಎಲ್ಲ ಹೊರಗೆ ಬರಲಿದೆ. ಅದಕ್ಕಾಗಿ ಹೆದರಿದ ಭ್ರಷ್ಟರ ಪಡೆ ಎ ಎಂ ಖಾನ್ ಅವರನ್ನು ರಿಜಿಸ್ಟ್ರಾರ್ ಮಾಡಲು ಷಡ್ಯಂತ್ರ ರೂಪಿಸಿದೆ. ನಾಗೇಂದ್ರ ಪ್ರಕಾಶ್ ಅವರನ್ನು ಮಂಗಳೂರು ವಿವಿಯಿಂದ ವರ್ಗಾವಣೆ ಮಾಡಲು ಸಂಚು ರೂಪಿಸಲಾಗಿದೆ. ಎಎಂ ಖಾನ್ ಅವರು ನಿಕಟಪೂರ್ವ ಕುಲಪತಿ ಭೈರಪ್ಪನವರ ಅಷ್ಟೂ ಭ್ರಷ್ಟಾಚಾರಗಳಲ್ಲಿ ನೇರ ಪಾಲು ಪಡೆಯುತ್ತಿದ್ದವರು. ಮಂಗಳೂರು ವಿವಿಯ ಪರೀಕ್ಷೆಯ ಮೌಲ್ಯಮಾಪನದಲ್ಲಿ ಅಕ್ರಮ ಎಸಗಿರುವ ಆರೋಪ ಎಎಂ ಖಾನ್ ಅವರ ಮೇಲಿದೆ. ಕೋಟ್ಯಾಂತರ ರೂಪಾಯಿಯ ಹಗರಣ ಅದು. ಇನ್ನೊಂದು ಉದಾಹರಣೆ ಎಂದರೆ ಮಂಗಳೂರು ವಿವಿಯ ಹೊರಗೆ ಯಾವುದೇ ಅಧ್ಯಯನ ಪೀಠ ತೆರೆಯುವಂತಿಲ್ಲ. ಆದರೆ ಭ್ರಷ್ಟರು ಕುಶಾಲನಗರದಲ್ಲಿ ಒಂದು ದೂರಶಿಕ್ಷಣ ಕೇಂದ್ರ ತೆರೆದಿದ್ದಾರೆ. ಅಲ್ಲಿ ಪರೀಕ್ಷೆಗಳನ್ನು ನಡೆಸುತ್ತೇವೆ ಎನ್ನುತ್ತಾರೆ. ಆದರೆ ಸಡನ್ನಾಗಿ ಅಲ್ಲಿ ಹೋಗಿ ನೋಡಿದರೆ ಅಲ್ಲಿ ಯಾವ ಅಧ್ಯಯನ ಕೇಂದ್ರವೂ ಇಲ್ಲ, ಪರೀಕ್ಷೆಗಳು ಕೂಡ ನಡೆಯುವುದಿಲ್ಲ. ಇತ್ತೀಚೆಗೆ ಇವರು ಕೊಟ್ಟ ವಿಳಾಸಕ್ಕೆ ವಿಟ್ಲದವರೊಬ್ಬರು ಹೋಗಿ ನೋಡಿದಾಗ ಕುಶಾಲನಗರದಲ್ಲಿ ಏನೂ ಇಲ್ಲ ಎನ್ನುವುದು ಪತ್ತೆಯಾಗಿದೆ. ಇದೆಲ್ಲ ನಿಲ್ಲಿಸಿ ಮಂಗಳೂರು ವಿವಿಯಲ್ಲಿ ಶಿಕ್ಷಣದ ಹೆಸರಿನಲ್ಲಿ ನಡೆಯುವ ವ್ಯಾಪಾರ ತಡೆಯಬೇಕಾದರೆ ಅಲ್ಲಿ ದಕ್ಷ, ಪ್ರಾಮಾಣಿಕ ರಿಜಿಸ್ಟ್ರಾರ್ ಅಗತ್ಯ ಇದೆ. ನಾಗೇಂದ್ರ ಪ್ರಕಾಶ ಆ ಸ್ಥಾನದಲ್ಲಿ ಇದ್ದರೆ ಒಳ್ಳೆಯದು. ಆದರೆ ಅಲ್ಲಿನ ಭ್ರಷ್ಟರಿಗೆ ಅದು ಬೇಕಾಗಿಲ್ಲ. ಅದಕ್ಕೆ ಅವರು ಏನು ಮಾಡಿದ್ದಾರೆ ಎಂದರೆ ಹೇಗಾದರೂ ಮಾಡಿ ಎಎಂ ಖಾನ್ ಅವರನ್ನು ರಿಜಿಸ್ಟ್ರಾರ್ ಮಾಡಲು ಹೊರಟಿದ್ದಾರೆ. ಎಎಂ ಖಾನ್ ಪರವಾಗಿ ಸಚಿವ ಯುಟಿ ಖಾದರ್ ಹಾಗೂ ವಿಧಾನಪರಿಷತ್ ಸದಸ್ಯ ಫಾರೂಕ್ ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡರ ಅವರಿಗೆ ದಂಬಾಲು ಬೀಳುತ್ತಿದ್ದಾರೆ. ಜಿಟಿ ದೇವೆಗೌಡರು ಒಪ್ಪಿಕೊಂಡರೆ ಮಂಗಳೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಸ್ಥಾನಕ್ಕೆ ಎಎಂ ಖಾನ್ ಬರಲಿದ್ದಾರೆ. ಇತ್ತ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿವಿಯ ಭ್ರಷ್ಟಾಚಾರ ತಡೆಯಲು ತನಿಖೆ ನಡೆಸುವಂತೆ ರಾಜ್ಯಪಾಲರಿಗೆ ಆಗ್ರಹಿಸಿದೆ.

0
Shares
  • Share On Facebook
  • Tweet It


FaruqMangaluru University UT Khader


Trending Now
ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
Ganesh Raj November 21, 2025
ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
Ganesh Raj November 20, 2025
You may also like
ಯುಟಿ ಖಾದರ್ ಅಥವಾ ಬಿಎಂ ಫಾರೂಕ್ ಯಾರಾಗಲಿದ್ದಾರೆ ದಕ್ಷಿಣ ಕನ್ನಡದ ಉಸ್ತುವಾರಿ!!
May 31, 2018
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
  • Popular Posts

    • 1
      ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • 2
      ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • 3
      ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!

  • Privacy Policy
  • Contact
© Tulunadu Infomedia.

Press enter/return to begin your search