• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಹಿಂದೆ ಕಾಂಗ್ರೆಸ್ ಮಾಡಿದ್ದ ತಪ್ಪುಗಳನ್ನು ಪರಿಹರಿಸಲು ಖಾದರ್ ಮನಸ್ಸು ಮಾಡ್ತಾರಾ?

Hanumantha Kamath Posted On August 9, 2018


  • Share On Facebook
  • Tweet It

ಮಂಗಳೂರಿನಲ್ಲಿ ಕಳೆದ ಏಳು ತಿಂಗಳುಗಳಿಂದ ಭೂ ಪರಿವರ್ತನೆ ಆಗಿಲ್ಲ. ಭೂ ಪರಿವರ್ತನೆ ಮಾಡಲು ಹೋದರೆ 11ಇ ರೆವೆನ್ಯೂ ಸ್ಕೆಚ್ ಬೇಕು ಎನ್ನುತ್ತಾರೆ. ರೆವೆನ್ಯೂ ಸ್ಕೆಚ್ ಮಾಡಲು ಹೋದರೆ ಆರ್ ಟಿಸಿಗೆ ತಾಳೆ ಆಗುವುದಿಲ್ಲ ಎನ್ನುತ್ತಾರೆ. ಆರ್ ಟಿಸಿ ಯಾಕೆ ತಾಳೆ ಆಗುವುದಿಲ್ಲ ಎಂದರೆ ಮಂಗಳೂರಿನಲ್ಲಿ ಆರ್ಟಿಸಿ ಬೇಕಂತಿಲ್ಲ, ಪಾಲಿಕೆಯ ಖಾತಾ ಸಾಕು ಎಂಬ ಆದೇಶ ಇದೆ. ಆದ್ದರಿಂದ ಯಾರೂ ಕೂಡ ಆರ್ಟಿಸಿ ಮಾಡಲು ಹೋಗುವುದಿಲ್ಲ. ಆದ್ದರಿಂದ ಯಾರಾದರೂ ಜಾಗವನ್ನು ಇನ್ನೊಬ್ಬರಿಗೆ ಸ್ವಲ್ಪ ಅಂಶ ಮಾರಲು ಹೋದರೆ ಕಾರ್ಪೊರೇಶನ್ ನಿಂದ ಖಾತಾ ಮಾಡಿಸಲು ಹೋಗುತ್ತಾರೆ. ಆದರೆ ತಾಲೂಕು ಆಫೀಸಿನಿಂದ ಖಾತಾ ಮಾಡಿಸಲು ಹೋಗುವುದಿಲ್ಲ. ರೆವೆನ್ಯೂ ಸ್ಕೆಚ್ ಮಾಡಿಸಲು ಹೋದಾಗ ಆರ್ ಟಿಸಿಯಲ್ಲಿರುವ ಒಟ್ಟು ಜಮೀನು 11/ಇ ಸ್ಕೆಚ್ ಕೇಳುವ ಜಮೀನಿಗೆ ತಾಳೆ ಬರುವುದಿಲ್ಲ.

ಮೂಡಾದಲ್ಲಿ ಟೈಮಿಂಗ್ ಮಾಡಿ…

ಇನ್ನು ಮಂಗಳೂರು ನಗರಾಭಿವೃದ್ಧಿ ಕಚೇರಿ ಒಂದು ಸರಕಾರಿ ಕಚೇರಿ. ಇದು ಬೇರೆ ಎಲ್ಲಾ ಸರಕಾರಿ ಕಚೇರಿಗಳಂತೆ ಬೆಳಿಗ್ಗೆ 10 ಗಂಟೆಗೆ ತೆರೆಯಲ್ಪಡಬೇಕು. ಅಧಿಕಾರಿಗಳು ಆ ಸಮಯಕ್ಕೆ ಬರಬೇಕು. ಆದರೆ ಇಲ್ಲಿ ಟಿಪಿಎಂ ಬರುವಾಗ 11.15 ಆಗುತ್ತದೆ. ಇದರಿಂದ ಅಲ್ಲಿ ಕೆಲಸ ಮಾಡಿಸಲು ಬರುವ ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ. ಇನ್ನು ಮಧ್ಯಾಹ್ನದ ಊಟದ ಅವಧಿ ಮುಗಿದು ಅಧಿಕಾರಿಗಳು 2.30ಕ್ಕೆ ಬಂದು ಬಿಟ್ಟರೆ ತುಂಬಾ ಒಳ್ಳೆಯದು. ಆದರೆ ಇವರು ಬರುವಾಗ 4.30 ಮಾಡುತ್ತಾರೆ. ಕೇಳಿದರೆ ನಾವು ಸಂಜೆ 7.30 ರ ತನಕ ಕಚೇರಿಯಲ್ಲಿಯೇ ಇರುತ್ತೇವೆ ಎನ್ನುತ್ತಾರೆ. ಆದರೆ 7.30 ರ ತನಕ ಇವರು ಇರುವುದು ಅವರ ಸ್ವಲಾಭಕ್ಕೆ ವಿನ: ಜನರ ಸೇವೆಗಾಗಿ ಅಲ್ಲ. ಆದ್ದರಿಂದ ನಗರಾಭಿವೃದ್ಧಿ ಸಚಿವರಾಗಿರುವ ಯುಟಿ ಖಾದರ್ ಅವರು ಮೂಡಾ ಕಚೇರಿಯಲ್ಲಿ ಟೈಮ್ ಕೀಪ್ ಮಾಡಲು ಅಧಿಕಾರಿಗಳಿಗೆ ಸೂಚನೆ ಕೊಡಬೇಕು.

ಚೆಂಡು ಯುಟಿ ಖಾದರ್ ಅಂಗಳದಲ್ಲಿದೆ..

ನಾನು ಸೋಮವಾರದಿಂದ ಇವತ್ತಿನ ತಕ ಸರಣಿಯಲ್ಲಿ ಬರೆಯುತ್ತಿರುವ ಮೂಡಾ ಅದಾಲತ್ ನ ಇವತ್ತಿನ ಕೊನೆಯ ಅಂಕಣದಲ್ಲಿ ನನಗೆ ಅನಿಸಿದ್ದು ಏನೆಂದರೆ ಸರಕಾರಗಳು ಬದಲಾದರೂ ನೀತಿ ನಿಯಮಾವಳಿಗಳು ಬದಲಾಗಬಾರದು. ಒಂದು ಸರಕಾರ ಇರುವಾಗ ಒಂದು ನಿಯಮ ಇದ್ದರೆ ಮತ್ತೊಂದು ಸರಕಾರ ಬಂದಾಗ ಹಿಂದಿನ ಸರಕಾರ ಮಾಡಿದ್ದ ಜನೋಪಯೋಗಿ ನಿಯಮಗಳನ್ನು ಬದಲಾವಣೆ ಮಾಡಿದರೆ ಅದರಿಂದ ತೊಂದರೆಯಾಗುವುದು ಸಾಮಾನ್ಯ ಜನರಿಗೆ. ಜನರು ಅದನ್ನು ಯಾರಿಗೂ ಹೇಳಲು ಆಗದೇ ಒದ್ದಾಡಬೇಕಾಗುತ್ತದೆ. ಖಾದರ್ ಮೊನ್ನೆ ಮೂಡಾ ಅದಾಲತ್ ಮಾಡಿರಬಹುದು. ಆದರೆ ಅದರಲ್ಲಿ ಅವರು ಎಷ್ಟು ಪಾರದರ್ಶಕವಾಗಿ ಸಮಸ್ತ ಜನರಿಗೆ ಉಪಯೋಗವಾಗುವಂತಹ ಯೋಜನೆಗಳನ್ನು ತರುತ್ತಾರೆ ಎನ್ನುವುದು ಉಳಿದಿರುವ ಪ್ರಶ್ನೆ. ಕೇವಲ ತಮ್ಮ ಪಕ್ಷದವರಿಗೆ ಲಾಭ ಆಗುವ ಯೋಜನೆಗಳನ್ನು ಯಾವ ಸರಕಾರ ಮಾಡಿದರೂ ಅದರ ಪರಿಣಾಮ ಅವರು ಅನುಭವಿಸಬೇಕಾಗುತ್ತದೆ. 11/ಇ ಮುಂತಾದ ಸಮಸ್ಯೆಯಿಂದ ರಿಜಿಸ್ಟ್ರಾರ್ ಆಫೀಸಿನಲ್ಲಿ ಜಮೀನು ಮಾರಾಟ ಆಗಲ್ಲ. ಪಾಪದವರಿಗೆ ಜಮೀನು ಮಾರಿ ಮದುವೆ ಮತ್ತಿತ್ತರ ಶುಭ ಸಮಾರಂಭಗಳಿಗೆ ಹಣ ಹೊಂದಿಸುವ ಯೋಚನೆ ಇದ್ದರೆ ಅದು ಕಷ್ಟವಾಗುತ್ತದೆ. 94ಸಿ/ ರೆವೆನ್ಯೂ ಸ್ಕೆಚ್ ಜನಸಾಮಾನ್ಯರಿಗೆ ಕಾಂಗ್ರೆಸ್ ಸರಕಾರ ನಿರ್ಮಾಣ ಮಾಡಿದ್ದ ಸಮಸ್ಯೆ. ಈಗ ಇದೇ ಭಾಗದವರು ನಗರಾಭಿವೃದ್ಧಿ ಸಚಿವರಾಗಿರುವುದರಿಂದ ಅವರು ಈ ಸಮಸ್ಯೆಯನ್ನು ಪರಿಹರಿಸುತ್ತಾರೆ ಎನ್ನುವ ನಂಬಿಕೆ ಇದೆ. ಚೆಂಡು ಯುಟಿ ಖಾದರ್ ಅವರ ಅಂಗಳದಲ್ಲಿದೆ!

  • Share On Facebook
  • Tweet It


- Advertisement -
congresshanumantha Kamathkadermangaloremangalore urban devalopment authouritymangalurumuda mangaloremuda mangaluruut kaderಮಂಗಳೂರುಮಂಗಳೂರು ನಗರಾಭಿವೃದ್ಧಿ ಕಚೇರಿಹನುಮಂತ ಕಾಮತ್


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
You may also like
ಗೋಡೆಯಲ್ಲಿ ಬರೆದಾಗಲೇ ಕೈಕಾಲು ಮುರಿಯಬೇಕಿತ್ತು!!
September 22, 2022
ಬ್ಯಾಂಕಿನವರನ್ನು ಇಲ್ಲಿ ತನಕ ತಲೆ ಮೇಲೆ ಹೊತ್ತುಕೊಂಡದ್ದೇ ತಪ್ಪು!
December 21, 2018
ಸಿದ್ಧಾಂತದ ಮೇಲೆ ಭಾಷಣ ಮಾಡುವುದೆಂದರೆ ಟೆಂಟ್ ನಲ್ಲಿ ಗಿಡಮೂಲಿಕೆ ಮಾರುವುದಲ್ಲ!!
December 7, 2018
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search